ETV Bharat / business

21 ಸಾವಿರ ಫೇಕ್ ಅಕೌಂಟ್:​ ಗ್ರಾಹಕರಿಗೆ ಈ ಬ್ಯಾಂಕ್​ ಅಧಿಕಾರಿಗಳಿಂದಲೇ ಸಾವಿರಾರು ಕೋಟಿ ರೂ. ವಂಚನೆ!

ಮುಂಬೈ ಪೊಲೀಸರು ಆರ್ಥಿಕ ಅಪರಾಧಗಳ ತನಿಖಾ ದಳ(ಇಒಡಬ್ಲ್ಯು)ಕ್ಕೆ ಸಲ್ಲಿಸಿದ ದೂರಿನ ಅನ್ವಯ, ಈ ತನಿಖೆ ನಡೆಸಲಾಯಿತು. ಬ್ಯಾಂಕ್​ನ ನಿರ್ವಹಣೆಯ ನಿಷ್ಕ್ರಿಯ ಆಸ್ತಿಗಳನ್ನು ಮರೆಮಾಚಲಾಗಿದೆ. ಸಾಲಗಳ ವಿತರಿಸದೆ ಅಂದಾಜು 4,389 ಕೋಟಿ ರೂ.ಯಷ್ಟು (616.5 ಮಿಲಿಯನ್​ ಡಾಲರ್​) ನಷ್ಟಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಈ ಬ್ಯಾಂಕಿಂಗ್ ವಂಚನೆ ಪ್ರಕರಣದಿಂದ ಠೇವಣಿ ಮತ್ತು ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ವಂಚಿಸದಂತಾಗಿದೆ. ಬ್ಯಾಂಕ್ ಅಧ್ಯಕ್ಷ ವಾರಮ್ ಸಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಸೇರಿದಂತೆ ಬ್ಯಾಂಕ್​ನ ಇತರೆ ಅಧಿಕಾರಿಗಳ ಹೆಸರಗಳನ್ನು ದೂರಿನಲ್ಲಿ ನಮೂದಿಸಲಾಗಿದೆ.

author img

By

Published : Oct 2, 2019, 12:31 PM IST

ಸಾಂದರ್ಭಿಕ ಚಿತ್ರ

ಮುಂಬೈ: ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್​ನ (ಪಿಎನ್​ಬಿ) ಆಡಳಿತಾಧಿಕಾರಿಗಳು ಬ್ಯಾಂಕ್​ನ ನೈಜ ಸಾಲವನ್ನು ಮರೆಮಾಚಲು 21,000ಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಮುಂಬೈ ಪೊಲೀಸರು ಆರ್ಥಿಕ ಅಪರಾಧಗಳ ತನಿಖಾ ದಳ(ಇಒಡಬ್ಲ್ಯು)ಕ್ಕೆ ಸಲ್ಲಿಸಿದ ದೂರಿನ ಅನ್ವಯ, ಈ ತನಿಖೆ ನಡೆಸಲಾಗಿತ್ತು. ಬ್ಯಾಂಕ್​ನ ನಿರ್ವಹಣೆಯ ನಿಷ್ಕ್ರಿಯ ಆಸ್ತಿಗಳನ್ನು ಮರೆಮಾಚಲಾಗಿದೆ. ಸಾಲಗಳನ್ನು ವಿತರಿಸದೆ ಅಂದಾಜು 4,389 ಕೋಟಿ ರೂ.ಯಷ್ಟು (616.5 ಮಿಲಿಯನ್​ ಡಾಲರ್​) ನಷ್ಟಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಈ ಬ್ಯಾಂಕಿಂಗ್ ವಂಚನೆ ಪ್ರಕರಣದಿಂದ ಠೇವಣಿ ಮತ್ತು ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ವಂಚಿಸಿದಂತಾಗಿದೆ.

ಬ್ಯಾಂಕ್​ನ ನೈಜ ಹಣಕಾಸಿನ ಸ್ಥಿತಿ ಮರೆಮಾಚಲಾಗಿದೆ ಮತ್ತು ಹಣಕಾಸಿನ ವಹಿವಾಟುಗಳನ್ನು ದಾರಿ ತಪ್ಪಿಸುವ ಚಟುವಟಿಕೆಗಳು ನಡೆದಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಕಾಲ್ಪನಿಕ ಸಾಲ ಖಾತೆಗಳನ್ನು ಬ್ಯಾಂಕ್​ನ ಪ್ರಮುಖ ಹಣಕಾಸು ವ್ಯವಸ್ಥೆಯಲ್ಲಿ ನಮೂದಿಸದಿರುವುದು, ಅಪರಾಧದ ಪ್ರಮುಖ ಅಂಶವಾಗಿದೆ. 2018ರಲ್ಲಿ ಇದೇ ಮಾದರಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಸುಮಾರು 10 ಸಾವಿರ ಕೋಟಿ ರೂ.ಯಷ್ಟು ( 2 ಬಿಲಿಯನ್ ಡಾಲರ್​) ವಂಚನೆ ನಡೆದದ್ದು ಬಹಿರಂಗಗೊಂಡಿತ್ತು.

ಬ್ಯಾಂಕ್ ಅಧ್ಯಕ್ಷ ವಾರಮ್ ಸಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಸೇರಿದಂತೆ ಬ್ಯಾಂಕ್​ನ ಇತರೆ ಅಧಿಕಾರಿಗಳ ಹೆಸರಗಳನ್ನು ದೂರಿನಲ್ಲಿ ನಮೂದಿಸಲಾಗಿದೆ. ನಂಬಿಕೆಯ ಉಲ್ಲಂಘನೆ, ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿ ಆರೋಪ ಸಹ ಇವರ ವಿರುದ್ಧ ಕೇಳಿಬಂದಿದೆ.

ಮುಂಬೈ: ಪಂಜಾಬ್​ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್ ಲಿಮಿಟೆಡ್​ನ (ಪಿಎನ್​ಬಿ) ಆಡಳಿತಾಧಿಕಾರಿಗಳು ಬ್ಯಾಂಕ್​ನ ನೈಜ ಸಾಲವನ್ನು ಮರೆಮಾಚಲು 21,000ಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಷ್ಟಿಸಿದ್ದಾರೆ ಎಂಬ ಮಾಹಿತಿ ಬಹಿರಂಗವಾಗಿದೆ.

ಮುಂಬೈ ಪೊಲೀಸರು ಆರ್ಥಿಕ ಅಪರಾಧಗಳ ತನಿಖಾ ದಳ(ಇಒಡಬ್ಲ್ಯು)ಕ್ಕೆ ಸಲ್ಲಿಸಿದ ದೂರಿನ ಅನ್ವಯ, ಈ ತನಿಖೆ ನಡೆಸಲಾಗಿತ್ತು. ಬ್ಯಾಂಕ್​ನ ನಿರ್ವಹಣೆಯ ನಿಷ್ಕ್ರಿಯ ಆಸ್ತಿಗಳನ್ನು ಮರೆಮಾಚಲಾಗಿದೆ. ಸಾಲಗಳನ್ನು ವಿತರಿಸದೆ ಅಂದಾಜು 4,389 ಕೋಟಿ ರೂ.ಯಷ್ಟು (616.5 ಮಿಲಿಯನ್​ ಡಾಲರ್​) ನಷ್ಟಕ್ಕೆ ಕಾರಣವಾಗಿದೆ ಎಂಬುದು ತಿಳಿದುಬಂದಿದೆ. ಈ ಬ್ಯಾಂಕಿಂಗ್ ವಂಚನೆ ಪ್ರಕರಣದಿಂದ ಠೇವಣಿ ಮತ್ತು ಹೂಡಿಕೆದಾರರಿಗೆ ಸಾವಿರಾರು ಕೋಟಿ ರೂ. ವಂಚಿಸಿದಂತಾಗಿದೆ.

ಬ್ಯಾಂಕ್​ನ ನೈಜ ಹಣಕಾಸಿನ ಸ್ಥಿತಿ ಮರೆಮಾಚಲಾಗಿದೆ ಮತ್ತು ಹಣಕಾಸಿನ ವಹಿವಾಟುಗಳನ್ನು ದಾರಿ ತಪ್ಪಿಸುವ ಚಟುವಟಿಕೆಗಳು ನಡೆದಿವೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು. ಕಾಲ್ಪನಿಕ ಸಾಲ ಖಾತೆಗಳನ್ನು ಬ್ಯಾಂಕ್​ನ ಪ್ರಮುಖ ಹಣಕಾಸು ವ್ಯವಸ್ಥೆಯಲ್ಲಿ ನಮೂದಿಸದಿರುವುದು, ಅಪರಾಧದ ಪ್ರಮುಖ ಅಂಶವಾಗಿದೆ. 2018ರಲ್ಲಿ ಇದೇ ಮಾದರಿಯಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್​ನಿಂದ ಸುಮಾರು 10 ಸಾವಿರ ಕೋಟಿ ರೂ.ಯಷ್ಟು ( 2 ಬಿಲಿಯನ್ ಡಾಲರ್​) ವಂಚನೆ ನಡೆದದ್ದು ಬಹಿರಂಗಗೊಂಡಿತ್ತು.

ಬ್ಯಾಂಕ್ ಅಧ್ಯಕ್ಷ ವಾರಮ್ ಸಿಂಗ್ ಮತ್ತು ವ್ಯವಸ್ಥಾಪಕ ನಿರ್ದೇಶಕ ಜಾಯ್ ಥಾಮಸ್ ಸೇರಿದಂತೆ ಬ್ಯಾಂಕ್​ನ ಇತರೆ ಅಧಿಕಾರಿಗಳ ಹೆಸರಗಳನ್ನು ದೂರಿನಲ್ಲಿ ನಮೂದಿಸಲಾಗಿದೆ. ನಂಬಿಕೆಯ ಉಲ್ಲಂಘನೆ, ನಕಲಿ ಮತ್ತು ಸುಳ್ಳು ದಾಖಲೆಗಳ ಸೃಷ್ಟಿ ಆರೋಪ ಸಹ ಇವರ ವಿರುದ್ಧ ಕೇಳಿಬಂದಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.