ETV Bharat / city

ಪುರಸಭೆ ಅಧ್ಯಕ್ಷರಿಂದ ಸದಸ್ಯೆ ಅಪಹರಣ ಆರೋಪ: ದೊಡ್ಡಮ್ಮನ ಹುಡುಕಾಟಕ್ಕೆ ಯೋಧನಿಂದ ವಿಡಿಯೋ

ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೂ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಕಿಡ್ನಾಪ್​ ಮಾಡಿದ್ದಾರೆ ಎನ್ನವ  ಆರೋಪ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಕೇಳಿಬಂದಿದೆ. ಈ ಕುರಿತಂತೆ ಯೋಧನೊಬ್ಬ ವಿಡಿಯೋ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ. ಈ ವಿಡಿಯೋ ಇದೀಗ ವೈರಲ್​ ಆಗಿದೆ.

author img

By

Published : Nov 10, 2019, 5:16 PM IST

ಯೋಧನ ವಿಡಿಯೋ ವೈರಲ್

ಚಿಕ್ಕೋಡಿ : ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೂ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಕಿಡ್ನ್ಯಾಪ್​ ಮಾಡಿದ್ದಾರೆ ಎನ್ನವ ಆರೋಪ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಕೇಳಿಬಂದಿದೆ. ಈ ಕುರಿತಂತೆ ಯೋಧನೊಬ್ಬ ವಿಡಿಯೋ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ.

ಪುರಸಭೆ ಸದಸ್ಯೆ ಕಿಡ್ನಾಪ್ ಆರೋಪದ ಕುರಿತು ವಿಡಿಯೋ ವೈರಲ್

ಮುಗಳಖೋಡ ಪುರಸಭಾ ಸದಸ್ಯೆ ಬಾಗವ್ವ ಶೇಗುಣಸಿಯನ್ನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ ಗೋಕಾಕ್ ಅಪಹರಿಸಿದ್ದಾರೆ ಎಂದು ಬಾಗವ್ವ ಕುಟುಂಬಸ್ಥರು ಆರೋಪ ಮಾಡಿದ್ದು, ತಾಯಿ ಎಲ್ಲಿದ್ದಾರೆ ಹೇಳಿ ಎಂದು ಶಿವಾನಂದ ಗೋಕಾಕ್​ ಮನೆ ಎದುರು ಆಕೆಯ ಕುಟುಂಬದ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಸದ್ಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗವ್ವ ಅವರ ಮೈದುನನ ಮಗ ಮಾರುತಿ ಪುಂಡಲಿಕ ಶೇಗುಣಸಿ, ನನ್ನ ತಾಯಿಗೆ ಅನ್ಯಾಯವಾಗುತ್ತಿದೆ, ನಮ್ಮಗೆ ನ್ಯಾಯ ಒದಗಿಸಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ.

ನಮ್ಮ ದೊಡ್ಡಮ್ಮಳಾದ ಬಾಗವ್ವ ಶೇಗುಣಸಿ ಅವರನ್ನು ಶಿವಾನಂದ ಗೋಕಾಕ್ ಎಂಬಾತರು ಮೂರುವರೆ ತಿಂಗಳಿನಿಂದ ರಾಜಕೀಯ ಕುತಂತ್ರದಿಂದ ಅಪಹರಿಸಿದ್ದಾರೆ. ನಮ್ಮ ಮನೆಯವರು ಹಾರೂಗೇರಿ ಪೊಲೀಸ್ ಠಾಣೆಗೆ ಎರಡು ಬಾರಿ ಹೋಗಿ ಬಂದರೂ ಏನೂ ಸ್ಪಂದನೆ ಸಿಕ್ಕಿಲ್ಲ. ಬೆಳಗಾವಿ ಎಸ್‌ಪಿ ಕಚೇರಿಗೆ ಹೋದರೂ ಅಲ್ಲೂ ಕೂಡ ಸ್ಪಂದನೆ ಸಿಗಲಿಲ್ಲ. ಬಾಗವ್ವ ಜೀವಂತವಾಗಿದ್ದಾರಾ?, ಸತ್ತಿದ್ದಾರಾ? ಎಂದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ನಾನೊಬ್ಬ ಭಾರತೀಯ ಯೋಧ. ಗಡಿಯಲ್ಲಿ ನಿಂತು ದೇಶ ಸೇವೆ ಮಾಡಬೇಕಾ?, ಮನೆ ಕಡೆ ಯೋಚನೆ ಮಾಡಬೇಕಾ?, ಈ ಅನ್ಯಾಯವನ್ನು ತಡೆಯುವವರು ಯಾರು ಇಲ್ಲವೇ? ನಾವು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇವೆ, ಈಗ ನಮ್ಮ ಮನೆಯವರೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ತಮ್ಮ ನೋವನನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿ ನೆರವಿಗಾಗಿ ಮೊರೆಯಿಟ್ಟಿದ್ದಾರೆ.

ಚಿಕ್ಕೋಡಿ : ಇಲ್ಲಿನ ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಆದರೂ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆಯನ್ನು ಕಿಡ್ನ್ಯಾಪ್​ ಮಾಡಿದ್ದಾರೆ ಎನ್ನವ ಆರೋಪ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಕೇಳಿಬಂದಿದೆ. ಈ ಕುರಿತಂತೆ ಯೋಧನೊಬ್ಬ ವಿಡಿಯೋ ಮಾಡಿ ತನ್ನ ಅಳಲು ತೋಡಿಕೊಂಡಿದ್ದಾನೆ.

ಪುರಸಭೆ ಸದಸ್ಯೆ ಕಿಡ್ನಾಪ್ ಆರೋಪದ ಕುರಿತು ವಿಡಿಯೋ ವೈರಲ್

ಮುಗಳಖೋಡ ಪುರಸಭಾ ಸದಸ್ಯೆ ಬಾಗವ್ವ ಶೇಗುಣಸಿಯನ್ನು ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ ಗೋಕಾಕ್ ಅಪಹರಿಸಿದ್ದಾರೆ ಎಂದು ಬಾಗವ್ವ ಕುಟುಂಬಸ್ಥರು ಆರೋಪ ಮಾಡಿದ್ದು, ತಾಯಿ ಎಲ್ಲಿದ್ದಾರೆ ಹೇಳಿ ಎಂದು ಶಿವಾನಂದ ಗೋಕಾಕ್​ ಮನೆ ಎದುರು ಆಕೆಯ ಕುಟುಂಬದ ಸದಸ್ಯರು ಧರಣಿ ನಡೆಸುತ್ತಿದ್ದಾರೆ. ಸದ್ಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗವ್ವ ಅವರ ಮೈದುನನ ಮಗ ಮಾರುತಿ ಪುಂಡಲಿಕ ಶೇಗುಣಸಿ, ನನ್ನ ತಾಯಿಗೆ ಅನ್ಯಾಯವಾಗುತ್ತಿದೆ, ನಮ್ಮಗೆ ನ್ಯಾಯ ಒದಗಿಸಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿ ಬಿಟ್ಟಿದ್ದಾರೆ.

ನಮ್ಮ ದೊಡ್ಡಮ್ಮಳಾದ ಬಾಗವ್ವ ಶೇಗುಣಸಿ ಅವರನ್ನು ಶಿವಾನಂದ ಗೋಕಾಕ್ ಎಂಬಾತರು ಮೂರುವರೆ ತಿಂಗಳಿನಿಂದ ರಾಜಕೀಯ ಕುತಂತ್ರದಿಂದ ಅಪಹರಿಸಿದ್ದಾರೆ. ನಮ್ಮ ಮನೆಯವರು ಹಾರೂಗೇರಿ ಪೊಲೀಸ್ ಠಾಣೆಗೆ ಎರಡು ಬಾರಿ ಹೋಗಿ ಬಂದರೂ ಏನೂ ಸ್ಪಂದನೆ ಸಿಕ್ಕಿಲ್ಲ. ಬೆಳಗಾವಿ ಎಸ್‌ಪಿ ಕಚೇರಿಗೆ ಹೋದರೂ ಅಲ್ಲೂ ಕೂಡ ಸ್ಪಂದನೆ ಸಿಗಲಿಲ್ಲ. ಬಾಗವ್ವ ಜೀವಂತವಾಗಿದ್ದಾರಾ?, ಸತ್ತಿದ್ದಾರಾ? ಎಂದು ತಿಳಿಯುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ಈ ವಿಡಿಯೋದಲ್ಲಿ ನಾನೊಬ್ಬ ಭಾರತೀಯ ಯೋಧ. ಗಡಿಯಲ್ಲಿ ನಿಂತು ದೇಶ ಸೇವೆ ಮಾಡಬೇಕಾ?, ಮನೆ ಕಡೆ ಯೋಚನೆ ಮಾಡಬೇಕಾ?, ಈ ಅನ್ಯಾಯವನ್ನು ತಡೆಯುವವರು ಯಾರು ಇಲ್ಲವೇ? ನಾವು ಹಗಲು ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇವೆ, ಈಗ ನಮ್ಮ ಮನೆಯವರೂ ಕಷ್ಟ ಅನುಭವಿಸುತ್ತಿದ್ದಾರೆ ಎಂದು ತಮ್ಮ ನೋವನನ್ನು ವಿಡಿಯೋ ಮೂಲಕ ವ್ಯಕ್ತಪಡಿಸಿ ನೆರವಿಗಾಗಿ ಮೊರೆಯಿಟ್ಟಿದ್ದಾರೆ.

Intro:ಪುರಸಭೆ ಅಧ್ಯಕ್ಷರಿಂದ ಸದಸ್ಯರ ಕಿಡ್ನಾಪ್ ಆರೋಪ : ದೊಡ್ಡಮ್ಮಳ ಹುಡಕಾಟಕ್ಕೆ ಯೋಧನಿಂದ ವಿಡಿಯೋ ವೈರಲ್ Body:

ಚಿಕ್ಕೋಡಿ :

ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆಗೆ ಇನ್ನೂ ನಿಗಧಿಯಾಗದ ದಿನಾಂಕ, ಆದರೂ ಅಧ್ಯಕ್ಷ ಸ್ಥಾನಕ್ಕಾಗಿ ಪುರಸಭೆ ಸದಸ್ಯೆ ಕಿಡ್ನಾಪ ಮಾಡಿದ್ದಾರೆ ಎಂದು ಆರೋಪ. ಇಂತದೊಂದು ಘಟನೆ ನಡೆದಿದ್ದು ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ.

ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಶಿವಾನಂದ ಗೋಕಾಕ್ ರಿಂದ ಮುಗಳಖೋಡ ಪುರಸಭಾ ಸದಸ್ಯೆ ಬಾಗವ್ವಾ ಶೇಗುಣಸಿ ಕಿಡ್ನಾಪ‌ ಮಾಡಿದ್ದಾರೆ ಎಂದು ಬಾಗವ್ವ ಅವರ ಮಗ ಅಪ್ಪಾಸಾಬ ಶೇಗುಣಸಿ ಅವರು ಆರೋಪ ಮಾಡಿದ್ದು, ತಾಯಿ ಎಲ್ಲಿದ್ದಾರೆ ಹೇಳಿ ಎಂದು ಧರಣಿಗೆ ಕುಳಿತ ಬಾಗವ್ವಾ ಶೇಗುಣಸಿ ಕುಟುಂಬ, ಮಗ ಅಪ್ಪಾಸಾಬ ಹಾಗೂ ಕುಟುಂಬ ಸದಸ್ಯರಿಂದ ಶಿವಾನಂದ ಗೋಕಾಕ ಮನೆ ಎದುರು ಧರಣಿ ಕುಳತ್ತಿದ್ದಾರೆ.

ಆದರೆ, ಈಗ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾಗವ್ವ ಅವರ ಮೈದುನನ ಮಗ ಮಾರುತಿ ಪುಂಡಲಿಕ ಶೇಗುಣಸಿ ಅವರು ನನ್ನ ತಾಯಿಗೆ ಅನ್ಯಾಯವಾಗುತ್ತಿದೆ ನಮ್ಮಗೆ ನ್ಯಾಯ ಒದಗಿಸಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರತೀಯ ವೀರ ಯೋಧ ವಿಡಿಯೋ ಹರಿ ಬಿಟ್ಟಿದ್ದು ಈಗ ವಿಡಿಯೋ ಎಲ್ಲರ ಮೊಬೈಲ್ ಗಳಲ್ಲಿ ಹರಿದಾಡುತ್ತಿದೆ.

ನಮ್ಮ ದೊಡ್ಡವಳಾದ ಬಾಗವ್ವ ಶೇಗುಣಸಿ ಅವರನ್ನು ಶಿವಾನಂದ ಗೋಕಾಕ್ ಎಂಬಾತರು ಮೂರುವರೆ ತಿಂಗಳಿನಿಂದ ರಾಜಕೀಯ ಕುತಂತ್ರದಿಂದ ಕಿಡ್ಯಾಪ್ ಮಾಡಿದ್ದಾರೆ. ಬಾಗವ್ವಾ ಅವರು ಜೀವಂತವಾಗಿದ್ದಾರಾ, ಸತ್ತಿದಾರಾ ಎಂದು ತಿಳಿಯುತ್ತಿಲ್ಲ. ನಮ್ಮ ಮನೆಯವರು ಹಾರೂಗೇರಿ ಪೋಲಿಸ್ ಠಾಣೆಗೆ ಎರಡು ಬಾರಿ ಹೋಗಿ ಬಂದೆರು ಏನು ಸ್ಪಂದನೆ ಸಿಕ್ಕಿಲ್ಲ. ಬೆಳಗಾವಿ ಎಸ್ ಪಿ ಕಛೇರಿಗೆ ಹೋದರು ಅಲ್ಲಿ ಸ್ಪಂದನೆ ಸಿಗಲಿಲ್ಲ.

ನಾನೊಬ್ಬ ಭಾರತೀಯ ಯೋದ ಬಾಂಡರಿಯಲ್ಲಿ ನಿಂತು ದೇಶ ಸೇವೆ ಮಾಡಬೇಕಾ ಏನ ಮನೆ ಕಡೆ ಯೋಚನೆ ಮಾಡಬೇಕಾ, ಭಾರತೀಯ ಯೋಧನಿಗೆ ಈ ರೀತಿ ಅನ್ಯಾಯವಾಗುತ್ತಿದೆ ಈ ಅನ್ಯಾಯ ತಡೆಗಟ್ಟವರು ಯಾರು ಇಲ್ಲವೇ. ನಾವು ಹಗಲು ರಾತ್ರಿ ಎನ್ನದೆ ಡ್ಯೂಟಿ ಮಾಡುತ್ತಿದ್ದೇವೆ ಈಗ ನಮ್ಮ ಮನೆಯವರು ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮಗೆ ನ್ಯಾಯ ಒದಗಿಸಿ ಕೊಡಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಯೋದ ಮಾರುತಿ ಪುಂಡಲಿಕ ಶೇಗುಣಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಮಾಡಿದ್ದಾರೆ.

ಪೋಟೋ 1 : ಬಾಗವ್ವಾ ಶೇಗುಣಸಿ - ಪುರಸಭಾ ಸದಸ್ಯೆ (ಕಿಡ್ನಾಪ‌ಗೊಳಗಾದವರು)

ಬೈಟ್ 1 : ಮಾರುತಿ ಪುಂಡಲಿಕ ಶೇಗುಣಸಿ - ಯೋಧ

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.