ETV Bharat / business

ತೀವ್ರವಾಗದ ಮುಂಗಾರು: ಕೃಷಿ, ಆರ್ಥಿಕತೆ, ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಸಾಧ್ಯತೆ

ಮಾನ್ಸೂನ್ ಆರಂಭವಾಗಿ ಒಂದು ವಾರವಾಗಿದ್ದರೂ ಮಾನ್ಸೂನ್ ಇನ್ನೂ ದುರ್ಬಲವಾಗಿರುವುದು ಕಳವಳಕ್ಕೆ ಕಾರಣವಾಗಿದೆ. ಆದಾಗ್ಯೂ ಮುಂದಿನ ದಿನಗಳಲ್ಲಿ ಮುಂಗಾರು ಬಿರುಸು ಪಡೆಯಲಿದೆ ಎಂದು ನಿರೀಕ್ಷಿಸಲಾಗಿದೆ.

author img

By

Published : Jun 18, 2023, 4:57 PM IST

A poor monsoon may just play party pooper to a buoyant market
A poor monsoon may just play party pooper to a buoyant market

ನವದೆಹಲಿ : ಸದ್ಯದ ಪರಿಸ್ಥಿತಿಯಲ್ಲಿ ದುರ್ಬಲ ಮುಂಗಾರು ದೇಶದ ಕೃಷಿ ಮತ್ತು ಆರ್ಥಿಕ ವಲಯಕ್ಕೆ ಪ್ರಮುಖ ಚಿಂತೆಯ ಕಾರಣವಾಗಿದೆ ಹಾಗೂ ಒಂದೊಮ್ಮೆ ಮುಂಗಾರು ದುರ್ಬಲವಾಗಿಯೇ ಮುಂದುವರೆದಲ್ಲಿ ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, 36 IMD ಉಪವಿಭಾಗಗಳ ಪೈಕಿ 29 ವಿಭಾಗಗಳಲ್ಲಿ ಮಳೆಯ ಕೊರತೆಯಿದೆ ಎಂದು ವರದಿಯಾಗಿದೆ. ಆದಾಗ್ಯೂ ಇವು ಮುಂಗಾರಿನ ಆರಂಭಿಕ ದಿನಗಳಾಗಿದ್ದು, ಬರುವ ವಾರಗಳಲ್ಲಿ ಉತ್ತಮ ಮುಂಗಾರು ಈ ಕೊರತೆಯನ್ನು ನೀಗಿಸಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಲಾಗಿದೆ.

ಈ ವರ್ಷ ಎಲ್ ನಿನೋ ವಿದ್ಯಮಾನವು ಮಾನ್ಸೂನ್ ಮೇಲೆ ಪರಿಣಾಮ ಬೀರಬಹುದು ಎಂಬುದು ಆತಂಕಕಾರಿಯಾಗಿದೆ. ಇದು ಸಂಭವಿಸಿದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮವಾಗಲಿದೆ ಮತ್ತು ಆಹಾರ ಹಣದುಬ್ಬರ ಹೆಚ್ಚಾಗಲಿದೆ. ಜೊತೆಗೆ ಇದು ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿ ಮುಂಗಾರು ಮಳೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ವಿಶ್ಲೇಷಕ ವಿಕೆ ವಿಜಯಕುಮಾರ್ ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆಯು ಈಗಲೂ ಸಾಮಾನ್ಯ ಮಳೆಯಾಗಲಿದೆ ನಿರೀಕ್ಷೆಯಲ್ಲಿದ್ದರೂ, ಹಿಂದಿನ ಮಾಹಿತಿಯನ್ನು ನೋಡಿದರೆ ಕೊರತೆ ಮುಂಗಾರು ಎದುರಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇದು ಭಾರತದ ಕೃಷಿ ಮತ್ತು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಪ್ರಭುದಾಸ್ ಲೀಲಾಧರ್ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಅಮ್ನಿಶ್ ಅಗರ್ವಾಲ್ ಹೇಳಿದ್ದಾರೆ.

ಎಲ್ ನಿನೋ ದೊಡ್ಡ ಅಪಾಯವಾಗಿ ಉಳಿದಿದ್ದರೂ ಗ್ರಾಮೀಣ ಭಾಗದಲ್ಲಿನ ಸರಕು ಬೇಡಿಕೆಯು ಬಲವಾದ ರಾಬಿ ಬೆಳೆ ಮತ್ತು ಇಳಿಮುಖವಾದ ಹಣದುಬ್ಬರದ ನಂತರ ಕ್ರಮೇಣ ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಅಗರ್ವಾಲ್ ಹೇಳಿದರು. ಆಟೋ, ಬ್ಯಾಂಕ್‌ಗಳು, ಬಂಡವಾಳ ಸರಕುಗಳು, ಆಸ್ಪತ್ರೆಗಳು, ಬಳಕೆ ಮತ್ತು ಕಟ್ಟಡ ಸಾಮಗ್ರಿಗಳ ವಲಯದ ಬಗ್ಗೆ ಆಶಾವಾದಿಗಳಾಗಿದ್ದೇವೆ. ಆದರೆ ಎಲ್ ನಿನೋ ಮತ್ತು ಅದರ ಪರಿಣಾಮವಾಗಿ ಹಣದುಬ್ಬರ ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಕಳವಳ ಇದೆ ಎಂದು ಅವರು ತಿಳಿಸಿದರು.

ಎಲ್ ನಿನೋ ದುರ್ಬಲ ಮಾನ್ಸೂನ್‌ಗೆ ಕಾರಣವಾಗಬಹುದು ಮತ್ತು ಅದರಿಂದ ಖಾರಿಫ್ ಬೆಳೆ ಉತ್ತಮವಾಗಿ ಬರದೆ ಇರಬಹುದು. ಖಾರಿಫ್ ಬೆಳೆ ನಾಶದಿಂದ ಆಹಾರ ಹಣದುಬ್ಬರ ಹೆಚ್ಚಾಗಬಹುದು ಮತ್ತು ಇದರಿಂದ ಗ್ರಾಮೀಣ ಭಾಗದ ಸರಕು ಬೇಡಿಕೆ ಚೇತರಿಕೆಯನ್ನು ವಿಳಂಬಗೊಳಿಸುತ್ತದೆ ಎಂದು ಅಗರ್ವಾಲ್ ಹೇಳಿದರು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅಗತ್ಯವಾದಷ್ಟು ಮಳೆ ಆಗದಿದ್ದರೆ ಮಣ್ಣಿನ ತೇವಾಂಶ ಕಡಿಮೆಯಾಗಿ ರಬಿ ಬೆಳೆ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ.

ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ದುರ್ಬಲ ದೃಷ್ಟಿಕೋನದ ಹೊರತಾಗಿಯೂ ಉತ್ತಮ ರಾಬಿ ಬೆಳೆ, ಸಾಮಾನ್ಯ ಮಾನ್ಸೂನ್ ಮತ್ತು ಕ್ಯಾಪೆಕ್ಸ್ ಪುಶ್ ಆಧಾರದಲ್ಲಿ ಭಾರತ ಸರ್ಕಾರವು ಬಲವಾದ ಬೆಳವಣಿಗೆಯನ್ನು ಸಕ್ರಿಯಗೊಳಿಸಬೇಕು. ಹಣಕಾಸು ವರ್ಷ 2024ರಲ್ಲಿ ಶೇಕಡಾ 6.5ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ Q1 ನಲ್ಲಿ 7.8 ಶೇಕಡಾ, Q2 ನಲ್ಲಿ 6.2 ಶೇಕಡಾ, Q3 ನಲ್ಲಿ 6.1 ಶೇಕಡಾ ಮತ್ತು Q4 ನಲ್ಲಿ 5.9 ಶೇಕಡಾದಲ್ಲಿ 6.5 ಶೇಕಡಾ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಈ ಮುಂಚೆ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ ನಿನೊ ಮತ್ತು ಸೈಕ್ಲೋನ್ ಬಿಪರ್‌ಜಾಯ್‌ನ ಪ್ರಭಾವದಿಂದಾಗಿ ಮುಂದಿನ ನಾಲ್ಕು ವಾರಗಳ ಕಾಲ ಮಾನ್ಸೂನ್ ದುರ್ಬಲವಾಗಬಹುದು ಎಂದು ನಿರೀಕ್ಷಿಸಲಾಗಿದೆ. ನೈಋತ್ಯ ಮಾನ್ಸೂನ್ ನಿರೀಕ್ಷೆಗಿಂತ ಒಂದು ವಾರ ತಡವಾಗಿ ಜೂನ್ 8 ರಂದು ಕೇರಳವನ್ನು ತಲುಪಿದೆ. ಇದು ಕೃಷಿ ಮತ್ತು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕೃಷಿ ರಾಸಾಯನಿಕಗಳು ಮತ್ತು ರಸಗೊಬ್ಬರ ಕಂಪನಿಗಳು, ಎಫ್‌ಎಂಸಿಜಿ ಮತ್ತು ಮೈಕ್ರೋಫೈನಾನ್ಸ್ ಕಂಪನಿಗಳ ಮೇಲೆ ದುರ್ಬಲ ಮಾನ್ಸೂನ್‌ನಿಂದ ಅತ್ಯಧಿಕ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಶೇರ್‌ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೇಳಿದರು.

ಇಲ್ಲಿಯವರೆಗೆ ಮಾನ್ಸೂನ್ ಕೇವಲ ಐದು ದಿನಗಳ ಕಾಲ ವಿಳಂಬವಾಗಿದೆ. ಬಿಪರ್​ಜಾಯ್ ಚಂಡಮಾರುತದ ನಂತರ ಮಾನ್ಸೂನ್ ಮತ್ತೆ ವೇಗ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : Petrol Diesel: ಮುಂಗಾರು ಆಗಮನ: ಪೆಟ್ರೋಲ್, ಡೀಸೆಲ್​ ಮಾರಾಟ ಇಳಿಕೆ

ನವದೆಹಲಿ : ಸದ್ಯದ ಪರಿಸ್ಥಿತಿಯಲ್ಲಿ ದುರ್ಬಲ ಮುಂಗಾರು ದೇಶದ ಕೃಷಿ ಮತ್ತು ಆರ್ಥಿಕ ವಲಯಕ್ಕೆ ಪ್ರಮುಖ ಚಿಂತೆಯ ಕಾರಣವಾಗಿದೆ ಹಾಗೂ ಒಂದೊಮ್ಮೆ ಮುಂಗಾರು ದುರ್ಬಲವಾಗಿಯೇ ಮುಂದುವರೆದಲ್ಲಿ ಭಾರತದ ಷೇರು ಮಾರುಕಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಆರ್ಥಿಕ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ, 36 IMD ಉಪವಿಭಾಗಗಳ ಪೈಕಿ 29 ವಿಭಾಗಗಳಲ್ಲಿ ಮಳೆಯ ಕೊರತೆಯಿದೆ ಎಂದು ವರದಿಯಾಗಿದೆ. ಆದಾಗ್ಯೂ ಇವು ಮುಂಗಾರಿನ ಆರಂಭಿಕ ದಿನಗಳಾಗಿದ್ದು, ಬರುವ ವಾರಗಳಲ್ಲಿ ಉತ್ತಮ ಮುಂಗಾರು ಈ ಕೊರತೆಯನ್ನು ನೀಗಿಸಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಲಾಗಿದೆ.

ಈ ವರ್ಷ ಎಲ್ ನಿನೋ ವಿದ್ಯಮಾನವು ಮಾನ್ಸೂನ್ ಮೇಲೆ ಪರಿಣಾಮ ಬೀರಬಹುದು ಎಂಬುದು ಆತಂಕಕಾರಿಯಾಗಿದೆ. ಇದು ಸಂಭವಿಸಿದಲ್ಲಿ ಆರ್ಥಿಕ ಬೆಳವಣಿಗೆಯ ಮೇಲೆ ಪರಿಣಾಮವಾಗಲಿದೆ ಮತ್ತು ಆಹಾರ ಹಣದುಬ್ಬರ ಹೆಚ್ಚಾಗಲಿದೆ. ಜೊತೆಗೆ ಇದು ಷೇರು ಮಾರುಕಟ್ಟೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಹಾಗಾಗಿ ಮುಂಗಾರು ಮಳೆಯನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ ಎಂದು ಜಿಯೋಜಿತ್ ಫೈನಾನ್ಷಿಯಲ್ ಸರ್ವೀಸಸ್‌ನಲ್ಲಿ ಮುಖ್ಯ ಹೂಡಿಕೆ ವಿಶ್ಲೇಷಕ ವಿಕೆ ವಿಜಯಕುಮಾರ್ ತಿಳಿಸಿದರು.

ಭಾರತೀಯ ಹವಾಮಾನ ಇಲಾಖೆಯು ಈಗಲೂ ಸಾಮಾನ್ಯ ಮಳೆಯಾಗಲಿದೆ ನಿರೀಕ್ಷೆಯಲ್ಲಿದ್ದರೂ, ಹಿಂದಿನ ಮಾಹಿತಿಯನ್ನು ನೋಡಿದರೆ ಕೊರತೆ ಮುಂಗಾರು ಎದುರಾಗುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ. ಇದು ಭಾರತದ ಕೃಷಿ ಮತ್ತು ಆರ್ಥಿಕತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಪ್ರಭುದಾಸ್ ಲೀಲಾಧರ್ ಸಂಸ್ಥೆಯ ಸಂಶೋಧನಾ ಮುಖ್ಯಸ್ಥ ಅಮ್ನಿಶ್ ಅಗರ್ವಾಲ್ ಹೇಳಿದ್ದಾರೆ.

ಎಲ್ ನಿನೋ ದೊಡ್ಡ ಅಪಾಯವಾಗಿ ಉಳಿದಿದ್ದರೂ ಗ್ರಾಮೀಣ ಭಾಗದಲ್ಲಿನ ಸರಕು ಬೇಡಿಕೆಯು ಬಲವಾದ ರಾಬಿ ಬೆಳೆ ಮತ್ತು ಇಳಿಮುಖವಾದ ಹಣದುಬ್ಬರದ ನಂತರ ಕ್ರಮೇಣ ಚೇತರಿಸಿಕೊಳ್ಳುವ ಲಕ್ಷಣಗಳನ್ನು ತೋರಿಸುತ್ತಿದೆ ಎಂದು ಅಗರ್ವಾಲ್ ಹೇಳಿದರು. ಆಟೋ, ಬ್ಯಾಂಕ್‌ಗಳು, ಬಂಡವಾಳ ಸರಕುಗಳು, ಆಸ್ಪತ್ರೆಗಳು, ಬಳಕೆ ಮತ್ತು ಕಟ್ಟಡ ಸಾಮಗ್ರಿಗಳ ವಲಯದ ಬಗ್ಗೆ ಆಶಾವಾದಿಗಳಾಗಿದ್ದೇವೆ. ಆದರೆ ಎಲ್ ನಿನೋ ಮತ್ತು ಅದರ ಪರಿಣಾಮವಾಗಿ ಹಣದುಬ್ಬರ ಮತ್ತು 2024 ರ ಸಾರ್ವತ್ರಿಕ ಚುನಾವಣೆಗಳ ಬಗ್ಗೆ ಕಳವಳ ಇದೆ ಎಂದು ಅವರು ತಿಳಿಸಿದರು.

ಎಲ್ ನಿನೋ ದುರ್ಬಲ ಮಾನ್ಸೂನ್‌ಗೆ ಕಾರಣವಾಗಬಹುದು ಮತ್ತು ಅದರಿಂದ ಖಾರಿಫ್ ಬೆಳೆ ಉತ್ತಮವಾಗಿ ಬರದೆ ಇರಬಹುದು. ಖಾರಿಫ್ ಬೆಳೆ ನಾಶದಿಂದ ಆಹಾರ ಹಣದುಬ್ಬರ ಹೆಚ್ಚಾಗಬಹುದು ಮತ್ತು ಇದರಿಂದ ಗ್ರಾಮೀಣ ಭಾಗದ ಸರಕು ಬೇಡಿಕೆ ಚೇತರಿಕೆಯನ್ನು ವಿಳಂಬಗೊಳಿಸುತ್ತದೆ ಎಂದು ಅಗರ್ವಾಲ್ ಹೇಳಿದರು. ಆಗಸ್ಟ್ ಮತ್ತು ಸೆಪ್ಟೆಂಬರ್‌ನಲ್ಲಿ ಅಗತ್ಯವಾದಷ್ಟು ಮಳೆ ಆಗದಿದ್ದರೆ ಮಣ್ಣಿನ ತೇವಾಂಶ ಕಡಿಮೆಯಾಗಿ ರಬಿ ಬೆಳೆ ಉತ್ಪಾದನೆಯ ಮೇಲೆ ಪ್ರತಿಕೂಲ ಪರಿಣಾಮವಾಗಲಿದೆ.

ಭೌಗೋಳಿಕ ರಾಜಕೀಯ ಅನಿಶ್ಚಿತತೆ ಮತ್ತು ದುರ್ಬಲ ದೃಷ್ಟಿಕೋನದ ಹೊರತಾಗಿಯೂ ಉತ್ತಮ ರಾಬಿ ಬೆಳೆ, ಸಾಮಾನ್ಯ ಮಾನ್ಸೂನ್ ಮತ್ತು ಕ್ಯಾಪೆಕ್ಸ್ ಪುಶ್ ಆಧಾರದಲ್ಲಿ ಭಾರತ ಸರ್ಕಾರವು ಬಲವಾದ ಬೆಳವಣಿಗೆಯನ್ನು ಸಕ್ರಿಯಗೊಳಿಸಬೇಕು. ಹಣಕಾಸು ವರ್ಷ 2024ರಲ್ಲಿ ಶೇಕಡಾ 6.5ರಷ್ಟು ಜಿಡಿಪಿ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದರಲ್ಲಿ Q1 ನಲ್ಲಿ 7.8 ಶೇಕಡಾ, Q2 ನಲ್ಲಿ 6.2 ಶೇಕಡಾ, Q3 ನಲ್ಲಿ 6.1 ಶೇಕಡಾ ಮತ್ತು Q4 ನಲ್ಲಿ 5.9 ಶೇಕಡಾದಲ್ಲಿ 6.5 ಶೇಕಡಾ ಎಂದು ನಿರೀಕ್ಷಿಸಲಾಗಿದೆ ಎಂದು ಅವರು ಹೇಳಿದರು.

ಭಾರತದಲ್ಲಿ ಈ ಮುಂಚೆ ಮಾನ್ಸೂನ್ ಸಾಮಾನ್ಯವಾಗಿರಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಈಗ ಎಲ್ ನಿನೊ ಮತ್ತು ಸೈಕ್ಲೋನ್ ಬಿಪರ್‌ಜಾಯ್‌ನ ಪ್ರಭಾವದಿಂದಾಗಿ ಮುಂದಿನ ನಾಲ್ಕು ವಾರಗಳ ಕಾಲ ಮಾನ್ಸೂನ್ ದುರ್ಬಲವಾಗಬಹುದು ಎಂದು ನಿರೀಕ್ಷಿಸಲಾಗಿದೆ. ನೈಋತ್ಯ ಮಾನ್ಸೂನ್ ನಿರೀಕ್ಷೆಗಿಂತ ಒಂದು ವಾರ ತಡವಾಗಿ ಜೂನ್ 8 ರಂದು ಕೇರಳವನ್ನು ತಲುಪಿದೆ. ಇದು ಕೃಷಿ ಮತ್ತು ಆರ್ಥಿಕತೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಲಿದೆ. ಕೃಷಿ ರಾಸಾಯನಿಕಗಳು ಮತ್ತು ರಸಗೊಬ್ಬರ ಕಂಪನಿಗಳು, ಎಫ್‌ಎಂಸಿಜಿ ಮತ್ತು ಮೈಕ್ರೋಫೈನಾನ್ಸ್ ಕಂಪನಿಗಳ ಮೇಲೆ ದುರ್ಬಲ ಮಾನ್ಸೂನ್‌ನಿಂದ ಅತ್ಯಧಿಕ ಪ್ರತಿಕೂಲ ಪರಿಣಾಮವಾಗಲಿದೆ ಎಂದು ಶೇರ್‌ಇಂಡಿಯಾದ ಉಪಾಧ್ಯಕ್ಷ ಮತ್ತು ಸಂಶೋಧನಾ ಮುಖ್ಯಸ್ಥ ರವಿ ಸಿಂಗ್ ಹೇಳಿದರು.

ಇಲ್ಲಿಯವರೆಗೆ ಮಾನ್ಸೂನ್ ಕೇವಲ ಐದು ದಿನಗಳ ಕಾಲ ವಿಳಂಬವಾಗಿದೆ. ಬಿಪರ್​ಜಾಯ್ ಚಂಡಮಾರುತದ ನಂತರ ಮಾನ್ಸೂನ್ ಮತ್ತೆ ವೇಗ ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ : Petrol Diesel: ಮುಂಗಾರು ಆಗಮನ: ಪೆಟ್ರೋಲ್, ಡೀಸೆಲ್​ ಮಾರಾಟ ಇಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.