ETV Bharat / business

ಸರ್ಕಾರದ ಮಧ್ಯಪ್ರವೇಶದಿಂದ ವಿಮಾನದರ ಶೇ 61ರಷ್ಟು ಇಳಿಕೆ: ಸಚಿವ ಸಿಂದಿಯಾ

author img

By

Published : Jun 8, 2023, 9:39 AM IST

ವಿಮಾನಯಾನ ದರಗಳನ್ನು ನಿಗದಿಪಡಿಸುವ ಹಕ್ಕನ್ನು ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

"Air-fares reduced by 61 per cent after govt intervention": Jyotiraditya Scindia
ಸರ್ಕಾರದ ಮಧ್ಯಪ್ರವೇಶದಿಂದ ವಿಮಾನದರ ಶೇ 61ರಷ್ಟು ಇಳಿಕೆ: ಸಚಿವ ಸಿಂದಿಯಾ

ನವದೆಹಲಿ: ಜೂನ್ 6 ರಂದು ನಡೆದ ಏರ್‌ಲೈನ್ಸ್ ಸಲಹಾ ಸಮಿತಿ ಸಭೆ ನಂತರ ದೆಹಲಿಯಿಂದ ಕೆಲವು ಮಾರ್ಗಗಳಲ್ಲಿ ಸಂಚರಿಸುವ ವಿಮಾನ ದರಗಳನ್ನು ಗಣನೀಯವಾಗಿ ಅಂದರೆ ಶೇ 14 ರಿಂದ 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ವಿಮಾನಯಾನ ಸಚಿವ ಸಿಂಧಿಯಾ, ದೆಹಲಿಯಿಂದ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಯಂತಹ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರಗಳಲ್ಲಿ ಕಡಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, "ಜೂನ್ 6 ರಂದು ದೆಹಲಿ - ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರವನ್ನು ಶೇಕಡಾ 14 - 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ಸಚಿವಾಲಯವು ದೈನಂದಿನ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಬುಧವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರವು ಮಾಡಿದ ಸಾಧನೆಗಳು ಹಾಗೂ ಬದಲಾವಣೆ ಬಗ್ಗೆ ಮಾತನಾಡುವ ವೇಳೆ ವಿಮಾನ ಸಚಿವ ಸಿಂದಿಯಾ ಈ ವಿಚಾರ ತಿಳಿಸಿದ್ದಾರೆ. ದರಗಳಿಗೆ ಸಂಬಂಧಿಸಿದಂತೆ ವಿಮಾನಯಾನ ವಲಯವು ಕೆಲ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವಿಮಾನಯಾನ ಸಂಸ್ಥೆಗಳಿಗೆ ವಿಮಾನ ದರಗಳನ್ನು ನಿರ್ಧರಿಸುವ ಅಧಿಕಾರವಿದೆ ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಮತ್ತು ಸೀಸನ್ ಸೇರಿದಂತೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಸಿಂಧಿಯಾ ಹೇಳಿದ್ದಾರೆ.

"ಮಾರುಕಟ್ಟೆ ನಿಯಂತ್ರಿತ ವಿಮಾನಯಾನ ದರಗಳನ್ನು ನಿಗದಿಪಡಿಸಲು ಏರ್‌ಲೈನ್‌ಗಳಿಗೆ ಹಕ್ಕುಗಳನ್ನು ನೀಡಲಾಗಿದೆ. ದೇಶದಲ್ಲಿ ವಿಮಾನಯಾನ ಮಾರುಕಟ್ಟೆಯು ಋತು ಆಧಾರಿತವಾಗಿದೆ. ದರಗಳನ್ನು ಸಹ ಅದಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಸಾಮರ್ಥ್ಯ ಕಡಿಮೆ ಮತ್ತು ಬೇಡಿಕೆ ಹೆಚ್ಚಿದ್ದರೆ ಮತ್ತು ಇನ್‌ಪುಟ್ ವೆಚ್ಚಗಳು ಕಡಿಮೆಯಾಗದಿದ್ದರೆ, ದರಗಳು ಹೆಚ್ಚಾಗಿರುತ್ತದೆ. ದರವನ್ನು ನಿರ್ಧರಿಸಲು ಒಂದು ಮಾನದಂಡ ಇದೆ ಎಂಬುದನ್ನು ಸಚಿವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇದಲ್ಲದೇ, ವಾಯುಯಾನ ಸಚಿವಾಲಯದ ಪಾತ್ರವನ್ನು ಸ್ಪಷ್ಟಪಡಿಸಿದ ಜ್ಯೋತಿರಾದಿತ್ಯ ಸಿಂದಿಯಾ, "ಸಚಿವಾಲಯದ ಪಾತ್ರವು ನಿಯಂತ್ರಕವಲ್ಲ ಮತ್ತು ನಿಯಂತ್ರಕನಲ್ಲ" ಎಂದು ಹೇಳಿದರು. ಸಿಂಧಿಯಾ ಏರ್‌ಲೈನ್ಸ್ ಸಲಹಾ ಗುಂಪು ಕರೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಅವರು ವಿಮಾನಯಾನ ಸಂಸ್ಥೆಗಳು ವಿಮಾನ ದರಗಳನ್ನು ಸ್ವಯಂ - ನಿಯಂತ್ರಿಸಲು ಮತ್ತು ಸಮಂಜಸವಾದ ಬೆಲೆಯನ್ನು ನಿಗದಿಪಡಿಸುವಂತೆ ಕರೆ ನೀಡಿದರು.

"ಮಣಿಪುರದ ವಿಚಾರದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದಿವೆ. ಅಷ್ಟೇ ಅಲ್ಲ ಒಡಿಶಾ ದುರಂತ ಸಂದರ್ಭದಲ್ಲಿ ಪ್ರಯಾಣ ದರಗಳು ಹೆಚ್ಚಳ ಆಗಿವೆ. ಈ ಬಗ್ಗೆ ಕಾಳಜಿ ವಹಿಸಿ ನಿಯಂತ್ರಿಸಬೇಕಿದೆ. ಇವುಗಳ ಹೊರತಾಗಿ, ದೆಹಲಿಯಿಂದ ಶ್ರೀನಗರ, ಲೇಹ್, ಮುಂಬೈ, ಪುಣೆ, ಅಹಮದಾಬಾದ್ ಮತ್ತು ಬೆಂಗಳೂರಿನಂತಹ ನಗರಗಳಿಗೆ ಪ್ರಯಾಣ ದರ ಗರಿಷ್ಠವಾಗಿಯೇ ಇದೆ‘‘ ಎಂಬ ವಿಚಾರವನ್ನು ಸಚಿವರು ಸಭೆಯ ಗಮನಕ್ಕೆ ತಂದರು.

ಇನ್ನು ದೇಶೀಯ ವಿಮಾನದ ಟಿಕೆಟ್‌ ದರಗಳು ಗಗನಕ್ಕೇರುತ್ತಿರುವುದು ಪ್ರಯಾಣಿಕರ ಸಂಕಷ್ಟವನ್ನು ಹೆಚ್ಚಿಸುತ್ತಿರುವುದಂತೂ ಸುಳ್ಳಲ್ಲ.

ಇದನ್ನು ಓದಿ:ಭಾರತದ ಅಂತರ್ಜಾಲ ಆರ್ಥಿಕತೆ 2030ಕ್ಕೆ $1 ಟ್ರಿಲಿಯನ್

ನವದೆಹಲಿ: ಜೂನ್ 6 ರಂದು ನಡೆದ ಏರ್‌ಲೈನ್ಸ್ ಸಲಹಾ ಸಮಿತಿ ಸಭೆ ನಂತರ ದೆಹಲಿಯಿಂದ ಕೆಲವು ಮಾರ್ಗಗಳಲ್ಲಿ ಸಂಚರಿಸುವ ವಿಮಾನ ದರಗಳನ್ನು ಗಣನೀಯವಾಗಿ ಅಂದರೆ ಶೇ 14 ರಿಂದ 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.

ವಿಮಾನಯಾನ ಸಚಿವ ಸಿಂಧಿಯಾ, ದೆಹಲಿಯಿಂದ ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಯಂತಹ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರಗಳಲ್ಲಿ ಕಡಿತದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ, "ಜೂನ್ 6 ರಂದು ದೆಹಲಿ - ಶ್ರೀನಗರ, ಲೇಹ್, ಪುಣೆ ಮತ್ತು ಮುಂಬೈಗೆ ಸಂಪರ್ಕ ಕಲ್ಪಿಸುವ ವಿಮಾನಗಳ ಗರಿಷ್ಠ ದರವನ್ನು ಶೇಕಡಾ 14 - 61 ರಷ್ಟು ಕಡಿಮೆ ಮಾಡಲಾಗಿದೆ ಎಂದು ಹೇಳಲು ನನಗೆ ಸಂತೋಷವಾಗಿದೆ. ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮತ್ತು ಸಚಿವಾಲಯವು ದೈನಂದಿನ ಮೇಲ್ವಿಚಾರಣೆ ನಡೆಸುತ್ತಿದೆ ಎಂದು ಬುಧವಾರ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರವು ಮಾಡಿದ ಸಾಧನೆಗಳು ಹಾಗೂ ಬದಲಾವಣೆ ಬಗ್ಗೆ ಮಾತನಾಡುವ ವೇಳೆ ವಿಮಾನ ಸಚಿವ ಸಿಂದಿಯಾ ಈ ವಿಚಾರ ತಿಳಿಸಿದ್ದಾರೆ. ದರಗಳಿಗೆ ಸಂಬಂಧಿಸಿದಂತೆ ವಿಮಾನಯಾನ ವಲಯವು ಕೆಲ ಮಾನದಂಡಗಳನ್ನು ಅನುಸರಿಸುತ್ತದೆ ಎಂದು ಸಚಿವರು ಸ್ಪಷ್ಟಪಡಿಸಿದರು. ವಿಮಾನಯಾನ ಸಂಸ್ಥೆಗಳಿಗೆ ವಿಮಾನ ದರಗಳನ್ನು ನಿರ್ಧರಿಸುವ ಅಧಿಕಾರವಿದೆ ಮತ್ತು ಮಾರುಕಟ್ಟೆ ಡೈನಾಮಿಕ್ಸ್ ಮತ್ತು ಸೀಸನ್ ಸೇರಿದಂತೆ ವಿವಿಧ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ಸಿಂಧಿಯಾ ಹೇಳಿದ್ದಾರೆ.

"ಮಾರುಕಟ್ಟೆ ನಿಯಂತ್ರಿತ ವಿಮಾನಯಾನ ದರಗಳನ್ನು ನಿಗದಿಪಡಿಸಲು ಏರ್‌ಲೈನ್‌ಗಳಿಗೆ ಹಕ್ಕುಗಳನ್ನು ನೀಡಲಾಗಿದೆ. ದೇಶದಲ್ಲಿ ವಿಮಾನಯಾನ ಮಾರುಕಟ್ಟೆಯು ಋತು ಆಧಾರಿತವಾಗಿದೆ. ದರಗಳನ್ನು ಸಹ ಅದಕ್ಕೆ ಅನುಗುಣವಾಗಿ ನಿಗದಿಪಡಿಸಲಾಗಿದೆ. ಸಾಮರ್ಥ್ಯ ಕಡಿಮೆ ಮತ್ತು ಬೇಡಿಕೆ ಹೆಚ್ಚಿದ್ದರೆ ಮತ್ತು ಇನ್‌ಪುಟ್ ವೆಚ್ಚಗಳು ಕಡಿಮೆಯಾಗದಿದ್ದರೆ, ದರಗಳು ಹೆಚ್ಚಾಗಿರುತ್ತದೆ. ದರವನ್ನು ನಿರ್ಧರಿಸಲು ಒಂದು ಮಾನದಂಡ ಇದೆ ಎಂಬುದನ್ನು ಸಚಿವರು ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.

ಇದಲ್ಲದೇ, ವಾಯುಯಾನ ಸಚಿವಾಲಯದ ಪಾತ್ರವನ್ನು ಸ್ಪಷ್ಟಪಡಿಸಿದ ಜ್ಯೋತಿರಾದಿತ್ಯ ಸಿಂದಿಯಾ, "ಸಚಿವಾಲಯದ ಪಾತ್ರವು ನಿಯಂತ್ರಕವಲ್ಲ ಮತ್ತು ನಿಯಂತ್ರಕನಲ್ಲ" ಎಂದು ಹೇಳಿದರು. ಸಿಂಧಿಯಾ ಏರ್‌ಲೈನ್ಸ್ ಸಲಹಾ ಗುಂಪು ಕರೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿದ್ದರು, ಅಲ್ಲಿ ಅವರು ವಿಮಾನಯಾನ ಸಂಸ್ಥೆಗಳು ವಿಮಾನ ದರಗಳನ್ನು ಸ್ವಯಂ - ನಿಯಂತ್ರಿಸಲು ಮತ್ತು ಸಮಂಜಸವಾದ ಬೆಲೆಯನ್ನು ನಿಗದಿಪಡಿಸುವಂತೆ ಕರೆ ನೀಡಿದರು.

"ಮಣಿಪುರದ ವಿಚಾರದಲ್ಲಿ ಕೆಲವು ಅನಿರೀಕ್ಷಿತ ಘಟನೆಗಳು ನಡೆದಿವೆ. ಅಷ್ಟೇ ಅಲ್ಲ ಒಡಿಶಾ ದುರಂತ ಸಂದರ್ಭದಲ್ಲಿ ಪ್ರಯಾಣ ದರಗಳು ಹೆಚ್ಚಳ ಆಗಿವೆ. ಈ ಬಗ್ಗೆ ಕಾಳಜಿ ವಹಿಸಿ ನಿಯಂತ್ರಿಸಬೇಕಿದೆ. ಇವುಗಳ ಹೊರತಾಗಿ, ದೆಹಲಿಯಿಂದ ಶ್ರೀನಗರ, ಲೇಹ್, ಮುಂಬೈ, ಪುಣೆ, ಅಹಮದಾಬಾದ್ ಮತ್ತು ಬೆಂಗಳೂರಿನಂತಹ ನಗರಗಳಿಗೆ ಪ್ರಯಾಣ ದರ ಗರಿಷ್ಠವಾಗಿಯೇ ಇದೆ‘‘ ಎಂಬ ವಿಚಾರವನ್ನು ಸಚಿವರು ಸಭೆಯ ಗಮನಕ್ಕೆ ತಂದರು.

ಇನ್ನು ದೇಶೀಯ ವಿಮಾನದ ಟಿಕೆಟ್‌ ದರಗಳು ಗಗನಕ್ಕೇರುತ್ತಿರುವುದು ಪ್ರಯಾಣಿಕರ ಸಂಕಷ್ಟವನ್ನು ಹೆಚ್ಚಿಸುತ್ತಿರುವುದಂತೂ ಸುಳ್ಳಲ್ಲ.

ಇದನ್ನು ಓದಿ:ಭಾರತದ ಅಂತರ್ಜಾಲ ಆರ್ಥಿಕತೆ 2030ಕ್ಕೆ $1 ಟ್ರಿಲಿಯನ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.