ETV Bharat / city

ಎಸಿಬಿಯಿಂದ 19 ಗಂಟೆ ನಿರಂತರ ಪರಿಶೀಲನೆ: ಕೋಟಿ ಕೋಟಿ ಆಸ್ತಿ, ಕೆಜಿಗಟ್ಟಲೆ ಚಿನ್ನ- ಬೆಳ್ಳಿ ಪತ್ತೆ!

author img

By

Published : Jun 18, 2022, 9:35 AM IST

ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ ವೇಳೆ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ, ಕೆಜಿಗಟ್ಟಲೆ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

Acb raid on Belagavi superintendent BY pawar house
ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ

ಬೆಳಗಾವಿ: ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಇಂಜಿನಿಯರ್ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು ನಸುಕಿನ ಜಾವ 3 ಗಂಟೆಯವರೆಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಬರೊಬ್ಬರಿ 19 ಗಂಟೆ ಕಾಲ ನಿರಂತರ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

Acb raid on Belagavi superintendent BY pawar house
ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ

ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ 4 ಎಕರೆ ಕೃಷಿ ಜಮೀನು, ಖಾನಾಪುರದಲ್ಲಿ 4 ಎಕರೆ ಕೃಷಿ ಜಮೀನನ್ನು ಬಿ.ವೈ ಪವಾರ್ ಹೊಂದಿದ್ದಾರೆ. ಮಕ್ಕಳ ಹೆಸರಲ್ಲಿ ನಿಪ್ಪಾಣಿಯಲ್ಲಿ 7 ಎಕರೆ ಜಮೀನು ಖರೀದಿಸಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲೆಯ ವಿವಿಧೆಡೆ 22 ಎಕರೆ 12 ಗುಂಟೆ ಕೃಷಿ ಜಮೀನನ್ನು ಬಿ.ವೈ ಪವಾರ್ ಹೊಂದಿದ್ದಾರೆ.

Acb raid on Belagavi superintendent BY pawar house
ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ

ಅಲ್ಲದೇ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಒಂದು ಮನೆ, ನಿಪ್ಪಾಣಿಯ ಶಿವಾಜಿ ನಗರದಲ್ಲಿ ಪತ್ನಿ ಹೆಸರಲ್ಲಿ ಒಂದು ಮನೆ, ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಎರಡು ಖಾಲಿ ನಿವೇಶನಗಳು, ನಿಪ್ಪಾಣಿಯಲ್ಲಿ ಒಂದು ನಿರ್ಮಾಣ ಹಂತದ ಪೆಟ್ರೋಲ್ ಬಂಕ್, ನಿಪ್ಪಾಣಿ ತಾಲೂಕಿನ ಬೋರಗಾಂವದಲ್ಲಿ 2 ವಾಣಿಜ್ಯ ಸಂಕೀರ್ಣಗಳು, 900 ಗ್ರಾಂ ಚಿನ್ನಾಭರಣ‌, 300 ಗ್ರಾಂ ಬೆಳ್ಳಿ ಆಭರಣ, ವಿವಿಧ ಕಂಪನಿಯ 3 ದ್ವಿಚಕ್ರ ವಾಹನ, 2 ಕಾರುಗಳು, 8.50 ಲಕ್ಷ ರೂ. ನಗದು, 2 ವಿಮಾ ಪಾಲಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳು, 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಎಸಿಬಿ ದಾಳಿ : ಕೆಜಿಗಟ್ಟಲೆ ಬಂಗಾರ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ ಕಂಡು ಬೆರಗಾದ ಎಸಿಬಿ ಅಧಿಕಾರಿಗಳು

ಬೆಳಗಾವಿ: ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಇಂಜಿನಿಯರ್ ಮನೆ, ಕಚೇರಿ ಮೇಲೆ ದಾಳಿ ಮಾಡಿದ್ದ ಎಸಿಬಿ ಅಧಿಕಾರಿಗಳು ನಸುಕಿನ ಜಾವ 3 ಗಂಟೆಯವರೆಗೂ ದಾಖಲೆಗಳನ್ನು ಪರಿಶೀಲನೆ ನಡೆಸಿದರು. ಬರೊಬ್ಬರಿ 19 ಗಂಟೆ ಕಾಲ ನಿರಂತರ ಪರಿಶೀಲನೆ ನಡೆಸಿದ ಅಧಿಕಾರಿಗಳ ತಂಡ ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ, ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

Acb raid on Belagavi superintendent BY pawar house
ಲೋಕೋಪಯೋಗಿ ಇಲಾಖೆಯ ಬೆಳಗಾವಿ ಅಧೀಕ್ಷಕ ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ

ಚಿಕ್ಕೋಡಿ ತಾಲೂಕಿನ ಸದಲಗಾದಲ್ಲಿ 4 ಎಕರೆ ಕೃಷಿ ಜಮೀನು, ಖಾನಾಪುರದಲ್ಲಿ 4 ಎಕರೆ ಕೃಷಿ ಜಮೀನನ್ನು ಬಿ.ವೈ ಪವಾರ್ ಹೊಂದಿದ್ದಾರೆ. ಮಕ್ಕಳ ಹೆಸರಲ್ಲಿ ನಿಪ್ಪಾಣಿಯಲ್ಲಿ 7 ಎಕರೆ ಜಮೀನು ಖರೀದಿಸಿದ್ದಾರೆ. ಒಟ್ಟಾರೆ ಬೆಳಗಾವಿ ಜಿಲ್ಲೆಯ ವಿವಿಧೆಡೆ 22 ಎಕರೆ 12 ಗುಂಟೆ ಕೃಷಿ ಜಮೀನನ್ನು ಬಿ.ವೈ ಪವಾರ್ ಹೊಂದಿದ್ದಾರೆ.

Acb raid on Belagavi superintendent BY pawar house
ಬಿ. ವೈ ಪವಾರ್ ಮನೆ ಮೇಲೆ ಎಸಿಬಿ ದಾಳಿ

ಅಲ್ಲದೇ ಬೆಳಗಾವಿ ನಗರದ ಟಿಳಕವಾಡಿಯಲ್ಲಿ ಒಂದು ಮನೆ, ನಿಪ್ಪಾಣಿಯ ಶಿವಾಜಿ ನಗರದಲ್ಲಿ ಪತ್ನಿ ಹೆಸರಲ್ಲಿ ಒಂದು ಮನೆ, ಬೆಳಗಾವಿ ನಗರದ ವಿವಿಧ ಬಡಾವಣೆಗಳಲ್ಲಿ ಎರಡು ಖಾಲಿ ನಿವೇಶನಗಳು, ನಿಪ್ಪಾಣಿಯಲ್ಲಿ ಒಂದು ನಿರ್ಮಾಣ ಹಂತದ ಪೆಟ್ರೋಲ್ ಬಂಕ್, ನಿಪ್ಪಾಣಿ ತಾಲೂಕಿನ ಬೋರಗಾಂವದಲ್ಲಿ 2 ವಾಣಿಜ್ಯ ಸಂಕೀರ್ಣಗಳು, 900 ಗ್ರಾಂ ಚಿನ್ನಾಭರಣ‌, 300 ಗ್ರಾಂ ಬೆಳ್ಳಿ ಆಭರಣ, ವಿವಿಧ ಕಂಪನಿಯ 3 ದ್ವಿಚಕ್ರ ವಾಹನ, 2 ಕಾರುಗಳು, 8.50 ಲಕ್ಷ ರೂ. ನಗದು, 2 ವಿಮಾ ಪಾಲಿಸಿ, ವಿವಿಧ ಬ್ಯಾಂಕ್‌ಗಳಲ್ಲಿ ಉಳಿತಾಯ ಖಾತೆಗಳು, 10 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಪತ್ತೆಯಾಗಿವೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಎಸಿಬಿ ದಾಳಿ : ಕೆಜಿಗಟ್ಟಲೆ ಬಂಗಾರ, ಕೋಟ್ಯಂತರ ಮೌಲ್ಯದ ಆಸ್ತಿ ಪತ್ರ ಕಂಡು ಬೆರಗಾದ ಎಸಿಬಿ ಅಧಿಕಾರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.