ಬಳ್ಳಾರಿ: ಕೊರೊನಾ ವಿರುದ್ದ ಹೋರಾಡುತ್ತಿರುವ ಸರ್ಕಾರಕ್ಕೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಸಹಕಾರ ಇಲಾಖೆ ವತಿಯಿಂದ ಸಿಎಂ ಪರಿಹಾರ ನಿಧಿಗೆ ಹಣ ಸಂದಾಯ ಮಾಡಲಾಗಿದೆ.
ಕೊರೊನಾ ವೈರಸ್ನ್ನು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ಆರ್ಥಿಕವಾಗಿ ನೆರವಾಗುವ ಹಿನ್ನೆಲೆಯಲ್ಲಿ ಜಿಲ್ಲೆಯ 57 ವಿವಿಧ ಸಂಘಗಳು ಚೆಕ್/ಡಿಡಿಗಳ ಮೂಲಕ 12.47 ಲಕ್ಷ ರೂ., 205 ಸಂಘ-ಸಂಸ್ಥೆಗಳು ಆರ್ಟಿಜಿಎಸ್ ಮೂಲಕ 26.07 ಲಕ್ಷ ರೂ. ಮತ್ತು 4 ಸಂಘಗಳು ಜಿಲ್ಲಾಧಿಕಾರಿಗಳ ಮೂಲಕ 11.22 ಲಕ್ಷ ರೂ. ಸೇರಿದಂತೆ ಒಟ್ಟಾರೆ 266 ಸಂಘ-ಸಂಸ್ಥೆಗಳಿಂದ 49.76 ಲಕ್ಷ ರೂ.ಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಲಾಯಿತು.