ETV Bharat / city

ಬೇಕಾದಾಗ ಬರದೆ, ಬೇಡ ಅಂದ್ರೆ ಬರ್ತಾನೆ.. ಕೈಗೆ ಬಂದ ತುತ್ತು ಬಾಯಿಗೆ ಬರದಂತೆ ಮಾಡ್ತಾನೆ..

ಹೊಸಪೇಟೆ ನಗರದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬೆಳೆಗಳಿಗೆ ನೀರು ನುಗ್ಗಿ ಸಂಪೂರ್ಣ ಬೆಳೆ ನಾಶವಾಗಿದೆ.

author img

By

Published : Oct 8, 2019, 6:28 PM IST

Updated : Oct 8, 2019, 10:16 PM IST

heavy-rain-in-hospet

ಹೊಸಪೇಟೆ: ಯಾವ ಸಮಯಕ್ಕೆ ಮಳೆ ಬೇಕೋ ಆಗ ಸರಿಯಾಗಿ ಮಳೆಯಾಗುವುದಿಲ್ಲ. ಯಾವ ಸಮಯಕ್ಕೆ ಮಳೆ ಬೇಡವೋ ಆ ಸಂದರ್ಭದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ಹೊಸಪೇಟೆಯಲ್ಲಿ ಬೆಳೆದ ಬೆಳೆಯೆಲ್ಲಾ ಸಂಪೂರ್ಣ ನೀರು ಪಾಲಾಗಿದೆ.

ರೈತರ ಜಮೀನಿನಲ್ಲಿ ನೀರು

ವರುಣನ ಆರ್ಭಟಕ್ಕೆ ಹೊಸಪೇಟೆ ತಾಲೂಕಿನಾದ್ಯಂತ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ, ಇಲ್ಲಿ ಆಗಿರುವುದೇನೆಂದರೆ, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಹಾಗೆ ಕಷ್ಟಪಟ್ಟು ಬೆಳದಿದ್ದ ಟೊಮ್ಯಾಟೊ, ಕಬ್ಬು, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

heavy-rain-in-hospet
ಜಲಾವೃತ

ನಗರದ ರಾಯರ ಕೆರೆ ತುಂಬಿದ ಹಿನ್ನೆಲೆ ಕೃಷಿಯ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ವರ್ಷಪೂರ್ತಿ ಕಷ್ಟಪಟ್ಟಿರುವುದೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಮುಂಚೆ ರೈತರ ಹೊಲಗಳ ನಾಲೆಯಿಂದಾಗಿ ಸುಲಭವಾಗಿ ನೀರು ಹರಿದು ಹೋಗುತ್ತಿತ್ತು. ಆದರೆ, 13ನೇ ರಾಷ್ಟ್ರೀಯ ಹೆದ್ದಾರಿ ಎತ್ತರಿಸಿದ ಪರಿಣಾಮದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕ್ಕಚಿಕ್ಕ ಹಳ್ಳ ಕೊಳ್ಳದ ನೀರೆಲ್ಲ ಜಮೀನುಗಳಿಗೆ ಹರಿಯುತ್ತಿವೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.

heavy-rain-in-hospet
ಬೆಳೆ ನಾಶ

ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುವವರಿಗೆ ಈ ರೀತಿ ಅನಾಹುತಗಳಾದರೆ ಸಾಲ ಮಾಡಿದವರ ಗತಿ ಏನು? ಇಷ್ಟೆಲ್ಲ ಘಟಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ. ರೈತರು ಮಳೆಯಿಂದಾಗಿ ವನವಾಸ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಸಂಗಪ್ಪ.

ಹೊಸಪೇಟೆ: ಯಾವ ಸಮಯಕ್ಕೆ ಮಳೆ ಬೇಕೋ ಆಗ ಸರಿಯಾಗಿ ಮಳೆಯಾಗುವುದಿಲ್ಲ. ಯಾವ ಸಮಯಕ್ಕೆ ಮಳೆ ಬೇಡವೋ ಆ ಸಂದರ್ಭದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಗಾದೆಯಂತೆ ಹೊಸಪೇಟೆಯಲ್ಲಿ ಬೆಳೆದ ಬೆಳೆಯೆಲ್ಲಾ ಸಂಪೂರ್ಣ ನೀರು ಪಾಲಾಗಿದೆ.

ರೈತರ ಜಮೀನಿನಲ್ಲಿ ನೀರು

ವರುಣನ ಆರ್ಭಟಕ್ಕೆ ಹೊಸಪೇಟೆ ತಾಲೂಕಿನಾದ್ಯಂತ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಆದರೆ, ಇಲ್ಲಿ ಆಗಿರುವುದೇನೆಂದರೆ, ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬ ಹಾಗೆ ಕಷ್ಟಪಟ್ಟು ಬೆಳದಿದ್ದ ಟೊಮ್ಯಾಟೊ, ಕಬ್ಬು, ಮೆಕ್ಕೆಜೋಳ ಸೇರಿ ವಿವಿಧ ಬೆಳೆಗಳು ಸಂಪೂರ್ಣ ಜಲಾವೃತವಾಗಿವೆ.

heavy-rain-in-hospet
ಜಲಾವೃತ

ನಗರದ ರಾಯರ ಕೆರೆ ತುಂಬಿದ ಹಿನ್ನೆಲೆ ಕೃಷಿಯ ಜಮೀನುಗಳಿಗೆ ನೀರು ನುಗ್ಗಿದ್ದು, ರೈತರು ವರ್ಷಪೂರ್ತಿ ಕಷ್ಟಪಟ್ಟಿರುವುದೆಲ್ಲ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಮುಂಚೆ ರೈತರ ಹೊಲಗಳ ನಾಲೆಯಿಂದಾಗಿ ಸುಲಭವಾಗಿ ನೀರು ಹರಿದು ಹೋಗುತ್ತಿತ್ತು. ಆದರೆ, 13ನೇ ರಾಷ್ಟ್ರೀಯ ಹೆದ್ದಾರಿ ಎತ್ತರಿಸಿದ ಪರಿಣಾಮದಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಚಿಕ್ಕಚಿಕ್ಕ ಹಳ್ಳ ಕೊಳ್ಳದ ನೀರೆಲ್ಲ ಜಮೀನುಗಳಿಗೆ ಹರಿಯುತ್ತಿವೆ ಎಂದು ರೈತರು ನೋವು ತೋಡಿಕೊಳ್ಳುತ್ತಾರೆ.

heavy-rain-in-hospet
ಬೆಳೆ ನಾಶ

ಕೃಷಿಯನ್ನೇ ಅವಲಂಬಿಸಿಕೊಂಡು ಜೀವನ ಸಾಗಿಸುವವರಿಗೆ ಈ ರೀತಿ ಅನಾಹುತಗಳಾದರೆ ಸಾಲ ಮಾಡಿದವರ ಗತಿ ಏನು? ಇಷ್ಟೆಲ್ಲ ಘಟಿಸಿದರೂ ಸಂಬಂಧಪಟ್ಟ ಅಧಿಕಾರಿಗಳು ಕೈಕಟ್ಟಿ ಕೂತಿದ್ದಾರೆ. ರೈತರು ಮಳೆಯಿಂದಾಗಿ ವನವಾಸ ಅನುಭವಿಸುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ರೈತ ಸಂಗಪ್ಪ.

Intro:ಮಳೆಗೆ ಚಲ್ಲಾಟ ರಾಯರ ಕೆರೆಯ ರೈತರ ಸಂಕಷ್ಟ
ಹೊಸಪೇಟೆ : ನಗರದ ರೈತರು ತುಂಬಾ ಕಷ್ಟದಲ್ಲಿದ್ದಾರೆ. ರೈತರು ಉಪವಾಸ, ವನವಾಸ ಇದ್ದು ತಮ್ಮ ಜಮೀನಗಳಲ್ಲಿ ಉಳುಮೆಯನ್ನು ಮಾಡಿರುತ್ತಾರೆ. ಆದರೆ ಮಳೆಯು ರೈತರ ಜೊತೆಗೆ ಜೂಜಾಟವಾಡುತ್ತಿದೆ. ಯಾವ ಸಮಯಕ್ಕೆ ಮಳೆ ಬೇಕು ಆ ಸಮಯಕ್ಕೆ ಸರಿಯಾಗಿ ಮಳೆಯಾಗುವುದಿಲ್ಲ.ಯಾವ ಸಮಯಕ್ಕೆ ಮಳೆ ಬೇಡವೆ ಆ ಕಾಲಕ್ಕೆ ಮಳೆಯಾಗುತ್ತದೆ. ಇನ್ನೇನು ಪಸಲು ಬಂದಿದೆ ಎನ್ನುವ ಖುಷಿ ಸಮಯಕ್ಕೆ ಧಾರಕಾರ ಮಳೆಯಾಗಿ ಜಮೀನೆಲ್ಲ ಜಲಾಶಯವಾಗಿದೆ ಎನ್ನುತ್ತಾನೆ ಸಂಗಪ್ಪ ರೈತ.



Body:.
ಹೊಸಪೇಟೆಯಲ್ಲಿ ಧಾರಕಾರ ಮಳೆಯಿಂದಾಗಿ ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ.ಹೊಸಪೇಟೆ ನಗರದ ರಾಯರಕೆರೆ ತುಂಬಿದೆ. ಈ ಕೆರೆಯ ತುಂಬಿದ ಇನ್ನಲೆಯಲ್ಲಿ ಕೃಷಿಯ ಜಮೀನುಗಳಿಗೆ ನೀರು ನುಗ್ಗಿದೆ. ಜಮೀನಲ್ಲಿ ಟೊಮ್ಯಾಟೊ,ಕಬ್ಬು, ಮೆಕ್ಕೆಜೋಳ ಬೆಳೆ ಮುಂತಾದ ಬೆಳೆಗಳು‌ನಾಶವಾಗಿದೆ. ರೈತರು ವರ್ಷಪೂರ್ತಿ ಕಷ್ಷಟ ಪಟ್ಟಿರುವುದೆಲ್ಲ ನೀರಿನಲ್ಲಿ ಹೊಂ ಮಾಡಿದಂತಾಗಿದೆ. ಜಮೀನಿಗೆ ನುಗ್ಗಿದ ನೀರು ಜಲಾವೃತವಾಗಿದೆ.ತಮ್ಮ ಶ್ರಮವನ್ನೆಲ್ಲ ಹೊಲಗದ್ದೆಗಳಿಗೆ ಮುಡುಪಾಗಿಟ್ಟರುತ್ತಾರೆ. ಸಾಲ ಶೂಲ ಮಾಡಿ ಕೃಷಿಯ ಕೆಲಸಕ್ಕೆ ತೊಡಗಿರುತ್ತಾರೆ. ಆದರೆ ಸಮಯಕ್ಕೆ ಸರಿಯಾಗಿ ಬೆಳೆಗೆ ತಕ್ಕಷ್ಟು ಮಳೆ ಬಂದಿದ್ದರೆ ತೊಂದರೆಯಾಗುತ್ತಿರಲಿಲ್ಲ. ಆದರೆ ಭಾರಿ ಮಳೆಯಿಂದಾಗಿ ರೈತರು ನೋವನ್ನು ಅನುಭವಿಸುತ್ತಿದ್ದಾರೆ.
ಮುಂಚೆಯೆಲ್ಲ ರೈತರ ಹೊಲಗಳ ನಾಲೆಯಿಂದಾಗಿ ಸುಲವಾಗಿ ನೀರು ಹರಿದು ಹೋಗುತ್ತಿತ್ತು.ಆದರೆ 13 ನೇ ರಾಷ್ಟ್ರೀಯ ಹೆದ್ದಾರಿಯನ್ನು ಎತ್ತರ ಮಾಡಿದ ಪರಿಣಾಮವಾಗಿ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕಿದದ್ದಾರೆ. ಹಳ್ಳ ಕೊಳ್ಳದ ನೀರೆಲ್ಲ ಈ ಜಮೀನನಲ್ಲಿ ನಿಂತು ಬಿಡುತ್ತದೆ ಎನ್ನುತ್ತಾರೆ ಸಂಕಷ್ಟದ ರೈತರು. ಇಷ್ಟೆಲ್ಲ ನಡೆದರು ಸಹ ಸಂಬಂಧ ಪಟ್ಟ ಅಧಿಕಾರಿಗಳು ಮಾತ್ರ ಸುಮ್ಮನೆ ಕುಳಿತಿರುವುದು ನೋವಿನ ಸಂಗತಿಯಾಗಿದೆ.




Conclusion: KN_ HPT_6_ FARMERS LOSSE IN CRAPS VISUAL_KA10028
bite: ಸಂಗಪ್ಪ ರೈತ
ನಗರದ ರೈತರು ತುಂಬಾ ಕಷ್ಟದಲ್ಲಿದ್ದಾರೆ. ರೈತರು ಉಪವಾಸ, ವನವಾಸ ಇದ್ದು ತಮ್ಮ ಜಮೀನಗಳಲ್ಲಿ ಉಳುಮೆಯನ್ನು ಮಾಡಿರುತ್ತಾರೆ. ಆದರೆ ಮಳೆಯು ರೈತರ ಜೊತೆಗೆ ಜೂಜಾಟವಾಡುತ್ತಿದೆ. ಯಾವ ಸಮಯಕ್ಕೆ ಮಳೆ ಬೇಕು ಆ ಸಮಯಕ್ಕೆ ಸರಿಯಾಗಿ ಮಳೆಯಾಗುವುದಿಲ್ಲ.ಯಾವ ಸಮಯಕ್ಕೆ ಮಳೆ ಬೇಡವೆ ಆ ಕಾಲಕ್ಕೆ ಮಳೆಯಾಗುತ್ತದೆ. ಇನ್ನೇನು ಪಸಲು ಬಂದಿದೆ ಎನ್ನುವ ಖುಷಿ ಸಮಯಕ್ಕೆ ಧಾರಕಾರ ಮಳೆಯಾಗಿ ಜಮೀನೆಲ್ಲ ಜಲಾಶಯವಾಗಿದೆ ಎನ್ನುತ್ತಾನೆ ಸಂಗಪ್ಪ ರೈತ.
Last Updated : Oct 8, 2019, 10:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.