ETV Bharat / city

ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಹರಿದು ಬಂದ ನೀರು : ರೈತರ ಮೊಗದಲ್ಲಿ ಹರ್ಷ - undefined

ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ನೀರು ಬಿಟ್ಟಿದ್ದು, ಚಿಕ್ಕೋಡಿ ತಾಲೂಕಿನ ಹಲವೆಡೆ ನೀರಿಲ್ಲದೇ ಕಂಗಾಲಾಗಿದ್ದ ಜನರಿಗೆ ಹೆಚ್ಚು ಅನುಕೂಲವಾಗಿದೆ.

ಕೃಷ್ಣಾನದಿಗೆ ಹರಿದು ಬಂದ ನೀರು
author img

By

Published : Jun 17, 2019, 2:08 AM IST

ಚಿಕ್ಕೋಡಿ : ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ಕಳೆದ ನಾಲ್ಕು ತಿಂಗಳಿಂದ ನೀರಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕೃಷ್ಣಾನದಿಗೆ ಹರಿದು ಬಂದ ನೀರು

ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಯಡೂರ, ಮಾಂಜರಿ, ಚಂದೂರ, ಅಂಕಲಿ, ಇಂಗಳಿ, ಕಲ್ಲೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾನದಿಗೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಲವು ದಿನಗಳಿಂದ ನೀರಿಲ್ಲದೆ ಬಾಯಿ ಬಡಿದುಕೊಳ್ಳುತ್ತಿದ್ದ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದವರೆಗೂ ನೀರು ಬಂದಿದ್ದು, ಹೀಗೆ ನೀರು ಬರುತ್ತಿದ್ದರೆ ರಾಯಬಾಗ, ಅಥಣಿ ತಾಲೂಕಿನವರೆಗೂ ಹೋಗಿ ತಲುಪುವ ಸಾಧ್ಯತೆಗಳಿವೆ. ಆದ್ರೆ ಬೇಸರದ ಸಂಗತಿ ಎಂದರೆ ಇನ್ನೂ ಸಹ ಮಹಾರಾಷ್ಟ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ನೀರಿನ ಒಡಂಬಡಿಕೆಯನ್ನು ಮಾಡಿಕೊಳ್ಳದೆ ಇರುವುದು ಗಡಿಭಾಗದ ಜನತೆಗೆ ನಿರಾಸೆಯನ್ನು ಮೂಡಿಸಿದೆ.

ಚಿಕ್ಕೋಡಿ : ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬಂದಿದ್ದು, ಕಳೆದ ನಾಲ್ಕು ತಿಂಗಳಿಂದ ನೀರಿಲ್ಲದೆ ಕಂಗಾಲಾಗಿದ್ದ ರೈತರ ಮೊಗದಲ್ಲಿ ಸಂತಸ ಮೂಡಿದೆ.

ಕೃಷ್ಣಾನದಿಗೆ ಹರಿದು ಬಂದ ನೀರು

ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಯಡೂರ, ಮಾಂಜರಿ, ಚಂದೂರ, ಅಂಕಲಿ, ಇಂಗಳಿ, ಕಲ್ಲೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾನದಿಗೆ ಬೃಹತ್ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಹಲವು ದಿನಗಳಿಂದ ನೀರಿಲ್ಲದೆ ಬಾಯಿ ಬಡಿದುಕೊಳ್ಳುತ್ತಿದ್ದ ಜನತೆ ಸದ್ಯ ನಿಟ್ಟುಸಿರು ಬಿಟ್ಟಿದ್ದಾರೆ.

ಇನ್ನು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದವರೆಗೂ ನೀರು ಬಂದಿದ್ದು, ಹೀಗೆ ನೀರು ಬರುತ್ತಿದ್ದರೆ ರಾಯಬಾಗ, ಅಥಣಿ ತಾಲೂಕಿನವರೆಗೂ ಹೋಗಿ ತಲುಪುವ ಸಾಧ್ಯತೆಗಳಿವೆ. ಆದ್ರೆ ಬೇಸರದ ಸಂಗತಿ ಎಂದರೆ ಇನ್ನೂ ಸಹ ಮಹಾರಾಷ್ಟ್ರ ಸರ್ಕಾರದ ಜೊತೆ ಕರ್ನಾಟಕ ಸರ್ಕಾರ ನೀರಿನ ಒಡಂಬಡಿಕೆಯನ್ನು ಮಾಡಿಕೊಳ್ಳದೆ ಇರುವುದು ಗಡಿಭಾಗದ ಜನತೆಗೆ ನಿರಾಸೆಯನ್ನು ಮೂಡಿಸಿದೆ.

Intro:ಮಹಾರಾಷ್ಟ್ರದ ರಾಜಾಪೂರ ಡ್ಯಾಂನಿಂದ ಕೃಷ್ಣಾನದಿಗೆ ಹರಿದು ಬಂದ ನೀರು : ರೈತರ ಮೊಗದಲ್ಲಿ ಹರ್ಷBody:

ಚಿಕ್ಕೋಡಿ :

ಕಳೆದ ಮೂರನಾಲ್ಕು ತಿಂಗಳಿಂದ ಕೃಷ್ಣಾನದಿಗೆ ನೀರಿಲ್ಲದೆ ಕಂಗಾಲಗಿದ್ದ ಜನರಿಗೆ ಸದ್ಯ ಕೃಷ್ಣಾನದಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದ್ದು. ಇದು ಚಿಕ್ಕೋಡಿ ತಾಲೂಕಿನ ಜನತೆಗೆ ಸಂತಸವನ್ನು ಮೂಡಿಸಿದೆ.

ಮೈದುಂಬಿ ಹರಿಯುತ್ತಿರುವ ಕೃಷ್ಣೆಯ ನೀರು ನದಿ ತೀರದಲ್ಲಿ ಹಚ್ಚಹಸಿರಿನ ವಾತಾವರಣ ನೀರನ್ನು ನೋಡಿ ಖುಷಿಯಲ್ಲಿ ತೇಲಾಡುತ್ತಿರುವ ಗಡಿ ಭಾಗದ ಜನರು. ಹೌದು ಹೀಗೆಲ್ಲಾ ಸಂತಸದ ದೃಶ್ಯ ಕಂಡುಬಂದಿದ್ದು ಚಿಕ್ಕೋಡಿ ತಾಲೂಕಿನ ನದಿತೀರದ ಗ್ರಾಮಗಳಾದ ಯಡೂರ, ಮಾಂಜರಿ, ಚಂದೂರ, ಅಂಕಲಿ, ಇಂಗಳಿ, ಕಲ್ಲೋಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೃಷ್ಣಾನದಿಗೆ ಬೃಹತ್ ಪ್ರಮಾಣದಲ್ಲಿ ನದಿಗೆ ನೀರು ಹರಿದು ಬರುತ್ತಿದೆ. ಹಲವು ದಿನಗಳಿಂದ ನೀರಿಲ್ಲದೆ ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ದ ಜನತೆಗೆ. ಸದ್ಯ ರೈತರು ನಿಟ್ಟುಸಿರು ಬಿಟ್ಟಿದ್ದಾರೆ.

ಸದ್ಯ ಈ ನೀರು ಕಾಗವಾಡ ತಾಲೂಕಿನ ಇಂಗಳಿ ಗ್ರಾಮದ ವರೆಗೆ ನೀರು ತಲುಪ್ಪಿದ್ದು. ಹೀಗೆ ನೀರು ಬರುತ್ತಿದ್ದರೆ. ರಾಯಬಾಗ, ಅಥಣಿ ತಾಲೂಕಿನವರೆಗೆ ಹೋಗಿ ತಲುಪುವ ಸಾಧ್ಯತೆಗಳು ಇವೆ. ಈ ನೀರು ಚಿಕ್ಕೋಡಿ ಪಟ್ಟಣಕ್ಕೆ ಸಹ ಬಹಳಷ್ಟು ಅನುಕೂಲವಾಗಲಿದೆ. ಚಿಕ್ಕೋಡಿ ಪಟ್ಟಣದಲ್ಲಿ ಇತ್ತೀಚಿಗೆ ನೀರಿಗೆ ಬಹಳಷ್ಟು ಹಾಹಾಕಾರ ಉಂಟಾಗಿತ್ತು. ಇದರಿಂದ ಚಿಕ್ಕೋಡಿ ಜನತೆಸಹ ನೀರಿನ ದಾಹ ತೀರಲ್ಲಿದೆ. ಅದಲ್ಲದೇ ನಾಗಾರಮುನ್ನೋಳ್ಲಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಬಹು ಗ್ರಾಮದ ಕುಡಿಯುವ ನೀರಿನ ಯೋಜನೆಯು ನೀರಿಲ್ಲದೆ ಹಳ್ಳಹಿಡಿದ್ದವು. ಈ ನೀರಿನಿಂದ ಆ ಭಾಗದ ಜನರಿಗೆ ಸಹ ನೀರು ತಲುಪುಲಿವೆ. ಆದರೆ, ಇಷ್ಟೇಲ್ಲಾ ಸಂತಸದ ನಡುವೆ ಬೇಸರದ ಸಂಗತಿ ಎಂದರೆ ಇನ್ನೂ ಸಹ ಮಹಾ ಸರ್ಕಾರ ಜೊತೆ ಕರ್ನಾಟಕ ಸರ್ಕಾರ ನೀರಿನ ಒಡಂಬಡಿಕೆಯನ್ನು ಮಾಡಿಕೊಳ್ಳದೆ ಇರುವುದು ಗಡಿಭಾಗದ ಜನತೆಗೆ ನೀರಾಸೆಯನ್ನು ಮೂಡಿಸಿದೆ. ಈ ಬರಗಾಲದ ಪರಿಸ್ಥಿತಿಯಲ್ಲಿ ನೀರಿಲ್ಲದೆ ಕೆಂಗಟ್ಟಿದೆ. ಮಹಿಳೆಯರು ಸಹ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ.

ಒಟ್ಟಿನಲ್ಲಿ ಹಲವು ದಿನಗಳಿಂದ ಕೃಷ್ಣಾನದಿಗೆ ನೀರಿಲ್ಲದೆ ಕಂಗಾಲಿದ್ದ. ಚಿಕ್ಕೋಡಿ ಜನತೆಗೆ ಕೃಷ್ಣಾನದಿಗೆ ಬೃಹತ್ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಇದು ಜನರಲ್ಲಿ ಸಂತಸವನ್ನು ಮೂಡಿಸಿದಂತು ಸತ್ಯ

ಬೈಟ 1 - ಚೈತ್ರಾ (ಸ್ಥಳೀಯರು)

ಬೈಟ 2 - ಸಂತೋಷ ಶೇಡಬಾಳೆ (ಸ್ಥಳೀಯರು)



Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.