ETV Bharat / city

ಎಸ್ಸಿ-ಎಸ್ಟಿ ಹಾಸ್ಟೇಲ್ ಗಳಿಗೆ ಬೀಗ.. ಮೂಲಸೌಕರ್ಯಕ್ಕೆ ಆಗ್ರಹಿಸಿ ಸಂಶೋಧನಾ ವಿದ್ಯಾರ್ಥಿಗಳಿಂದ ಪ್ರತಿಭಟನೆ - undefined

ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಶೋಧನಾ ವಿದ್ಯಾರ್ಥಿಗಳು ವಿವಿಯ ಆವರಣದಲ್ಲಿನ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಭೂತ ಸೌಲಭ್ಯ ನೀಡಬೇಕೆಂದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ
author img

By

Published : May 5, 2019, 10:54 AM IST

ಬಳ್ಳಾರಿ : ವಿವಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ವಾರ್ಡನ್ ನೇಮಕ ಮಾಡಬೇಕು ಹಾಗೇ ಗುಣಮಟ್ಟ ಆಹಾರ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗಹಾಕಿ ಪ್ರತಿಭಟನೆ ಮಾಡಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಎಸ್ಸಿ-ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಸೌಲಭ್ಯ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಾಸ್ಟೆಲ್​ಗೆ ಬೀಗ ಹಾಕಿ ಆಕ್ರೋಶ

ಈ ಹಿಂದೆ ಇದ್ದ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ನೇಮಕ ಮಾಡಬೇಕು. ಅದರಿಂದ ಅವರು ವಸತಿ ಮತ್ತು ಊಟಕ್ಕೆ ಸಂಭವಿಸಿದ ಕೆಲಸ ಮಾಡುತ್ತಾರೆ. ಆದರೆ, ವಿವಿಯ ಇನ್ನಿತರ ಅಧಿಕಾರಿಗಳಿಗೆ ವಹಿಸಿದರೇ ಅವರು ತಮ್ಮ ಕೆಲಸದ ಜೊತೆಗೆ ಈ ವಾರ್ಡನ್ ಕೆಲಸ ಮಾಡುವುದು ಕಷ್ಟಕರ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು, ಎಂ.ಎ ವಿದ್ಯಾರ್ಥಿಗಳಿಗೆ ಒಟ್ಟು 44 ರೂಮ್ ಇವೆ. ಅದರಲ್ಲಿ 308 ವಿದ್ಯಾರ್ಥಿಗಳು ಇರುವುದಾದ್ರೂ ಹೇಗೆ ಎಂದು ಪ್ರಶ್ನಿಸಿದರು. 308 ವಿದ್ಯಾರ್ಥಿಗಳಿಗೆ 12 ಶೌಚಾಲಯ, 12 ಸ್ನಾನದ ಕೊಠಡಿಗಳಿವೆ. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.

ಅಡುಗೆ ಸಿಬ್ಬಂದಿ ಕೊರತೆ :

308 ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಇಬ್ಬರು ಅಡುಗೆ ಭಟ್ಟರು, 7 ಸಹಾಯಕರಿದ್ದಾರೆ. ಅಡುಗೆ ತಯಾರು ಮಾಡುವಲ್ಲಿ ಕಷ್ಟವಾಗುತ್ತೆ. 308 ವಿದ್ಯಾರ್ಥಿಗಳಲ್ಲಿ, ಬರೀ 100 ತಟ್ಟೆಗಳಿವೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಸಮಸ್ಯೆ ಬಗೆಹರಿಸುವ ಭರವಸೆ :

ಈ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ ಕುಮಾರ್, ನಿಮ್ಮ ಸಮಸ್ಯೆಗಳನ್ನು ಕುಲಪತಿಗಳ ಮುಂದೆ ಇಡಲಾಗುವುದು. ಅವರ ತೀರ್ಮಾನ ನೀಡುತ್ತಾರೆ ಎಂದರು.

ಬಳ್ಳಾರಿ : ವಿವಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ವಾರ್ಡನ್ ನೇಮಕ ಮಾಡಬೇಕು ಹಾಗೇ ಗುಣಮಟ್ಟ ಆಹಾರ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗಹಾಕಿ ಪ್ರತಿಭಟನೆ ಮಾಡಿದರು.

ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಆವರಣದಲ್ಲಿರುವ ಎಸ್ಸಿ-ಎಸ್ಟಿ ಸಂಶೋಧನಾ ವಿದ್ಯಾರ್ಥಿಗಳ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಸೌಲಭ್ಯ ನೀಡಬೇಕೆಂದು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಹಾಸ್ಟೆಲ್​ಗೆ ಬೀಗ ಹಾಕಿ ಆಕ್ರೋಶ

ಈ ಹಿಂದೆ ಇದ್ದ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ನೇಮಕ ಮಾಡಬೇಕು. ಅದರಿಂದ ಅವರು ವಸತಿ ಮತ್ತು ಊಟಕ್ಕೆ ಸಂಭವಿಸಿದ ಕೆಲಸ ಮಾಡುತ್ತಾರೆ. ಆದರೆ, ವಿವಿಯ ಇನ್ನಿತರ ಅಧಿಕಾರಿಗಳಿಗೆ ವಹಿಸಿದರೇ ಅವರು ತಮ್ಮ ಕೆಲಸದ ಜೊತೆಗೆ ಈ ವಾರ್ಡನ್ ಕೆಲಸ ಮಾಡುವುದು ಕಷ್ಟಕರ ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು, ಎಂ.ಎ ವಿದ್ಯಾರ್ಥಿಗಳಿಗೆ ಒಟ್ಟು 44 ರೂಮ್ ಇವೆ. ಅದರಲ್ಲಿ 308 ವಿದ್ಯಾರ್ಥಿಗಳು ಇರುವುದಾದ್ರೂ ಹೇಗೆ ಎಂದು ಪ್ರಶ್ನಿಸಿದರು. 308 ವಿದ್ಯಾರ್ಥಿಗಳಿಗೆ 12 ಶೌಚಾಲಯ, 12 ಸ್ನಾನದ ಕೊಠಡಿಗಳಿವೆ. ಕುಡಿಯುವ ನೀರಿನ ಸಮಸ್ಯೆ ಇದೆ ಎಂದು ಹೇಳಿದರು.

ಅಡುಗೆ ಸಿಬ್ಬಂದಿ ಕೊರತೆ :

308 ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಇಬ್ಬರು ಅಡುಗೆ ಭಟ್ಟರು, 7 ಸಹಾಯಕರಿದ್ದಾರೆ. ಅಡುಗೆ ತಯಾರು ಮಾಡುವಲ್ಲಿ ಕಷ್ಟವಾಗುತ್ತೆ. 308 ವಿದ್ಯಾರ್ಥಿಗಳಲ್ಲಿ, ಬರೀ 100 ತಟ್ಟೆಗಳಿವೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

ಸಮಸ್ಯೆ ಬಗೆಹರಿಸುವ ಭರವಸೆ :

ಈ ವೇಳೆ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ ಕುಮಾರ್, ನಿಮ್ಮ ಸಮಸ್ಯೆಗಳನ್ನು ಕುಲಪತಿಗಳ ಮುಂದೆ ಇಡಲಾಗುವುದು. ಅವರ ತೀರ್ಮಾನ ನೀಡುತ್ತಾರೆ ಎಂದರು.

Intro:ವಿವಿಯಲ್ಲಿ ಸಮಾಜಕಲ್ಯಾಣ ಇಲಾಖೆಯಿಂದ ವಾರ್ಡನ್ ನೇಮಕ ಮಾಡಬೇಕು ಹಾಗೇ ಗುಣಮಟ್ಟ ಆಹಾರ ನೀಡಬೇಕೆಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು ಹಾಸ್ಟೆಲ್ ಗೆ ಬೀಗಹಾಕಿ ಪ್ರತಿಭಟನೆ ಮಾಡಿದರು.





Body:ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಂಶೋಧನಾ ವಿದ್ಯಾರ್ಥಿಗಳು ಇಂದು ಬೆಳಿಗ್ಗೆ ಯಿಂದ ವಿವಿಯ ಆವರಣದಲ್ಲಿನ ಹಾಸ್ಟೆಲ್ ಗಳಿಗೆ ಬೀಗ ಹಾಕಿ ಅಗತ್ಯ ಮೂಲಭೂತ ಸೌಲಭ್ಯ ನೀಡಬೇಕೆಂದು ಪ್ರತಿಭಟನೆ ಮಾಡಿದರು.


ಈ ಹಿಂದೆ ಇದ್ದ ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ನೇಮಕ ಮಾಡಬೇಕು. ಅದರಿಂದ ಅವರು ವಸತಿ ಮತ್ತು ಊಟಕ್ಕೆ ಸಂಭವಿಸಿದ ಕೆಲಸ ಮಾಡುತ್ತಾರೆ ಆದ್ರೆ ವಿವಿಯ ಇನ್ನಿತರ ಅಧಿಕಾರಿಗಳಿಗೆ ವಹಿಸಿದರೇ ಅವರ ತಮ್ಮ ಕೆಲಸ ಜೊತೆಗೆ ಈ ವಾರ್ಡನ್ ಕೆಲಸ ಮಾಡುವುದು ಕಷ್ಟಕರ ಎಂದ ವಿದ್ಯಾರ್ಥಿಗಳು.

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂಶೋಧನಾ ವಿದ್ಯಾರ್ಥಿಗಳು, ಎಂ.ಎ ವಿದ್ಯಾರ್ಥಿಗಳಿಗೆ ಒಟ್ಟು 44 ರೂಮ್ ಇವೆ.
ಅದರಲ್ಲಿ 308 ವಿದ್ಯಾರ್ಥಿಗಳು ಇರುವಾದ್ರೂ ಹೇಗೆ ? ಎಂದು ಪ್ರಶ್ನೆ ಮಾಡಿದರು.


308 ವಿದ್ಯಾರ್ಥಿಗಳಿಗೆ 12 ಶೌಚಾಲಯ, 12 ಸ್ನಾನದ ಕೊಠಡಿ‌ :

308 ವಿದ್ಯಾರ್ಥಿಗಳಿಗೆ 12 ಶೌಚಾಲಯ, 12 ಸ್ನಾನ ದ ಕೊಠಡಿಗಳಿವೆ, ಕುಡಿಯುವ ನೀರಿನ ಸಮಸ್ಯೆ ಬಹಳಇದೆ ಎಂದ ವಿದ್ಯಾರ್ಥಿಗಳು.

ಅಡುಗೆ ಸಿಬ್ಬಂದಿಗಳು ಕಡಿಮೆ :

308 ಜನ ವಿದ್ಯಾರ್ಥಿಗಳಿಗೆ ಅಡುಗೆ ಮಾಡಲು ಇಬ್ಬರು ಅಡುಗೆ ಭಟ್ಟರು, 7 ಜನರು ಸಹಾಯಕರಿದ್ದಾರೆ. ಅಡುಗೆ ತಯಾರು ಮಾಡುವಲ್ಲಿ ಕಷ್ಟ ಆಗುತ್ತೆ ಎಂದ ಸಿಬ್ಬಂದಿಗಳು.

ಕುಡಿಯುವ ನೀರು ಮತ್ತು ಲೋಟ - ತಟ್ಟೆಗಳು ಇಲ್ಲ :

308 ವಿದ್ಯಾರ್ಥಿಗಳಲ್ಲಿ, ಬರೀ ನೂರು ತಟ್ಟೆಗಳಿವೆ, ತಟ್ಟೆಗಳು ಇಲ್ಲದೇ ಹೇಗೆ ? ಊಟ ಮಾಡಬೇಕೆಂದು ಕೇಳುತ್ತಿದ್ದ ವಿದ್ಯಾರ್ಥಿಗಳು. ‌

ಈ ಸಮಯದಲ್ಲಿ ಮಾತನಾಡಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ ಕುಮಾರ್ ಮಾತನಾಡಿದ ನಿನ್ನ ಸಮಸ್ಯೆಗಳನ್ನು ಕುಲಪತಿಗಳ ಮುಂದೆ ಇಡುವೆ ಅವರ ತಿರ್ಮಾನ ನೀಡತ್ತಾರೆ ಎಂದರು.

ಈ ಹಿಂದೆ ಹಾಸ್ಟೆಲ್ ನಲ್ಲಿ ವಿಶ್ವವಿದ್ಯಾಲಯದ ಶಿವಕುಮಾರ್ ಮತ್ತು ಬೋರೈಯ ಸೇರಿ ನೋಡಿಕೊಳ್ಳುತ್ತಿದ್ದರು‌.
ಆದರೆ ವಿದ್ಯಾರ್ಥಿಗಳು ಮುಂದೆ ನಾವು ಮಾರ್ಚ್ ಗೆ ರಾಜೀನಾಮೆ ನೀಡಿದ್ದೆವೆ ಎನ್ನುತ್ತಾರೆ.

ವಿಸಿ ಮತ್ತು ರಿಜಿಸ್ಟ್ರಾರ್ ಆಯ್ತ್ ನೀವೆ ಮುಂದುವರೆಸಿಕೊಂಡು ಹೋಗಿ ಎನ್ನುತ್ತಾರೆ ಮಾಹಿತಿ ವಿದ್ಯಾರ್ಥಿಗಳು ಮುಂದೆ ನೀಡುತ್ತಾರೆ. ಹೀಗಾದ್ರೇ ಹೇಗೆ ? ಎನ್ನುವ ಮಾತುಗಳು ವಿದ್ಯಾರ್ಥಿಗಳಿಗೆ ಗೊಂದಲವಾಗಿದೆ.

ಒಟ್ಟಾರೆಯಾಗಿ ಈ ಪ್ರತಿಭಟನೆ ಸ್ಥಳಕ್ಕೆ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ವಸಂತ ಕುಮಾರ್, ಡಾ.ಸಿದ್ದಗಂಗಮ್ಮ, ಶಿವ ಕುಮಾರ್ ಮತ್ತು ಬೋರೈಯ ಹಾಜರಿದ್ದರು.



Conclusion:ಈ ಪ್ರತಿಭಟನೆಯಲ್ಲಿ ಸಂಶೋಧನಾ ವಿದ್ಯಾರ್ಥಿಗಳಾದ ಬಸವರಾಜ್ , ವೀರಭದ್ರಪ್ಪ, ನಾಗರಾಜ್, ಚೌಡೇಶ್, ಸಿದ್ದರಾಮಪ್ಪ, ಛಲುವರಾಜ್, ರಾಹುಲ್ ಇನ್ನಿತರ ನೂರಾರು ಸಂಶೋಧನಾ ವಿದ್ಯಾರ್ಥಿ ಭಾಗವಹಿಸಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.