ಚಿಕ್ಕೋಡಿ: ಅಖಿಲ ಭಾರತ ಗೃಹರಕ್ಷಕ ದಳ ದಿನಾಚಾರಣೆಯನ್ನು ಬೆಳಗಾವಿ ಗೃಹರಕ್ಷಕ ದಳದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ರಾಯಬಾಗ ತಾಲೂಕಿನ ಮೊರಬ ಗ್ರಾಮದಲ್ಲಿ ಆಚರಿಸಲಾಯಿತು.
ಗ್ರಾಮದ ಶ್ರೀ ಹೆಚ್. ಡಿ ಕುಮಾರಸ್ವಾಮಿ ಶಾಲಾ ಆವರಣದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಸಾಧನೆಗೈಡ ಪೊಲೀಸರಿಗೆ ಸನ್ಮಾನ ಮಾಡುವ ಮೂಲಕ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅಥಣಿ ಡಿವೈಎಸ್ಪಿ ಎಸ್. ವಿ. ಗಿರೀಶ್, ರಾಯಭಾಗ ತಹಶಿಲ್ದಾರ ಚಂದ್ರಕಾಂತ ಭಜಂತ್ರಿ ಹಾಗೂ ರಾಯಭಾಗ ಸಿಪಿಐ ಕೆ. ಎಸ್. ಹಟ್ಟಿ, ಕುಡಚಿ ಪಿಎಸ್ಐ ಶಿರಾಜ ಧರಿಗೋನ, ಹಾರೂಗೇರಿ ಪಿಎಸ್ಐ ಯಮನಪ್ಪ ಮಾಂಗ, ರಾಯಭಾಗ ಪಿಎಸ್ಐ ಗಜಾನನ ನಾಯಕ ಸೇರಿದಂತೆ ಜಿಲ್ಲಾ ಕಮಾಂಡೆಂಟ್ ಕಿರಣ ರುದ್ರಾ ನಾಯಕ ಉಪಸ್ಥಿತರಿದ್ದರು.