ETV Bharat / city

ಜೂಜಾಟ ವಿಚಾರವಾಗಿ ಗುಂಪು ಗಲಾಟೆ: ಇಬ್ಬರು ಯುವಕರ ಕತ್ತು ಕೊಯ್ದ ದುಷ್ಕರ್ಮಿಗಳು

author img

By

Published : Jul 8, 2022, 7:38 PM IST

ಬ್ಲೇಡ್​ನಿಂದ ಇಬ್ಬರು ಯುವಕರ ಕತ್ತು ಕೊಯ್ದಿರುವ ಘಟನೆ ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಗಂಭೀರ ಗಾಯಗೊಂಡಿದ್ದ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

murder attempt on youths at Chikkodi
ಸಂಕೇಶ್ವರದಲ್ಲಿ ಜೂಜಾಟ ವಿಚಾರವಾಗಿ ಗುಂಪು ಗಲಾಟೆ

ಚಿಕ್ಕೋಡಿ(ಬೆಳಗಾವಿ): ಜೂಜಾಟದ ವಿಚಾರವಾಗಿ ನಡೆದ ಗುಂಪು ಗಲಾಟೆಯಲ್ಲಿ ಬ್ಲೇಡ್​ನಿಂದ ಇಬ್ಬರು ಯುವಕರ ಕತ್ತು ಕೊಯ್ದಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಡ್ಡರ ಗಲ್ಲಿಯ ಸಂತೋಷ ವಡ್ಡರ (25) ಹಾಗೂ ಪರಶುರಾಮ ವಡ್ಡರ (28) ಹಲ್ಲೆಗೊಳಗಾದವರು.

ಸಂಕೇಶ್ವರದಲ್ಲಿ ಜೂಜಾಟ ವಿಚಾರವಾಗಿ ಗುಂಪು ಗಲಾಟೆ

ಗಲಾಟೆಗೆ ಜೂಜಾಟ ಕಾರಣ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಒಂದು ಗುಂಪಿನವರು ಸಂತೋಷ ಮತ್ತು ಪರಶುರಾಮ ವಡ್ಡರ್ ಎಂಬುವವರ ಮೇಲೆ ದಾಳಿ ನಡೆಸಿ ಬ್ಲೇಡ್​​ನಿಂದ ಕತ್ತುಕೊಯ್ದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ಮೊದಲಿಗೆ ಸ್ಥಳೀಯ ‌ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಇಬ್ಬರು ಸ್ಥಿತಿ ಚಿಂತಾಜನಕವಾಗಿದ್ದರಿಂದ ಸದ್ಯ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ತನಿಖೆ ಚುರುಕು: ಪೊಲೀಸರಿಂದ ಸ್ಥಳ ಮಹಜರು

ಚಿಕ್ಕೋಡಿ(ಬೆಳಗಾವಿ): ಜೂಜಾಟದ ವಿಚಾರವಾಗಿ ನಡೆದ ಗುಂಪು ಗಲಾಟೆಯಲ್ಲಿ ಬ್ಲೇಡ್​ನಿಂದ ಇಬ್ಬರು ಯುವಕರ ಕತ್ತು ಕೊಯ್ದಿರುವ ಘಟನೆ ಜಿಲ್ಲೆಯ ಸಂಕೇಶ್ವರ ಪಟ್ಟಣದಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣದ ವಡ್ಡರ ಗಲ್ಲಿಯ ಸಂತೋಷ ವಡ್ಡರ (25) ಹಾಗೂ ಪರಶುರಾಮ ವಡ್ಡರ (28) ಹಲ್ಲೆಗೊಳಗಾದವರು.

ಸಂಕೇಶ್ವರದಲ್ಲಿ ಜೂಜಾಟ ವಿಚಾರವಾಗಿ ಗುಂಪು ಗಲಾಟೆ

ಗಲಾಟೆಗೆ ಜೂಜಾಟ ಕಾರಣ ಎನ್ನಲಾಗಿದೆ. ಎರಡು ಗುಂಪುಗಳ ನಡುವೆ ಗಲಾಟೆಯಾಗಿದ್ದು, ಈ ಸಂದರ್ಭದಲ್ಲಿ ಒಂದು ಗುಂಪಿನವರು ಸಂತೋಷ ಮತ್ತು ಪರಶುರಾಮ ವಡ್ಡರ್ ಎಂಬುವವರ ಮೇಲೆ ದಾಳಿ ನಡೆಸಿ ಬ್ಲೇಡ್​​ನಿಂದ ಕತ್ತುಕೊಯ್ದು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಇಬ್ಬರು ಯುವಕರನ್ನು ಮೊದಲಿಗೆ ಸ್ಥಳೀಯ ‌ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಇಬ್ಬರು ಸ್ಥಿತಿ ಚಿಂತಾಜನಕವಾಗಿದ್ದರಿಂದ ಸದ್ಯ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.

ಘಟನಾ ಸ್ಥಳಕ್ಕೆ ಸಂಕೇಶ್ವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಚಂದ್ರಶೇಖರ ಗುರೂಜಿ ಹತ್ಯೆ ಪ್ರಕರಣದ ತನಿಖೆ ಚುರುಕು: ಪೊಲೀಸರಿಂದ ಸ್ಥಳ ಮಹಜರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.