ETV Bharat / business

ಬಜೆಟ್​ಗೂ ಮುನ್ನ ಸರ್ವಪಕ್ಷಗಳಿಗೆ ಮೋದಿ ಬುಲಾವ್​... 'ನಿಮ್ಮ ಬೇಡಿಕೆಗಳು ಏನು ಹೇಳಿ'- ಪ್ರಧಾನಿ

author img

By

Published : Jan 30, 2020, 6:38 PM IST

ಶನಿವಾರ (ಫೆ.1) ಮಂಡನೆ ಆಗಲಿರುವ 2020ರ ಕೇಂದ್ರ ಬಜೆಟ್​ ಪೂರ್ವಭಾವಿಯಾಗಿ ಗುರುವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದರು. ಪ್ರಧಾನಿ ಮೋದಿ, ಹಿರಿಯ ಸಚಿವರುಗಳಾದ ಆನಂದ್ ಶರ್ಮಾ, ರಾಜನಾಥ್ ಸಿಂಗ್​, ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್​ನ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಇತರ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

party meeting ahead of Budget session
ಬಜೆಟ್​ ಪೂರ್ವಭಾವಿ ಸಭೆ

ನವದೆಹಲಿ: ಕೇಂದ್ರ ಸರ್ಕಾರವು ಬಜೆಟ್​ ಅಧಿವೇಶನದಲ್ಲಿ ಎಲ್ಲ ವಿಧದ ಚರ್ಚೆಗಳಿಗೆ ಮುಕ್ತ ಅವಕಾಶ ನೀಡುತ್ತದೆ ಮತ್ತು ಸಂಸದರ ತಮ್ಮ ಬೇಡಿಕೆಗಳ ಜತೆಗೆ ಪ್ರಸ್ತುತ ಆರ್ಥಿಕ ಸ್ಥಿಗತಿಯ ಬಗ್ಗೆಯೂ ಆ ವೇಳೆಯಲ್ಲಿ ಚರ್ಚಿಸಬಹುದು ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ.

ಶನಿವಾರ ಮಂಡನೆ ಆಗಲಿರುವ 2020ರ ಕೇಂದ್ರ ಬಜೆಟ್​ ಪೂರ್ವಭಾವಿಯಾಗಿ ಗುರುವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದರು. ಪ್ರಧಾನಿ ಮೋದಿ, ಹಿರಿಯ ಸಚಿವರುಗಳಾದ ಆನಂದ್ ಶರ್ಮಾ, ರಾಜನಾಥ್ ಸಿಂಗ್​, ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್​ನ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಇತರ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

party meeting ahead of Budget session
ಬಜೆಟ್​ ಪೂರ್ವಭಾವಿ ಸಭೆ

ಬಹುತೇಕ ಸದಸ್ಯರು ದೇಶದ ಹಿತಚಿಂತನೆ ಬಯಸಿ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ. ನಮಗೆ ನಿಮ್ಮ ಸಲಹೆಗಳು ಬೇಕು ಮತ್ತು ನಿಮ್ಮೆಲ್ಲರ ಸಲಹೆಯಂತೆ ನಾವು ಅಗತ್ಯವಾಗಿ ಆರ್ಥಿಕ ವಿದ್ಯಮಾನಗಳ ಕುರಿತು ಚರ್ಚಿಸಬೇಕಿದೆ ಎಂದರು.

party meeting ahead of Budget session
ಬಜೆಟ್​ ಪೂರ್ವಭಾವಿ ಸಭೆ

ಭಾರತ ಜಾಗತಿಕ ಸಮುದಾಯದ ಆಕರ್ಷಣ ತಾಣವಾಗಲು ಏನೆಲ್ಲ ಮಾಡಲು ಸಾಧ್ಯ ಎಂಬುದರತ್ತ ನಾವೆಲ್ಲರೂ ಗಮನಹರಿಸಬೇಕಿದೆ. ಈ ಬಜೆಟ್​ನಲ್ಲಿ, ಹೊಸ ವರ್ಷದ ಆರಂಭದಲ್ಲಿ ನಾವು ದೇಶದ ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಿದೆ ಎಂದು ಮೋದಿ ಹೇಳಿದರು.

ನವದೆಹಲಿ: ಕೇಂದ್ರ ಸರ್ಕಾರವು ಬಜೆಟ್​ ಅಧಿವೇಶನದಲ್ಲಿ ಎಲ್ಲ ವಿಧದ ಚರ್ಚೆಗಳಿಗೆ ಮುಕ್ತ ಅವಕಾಶ ನೀಡುತ್ತದೆ ಮತ್ತು ಸಂಸದರ ತಮ್ಮ ಬೇಡಿಕೆಗಳ ಜತೆಗೆ ಪ್ರಸ್ತುತ ಆರ್ಥಿಕ ಸ್ಥಿಗತಿಯ ಬಗ್ಗೆಯೂ ಆ ವೇಳೆಯಲ್ಲಿ ಚರ್ಚಿಸಬಹುದು ಎಂದು ಪ್ರಧಾನಿ ನರೇಂದ್ರ ಹೇಳಿದ್ದಾರೆ.

ಶನಿವಾರ ಮಂಡನೆ ಆಗಲಿರುವ 2020ರ ಕೇಂದ್ರ ಬಜೆಟ್​ ಪೂರ್ವಭಾವಿಯಾಗಿ ಗುರುವಾರ ಸರ್ವಪಕ್ಷಗಳ ಮುಖಂಡರ ಸಭೆ ಕರೆದಿದ್ದರು. ಪ್ರಧಾನಿ ಮೋದಿ, ಹಿರಿಯ ಸಚಿವರುಗಳಾದ ಆನಂದ್ ಶರ್ಮಾ, ರಾಜನಾಥ್ ಸಿಂಗ್​, ಪ್ರಹ್ಲಾದ್ ಜೋಶಿ ಮತ್ತು ಕಾಂಗ್ರೆಸ್​ನ ಗುಲಾಮ್ ನಬಿ ಆಜಾದ್, ಟಿಎಂಸಿಯ ಸುದೀಪ್ ಬಂಡೋಪಾಧ್ಯಾಯ ಇತರ ಪಕ್ಷಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

party meeting ahead of Budget session
ಬಜೆಟ್​ ಪೂರ್ವಭಾವಿ ಸಭೆ

ಬಹುತೇಕ ಸದಸ್ಯರು ದೇಶದ ಹಿತಚಿಂತನೆ ಬಯಸಿ ಪ್ರಸ್ತುತ ಆರ್ಥಿಕ ಸ್ಥಿತಿಗತಿಯ ಬಗ್ಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದಾರೆ. ನಾನು ಇದನ್ನು ಸ್ವಾಗತಿಸುತ್ತೇನೆ. ನಮಗೆ ನಿಮ್ಮ ಸಲಹೆಗಳು ಬೇಕು ಮತ್ತು ನಿಮ್ಮೆಲ್ಲರ ಸಲಹೆಯಂತೆ ನಾವು ಅಗತ್ಯವಾಗಿ ಆರ್ಥಿಕ ವಿದ್ಯಮಾನಗಳ ಕುರಿತು ಚರ್ಚಿಸಬೇಕಿದೆ ಎಂದರು.

party meeting ahead of Budget session
ಬಜೆಟ್​ ಪೂರ್ವಭಾವಿ ಸಭೆ

ಭಾರತ ಜಾಗತಿಕ ಸಮುದಾಯದ ಆಕರ್ಷಣ ತಾಣವಾಗಲು ಏನೆಲ್ಲ ಮಾಡಲು ಸಾಧ್ಯ ಎಂಬುದರತ್ತ ನಾವೆಲ್ಲರೂ ಗಮನಹರಿಸಬೇಕಿದೆ. ಈ ಬಜೆಟ್​ನಲ್ಲಿ, ಹೊಸ ವರ್ಷದ ಆರಂಭದಲ್ಲಿ ನಾವು ದೇಶದ ಆರ್ಥಿಕತೆಯನ್ನು ಸರಿಯಾದ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಬೇಕಿದೆ ಎಂದು ಮೋದಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.