ETV Bharat / city

ಬೆಳಗಾವಿಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು: ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

author img

By

Published : Jul 9, 2022, 2:26 PM IST

ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಹರಿದ ಕಾರು - ಬೆಳಗಾವಿ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಚಾಲಕನಿಗೆ ಸ್ಥಳೀಯರಿಂದ ಧರ್ಮದೇಟು

ಬೆಳಗಾವಿ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಬೆಳಗಾವಿ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಬೆಳಗಾವಿ: ನಗರದ ಎಲ್ಐಸಿ ಕಚೇರಿ ಆವರಣದಲ್ಲಿ ನಿನ್ನೆ (ಶುಕ್ರವಾರ) ಬೆಳಗ್ಗೆ ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಕಾರು ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯ ಭೀಕರ ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟಿಳಕವಾಡಿಯ ಪಿಕೆ ಕ್ವಾರ್ಟಸ್​ನಲ್ಲಿದ್ದ ಅನಿತಾ ಬನ್ಸ್ (52) ಸಾವನ್ನಪ್ಪಿದ್ದರು.

ಅನಿತಾ ಅವರು ಎಲ್ಐಸಿ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ನಿನ್ನೆ ಕಸ ಗುಡಿಸಲು ಆಗಮಿಸಿದ್ದರು. ಕೈಯಲ್ಲಿ ಬಕೆಟ್, ಪೊರಕೆ ಹಿಡಿದು ನಡೆದು ಹೋಗುತ್ತಿದ್ದಾಗ ಏಕಾಏಕಿ ಬಂದ ಕಾರು ಮಹಿಳೆ ಮೇಲೆ ಹರಿದು ಕಾಂಪೌಂಡ್‌ಗೆ ಡಿಕ್ಕಿ ಹೊಡಿದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೀಗ ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಗಾವಿ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಎಲ್ಐಸಿ ಕಚೇರಿ ಆವರಣದಿಂದ ಕಾರು ಹೊರಗೆ ತಗೆಯುವ ವೇಳೆ ಚಾಲಕ ಗುರುರಾಜ ಕುಲಕರ್ಣಿ ನಿಯಂತ್ರಣ ತಪ್ಪಿ‌ ಮಹಿಳೆ‌ ಮೇಲೆ ಚಲಾಯಿಸಿದ್ದನು. ಈ ವೇಳೆ ಕಾರು ಚಾಲಕನಿಗೆ ಸ್ಥಳೀಯರು, ಕುಟುಂಬಸ್ಥರು ಧರ್ಮದೇಟು ನೀಡಿದ್ದರು. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕಸ ಗುಡಿಸುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು, ಚಾಲಕನಿಗೆ ಥಳಿತ

ಬೆಳಗಾವಿ: ನಗರದ ಎಲ್ಐಸಿ ಕಚೇರಿ ಆವರಣದಲ್ಲಿ ನಿನ್ನೆ (ಶುಕ್ರವಾರ) ಬೆಳಗ್ಗೆ ಕಸ ಗುಡಿಸುತ್ತಿದ್ದ ಮಹಿಳೆ ಮೇಲೆ ಕಾರು ಹರಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆಯ ಭೀಕರ ಅಪಘಾತ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಟಿಳಕವಾಡಿಯ ಪಿಕೆ ಕ್ವಾರ್ಟಸ್​ನಲ್ಲಿದ್ದ ಅನಿತಾ ಬನ್ಸ್ (52) ಸಾವನ್ನಪ್ಪಿದ್ದರು.

ಅನಿತಾ ಅವರು ಎಲ್ಐಸಿ ಕಚೇರಿಯಲ್ಲಿ ಅಟೆಂಡರ್ ಆಗಿ ಕೆಲಸ ಮಾಡುತ್ತಿದ್ದು, ಎಂದಿನಂತೆ ನಿನ್ನೆ ಕಸ ಗುಡಿಸಲು ಆಗಮಿಸಿದ್ದರು. ಕೈಯಲ್ಲಿ ಬಕೆಟ್, ಪೊರಕೆ ಹಿಡಿದು ನಡೆದು ಹೋಗುತ್ತಿದ್ದಾಗ ಏಕಾಏಕಿ ಬಂದ ಕಾರು ಮಹಿಳೆ ಮೇಲೆ ಹರಿದು ಕಾಂಪೌಂಡ್‌ಗೆ ಡಿಕ್ಕಿ ಹೊಡಿದಿತ್ತು. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಇದೀಗ ಅಪಘಾತದ ಭೀಕರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಳಗಾವಿ ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಎಲ್ಐಸಿ ಕಚೇರಿ ಆವರಣದಿಂದ ಕಾರು ಹೊರಗೆ ತಗೆಯುವ ವೇಳೆ ಚಾಲಕ ಗುರುರಾಜ ಕುಲಕರ್ಣಿ ನಿಯಂತ್ರಣ ತಪ್ಪಿ‌ ಮಹಿಳೆ‌ ಮೇಲೆ ಚಲಾಯಿಸಿದ್ದನು. ಈ ವೇಳೆ ಕಾರು ಚಾಲಕನಿಗೆ ಸ್ಥಳೀಯರು, ಕುಟುಂಬಸ್ಥರು ಧರ್ಮದೇಟು ನೀಡಿದ್ದರು. ಈ ಕುರಿತು ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಕಸ ಗುಡಿಸುತ್ತಿದ್ದಾಗ ಕಾರು ಡಿಕ್ಕಿ ಹೊಡೆದು ಮಹಿಳೆ ಸಾವು, ಚಾಲಕನಿಗೆ ಥಳಿತ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.