ETV Bharat / business

ಪೇಟೆಂಟ್‌ ಇರುವ ಆಲೂಗಡ್ಡೆ ಬೆಳೆದ ಪ್ರಕರಣ, ಕೋರ್ಟ್​ ಹೊರಗೆ ಇತ್ಯರ್ಥಕ್ಕೆ ಪೆಪ್ಸಿಕೋ ಆಫರ್‌​ - undefined

ಬಡ ರೈತರನ್ನು ನ್ಯಾಯಾಲಯಕ್ಕೆ ಎಳೆದು ತಂದ ಪೆಪ್ಸಿಕೋ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಸಂಸ್ಥೆಯು ನ್ಯಾಯಾಲಯದ ಹೊರಗೆ ವಿವಾದ ಬಗೆಹರಿಸಿಕೊಳ್ಳಲು ಮುಂದಾಗಿದೆ.

ಸಾಂದರ್ಭಿಕ ಚಿತ್ರ
author img

By

Published : Apr 27, 2019, 6:17 PM IST

ಅಹಮದಾಬಾದ್​: ತನ್ನ ಪರವಾನಿಗೆ ಇಲ್ಲದೆ ಪೇಟೆಂಟ್​ ಹೊಂದಿರುವ ಆಲೂಗಡ್ಡೆ ಬೆಳೆದಿದ್ದಾರೆ ಎಂದು ಗುಜರಾತ್​ನ ನಾಲ್ವರು ರೈತರ ವಿರುದ್ಧ ದಾವೆ ಹೂಡಿದ್ದ ಪೆಪ್ಸಿಕೋ, ಈಗ ಈ ಪ್ರಕರಣವನ್ನು ಕೋರ್ಟ್​ನ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಿದ್ದವಿರುವುದಾಗಿ ಹೇಳಿದೆ.

ಬಡ ರೈತರನ್ನು ನ್ಯಾಯಾಲಯಕ್ಕೆ ಎಳೆದು ತಂದ ಪೆಪ್ಸಿಕೋ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕಂಪೆನಿಯು ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದೆ.

ಗುಜರಾತ್​ನ ಸಬರ್​ಕಾಂತಾದಲ್ಲಿ ನಾಲ್ವರು ರೈತರು ನೋಂದಾಯಿತ ಎಫ್​ಎಲ್​- 202 ಆಲೂಗಡ್ಡೆ ತಳಿಯನ್ನು ಅಕ್ರಮವಾಗಿ ಬೆಳೆಯುತ್ತಿದ್ದಾರೆ ಎಂದು ಆರೋಪಿಸಿದ ಪೆಪ್ಸಿಕೋ ಇಂಡಿಯಾ, ಏಪ್ರಿಲ್ 11 ರಂದು ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಪರಿಹಾರ ಮೊತ್ತವಾಗಿ ಪ್ರತೀ ರೈತರು ತಲಾ 1.05 ಕೋಟಿ ರೂ. ತೆರಬೇಕು ಮತ್ತು ರೈತರು ಆಲೂಗಡ್ಡೆ ಬೆಳೆಯಲು ಕಂಪನಿಯಿಂದ ಬೀಜ ಖರೀದಿಸದ ಕಾರಣಕ್ಕೆ ತೀವ್ರ ನಷ್ಟವಾಗಿದೆ ಎಂದು ಅದಕ್ಕೆ ಸ್ಪಷ್ಟನೆಯನ್ನೂ ನೀಡಿತ್ತು.

ಈ ಕುರಿತು ವಾಣಿಜ್ಯ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡು, ವಿವಾದವನ್ನು ಜವಾಬ್ದಾರಿಯುತವಾಗಿ ಇತ್ಯರ್ಥ ಮಾಡಿಕೊಳ್ಳುವಂತೆ ಪೆಪ್ಸಿಕೋಗೆ ಸೂಚಿಸಿತ್ತು.

ಮುಂದಿನ ವಿಚಾರಣೆಯು ಜೂನ್​ 12ರಂದು ನಡೆಯಲಿದ್ದು ಅಲ್ಲಿಯವರೆಗೂ ಪೇಟೆಂಟ್​ ಬೀಜಗಳನ್ನು ಬೆಳೆಯದಂತೆ ರೈತರಿಗೆ ನ್ಯಾಯಮೂರ್ತಿ ಎಂ.ಸಿ ತ್ಯಾಗಿ ಆದೇಶಿಸಿದ್ದಾರೆ.

ಅಹಮದಾಬಾದ್​: ತನ್ನ ಪರವಾನಿಗೆ ಇಲ್ಲದೆ ಪೇಟೆಂಟ್​ ಹೊಂದಿರುವ ಆಲೂಗಡ್ಡೆ ಬೆಳೆದಿದ್ದಾರೆ ಎಂದು ಗುಜರಾತ್​ನ ನಾಲ್ವರು ರೈತರ ವಿರುದ್ಧ ದಾವೆ ಹೂಡಿದ್ದ ಪೆಪ್ಸಿಕೋ, ಈಗ ಈ ಪ್ರಕರಣವನ್ನು ಕೋರ್ಟ್​ನ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಸಿದ್ದವಿರುವುದಾಗಿ ಹೇಳಿದೆ.

ಬಡ ರೈತರನ್ನು ನ್ಯಾಯಾಲಯಕ್ಕೆ ಎಳೆದು ತಂದ ಪೆಪ್ಸಿಕೋ ನಡೆಗೆ ದೇಶಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕಂಪೆನಿಯು ನ್ಯಾಯಾಲಯದ ಹೊರಗೆ ವಿವಾದ ಇತ್ಯರ್ಥಪಡಿಸಿಕೊಳ್ಳಲು ಮುಂದಾಗಿದೆ.

ಗುಜರಾತ್​ನ ಸಬರ್​ಕಾಂತಾದಲ್ಲಿ ನಾಲ್ವರು ರೈತರು ನೋಂದಾಯಿತ ಎಫ್​ಎಲ್​- 202 ಆಲೂಗಡ್ಡೆ ತಳಿಯನ್ನು ಅಕ್ರಮವಾಗಿ ಬೆಳೆಯುತ್ತಿದ್ದಾರೆ ಎಂದು ಆರೋಪಿಸಿದ ಪೆಪ್ಸಿಕೋ ಇಂಡಿಯಾ, ಏಪ್ರಿಲ್ 11 ರಂದು ಕೋರ್ಟ್‌ನಲ್ಲಿ ದಾವೆ ಹೂಡಿತ್ತು. ಪರಿಹಾರ ಮೊತ್ತವಾಗಿ ಪ್ರತೀ ರೈತರು ತಲಾ 1.05 ಕೋಟಿ ರೂ. ತೆರಬೇಕು ಮತ್ತು ರೈತರು ಆಲೂಗಡ್ಡೆ ಬೆಳೆಯಲು ಕಂಪನಿಯಿಂದ ಬೀಜ ಖರೀದಿಸದ ಕಾರಣಕ್ಕೆ ತೀವ್ರ ನಷ್ಟವಾಗಿದೆ ಎಂದು ಅದಕ್ಕೆ ಸ್ಪಷ್ಟನೆಯನ್ನೂ ನೀಡಿತ್ತು.

ಈ ಕುರಿತು ವಾಣಿಜ್ಯ ನ್ಯಾಯಾಲಯ ವಿಚಾರಣೆಗೆ ಕೈಗೆತ್ತಿಕೊಂಡು, ವಿವಾದವನ್ನು ಜವಾಬ್ದಾರಿಯುತವಾಗಿ ಇತ್ಯರ್ಥ ಮಾಡಿಕೊಳ್ಳುವಂತೆ ಪೆಪ್ಸಿಕೋಗೆ ಸೂಚಿಸಿತ್ತು.

ಮುಂದಿನ ವಿಚಾರಣೆಯು ಜೂನ್​ 12ರಂದು ನಡೆಯಲಿದ್ದು ಅಲ್ಲಿಯವರೆಗೂ ಪೇಟೆಂಟ್​ ಬೀಜಗಳನ್ನು ಬೆಳೆಯದಂತೆ ರೈತರಿಗೆ ನ್ಯಾಯಮೂರ್ತಿ ಎಂ.ಸಿ ತ್ಯಾಗಿ ಆದೇಶಿಸಿದ್ದಾರೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.