ETV Bharat / city

ಟೈಯರ್ ಸ್ಫೋಟಗೊಂಡು ಅಪಘಾತ: ಕೃಷ್ಣ ಜಲಭಾಗ್ಯ ಮಂಡಳಿ ಅಧಿಕಾರಿ ಸೇರಿ ನಾಲ್ವರು ಸಾವು - ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ

ಹಾರೋವನಹಳ್ಳಿಯತ್ತ ಬರುತ್ತಿದ್ದ ಕಾರೊಂದರ ಟೈಯರ್ ಸ್ಫೋಟಗೊಂಡು, ಚಾಲಕನ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಸರ್ಕಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 4 ಮಂದಿ ಮೃತಪಟ್ಟಿದ್ದು, 8 ಜನರಿಗೆ ಗಂಭೀರ ಗಾಯಗಳಾಗಿವೆ.

Accident between two Innova cars
ಸರ್ಕಾರಿ ಇನೋವಾ, ಮತ್ತೊಂದು ಇನೋವಾ ಮಧ್ಯೆ ಭೀಕರ ಅಪಘಾತ
author img

By

Published : Apr 1, 2021, 1:58 PM IST

Updated : Apr 1, 2021, 2:46 PM IST

ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯ ಹಾರೋವನಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ.

ಸರ್ಕಾರಿ ಇನೋವಾ, ಮತ್ತೊಂದು ಇನೋವಾ ಮಧ್ಯೆ ಭೀಕರ ಅಪಘಾತ

ಹಾರೋವನಹಳ್ಳಿಯತ್ತ ಬರುತ್ತಿದ್ದ ಕಾರೊಂದರ ಟೈಯರ್ ಸ್ಫೋಟಗೊಂಡಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಇನ್ನೊಂದು ಸರ್ಕಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 4 ಮಂದಿ ಮೃತಪಟ್ಟಿದ್ದು, 8 ಜನರಿಗೆ ಗಂಭೀರ ಗಾಯಗಳಾಗಿವೆ.

ಮೃತರನ್ನು ಕೃಷ್ಣ ಜಲ ಭಾಗ್ಯ ಮಂಡಳಿಯ ಅಧಿಕಾರಿಗಳಾದ ಕೋದಂಡ ರಾಮಸ್ವಾಮಿ ( 55), ಜಿತೇಂದ್ರಪ್ಪ ಪನ್ವರ್ ( 50) ಹಾಗೂ ಖಾಸಗಿ ಕಾರಿನಲ್ಲಿದ್ದ ಕಾವ್ಯ (35) ಮತ್ತು ಶರಣ ಬಸವ (10) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆ ಮತ್ತು ಬಳ್ಳಾರಿ ವಿಮ್ಸ್​ಗೆ ಚಿಕಿತ್ಸೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.

ಹೊಸಪೇಟೆ: ತಾಲೂಕಿನ ಮರಿಯಮ್ಮನಹಳ್ಳಿ ವ್ಯಾಪ್ತಿಯ ಹಾರೋವನಹಳ್ಳಿ ಬಳಿ ಎರಡು ಕಾರುಗಳ ನಡುವೆ ಅಪಘಾತ ಸಂಭವಿಸಿದೆ.

ಸರ್ಕಾರಿ ಇನೋವಾ, ಮತ್ತೊಂದು ಇನೋವಾ ಮಧ್ಯೆ ಭೀಕರ ಅಪಘಾತ

ಹಾರೋವನಹಳ್ಳಿಯತ್ತ ಬರುತ್ತಿದ್ದ ಕಾರೊಂದರ ಟೈಯರ್ ಸ್ಫೋಟಗೊಂಡಿದೆ. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಎದುರಿಗೆ ಬರುತ್ತಿದ್ದ ಇನ್ನೊಂದು ಸರ್ಕಾರಿ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ 4 ಮಂದಿ ಮೃತಪಟ್ಟಿದ್ದು, 8 ಜನರಿಗೆ ಗಂಭೀರ ಗಾಯಗಳಾಗಿವೆ.

ಮೃತರನ್ನು ಕೃಷ್ಣ ಜಲ ಭಾಗ್ಯ ಮಂಡಳಿಯ ಅಧಿಕಾರಿಗಳಾದ ಕೋದಂಡ ರಾಮಸ್ವಾಮಿ ( 55), ಜಿತೇಂದ್ರಪ್ಪ ಪನ್ವರ್ ( 50) ಹಾಗೂ ಖಾಸಗಿ ಕಾರಿನಲ್ಲಿದ್ದ ಕಾವ್ಯ (35) ಮತ್ತು ಶರಣ ಬಸವ (10) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ಹೊಸಪೇಟೆ ಸರ್ಕಾರಿ ಆಸ್ಪತ್ರೆ ಮತ್ತು ಬಳ್ಳಾರಿ ವಿಮ್ಸ್​ಗೆ ಚಿಕಿತ್ಸೆಗೆ ರವಾನಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್ ತಿಳಿಸಿದ್ದಾರೆ.

Last Updated : Apr 1, 2021, 2:46 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.