ETV Bharat / business

ATMನಲ್ಲಿ ಹಣ ಬರದಿದ್ದರೆ ಗ್ರಾಹಕರಿಗೆ ದಿನಕ್ಕೆ ಸಿಗಲಿದೆ 100 ರೂ. ಪರಿಹಾರ: ಹೇಗೆ ಗೊತ್ತೆ?

ಎಟಿಎಂನಲ್ಲಿ ಹಣ ತೆಗೆಯುವಾಗ ಖಾತೆಯಿಂದ ಡೆಬಿಟ್​ ಆಗಿ ಹಣ ಸಿಗದೆ ಇದ್ದರೇ ಅಥವಾ ಕಡಿಮೆ ಬಂದರೇ ಗ್ರಾಹಕರು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಬ್ಯಾಂಕ್​ಗೆ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್​ ಟರ್ನ್​ ಅರೌಂಡ್​ ಟೈಮ್​ (ಟಿಎಟಿ) + 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ವಿಳಂಬವಾದರೆ ಪರಿಹಾರ ಮೊತ್ತವಾಗಿ ದಿನಕ್ಕೆ ₹ 100 ನೀಡಬೇಕು ಎಂದು ಆರ್​ಬಿಐ ಸೂಚಿಸಿದೆ.

author img

By

Published : Sep 26, 2019, 7:47 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ಖಾತೆಯಿಂದ ಹಣ ಕಡಿತವಾದರೂ ಎಟಿಎಂನಲ್ಲಿ ಹಣ ಸಿಗದೆ ಇದ್ದರೇ ಬ್ಯಾಂಕ್​ಗಳು ನಿಗದಿತ ಅವಧಿಯಲ್ಲಿ ವಿಫಲವಾದ ವಹಿವಾಟುಗಳನ್ನು ಪುರಸ್ಕರಿಸಬೇಕು. ತಪ್ಪಿದರೆ ದಿನಕ್ಕೆ ₹ 100ಯಂತೆ ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು ಆರ್​ಬಿಐ ಎಲ್ಲ ಬ್ಯಾಂಕ್​ಗಳಿಗೆ ಇತ್ತೀಚೆಗೆ ಎಚ್ಚರಿಕೆಯ ನಿರ್ದೇಶನ ನೀಡಿದೆ.

ಎಟಿಎಂನಲ್ಲಿ ಹಣ ತೆಗೆಯುವಾಗ ಎಷ್ಟೋ ಬಾರಿ ಗ್ರಾಹಕರ ಖಾತೆಯಿಂದ ಹಣ ಡೆಬಿಟ್​ ಆದರೂ ಹಣ ಬಂದಿರುವುದಿಲ್ಲ. 'ನೋ ಕ್ಯಾಶ್​' ಎಂಬ ಫಲಕದಿಂದ ಗ್ರಾಹಕರು ನಿರಾಸೆಯಿಂದ ಹಿಂದುರುಗಬೇಕಾಗುತ್ತದೆ. ಇಂತಹ ನಡೆಗಳನ್ನು ತಪ್ಪಿಸಬೇಕೆಂದು ಆರ್​ಬಿಐ ತನ್ನ ಸಹವರ್ತಿ ಬ್ಯಾಂಕ್​ಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ಎಟಿಎಂನಲ್ಲಿ ಹಣ ತೆಗೆಯುವಾಗ ಖಾತೆಯಿಂದ ಡೆಬಿಟ್​ ಆಗಿ ಹಣ ಸಿಗದೆ ಇದ್ದರೇ ಅಥವಾ ಕಡಿಮೆ ಬಂದರೆ ಗ್ರಾಹಕರು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಬ್ಯಾಂಕ್​ಗೆ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್​ ಟರ್ನ್​ ಅರೌಂಡ್​ ಟೈಮ್​ (ಟಿಎಟಿ) + 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ವಿಳಂಬವಾದರೆ ಪರಿಹಾರ ಮೊತ್ತವಾಗಿ ದಿನಕ್ಕೆ ₹ 100 ನೀಡಬೇಕು ಎಂದು ಸೂಚಿಸಿದೆ.

ಒಂದು ವೇಳೆ ಬ್ಯಾಂಕ್​ಗಳು ಪರಿಹಾರ ಮೊತ್ತ ನೀಡಲು ಅಥವಾ ನಿಗದಿತ ಸಮಯದಲ್ಲಿ ಪರಿಹರಿಸಲು ವಿಫಲವಾದರೇ ಗ್ರಾಹಕರು ಆರ್‌ಬಿಐನ ಬ್ಯಾಂಕಿಂಗ್ ಓಂಬುಡ್ಸ್​ಮನ್​ಗೆ (ಬ್ಯಾಂಕುಗಳಲ್ಲಿ ಇತ್ಯರ್ಥವಾಗದ ವಿಚಾರಗಳನ್ನು, ಬ್ಯಾಂಕ್‌ ಸೇವೆಗಳಲ್ಲಿ ತೊಡಕುಗಳ ಕುರಿತು ಬ್ಯಾಂಕಿಂಗ್‌ ಓಂಬುಡ್ಸ್‌ಮನ್‌ ಅವರಿಗೆ ದೂರು ನೀಡಿ ಪರಿಹಾರ ಪಡೆಯಬಹುದು) ದೂರು ದಾಖಲಿಸಬಹುದು. ದೂರಿನ ಮೇರೆಗೆ ಆರ್​ಬಿಐ ಬ್ಯಾಂಕ್​ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ.

ನವದೆಹಲಿ: ಖಾತೆಯಿಂದ ಹಣ ಕಡಿತವಾದರೂ ಎಟಿಎಂನಲ್ಲಿ ಹಣ ಸಿಗದೆ ಇದ್ದರೇ ಬ್ಯಾಂಕ್​ಗಳು ನಿಗದಿತ ಅವಧಿಯಲ್ಲಿ ವಿಫಲವಾದ ವಹಿವಾಟುಗಳನ್ನು ಪುರಸ್ಕರಿಸಬೇಕು. ತಪ್ಪಿದರೆ ದಿನಕ್ಕೆ ₹ 100ಯಂತೆ ಗ್ರಾಹಕರಿಗೆ ಪರಿಹಾರದ ಮೊತ್ತ ನೀಡಬೇಕು ಎಂದು ಆರ್​ಬಿಐ ಎಲ್ಲ ಬ್ಯಾಂಕ್​ಗಳಿಗೆ ಇತ್ತೀಚೆಗೆ ಎಚ್ಚರಿಕೆಯ ನಿರ್ದೇಶನ ನೀಡಿದೆ.

ಎಟಿಎಂನಲ್ಲಿ ಹಣ ತೆಗೆಯುವಾಗ ಎಷ್ಟೋ ಬಾರಿ ಗ್ರಾಹಕರ ಖಾತೆಯಿಂದ ಹಣ ಡೆಬಿಟ್​ ಆದರೂ ಹಣ ಬಂದಿರುವುದಿಲ್ಲ. 'ನೋ ಕ್ಯಾಶ್​' ಎಂಬ ಫಲಕದಿಂದ ಗ್ರಾಹಕರು ನಿರಾಸೆಯಿಂದ ಹಿಂದುರುಗಬೇಕಾಗುತ್ತದೆ. ಇಂತಹ ನಡೆಗಳನ್ನು ತಪ್ಪಿಸಬೇಕೆಂದು ಆರ್​ಬಿಐ ತನ್ನ ಸಹವರ್ತಿ ಬ್ಯಾಂಕ್​ಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ.

ಎಟಿಎಂನಲ್ಲಿ ಹಣ ತೆಗೆಯುವಾಗ ಖಾತೆಯಿಂದ ಡೆಬಿಟ್​ ಆಗಿ ಹಣ ಸಿಗದೆ ಇದ್ದರೇ ಅಥವಾ ಕಡಿಮೆ ಬಂದರೆ ಗ್ರಾಹಕರು ಲಿಖಿತ ರೂಪದಲ್ಲಿ ಸಂಬಂಧಪಟ್ಟ ಬ್ಯಾಂಕ್​ಗೆ ದೂರು ನೀಡಬೇಕು. ದೂರು ತೆಗೆದುಕೊಂಡ ಬ್ಯಾಂಕ್​ ಟರ್ನ್​ ಅರೌಂಡ್​ ಟೈಮ್​ (ಟಿಎಟಿ) + 5 ದಿನಗಳ ವಿನಾಯಿತಿಯೊಂದಿಗೆ ಆರು ದಿನಗಳ ಒಳಗೆ ದೂರುದಾರರ ಖಾತೆಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ವಿಳಂಬವಾದರೆ ಪರಿಹಾರ ಮೊತ್ತವಾಗಿ ದಿನಕ್ಕೆ ₹ 100 ನೀಡಬೇಕು ಎಂದು ಸೂಚಿಸಿದೆ.

ಒಂದು ವೇಳೆ ಬ್ಯಾಂಕ್​ಗಳು ಪರಿಹಾರ ಮೊತ್ತ ನೀಡಲು ಅಥವಾ ನಿಗದಿತ ಸಮಯದಲ್ಲಿ ಪರಿಹರಿಸಲು ವಿಫಲವಾದರೇ ಗ್ರಾಹಕರು ಆರ್‌ಬಿಐನ ಬ್ಯಾಂಕಿಂಗ್ ಓಂಬುಡ್ಸ್​ಮನ್​ಗೆ (ಬ್ಯಾಂಕುಗಳಲ್ಲಿ ಇತ್ಯರ್ಥವಾಗದ ವಿಚಾರಗಳನ್ನು, ಬ್ಯಾಂಕ್‌ ಸೇವೆಗಳಲ್ಲಿ ತೊಡಕುಗಳ ಕುರಿತು ಬ್ಯಾಂಕಿಂಗ್‌ ಓಂಬುಡ್ಸ್‌ಮನ್‌ ಅವರಿಗೆ ದೂರು ನೀಡಿ ಪರಿಹಾರ ಪಡೆಯಬಹುದು) ದೂರು ದಾಖಲಿಸಬಹುದು. ದೂರಿನ ಮೇರೆಗೆ ಆರ್​ಬಿಐ ಬ್ಯಾಂಕ್​ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.