ETV Bharat / business

ಬಜೆಟ್​ 2021: ಕೊರೊನಾ ಬಾಧಿತ ಪ್ರವಾಸೋದ್ಯಮದ ಈ ನಿರೀಕ್ಷೆಗಳನ್ನು ಈಡೇರಿಸುತ್ತಾರಾ ನಿರ್ಮಲಾ?

author img

By

Published : Jan 14, 2021, 9:14 PM IST

ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಸ್ತರಣೆಗೊಂಡ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ, ಪ್ರವಾಸೋದ್ಯಮ ಸಚಿವರ ಜೊತೆಗೆ ಪ್ರಧಾನಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿ ರಚಿಸಲು ಫೆಡರೇಷನ್ ಆಫ್ ಅಸೋಸಿಯೇಷನ್ಸ್ ಇನ್ ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ (ಎಫ್​ಎಐಟಿಎಚ್​) ಉದ್ಯಮವು ಪ್ರಸ್ತಾಪಿಸಿದೆ.

Budget
ಬಜೆಟ್​

ನವದೆಹಲಿ: ಮುಂಬರುವ ಕೇಂದ್ರ ಬಜೆಟ್ ಬಗ್ಗೆ ಭರವಸೆ ಇರಿಸಿಕೊಂಡಿರುವ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವು ಕೋವಿಡ್​-19 ಬಿಕ್ಕಟ್ಟಿನ ಪ್ರಭಾವದಿಂದ ಹೊರಹೊಮ್ಮಲು ನೆರವಾಗುವಂತೆ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಸ್ತರಣೆಗೊಂಡ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ, ಪ್ರವಾಸೋದ್ಯಮ ಸಚಿವರ ಜೊತೆಗೆ ಪ್ರಧಾನಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿ ರಚಿಸಲು ಫೆಡರೇಷನ್ ಆಫ್ ಅಸೋಸಿಯೇಷನ್ಸ್ ಇನ್ ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ (ಎಫ್​ಎಐಟಿಎಚ್​) ಉದ್ಯಮವು ಪ್ರಸ್ತಾಪಿಸಿದೆ.

ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಉದ್ಯಮದ ಸ್ಥಾನಮಾನವನ್ನು ಸಹ ಫೆಡರೇಶನ್ ಕೇಳಿದೆ. ಪ್ರವಾಸೋದ್ಯಮ ಒಕ್ಕೂಟವು ಸರ್ಕಾರದ ವಿವಿಧ ಸದಸ್ಯರೊಂದಿಗೆ ತೊಡಗಿಸಿಕೊಂಡಿದೆ. ಕೇಂದ್ರ ಬಜೆಟ್‌ನಲ್ಲಿ ನ್ಯಾಯಯುತ ಒಪ್ಪಂದ ಪಡೆಯಲು ಉದ್ಯಮ ಎದುರು ನೋಡುತ್ತಿದೆ ಎಂದು ಫೇಯ್ತ್ ಕನ್ಸಲ್ಟಿಂಗ್ ಸಿಇಒ ಆಶಿಶ್ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಉದ್ಯಮಗಳ ಪಾಲು ಮಾರಿ ಬಂದ ಹಣ ಬಡವರಿಗೆ ಹಂಚಿ: ರಘುರಾಮ್ ರಾಜನ್

ರಫ್ತು ಆದಾಯ ತೆರಿಗೆ ಮುಕ್ತವಾಗಿಸಲು ಮತ್ತು ಪ್ರವಾಸೋದ್ಯಮ ಗಳಿಕೆಯ ತೆರಿಗೆಯನ್ನು ಶೂನ್ಯಕ್ಕೆ ತರಬೇಕು. ಕೋವಿಡ್ ನಂತರದ ಚೇತರಿಕೆಯ ಭರವಸೆಯಾಗಿ ಪ್ರವಾಸೋದ್ಯಮದಲ್ಲಿ ಎಲ್ಲಾ ವಿದೇಶಿ ವಿನಿಮಯಗಳಿಸುವ ಸದಸ್ಯರಿಗೆ ಶೇ 10ರಷ್ಟು ಸೇವಾ ರಫ್ತು ಭಾರತ ಯೋಜನೆ (ಎಸ್‌ಇಎಸ್) ಅನ್ನು 5 ವರ್ಷಗಳವರೆಗೆ ಅನ್ವಯಿಸುವಂತೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ಪ್ರವಾಸೋದ್ಯಮವು ದೇಶೀಯ ಉದ್ಯಮವಾಗುವುದನ್ನು ಖಚಿತಪಡಿಸಿಕೊಳ್ಳಲು ಈ ವಲಯವು ಒಂದು ಏಕೀಕೃತ ಕಾರ್ಯತಂತ್ರವನ್ನು ನಿರೀಕ್ಷಿಸುತ್ತಿದೆ. ಇದಕ್ಕಾಗಿ ಭಾರತದೊಳಗೆ ಜಿಎಸ್​ಟಿ ನೋಂದಾಯಿತ ದೇಶೀಯ ಪ್ರವಾಸ ನಿರ್ವಾಹಕರು, ಟ್ರಾವೆಲ್ ಏಜೆಂಟ್, ಹೋಟೆಲ್ ಮತ್ತು ದೇಶದಲ್ಲಿ ಎಲ್ಲಿಯಾದರೂ ಸಾರಿಗೆದಾರರೊಂದಿಗೆ ಖರ್ಚು ಮಾಡುವಾಗ 1.5 ಲಕ್ಷ ರೂ. ತನಕ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಕೋರಿದೆ.

ನವದೆಹಲಿ: ಮುಂಬರುವ ಕೇಂದ್ರ ಬಜೆಟ್ ಬಗ್ಗೆ ಭರವಸೆ ಇರಿಸಿಕೊಂಡಿರುವ ಪ್ರವಾಸೋದ್ಯಮ ಮತ್ತು ಆತಿಥ್ಯ ಕ್ಷೇತ್ರವು ಕೋವಿಡ್​-19 ಬಿಕ್ಕಟ್ಟಿನ ಪ್ರಭಾವದಿಂದ ಹೊರಹೊಮ್ಮಲು ನೆರವಾಗುವಂತೆ ಸರ್ಕಾರಕ್ಕೆ ಹಲವು ಶಿಫಾರಸುಗಳನ್ನು ಮಾಡಿದೆ.

ಕೇಂದ್ರ ಮತ್ತು ರಾಜ್ಯಗಳಲ್ಲಿ ವಿಸ್ತರಣೆಗೊಂಡ ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ, ಪ್ರವಾಸೋದ್ಯಮ ಸಚಿವರ ಜೊತೆಗೆ ಪ್ರಧಾನಿ ನೇತೃತ್ವದಲ್ಲಿ ಮುಖ್ಯಮಂತ್ರಿಗಳ ರಾಷ್ಟ್ರೀಯ ಪ್ರವಾಸೋದ್ಯಮ ಮಂಡಳಿ ರಚಿಸಲು ಫೆಡರೇಷನ್ ಆಫ್ ಅಸೋಸಿಯೇಷನ್ಸ್ ಇನ್ ಇಂಡಿಯನ್ ಟೂರಿಸಂ ಆ್ಯಂಡ್ ಹಾಸ್ಪಿಟಾಲಿಟಿ (ಎಫ್​ಎಐಟಿಎಚ್​) ಉದ್ಯಮವು ಪ್ರಸ್ತಾಪಿಸಿದೆ.

ದೇಶಾದ್ಯಂತ ಪ್ರವಾಸೋದ್ಯಮಕ್ಕೆ ಉದ್ಯಮದ ಸ್ಥಾನಮಾನವನ್ನು ಸಹ ಫೆಡರೇಶನ್ ಕೇಳಿದೆ. ಪ್ರವಾಸೋದ್ಯಮ ಒಕ್ಕೂಟವು ಸರ್ಕಾರದ ವಿವಿಧ ಸದಸ್ಯರೊಂದಿಗೆ ತೊಡಗಿಸಿಕೊಂಡಿದೆ. ಕೇಂದ್ರ ಬಜೆಟ್‌ನಲ್ಲಿ ನ್ಯಾಯಯುತ ಒಪ್ಪಂದ ಪಡೆಯಲು ಉದ್ಯಮ ಎದುರು ನೋಡುತ್ತಿದೆ ಎಂದು ಫೇಯ್ತ್ ಕನ್ಸಲ್ಟಿಂಗ್ ಸಿಇಒ ಆಶಿಶ್ ಗುಪ್ತಾ ಹೇಳಿದ್ದಾರೆ.

ಇದನ್ನೂ ಓದಿ: ಸರ್ಕಾರಿ ಸ್ವಾಮ್ಯದ ಉದ್ಯಮಗಳ ಪಾಲು ಮಾರಿ ಬಂದ ಹಣ ಬಡವರಿಗೆ ಹಂಚಿ: ರಘುರಾಮ್ ರಾಜನ್

ರಫ್ತು ಆದಾಯ ತೆರಿಗೆ ಮುಕ್ತವಾಗಿಸಲು ಮತ್ತು ಪ್ರವಾಸೋದ್ಯಮ ಗಳಿಕೆಯ ತೆರಿಗೆಯನ್ನು ಶೂನ್ಯಕ್ಕೆ ತರಬೇಕು. ಕೋವಿಡ್ ನಂತರದ ಚೇತರಿಕೆಯ ಭರವಸೆಯಾಗಿ ಪ್ರವಾಸೋದ್ಯಮದಲ್ಲಿ ಎಲ್ಲಾ ವಿದೇಶಿ ವಿನಿಮಯಗಳಿಸುವ ಸದಸ್ಯರಿಗೆ ಶೇ 10ರಷ್ಟು ಸೇವಾ ರಫ್ತು ಭಾರತ ಯೋಜನೆ (ಎಸ್‌ಇಎಸ್) ಅನ್ನು 5 ವರ್ಷಗಳವರೆಗೆ ಅನ್ವಯಿಸುವಂತೆ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದೆ.

ಪ್ರವಾಸೋದ್ಯಮವು ದೇಶೀಯ ಉದ್ಯಮವಾಗುವುದನ್ನು ಖಚಿತಪಡಿಸಿಕೊಳ್ಳಲು ಈ ವಲಯವು ಒಂದು ಏಕೀಕೃತ ಕಾರ್ಯತಂತ್ರವನ್ನು ನಿರೀಕ್ಷಿಸುತ್ತಿದೆ. ಇದಕ್ಕಾಗಿ ಭಾರತದೊಳಗೆ ಜಿಎಸ್​ಟಿ ನೋಂದಾಯಿತ ದೇಶೀಯ ಪ್ರವಾಸ ನಿರ್ವಾಹಕರು, ಟ್ರಾವೆಲ್ ಏಜೆಂಟ್, ಹೋಟೆಲ್ ಮತ್ತು ದೇಶದಲ್ಲಿ ಎಲ್ಲಿಯಾದರೂ ಸಾರಿಗೆದಾರರೊಂದಿಗೆ ಖರ್ಚು ಮಾಡುವಾಗ 1.5 ಲಕ್ಷ ರೂ. ತನಕ ಆದಾಯ ತೆರಿಗೆ ವಿನಾಯಿತಿ ನೀಡುವಂತೆ ಕೋರಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.