ಹುಬ್ಬಳ್ಳಿ: ದಿನದಿಂದ ದಿನಕ್ಕೆ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಇದರಿಂದ ಪಾರಾಗಲು ಹುಬ್ಬಳ್ಳಿ-ಧಾರವಾಡ ಜನತೆ ಎಲೆಕ್ಟ್ರಿಕಲ್ ಬೈಕ್ ಮೊರೆ ಹೋಗುತ್ತಿದ್ದಾರೆ.
ಓದಿ: ಜಮೀನು ವಿವಾದ: ದುದ್ದ ಪೊಲೀಸ್ ಠಾಣೆಗೆ ಆಗಮಿಸಿದ ರಾಕಿ ಬಾಯ್
ಕೊರೊನಾ ಎಂಬ ಮಹಾಮಾರಿಗೆ ತತ್ತರಿಸಿದ ಜನತೆಗೆ, ಕೇಂದ್ರ ಸರ್ಕಾರ ದಿನನಿತ್ಯದ ಬಳಸುವ ದಿನಸಿಯಿಂದ, ಇಂಧನ ಬೆಲೆ ಎಲ್ಲವನ್ನೂ ಏರಿಕೆ ಮಾಡಿ ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಇದರಿಂದಾಗಿ ಸಾರ್ವಜನಿಕರು ಪೆಟ್ರೋಲ್ ಬೈಕ್ ಬಿಟ್ಟು ಕಡಿಮೆ ವೆಚ್ಚ ಹಾಗೂ ಪರಿಸರ ಸ್ನೇಹಿ ಇ-ಬೈಕ್ ನತ್ತ ಒಲವು ತೋರುತ್ತಿದ್ದಾರೆ.
ಎಲೆಕ್ಟ್ರಿಕಲ್ ಸ್ಕೂಟರ್ ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. 100 ರೂಪಾಯಿಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸುವ ಬದಲು 20-25 ರೂಪಾಯಿನಲ್ಲಿ 80-100 ಕಿ.ಮೀ ದೂರ ಕ್ರಮಿಸಬಹುದಾಗಿದೆ. ಇದರಿಂದಾಗಿ ಹುಬ್ಬಳ್ಳಿ ಜನತೆ ಇ-ಸ್ಕೂಟರ್ಗಳಿಗೆ ಮನ ಸೋಲುತ್ತಿದ್ದಾರೆ.
ಮಹಾನಗರ ವ್ಯಾಪ್ತಿಯಲ್ಲಿ ಈಗಾಗಲೇ ಮಾರಾಟ ಮಳಿಗೆಗಳು ಆರಂಭವಾಗಿದ್ದು, ಈ ಮಳಿಗೆಗಳಲ್ಲಿ ಕನಿಷ್ಟ 12 ವಿವಿಧ ಮಾದರಿಯ ಸ್ಕೂಟರ್ ಲಭ್ಯವಿದೆ. 43,000 ರಿಂದ 1,40,000 ರೂ. ವರೆಗೂ ಸ್ಕೂಟರ್ಗಳು ಲಭ್ಯವಿದೆ. ಅಲ್ಲದೇ 25 ಕಿ.ಮೀ ವೇಗದಲ್ಲಿ ಕ್ರಮಿಸುವ ವಾಹನಗಳಿಗೆ ಆರ್ಟಿಒ ನೋಂದಣಿ ಅಗತ್ಯವಿಲ್ಲ. ಹೀಗಾಗಿ ಇ-ಸ್ಕೂಟರ್ಗಳಿಗೆ ಹೆಚ್ಚು ಬೇಡಿಕೆ ಜೊತೆಗೆ ಖರೀದಿಯಾಗುತ್ತಿದೆ.
ಕೇಂದ್ರದ ಗುಜರಿ ನೀತಿ ಜಾರಿ ಮಾಡಿದ ಪರಿಣಾಮ, ಲಕ್ಷಾಂತರ ವಾಹನಗಳು ಗುಜರಿಗೆ ಸೇರಲಿವೆ. ಹೀಗಾಗಿ ಹೊಸ ಇ-ಸ್ಕೂಟರ್, ದ್ವಿಚಕ್ರ ವಾಹನ ಖರೀದಿಗೆ ಮನಸ್ಸು ಮಾಡುತ್ತಿದ್ದಾರೆ ಎನ್ನುತ್ತಾರೆ ಶೋ ರೂಂ ಮಾಲೀಕರು.
ಒಟ್ಟಿನಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೆ ಏರುತ್ತಿರುವ ಹಿನ್ನೆಲೆ, ಇ-ಸ್ಕೂಟರ್ ಮೊರೆ ಹೋಗಿರುವ ಸಾರ್ವಜನಿಕರಿಗೆ ಕಂಪನಿಯು, ಉತ್ತಮ ಸರ್ವಿಸ್ ಜೊತೆಗೆ ಪೆಟ್ರೋಲ್ ಬಂಕ್ ತರಹ ವಿದ್ಯುತ್ ಬಂಕ್ ಮಾಡಿ ಮುಂದೆ ಆಗಬೇಕಾದ ಸಮಸ್ಯೆ ತಡೆಯುವ ಮೂಲಕ ಗ್ರಾಹಕರ ಸಂಖ್ಯೆ ಹೆಚ್ಚಿಸಿಕೊಳ್ಳಬೇಕಾಗಿದೆ.