ETV Bharat / city

ಆನಂದ್‌ ಸಿಂಗ್ ಪುತ್ರನ ಅದ್ಧೂರಿ ವಿವಾಹ ಮಹೋತ್ಸವ, ಚುನಾವಣಾ ಸಿಬ್ಬಂದಿ ಕಣ್ಗಾವಲು

author img

By

Published : Dec 1, 2019, 7:49 PM IST

ಬಳ್ಳಾರಿ ನಗರದ ದ್ವಾರಕಾ ನಂದಗೋಕುಲ ಹೆರಿಟೇಜ್‌ನಲ್ಲಿ ಅನರ್ಹ ಶಾಸಕ ಹಾಗು ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಹಾಗೂ ಸಂಜನಾ ಸಬರದ ವಿವಾಹ ಮಹೋತ್ಸವ ಅದ್ಧೂರಿಯಾಗಿ ನೆರವೇರಿತು.

ಆನಂದಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಅದ್ಧೂರಿ ವಿವಾಹ ಮಹೋತ್ಸವ
ಆನಂದಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಅದ್ಧೂರಿ ವಿವಾಹ ಮಹೋತ್ಸವ

ಬಳ್ಳಾರಿ: ನಗರದ ದ್ವಾರಕಾ ನಂದಗೋಕುಲ ಹೆರಿಟೇಜ್‌ನಲ್ಲಿ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಹಾಗೂ ಸಂಜನಾ ಸಬರದ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ನೆರವೇರಿತು.

ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಅದ್ಧೂರಿ ವಿವಾಹೋತ್ಸವ

ಕಾರ್ಯಕ್ರಮದಲ್ಲಿ ರಜಪೂತ ಸಂಪ್ರದಾಯದಂತೆ ಮದುವೆ ಕೈಂಕರ್ಯಗಳು ನೆರವೇರಿದವು. ಮದುವೆ ಮಂಟಪದಲ್ಲಿ ತಿರುಪತಿ ವೆಂಕಟೇಶ್ವರ ಪ್ರವೇಶದ್ವಾರದ ಶೈಲಿಯಲ್ಲಿ ಆಕರ್ಷಕ ಬಾಗಿಲುಗಳನ್ನು ಸಿದ್ದಪಡಿಸಲಾಗಿತ್ತು. ಮಂಟಪದಲ್ಲಿ ವೆಂಕಟೇಶ್ವರ ಮೂರ್ತಿ, ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನೀರಿನ ಕಾರಂಜಿ, ಶೋ ಆನೆಗಳು ಜನರನ್ನು ಸ್ವಾಗತಿಸಿದವು.

ಚುನಾವಣಾ ಆಯೋಗದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಮದುವೆಯ ಘಟನಾವಳಿಗಳನ್ನು ಚಿತ್ರೀಕರಿಸಿದ್ದಾರೆ.

ಗಣ್ಯರ ಸಮಾಗಮ:

ಕಾನೂನು ಸಚಿವ ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ ಸಿಂಗ್, ಆರ್‌ಎಸ್‌ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್‌, ಶಾಸಕರಾದ ಸೋಮಶೇಖರ ರೆಡ್ಡಿ, ರಾಜುಗೌಡ, ಈ.ತುಕರಾಂ, ಬಿಜೆಪಿಯ ಚುನಾವಣಾ ಉಸ್ತುವಾರಿ ಎನ್.ರವಿಕುಮಾರ್​, ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತಾ, ಶ್ರೀನಿವಾಸರೆಡ್ಡಿ, ಸಣ್ಣ ಫಕೀರಪ್ಪ ಸೇರಿ ಇತರರು ಭಾಗವಹಿಸಿದ್ದರು.

ಬಳ್ಳಾರಿ: ನಗರದ ದ್ವಾರಕಾ ನಂದಗೋಕುಲ ಹೆರಿಟೇಜ್‌ನಲ್ಲಿ ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಹಾಗೂ ಸಂಜನಾ ಸಬರದ ವಿವಾಹ ಮಹೋತ್ಸವ ಇಂದು ಅದ್ಧೂರಿಯಾಗಿ ನೆರವೇರಿತು.

ಆನಂದ್ ಸಿಂಗ್ ಪುತ್ರ ಸಿದ್ದಾರ್ಥ್ ಸಿಂಗ್ ಅದ್ಧೂರಿ ವಿವಾಹೋತ್ಸವ

ಕಾರ್ಯಕ್ರಮದಲ್ಲಿ ರಜಪೂತ ಸಂಪ್ರದಾಯದಂತೆ ಮದುವೆ ಕೈಂಕರ್ಯಗಳು ನೆರವೇರಿದವು. ಮದುವೆ ಮಂಟಪದಲ್ಲಿ ತಿರುಪತಿ ವೆಂಕಟೇಶ್ವರ ಪ್ರವೇಶದ್ವಾರದ ಶೈಲಿಯಲ್ಲಿ ಆಕರ್ಷಕ ಬಾಗಿಲುಗಳನ್ನು ಸಿದ್ದಪಡಿಸಲಾಗಿತ್ತು. ಮಂಟಪದಲ್ಲಿ ವೆಂಕಟೇಶ್ವರ ಮೂರ್ತಿ, ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು. ನೀರಿನ ಕಾರಂಜಿ, ಶೋ ಆನೆಗಳು ಜನರನ್ನು ಸ್ವಾಗತಿಸಿದವು.

ಚುನಾವಣಾ ಆಯೋಗದ ಸಿಬ್ಬಂದಿ ಸ್ಥಳದಲ್ಲೇ ಬೀಡುಬಿಟ್ಟಿದ್ದು, ಮದುವೆಯ ಘಟನಾವಳಿಗಳನ್ನು ಚಿತ್ರೀಕರಿಸಿದ್ದಾರೆ.

ಗಣ್ಯರ ಸಮಾಗಮ:

ಕಾನೂನು ಸಚಿವ ಮಾಧುಸ್ವಾಮಿ, ವಿಧಾನ ಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ ಸಿಂಗ್, ಆರ್‌ಎಸ್‌ಎಸ್ ಮುಖಂಡ ಕಲ್ಕಡ್ಕ ಪ್ರಭಾಕರ ಭಟ್‌, ಶಾಸಕರಾದ ಸೋಮಶೇಖರ ರೆಡ್ಡಿ, ರಾಜುಗೌಡ, ಈ.ತುಕರಾಂ, ಬಿಜೆಪಿಯ ಚುನಾವಣಾ ಉಸ್ತುವಾರಿ ಎನ್.ರವಿಕುಮಾರ್​, ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತಾ, ಶ್ರೀನಿವಾಸರೆಡ್ಡಿ, ಸಣ್ಣ ಫಕೀರಪ್ಪ ಸೇರಿ ಇತರರು ಭಾಗವಹಿಸಿದ್ದರು.

Intro:ಆನಂದಸಿಂಗ್ ಪುತ್ರನ ವಿವಾಹ ಮಹೋತ್ಸವ ಅದ್ಧೂರಿ..!
ಬಳ್ಳಾರಿ: ನಗರದ ದ್ವಾರಕದ ನಂದಗೋಕುಲ ಹರಿಟೇಜ್‌ನಲ್ಲಿ ಆನಂದಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಹಾಗೂ ಸಂಜನಾ ಸಬರದ ವಿವಾಹ ಮಹೋತ್ಸವವು ಇಂದು ಅದ್ಧೂರಿಯಾಗಿ ನೆರವೇರಿತು.
ರಜಪೂತ್ ಸಂಪ್ರದಾಯ ಮದುವೆ ಕೈಂಕಾರ್ಯಗಳು ನಡೆದವು. ತಿರುಪತಿ ವೆಂಕಟೇಶ್ವರ ಪ್ರವೇಶದ್ವಾರದ ಶೈಲಿಯಲ್ಲಿ ಬಾಗಿಲಗಳನ್ನು ಮಾಡಲಾಗಿತ್ತು. ವೆಂಕಟೇಶ್ವರಮೂರ್ತಿ, ಗಣೇಶಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿತ್ತು.
ನೀರಿನ ಕಾರಂಜಿ, ಷೋ ಆನೆಗಳು ಜನರು ಸ್ವಾಗತಿಸಿದವು. ಸಿದ್ದಾರ್ಥ ಹಾಗೂ ಸಂಜನಾ ಸಬರದ ತೆಗೆಸಿಕೊಂಡಿದ್ದ ಫೋಟೋಗಳು ಮದುವೆ ಮನೆಯಲ್ಲಿ ರಾರಾಜಿಸುತ್ತಿದ್ದವು.
ಮದುವೆ ಬಂದವರಿಗೆ ಸಂಪ್ರದಾಯದAತೆ ಚೀಲದೊಂದಿಗೆ ತೆಂಗಿನ ಕಾಯಿಯನ್ನು ನೀಡಲಾಯಿತು. ಚೀಲದಲ್ಲಿ ಎಲೆ, ತಿನ್ನುವ ಸೋಪಿನ ಚೀಟಿಯನ್ನು ಕೊಡಲಾಯಿತು.
ಚುನಾವಣೆ ಆಯೋಗದ ಕಣ್ಣು: ಮದುವೆಯ ಘಟನಾವಳಿಗಳನ್ನು ಚುನಾವಣಾ ಸಿಬ್ಬಂದಿಗಳು ಚಿತ್ರೀಕರಿಸಿದರು. ಮದುವೆ ಮಂಟಪದ ಕಡೆ ಹೋಗುವರನ್ನು ಚುನಾವಣಾ ಆಯೋಗದ ಪರಿಶೀಲನೆ ಮಾಡಲಿಲ್ಲ. ಸಾವಿರಾರು ಜನರು ಮದುವೆ ಕಾರ್ಯಕ್ರಮದಲ್ಲಿ ಸಾಕ್ಷಿಯಾಗಿದ್ದರು.
ಪ್ರಚಾರದಿಂದ ದೂರ: ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಪುತ್ರನ ಮದುವೆ ಸಮಾರಂಭದ ನಿಮಿತ್ತ ಉಪಚುನಾವಣಾ ಪ್ರಚಾರದಿಂದ ದೂರ ಸರಿದರು. ದಿನಪೂರ್ತಿ ಮಗನ ಕಾರ್ಯಕ್ರಮದಲ್ಲಿ ಭಾಗ ವಹಿಸಿದ್ದರು.
Body:ಗಣ್ಯರ ಸಮಾಗಮ: ಕಾನೂನು ಸಚಿವ ಮಾಧುಸ್ವಾಮಿ, ವಿಧಾನಪರಿಷತ್ ಸದಸ್ಯರಾದ ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ, ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ
ಸಿಂಗ್, ಆರ್‌ಎಸ್‌ಎಸ್ ಮುಖಂಡ ಕಲ್ಕಡ್ ಪ್ರಭಾಕರ್, ಶಾಸಕರಾದ ಸೋಮಶೇಖರ ರೆಡ್ಡಿ, ರಾಜುಗೌಡ, ಈ.ತುಕರಾಂ, ಬಿಜೆಪಿಯ ಚುನಾವಣೆಯ ಉಸ್ತುವಾರಿ ಎನ್.ರವಿಕುಮಾರ, ಬಿಜೆಪಿ ಮಹಿಳಾ ಮೋರ್ಚಾದ ಉಪಾಧ್ಯಕ್ಷೆ ಬಿ.ಎಲ್.ರಾಣಿ ಸಂಯುಕ್ತಾ, ಶ್ರೀನಿವಾಸರೆಡ್ಡಿ, ಸಣ್ಣಫಕ್ಕೀರಪ್ಪ ಸೇರಿ ಇತರರು
ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_ANADASINGH_SON_MARRIAGE_VSL_7203310

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.