ETV Bharat / city

ನಿರ್ಗತಿಕ ಮಹಿಳೆಯನ್ನು ಮರಳಿ ಗೂಡು ಸೇರಿಸಿದ ವಾಟ್ಸ್ಯಾಪ್​... ಹೇಗಂತಿರಾ? - ಬೆಳಗಾವಿ ಮೀಡಿಯಾ ಜಕ್ಷಂನ್

ಅನಾವಶ್ಯಕವಾಗಿ ಸೋಶಿಯಲ್ ಮೀಡಿಯಾಗಳ ಬಳಕೆ ಈಗ ಸಾಮಾನ್ಯ. ಸಮಯ ಕಳೆಯಲು ಮೋಜು ಮಸ್ತಿಗಾಗಿ ಕಾಲ ಕಳೆಯಲು ಸಹಾಯವಾಗುತ್ತಿದ್ದ ವಾಟ್ಸ್ಯಾಪ್​ ಈಗ ಒಂದು ನಿರ್ಗತಿಕ ಮಹಿಳೆಗೆ ಆಶ್ರಯ ಒದಗಿಸಿದೆ.

ಗೂಡು ಸೇರಿದ ಆಂಧ್ರದ ಮಹಿಳೆ
author img

By

Published : Jul 31, 2019, 5:51 AM IST

ಬೆಳಗಾವಿ: ಇಲ್ಲಿನ ಪತ್ರಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಮುಖಂಡರುಗಳನ್ನು ಒಳಗೊಂಡ 'ಬೆಳಗಾವಿ ಮೀಡಿಯಾ ಜಂಕ್ಷನ್' ಎಂಬ ವಾಟ್ಸ್ಯಾಪ್​ ಗ್ರೂಪ್, ಅಂತಾರಾಜ್ಯದ ಮಹಿಳೆವೋರ್ವಳು ಮರಳಿ ತನ್ನ ಮನೆ ಸೇರುವಂತೆ ಮಾಡಿದೆ.

ಜು. 28 ರಂದು ಆಂಧ್ರಪ್ರದೇಶದ ತಿರುಪತಿ ಸಮೀಪದ ಜಯರಾಮಪುರ ಗ್ರಾಮದ ಮಹಿಳೆ ಸತತ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಕುಳಿತಿದ್ದಳು. ಈ ಕುರಿತು ರಾತ್ರಿ ಸುಮಾರಿಗೆ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಫೋಟೊಗಳನ್ನು ಹಾಕಿ, ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಈ ವೇಳೆ ಬೆಳಗಾವಿ ಮೀಡಿಯಾ ಜಂಕ್ಷನ್ ಗ್ರೂಪ್​ನಲ್ಲಿದ್ದ ಜಿ.ಪಂ. ಸಿಇಒ ಡಾ. ರಾಜೇಂದ್ರ. ಕೆ. ವಿ ಇದನ್ನು ಗಮನಿಸಿ, ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ) ರಾಮನಗೌಡ ಕನ್ನೋಳ್ಳಿ ಅವರಿಗೆ ಫೋನ್​ ಮಾಡಿದ್ದರು. ತಕ್ಷಣ ಮಹಿಳೆಯನ್ನು ರಕ್ಷಣೆ ಮಾಡಿ, ನಿರ್ಗತಿಕರ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಿದ್ದರು.

ಜಿ.ಪಂ. ಸಿಇಒ ಅವರ ಸೂಚನೆಯಂತೆ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು, ಕೇವಲ 20 ನಿಮಿಷಗಳಲ್ಲಿ ಮಹಿಳೆ ಇರುವ ಸ್ಥಳಕ್ಕೆ ದೌಡಾಯಿಸಿ, ರಕ್ಷಿಸಿದ್ದರು. ನಂತರ ಆರೋಗ್ಯ ತಪಾಸಣೆ ಮಾಡಿದ ಅಧಿಕಾರಿಗಳು ಮಹಿಳೆ ಮಾನಸಿಕವಾಗಿ ಸದೃಢವಾಗಿದ್ದು, ಸರಿಯಾಗಿ ಆಹಾರ ಸೇವಿಸದೇ ಅಶಕ್ತವಾಗಿ ಬಿದ್ದು ಕೈಗೆ ಗಾಯವಾಗಿದ್ದನ್ನು ಗಮನಿಸಿ ಚಿಕಿತ್ಸೆ ನೀಡಿದ್ದರು. ನಂತರ ಮಹಿಳೆಯನ್ನು ತಾತ್ಕಾಲಿಕವಾಗಿ ಇಲ್ಲಿನ ಶಾಹು ನಗರದಲ್ಲಿರುವ ಮಲ್ಲಿಕಾರ್ಜುನ ವೃದ್ಧಾಶ್ರಮಕ್ಕೆ ದಾಖಲಿಸಿ, ವಿಚಾರಿಸಿದ್ದರು. ಈ ವೇಳೆ ಮಹಿಳೆ ತಾನು ಆಂಧ್ರಪ್ರದೇಶದ ಜಯರಾಮಪುರ ಗ್ರಾಮದವಳಾಗಿದ್ದು, ತನ್ನ ಬಳಿ ಹಣ ಇಲ್ಲದಿರುವುದರಿಂದ ಅಲೆಯುತ್ತಿರುವ ಬಗ್ಗೆ ಹಾಗೂ ಸ್ವಗ್ರಾಮಕ್ಕೆ ತೆರಳಲು ಹಣದ ವ್ಯವಸ್ಥೆ ಮಾಡಿದಲ್ಲಿ ಮರಳಿ ತಮ್ಮೂರಿಗೆ ಹೋಗುವುದಾಗಿ ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಮಹಿಳೆ ಗುಣಮುಖವಾದ ನಂತರ ರೈಲು ಟಿಕೆಟ್ ಪಡೆದು, ಮಹಿಳೆಯ ಸ್ವಗ್ರಾಮವಾದ ಜಯರಾಮಪುರಕ್ಕೆ ಕಳಿಸಲು ವ್ಯವಸ್ಥೆ ಮಾಡಿದ್ದಾರೆ.

ನಿರ್ಗತಿಕ ಮಹಿಳೆಯನ್ನು ಗುರುತಿಸಿ ಮಾನವೀಯ ನೆಲೆಗಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಿರುವ ಅಧಿಕಾರಿಗಳು ಮತ್ತು ಮಹಿಳೆಯನ್ನು ಮರಳಿ ಗೂಡಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಳಗಾವಿ ಮಿಡಿಯಾ ಜಂಕ್ಷನ್ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್​ ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಬೆಳಗಾವಿ: ಇಲ್ಲಿನ ಪತ್ರಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇನ್ನಿತರ ಸಂಘ-ಸಂಸ್ಥೆಗಳ ಮುಖಂಡರುಗಳನ್ನು ಒಳಗೊಂಡ 'ಬೆಳಗಾವಿ ಮೀಡಿಯಾ ಜಂಕ್ಷನ್' ಎಂಬ ವಾಟ್ಸ್ಯಾಪ್​ ಗ್ರೂಪ್, ಅಂತಾರಾಜ್ಯದ ಮಹಿಳೆವೋರ್ವಳು ಮರಳಿ ತನ್ನ ಮನೆ ಸೇರುವಂತೆ ಮಾಡಿದೆ.

ಜು. 28 ರಂದು ಆಂಧ್ರಪ್ರದೇಶದ ತಿರುಪತಿ ಸಮೀಪದ ಜಯರಾಮಪುರ ಗ್ರಾಮದ ಮಹಿಳೆ ಸತತ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಬೆಳಗಾವಿ ನಗರದ ಚೆನ್ನಮ್ಮ ವೃತ್ತದ ಬಳಿ ಇರುವ ಬಸ್ ತಂಗುದಾಣದಲ್ಲಿ ಕುಳಿತಿದ್ದಳು. ಈ ಕುರಿತು ರಾತ್ರಿ ಸುಮಾರಿಗೆ ವಾಟ್ಸ್ಯಾಪ್​ ಗ್ರೂಪ್​ನಲ್ಲಿ ಫೋಟೊಗಳನ್ನು ಹಾಕಿ, ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.

ಈ ವೇಳೆ ಬೆಳಗಾವಿ ಮೀಡಿಯಾ ಜಂಕ್ಷನ್ ಗ್ರೂಪ್​ನಲ್ಲಿದ್ದ ಜಿ.ಪಂ. ಸಿಇಒ ಡಾ. ರಾಜೇಂದ್ರ. ಕೆ. ವಿ ಇದನ್ನು ಗಮನಿಸಿ, ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ) ರಾಮನಗೌಡ ಕನ್ನೋಳ್ಳಿ ಅವರಿಗೆ ಫೋನ್​ ಮಾಡಿದ್ದರು. ತಕ್ಷಣ ಮಹಿಳೆಯನ್ನು ರಕ್ಷಣೆ ಮಾಡಿ, ನಿರ್ಗತಿಕರ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಿದ್ದರು.

ಜಿ.ಪಂ. ಸಿಇಒ ಅವರ ಸೂಚನೆಯಂತೆ ಕಾರ್ಯಪ್ರವೃತ್ತರಾಗಿದ್ದ ಅಧಿಕಾರಿಗಳು, ಕೇವಲ 20 ನಿಮಿಷಗಳಲ್ಲಿ ಮಹಿಳೆ ಇರುವ ಸ್ಥಳಕ್ಕೆ ದೌಡಾಯಿಸಿ, ರಕ್ಷಿಸಿದ್ದರು. ನಂತರ ಆರೋಗ್ಯ ತಪಾಸಣೆ ಮಾಡಿದ ಅಧಿಕಾರಿಗಳು ಮಹಿಳೆ ಮಾನಸಿಕವಾಗಿ ಸದೃಢವಾಗಿದ್ದು, ಸರಿಯಾಗಿ ಆಹಾರ ಸೇವಿಸದೇ ಅಶಕ್ತವಾಗಿ ಬಿದ್ದು ಕೈಗೆ ಗಾಯವಾಗಿದ್ದನ್ನು ಗಮನಿಸಿ ಚಿಕಿತ್ಸೆ ನೀಡಿದ್ದರು. ನಂತರ ಮಹಿಳೆಯನ್ನು ತಾತ್ಕಾಲಿಕವಾಗಿ ಇಲ್ಲಿನ ಶಾಹು ನಗರದಲ್ಲಿರುವ ಮಲ್ಲಿಕಾರ್ಜುನ ವೃದ್ಧಾಶ್ರಮಕ್ಕೆ ದಾಖಲಿಸಿ, ವಿಚಾರಿಸಿದ್ದರು. ಈ ವೇಳೆ ಮಹಿಳೆ ತಾನು ಆಂಧ್ರಪ್ರದೇಶದ ಜಯರಾಮಪುರ ಗ್ರಾಮದವಳಾಗಿದ್ದು, ತನ್ನ ಬಳಿ ಹಣ ಇಲ್ಲದಿರುವುದರಿಂದ ಅಲೆಯುತ್ತಿರುವ ಬಗ್ಗೆ ಹಾಗೂ ಸ್ವಗ್ರಾಮಕ್ಕೆ ತೆರಳಲು ಹಣದ ವ್ಯವಸ್ಥೆ ಮಾಡಿದಲ್ಲಿ ಮರಳಿ ತಮ್ಮೂರಿಗೆ ಹೋಗುವುದಾಗಿ ತಿಳಿಸಿದ್ದಳು. ಇದರಿಂದ ಅಧಿಕಾರಿಗಳು ಮಹಿಳೆ ಗುಣಮುಖವಾದ ನಂತರ ರೈಲು ಟಿಕೆಟ್ ಪಡೆದು, ಮಹಿಳೆಯ ಸ್ವಗ್ರಾಮವಾದ ಜಯರಾಮಪುರಕ್ಕೆ ಕಳಿಸಲು ವ್ಯವಸ್ಥೆ ಮಾಡಿದ್ದಾರೆ.

ನಿರ್ಗತಿಕ ಮಹಿಳೆಯನ್ನು ಗುರುತಿಸಿ ಮಾನವೀಯ ನೆಲೆಗಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಿರುವ ಅಧಿಕಾರಿಗಳು ಮತ್ತು ಮಹಿಳೆಯನ್ನು ಮರಳಿ ಗೂಡಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಳಗಾವಿ ಮಿಡಿಯಾ ಜಂಕ್ಷನ್ ಎಂಬ ಹೆಸರಿನ ವಾಟ್ಸಾಪ್ ಗ್ರೂಪ್​ ಸದಸ್ಯರ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

Intro:ಪತ್ರಕರ್ತರ ವಾಟ್ಸಪ್ ಗ್ರುಪ್ ನಿಂದ ನಿರ್ಗತಿಕ ಮಹಿಳೆಗೆ ಸಿಕ್ತು ಆಶ್ರಯ

ಬೆಳಗಾವಿ : ಅನಾವಶ್ಯಕವಾಗಿ ಸೋಶಿಯಲ್ ಮೀಡಿಯಾಗಳ ಬಳಕೆ ಈಗ ಸಾಮಾನ್ಯ. ಸಮಯ ಕಳೆಯಲು ಮೋಜು ಮಸ್ತಿಗಾಗಿ ಕಾಲ ಕಳೆಯಲು ಸಹಾಯವಾಗುತ್ತಿದ್ದ ವಾಟ್ಸಪ್ ಈಗ ಒಂದು ನಿರ್ಗತಿಕ ಮಹಿಳೆಗೆ ಆಶ್ರಯ ಒದಗಿಸಿದೆ.

ಬೆಳಗಾವಿ ಪತ್ರಕರ್ತರು, ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಇನ್ನೀತರ ಸಂಘ ಸಂಸ್ಥೆಗಳ ಮುಖಂಡರುಗಳನ್ನು ಒಳಗೊಂಡ ‘ಬೆಳಗಾವಿ ಮೀಡಿಯಾ ಜಕ್ಷಂನ್’ ಎಂಬ ವಾಟ್ಸಾಪ್ ಗ್ರೂಪ್ ಅಂತಾರಾಜ್ಯದ ಮಹಿಳೆಯನ್ನು ತಮ್ಮ ಮನೆ ಸೇರುವಂತೆ ಮಾಡಿದೆ.

Body:ಜು.28 ರಂದು ಆಂದ್ರಪ್ರದೇಶದ ತಿರುಪತಿ ಸಮೀಪದ ಜಯರಾಮಪೂರ ಗ್ರಾಮದ ಮಹಿಳೆಯೋರ್ವಳು ಸತತ ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ಬೆಳಗಾವಿ ನಗರದ ಚೆನ್ನಮ್ಮ ವೃತ್ತದಲ್ಲಿ ಬಳಿ ಇರುವ ಬಸ್ ತಂಗುದಾಣದಲ್ಲಿ ಕುಳಿತಿದ್ದಳು. ಈ ಕುರಿತು ರಾತ್ರಿ ಸುಮಾರಿಗೆ ವಾಟ್ಸಾಪ್ ಗ್ರೂಪನಲ್ಲಿ ಪೋಟೊಗಳನ್ನು ಹಾಕಿ, ಈ ಬಗ್ಗೆ ಚರ್ಚೆ ನಡೆಸಲಾಗಿತ್ತು.
ಬೆಳಗಾವಿ ಮೀಡಿಯಾ ಜಂಕ್ಷನ್ ಗ್ರೂಪನಲ್ಲಿದ್ದ ಜಿಪಂ ಸಿಇಒ ಡಾ.ರಾಜೇಂದ್ರ.ಕೆ.ವಿ ಅವರು, ಗಮಿಸಿ, ತಕ್ಷಣ ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ (ಪ್ರಭಾರ) ರಾಮನಗೌಡ ಕನ್ನೋಳ್ಳಿ ಅವರಿಗೆ ಪೋನ್ ಮಾಡಿ ತಕ್ಷಣ ಮಹಿಳೆಯನ್ನು ರಕ್ಷಣೆ ಮಾಡಿ, ನಿರ್ಗತಿಕ ಕೇಂದ್ರಕ್ಕೆ ದಾಖಲಿಸುವಂತೆ ಸೂಚಿಸಿದ್ದಾರೆ.

Conclusion:ಜಿಪಂ ಸಿಇಒ ಅವರ ಸೂಚನೆಯಲ್ಲಿ ಕಾರ್ಯಪ್ರವೃತ್ತರಾದ ಅಧಿಕಾರಿಗಳು, ಕೇವಲ 20 ನಿಮಿಷಗಳಲ್ಲಿ ಮಹಿಳೆ ಇರುವ ಸ್ಥಳಕ್ಕೆ ದೌಡಾಯಿಸಿ, ರಕ್ಷಣೆ ಮಾಡಿದ್ದಾರೆ. ನಂತರ ಆರೋಗ್ಯ ತಪಾಸಣೆ ಮಾಡಿದ ಅಧಿಕಾರಿಗಳು ಮಹಿಳೆ ಮಾನಸಿಕವಾಗಿ ಸದೃಢವಾಗಿದ್ದು, ಸರಿಯಾಗಿ ಆಹಾರ ಸೇವನೆ ಮಾಡದೆ ಅಶಕ್ತವಾಗಿ ಬಿದ್ದು ಕೈಗೆ ಗಾಯವಾಗಿದ್ದನ್ನು ಗಮನಿಸಿ ಚಿಕಿತ್ಸೆ ನೀಡಿದ್ದಾರೆ. ನಂತರ ಮಹಿಳೆಯನ್ನು ತಾತ್ಕಾಲಿಕವಾಗಿ ಇಲ್ಲಿನ ಶಾಹುನಗರದಲ್ಲಿರುವ ಮಲ್ಲಿಕಾರ್ಜುನ ವೃಧ್ದಾಶೃಮಕ್ಕೆ ದಾಖಲಿಸಿ, ವಿಚಾರಿಸಿದ್ದಾರೆ. ಈ ವೇಳೆ ಮಹಿಳೆ ತಾನು ಆಂದ್ರ ಪ್ರದೇಶದ ಜಯರಾಮಪೂರ ಗ್ರಾಮದವಳಾಗಿದ್ದು, ನನ್ನ ಬಳಿ ಹಣ ಇಲ್ಲದಿರುವುದರಿಂದ ಅಲೆಯುತ್ತಿರುವ ಬಗ್ಗೆ ಹಾಗೂ ಸ್ವ ಗ್ರಾಮಕ್ಕೆ ತೆರಳು ಹಣದ ವ್ಯವಸ್ಥೆ ಮಾಡಿದ್ದಲ್ಲಿ ಮರಳಿ ತಮ್ಮೂರಿಗೆ ಹೋಗುವುದಾಗಿ ತಿಳಿಸಿದ್ದಾಳೆ. ಇದರಿಂದ ಅಧಿಕಾರಿಗಳು ಮಹಿಳೆ ಗುಣಮುಖವಾದ ನಂತರ ರೈಲು ಟಿಕೇಟ್ ತೆಗೆಯಿಸಿ ಸ್ವ ಗ್ರಾಮವಾದ ಜಯರಾಮಪೂರಕ್ಕೆ ತೆರಳಲು ವ್ಯವಸ್ಥೆ ಮಾಡಲು ಮುಂದಾಗಿದ್ದಾರೆ.

ನಿರ್ಗತಿಕ ಮಹಿಳೆಯನ್ನು ಗುರುತಿಸಿ ಮಾನವೀಯ ನೆಲೆಗಲ್ಲಿಟ್ಟಿನಲ್ಲಿ ತ್ವರಿತವಾಗಿ ಸ್ಪಂದಿಸಿ, ರಕ್ಷಣೆ ಮಾಡಿದ ಅಧಿಕಾರಿಳನ್ನು ಹಾಗೂ ಮಹಿಳೆಯನ್ನು ಮರಳಿ ಗೂಡಿಗೆ ಸೇರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಬೆಳಗಾವಿ ಮೀಡಿಯಾ ಜಂಕ್ಷನ್ ಎಂಬ ಹೆಸರಿನ ವಾಟ್ಸಾಪ್ ಗ್ರೂಪನಲ್ಲಿ ಬೆಳಗಾವಿ ಜನತೆ ಶ್ಲಾಘಿಸಿದ್ದಾರೆ.

ವಿನಾಯಕ ಮಠಪತಿ
ಬೆಳಗಾವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.