ETV Bharat / city

ರಾಜಾಪುರ ಡ್ಯಾಂನಿಂದ ನೀರು ಬಿಡುಗಡೆ: ರೈತರು ಸಹಕರಿಸಿದರೆ ಚಿಕ್ಕೋಡಿಗೆ ನೀರಿನ ಭಾಗ್ಯ - undefined

ಮಹಾರಾಷ್ಟ್ರದ ರಾಜಾಪುರ ಜಲಾಶಯದ 62 ಗೇಟ್‌ಗಳ ಪೈಕಿ 14 ಗೇಟುಗಳನ್ನು ತೆರೆಯಲಾಗಿದ್ದು, ಚಿಕ್ಕೋಡಿ ಭಾಗದ ರೈತರು ಸಹಕರಿಸಿದರೆ ಉತ್ತರ ಕರ್ನಾಟಕದ ಕೆಲ ತಾಲೂಕುಗಳಿಗೆ ನೀರು ತಲುಪಲಿದೆ.

ಮಹಾರಾಷ್ಟ್ರದ ರಾಜಾಪುರ ಜಲಾಶಯ
author img

By

Published : Jun 16, 2019, 4:04 PM IST

ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಬಿಡುಗಡೆಯಾದ ನೀರನ್ನು ಚಿಕ್ಕೋಡಿ ಭಾಗದ ರೈತರು ತಡೆಯದೆ ಮುಂದೆ ಬಿಟ್ಟರೆ ಕಾಗವಾಡ, ಅಥಣಿ, ರಾಯಭಾಗ ತಾಲೂಕುಗಳ ಜನತೆಗೆ ನೀರು ತಲುಪಲಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಜಾಪುರ ಜಲಾಶಯದ 62 ಗೇಟ್ ಗಳ ಪೈಕಿ 14 ಗೇಟುಗಳು ತೆರೆದಿದ್ದು, ಸುಮಾರು 1200 ದಿಂದ 1500 ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ಇದಕ್ಕೆ ರೈತರು ಯಾವುದೇ ಅಡ್ಡಿ ಮಾಡದಿದ್ದರೆ ಕಾಗವಾಡ, ಅಥಣಿ, ರಾಯಭಾಗ ತಾಲೂಕುಗಳ ಜನತೆಗೆ ನೀರು ತಲುಪಬಹುದು. ಆದ್ದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ರೈತರು ತಮ್ಮ ಹೊಲಗಳಿಗೆ ನೀರು ಹರಿಸಿಕೊಳ್ಳದಂತೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ರೈತರು ಸಹಕರಿಸಿದರೆ ಚಿಕ್ಕೋಡಿಗೆ ನೀರಿನ ಭಾಗ್ಯ

ಈ ಬಗ್ಗೆ ಹೆಸ್ಕಾಮ್ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿದ್ದು ರೈತರು ಸಹಕರಿಸಿದ್ದಾರೆ. ಕೃಷ್ಣೆಗೆ ಹರಿದಿರುವ ನೀರು ತಮ್ಮ ಗ್ರಾಮಗಳನ್ನು ತಲುಪುವ ಬಗ್ಗೆ ಅಥಣಿ ಭಾಗದ ಜನರು ಕಾತರದಿಂದ ಕಾಯುತ್ತಿದ್ದು, ಮೂರು ದಿನದೊಳಗೆ ನೀರು ಅವರಿಗೆ ಲಭಿಸಲಿದೆ. ಇದರಿಂದ ಎರಡು ಮೂರು ತಿಂಗಳಿಂದ ಬಾಯಾರಿಕೆಯಿಂದ ಬಸವಳಿದ ಜನತೆಯ ಹೊಟ್ಟೆ ತಣ್ಣಗಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಚಿಕ್ಕೋಡಿ: ಮಹಾರಾಷ್ಟ್ರದ ರಾಜಾಪುರ ಜಲಾಶಯದಿಂದ ಬಿಡುಗಡೆಯಾದ ನೀರನ್ನು ಚಿಕ್ಕೋಡಿ ಭಾಗದ ರೈತರು ತಡೆಯದೆ ಮುಂದೆ ಬಿಟ್ಟರೆ ಕಾಗವಾಡ, ಅಥಣಿ, ರಾಯಭಾಗ ತಾಲೂಕುಗಳ ಜನತೆಗೆ ನೀರು ತಲುಪಲಿದೆ ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ತಿಳಿಸಿದ್ದಾರೆ.

ಮಹಾರಾಷ್ಟ್ರದ ರಾಜಾಪುರ ಜಲಾಶಯದ 62 ಗೇಟ್ ಗಳ ಪೈಕಿ 14 ಗೇಟುಗಳು ತೆರೆದಿದ್ದು, ಸುಮಾರು 1200 ದಿಂದ 1500 ಕ್ಯೂಸೆಕ್ಸ್ ನೀರು ಬಿಡುಗಡೆಯಾಗುತ್ತಿದೆ. ಇದಕ್ಕೆ ರೈತರು ಯಾವುದೇ ಅಡ್ಡಿ ಮಾಡದಿದ್ದರೆ ಕಾಗವಾಡ, ಅಥಣಿ, ರಾಯಭಾಗ ತಾಲೂಕುಗಳ ಜನತೆಗೆ ನೀರು ತಲುಪಬಹುದು. ಆದ್ದರಿಂದ ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ರೈತರು ತಮ್ಮ ಹೊಲಗಳಿಗೆ ನೀರು ಹರಿಸಿಕೊಳ್ಳದಂತೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ರೈತರು ಸಹಕರಿಸಿದರೆ ಚಿಕ್ಕೋಡಿಗೆ ನೀರಿನ ಭಾಗ್ಯ

ಈ ಬಗ್ಗೆ ಹೆಸ್ಕಾಮ್ ಅಧಿಕಾರಿಗಳು ರೈತರೊಂದಿಗೆ ಸಭೆ ನಡೆಸಿದ್ದು ರೈತರು ಸಹಕರಿಸಿದ್ದಾರೆ. ಕೃಷ್ಣೆಗೆ ಹರಿದಿರುವ ನೀರು ತಮ್ಮ ಗ್ರಾಮಗಳನ್ನು ತಲುಪುವ ಬಗ್ಗೆ ಅಥಣಿ ಭಾಗದ ಜನರು ಕಾತರದಿಂದ ಕಾಯುತ್ತಿದ್ದು, ಮೂರು ದಿನದೊಳಗೆ ನೀರು ಅವರಿಗೆ ಲಭಿಸಲಿದೆ. ಇದರಿಂದ ಎರಡು ಮೂರು ತಿಂಗಳಿಂದ ಬಾಯಾರಿಕೆಯಿಂದ ಬಸವಳಿದ ಜನತೆಯ ಹೊಟ್ಟೆ ತಣ್ಣಗಾಗಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Intro:ಮಹಾರಾಷ್ಟ್ರದ ರಾಜಾಪುರ ಡ್ಯಾಂನಿಂದ ಹಠಾತ್ತಾಗಿ ನೀರು ಬಿಡುಗಡೆ : ಚಿಕ್ಕೋಡಿ ಭಾಗದ ರೈತರು ಸಹಕರಿಸಿದರೆ ಅಥಣಿ, ಕಾಗವಾಡ, ರಾಯಬಾಗ ತಾಲೂಕುಗಳ ಜನತೆಗೆ ನೀರು ತಲುಪಬಹುದಾಗಿದೆ.Body:

ಚಿಕ್ಕೋಡಿ :

ಮಹಾರಾಷ್ಟ್ರದ ರಾಜಾಪುರ ಜಲಾಶಯದ 62 ಗೇಟ್ ಗಳ ಪೈಕಿ 14 ಗೇಟುಗಳನ್ನು ತೆರೆಯಲಾಗಿದ್ದು ಸುಮಾರು 1200 ದಿಂದ 1500 ಕ್ಯೂಸೆಕ್ಸ ನೀರು ಬಿಡುಗಡೆಯಾಗುತ್ತಿದೆ. ಈ ಬಿಡುಗಡೆಯಾದ ನೀರನ್ನು ಚಿಕ್ಕೋಡಿ ಭಾಗದ ರೈತರು ತಡೆಯದೆ ಮುಂದೆ ಬಿಟ್ಟರೆ ಕಾಗವಾಡ, ಅಥಣಿ, ರಾಯಬಾಗ ತಾಲೂಕುಗಳ ಜನತೆಗೆ ನೀರು ಬಂದು ತಲುಪಬಹುದಾಗಿದೆ.

ಕೆಲದಿನಗಳ ಹಿಂದೆ 9 ಗೇಟುಗಳ ಮೂಲಕ ಬಿಟ್ಟ ನೀರು ಚಿಕ್ಕೋಡಿ ತಾಲೂಕಿನ ಹಳ್ಳಿಗಳ ಜನತೆಗೆ ಲಭಿಸಿದೆ. ಈಗ ಬಿಡುಗಡೆಯಾದ ನೀರು ಕಾಗವಾಡ, ರಾಯಬಾಗ ಮತ್ತು ಅಥಣಿ ತಾಲೂಕುಗಳ ಜನತೆಗೆ ತಲುಪುವಂತಾಗಲು ಚಿಕ್ಕೋಡಿ ತಾಲೂಕಿನ ಕೃಷ್ಣಾ ತೀರದ ರೈತರು ತಮ್ಮ ಹೊಲಗಳಿಗೆ ನೀರು ಹರಿಸಿಕೊಳ್ಳದಂತೆ ಚಿಕ್ಕೋಡಿ ಉಪವಿಭಾಗಾಧಿಕಾರಿಗಳು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದಾರೆ.

ಅಧಿಕಾರಿಗಳು ಹೆಸ್ಕಾಮ್ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ರೈತರೂ ಸಹ ಸಹಕರಿಸಿದ್ದಾರೆ. ಕೃಷ್ಣೆಗೆ ಹರಿದಿರುವ ನೀರು ತಮ್ಮ ಗ್ರಾಮಗಳನ್ನು ತಲುಪುವ ಬಗ್ಗೆ ಅಥಣಿ ಭಾಗದ ಜನರು ಕಾತುರದಿಂದ ಕಾಯುತ್ತಿದ್ದು ಮೂರು ದಿನದೊಳಗೆ ನೀರು ಅವರಿಗೆ ಲಭಿಸಲಿದೆ. ಇದರಿಂದ ಎರಡು ಮೂರು ತಿಂಗಳಿಂದ ಬಾಯಾರಿಕೆಯಿಂದ ಬಸವಳಿದ ಜನತೆಯ ಹೊಟ್ಟೆ ತಣ್ಣಗಾಗಲಿದೆ.

Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.