ETV Bharat / city

ಡಿಸಿಎಂ ಸವದಿ ಸ್ವಕ್ಷೇತ್ರದಲ್ಲೇ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರದ ಹಣ ಬಿಡುಗಡೆಗೆ ವಿಳಂಬ!

author img

By

Published : Sep 10, 2019, 1:27 PM IST

ತುರ್ತು ಪರಿಸ್ಥಿತಿಗೆ ಅನುಗುಣವಾಗಿ 10,000 ರೂ. ಬಿಡುಗಡೆ ಮಾಡಬೇಕೆಂದು ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ನೀಡಿ ಇಂದಿಗೆ ಸುಮಾರು 33 ದಿನಗಳೇ ಕಳೆದಿವೆ. ಆದ್ರೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನೆರೆ ಸಂತ್ರಸ್ತರಿಗೆ ಮಾತ್ರ ತುರ್ತು ಪರಿಹಾರದ ಹಣ ಇನ್ನೂ ಕೈಸೇರಿಲ್ಲ ಎಂಬ ಆರೋಪಗಳು ಕೇಳಿಬಂದಿವೆ.

ಡಿಸಿಎಂ ಸವದಿ ಸ್ವಕ್ಷೇತ್ರದಲ್ಲೇ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಬಿಡುಗಡೆಗೆ ವಿಳಂಬ

ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕೃಷ್ಣಾ ನದಿ ಪ್ರವಾಹಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಆದರೆ ಈವರೆಗೂ ತುರ್ತು ಪರಿಹಾರದ ಹಣ ಮಾತ್ರ ಜನರ ಕೈಸೇರಿಲ್ಲ.

ತುರ್ತು ಪರಿಸ್ಥಿತಿಗೆ ಅನುಗುಣವಾಗಿ 10,000 ರೂ. ಬಿಡುಗಡೆ ಮಾಡಬೇಕೆಂದು ಸಿಎಂ ಆದೇಶ ನೀಡಿ ಇಂದಿಗೆ ಸುಮಾರು 33 ದಿನಗಳೇ ಕಳೆದಿವೆ. ತುರ್ತು ಪರಿಸ್ಥಿತಿಯ ಹಣವೇ ಬಿಡುಗಡೆಯಾಗಿಲ್ಲ. ಇನ್ನು ನಮ್ಮ ಬೆಳೆ ಪರಿಹಾರ ಧನ ಯಾವಾಗ ಸಿಗುತ್ತದೆ ಎಂಬುದು ನೆರೆ ಸಂತ್ರಸ್ತರ ಪ್ರಶ್ನೆಯಾಗಿದೆ.

ಡಿಸಿಎಂ ಸವದಿ ಸ್ವಕ್ಷೇತ್ರದಲ್ಲೇ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಬಿಡುಗಡೆಗೆ ವಿಳಂಬ

ಅರ್ಧಕ್ಕರ್ಧ ನೀರಿನಲ್ಲಿ ಕೊಚ್ಚಿ ಹೋಗಿರುವ ತಮ್ಮ ಬದುಕನ್ನು ಸಂಭಾಳಿಸಲು ಪ್ರವಾಹ ಪೀಡಿತ ಪ್ರದೇಶದ ಜನತೆ ಇನ್ನೂ ಸೆಣಸಾಡುತ್ತಿದ್ದಾರೆ. ಮುಖ್ಯಮಂತ್ರಿ, ಗೃಹಸಚಿವರು, ಕಂದಾಯ ಸಚಿವ ಸಚಿವರ ತಂಡ, ಡಿಸಿ-ಎಸಿಗಳು ಬಂದು ಹೋದರೂ ಅಲ್ಲಿನ ಜನರ ಜೀವನ ಮಾತ್ರ ಇನ್ನೂ ಕೆಸರಿನಲ್ಲಿದೆ. ನೆರೆ, ಮಹಾಮಳೆ ಹಾಗೂ ಭೂಕುಸಿತದ ವಿಕೋಪ ತಗ್ಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರು ಕಾಳಜಿ ಕೇಂದ್ರಗಳಿಂದ ವಾಪಸ್‌ ತಮ್ಮ ಊರುಗಳಿಗೆ ಬರುತ್ತಿದ್ದಾರೆ. ಆದರೆ ಅಲ್ಲಿ ಅವರ ಮನೆಗಳು ಕುಸಿದಿವೆ. ಆದರೆ ಅವರಿಗೆ ಘೋಷಿಸಿದ್ದ 10 ಸಾವಿರ ರೂ. ತುರ್ತು ಪರಿಹಾರ ಹಣವನ್ನು ಜಿಲ್ಲಾಡಳಿತದ ಮೂಲಕ ತಲುಪಿಸಲು ಕೂಡ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ವಿಶೇಷ ಆಹಾರ ಕಿಟ್‌ಗಳ ವಿತರಣೆಯೂ ಕೂಡ ಅಸಮರ್ಪಕವಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಇಂದು ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದು, ಇನ್ನಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

ಬೆಳಗಾವಿ: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ವಕ್ಷೇತ್ರ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕು ಕೃಷ್ಣಾ ನದಿ ಪ್ರವಾಹಕ್ಕೆ ಅಕ್ಷರಶಃ ನಲುಗಿ ಹೋಗಿದೆ. ಆದರೆ ಈವರೆಗೂ ತುರ್ತು ಪರಿಹಾರದ ಹಣ ಮಾತ್ರ ಜನರ ಕೈಸೇರಿಲ್ಲ.

ತುರ್ತು ಪರಿಸ್ಥಿತಿಗೆ ಅನುಗುಣವಾಗಿ 10,000 ರೂ. ಬಿಡುಗಡೆ ಮಾಡಬೇಕೆಂದು ಸಿಎಂ ಆದೇಶ ನೀಡಿ ಇಂದಿಗೆ ಸುಮಾರು 33 ದಿನಗಳೇ ಕಳೆದಿವೆ. ತುರ್ತು ಪರಿಸ್ಥಿತಿಯ ಹಣವೇ ಬಿಡುಗಡೆಯಾಗಿಲ್ಲ. ಇನ್ನು ನಮ್ಮ ಬೆಳೆ ಪರಿಹಾರ ಧನ ಯಾವಾಗ ಸಿಗುತ್ತದೆ ಎಂಬುದು ನೆರೆ ಸಂತ್ರಸ್ತರ ಪ್ರಶ್ನೆಯಾಗಿದೆ.

ಡಿಸಿಎಂ ಸವದಿ ಸ್ವಕ್ಷೇತ್ರದಲ್ಲೇ ನೆರೆ ಸಂತ್ರಸ್ತರಿಗೆ ತುರ್ತು ಪರಿಹಾರ ಬಿಡುಗಡೆಗೆ ವಿಳಂಬ

ಅರ್ಧಕ್ಕರ್ಧ ನೀರಿನಲ್ಲಿ ಕೊಚ್ಚಿ ಹೋಗಿರುವ ತಮ್ಮ ಬದುಕನ್ನು ಸಂಭಾಳಿಸಲು ಪ್ರವಾಹ ಪೀಡಿತ ಪ್ರದೇಶದ ಜನತೆ ಇನ್ನೂ ಸೆಣಸಾಡುತ್ತಿದ್ದಾರೆ. ಮುಖ್ಯಮಂತ್ರಿ, ಗೃಹಸಚಿವರು, ಕಂದಾಯ ಸಚಿವ ಸಚಿವರ ತಂಡ, ಡಿಸಿ-ಎಸಿಗಳು ಬಂದು ಹೋದರೂ ಅಲ್ಲಿನ ಜನರ ಜೀವನ ಮಾತ್ರ ಇನ್ನೂ ಕೆಸರಿನಲ್ಲಿದೆ. ನೆರೆ, ಮಹಾಮಳೆ ಹಾಗೂ ಭೂಕುಸಿತದ ವಿಕೋಪ ತಗ್ಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರು ಕಾಳಜಿ ಕೇಂದ್ರಗಳಿಂದ ವಾಪಸ್‌ ತಮ್ಮ ಊರುಗಳಿಗೆ ಬರುತ್ತಿದ್ದಾರೆ. ಆದರೆ ಅಲ್ಲಿ ಅವರ ಮನೆಗಳು ಕುಸಿದಿವೆ. ಆದರೆ ಅವರಿಗೆ ಘೋಷಿಸಿದ್ದ 10 ಸಾವಿರ ರೂ. ತುರ್ತು ಪರಿಹಾರ ಹಣವನ್ನು ಜಿಲ್ಲಾಡಳಿತದ ಮೂಲಕ ತಲುಪಿಸಲು ಕೂಡ ಸರ್ಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ವಿಶೇಷ ಆಹಾರ ಕಿಟ್‌ಗಳ ವಿತರಣೆಯೂ ಕೂಡ ಅಸಮರ್ಪಕವಾಗಿದೆ ಎಂಬ ದೂರುಗಳು ಕೇಳಿಬಂದಿವೆ.

ಇಂದು ಬೆಳಗಾವಿ ಜಿಲ್ಲೆಗೆ ಮುಖ್ಯಮಂತ್ರಿ ಭೇಟಿ ನೀಡಿದ್ದು, ಇನ್ನಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಆಗುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ.

Intro:ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ಸ್ವಕ್ಷೇತ್ರದಲ್ಲಿ ತುರ್ತು ಪರಿಹಾರದ ಹಣ ರೇಷನ್ ಕಿಟ್ ವಿತರಣೆ ವಿಳಂಬBody:
ಅಥಣಿ: 

ಕೃಷ್ಣಾ ನದಿ ಪ್ರವಾಹಕ್ಕೆ ಅಕ್ಷರಶಹ ನಲುಗಿ ಹೋಗಿದ್ದ ಅಥಣಿ ತಾಲೂಕು ಜನರ ಬದುಕು


ಉಪಮುಖ್ಯಮಂತ್ರಿ ಕ್ಷೇತ್ರದಲ್ಲಿ ಇನ್ನು ತುರ್ತು ಪರಿಹಾರದ ನ ಬಂದಿಲ್ಲ

ತುರ್ತುಪರಿಸ್ಥಿತಿಗೆ ಅನುಗುಣವಾಗಿ 10000 ಬಿಡುಗಡೆ ಮಾಡಬೇಕೆಂಬ ಮುಖ್ಯಮಂತ್ರಿ ಆದೇಶ ಇಂದಿಗೆ ಸರಿಸುಮಾರು 33 ದಿನಗಳು ಕಳೆದರು ಅರ್ಧದಷ್ಟು ಜನಕ್ಕೆ ಇನ್ನೂ ಪರಿಹಾರ ಹಣ ಬಂದಿಲ್ಲ

ತುರ್ತುಪರಿಸ್ಥಿತಿಯ 10000 ಬಿಡುಗಡೆಯಾಗಿಲ್ಲ ಇನ್ನೂ

ಇನ್ನು ನಮ್ಮ ಬೆಳೆ ಪರಿಹಾರ ಧನ ಯಾವಾಗ ಅಂತ ಜನರ ಪ್ರಶ್ನೆಯಾಗಿದೆ

ಅರ್ಧಕ್ಕರ್ಧ ನೀರಿನಲ್ಲಿ ಕೊಚ್ಚಿ ಹೋಗಿರುವ ತಮ್ಮ ಬದುಕನ್ನು ಸಂಭಾಳಿಸಲು ಪ್ರವಾಹ ಪೀಡಿತ ಪ್ರದೇಶದ ಜನತೆ ಇನ್ನೂ ಸೆಣಸಾಡುತ್ತಿದ್ದಾರೆ !

ಮುಖ್ಯಮಂತ್ರಿ, ಗೃಹ ಮಂತ್ರಿ, ವಿತ್ತ ಮಂತ್ರಿ, ನೂತನ ಸಚಿವರ ತಂಡ, ಡಿಸಿ-ಎಸಿಗಳು ಬಂದು ಹೋದರೂ ಅಲ್ಲಿನ ಒದ್ದೆಯಾದ ಬದುಕು ಇನ್ನೂ ಕೆಸರಿನಲ್ಲಿದೆ.

ನೆರೆ, ಮಹಾಮಳೆ ಹಾಗೂ ಭೂಕುಸಿತದ ವಿಕೋಪ ತಗ್ಗಿರುವ ಹಿನ್ನೆಲೆಯಲ್ಲಿ ಸಂತ್ರಸ್ತರು ಕಾಳಜಿ ಕೇಂದ್ರಗಳಿಂದ ವಾಪಸ್‌ ಮನೆಗಳಿಗೆ ಬರುತ್ತಿದ್ದಾರೆ


ಆದರೆ, ಮನೆ ಅಲ್ಲಿ ಕಳಚಿಬಿದ್ದಿದೆ.

ಇದು ಲಕ್ಷಾಂತರ ಜನರ ಕಥೆ-ವ್ಯಥೆ.

ಕಾಳಜಿ ಕೇಂದ್ರಗಳಿಂದ ಮನೆಗೆ ವಾಪಸ್‌ ಆಗಿರುವ ಪ್ರವಾಹ ಸಂತ್ರಸ್ತ ಜನರಿಗೆ ಘೋಷಿಸಿದ್ದ ತುರ್ತು ಪರಿಹಾರ 10 ಸಾವಿರ ರೂ.

ಗಳನ್ನು ಜಿಲ್ಲಾಡಳಿತಗಳ ಮೂಲಕ ತಲುಪಿಸಲು ಕೂಡ ಸರಕಾರಕ್ಕೆ ಇನ್ನೂ ಸಾಧ್ಯವಾಗಿಲ್ಲ !

ವಿಳಂಬದ ಹಾದಿ ಹಿಡಿದ ತುರ್ತು ಕೆಲಸ

* 10 ಸಾವಿರ ರೂ. ತುರ್ತು ಪರಿಹಾರ ಹಣ ಕೈ ಸೇರಿಲ್ಲ

* ವಿಶೇಷ ಆಹಾರ ಕಿಟ್‌ಗಳ ವಿತರಣೆಯೂ ಅಸಮರ್ಪಕ

*ಬೆಳೆ ಪರಿಹಾರ ಧನ ವಿತರಣೆ ಇಲ್ಲ

#ಮನೆಗಳ ಪರಿಹಾರ ಧನ ವಿತರಣೆ ವಿಳಂಬ

* ಪರಿಹಾರ ವಿತರಣೆಯಲ್ಲಿ ಸಮನ್ವಯತೆಯೂ ಇಲ್ಲ

ಇವತ್ತಿನ ಬೆಳಗಾವಿ ಜಿಲ್ಲೆಯ ಮುಖ್ಯಮಂತ್ರಿಗಳ ಭೇಟಿ ಬಳಕೆಯಾದರೂ ನೆರೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಾಧ್ಯವಾಗುತ್ತದೆ ಎಂಬುದು ಕಾದು ನೋಡಬೇಕಾಗಿದೆ


Conclusion:ಶಿವರಾಜ್ ನೇಸರ್ಗಿ ಅಥಣಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.