ETV Bharat / business

ಹರಿದ್ವಾರ ಕುಂಭಮೇಳ ಸಂಭ್ರಮಕ್ಕೆ ಕೋವಿಡ್ ಅಡ್ಡಿ: ರೈಲು ಸಂಚಾರದಲ್ಲಿ ಮಹತ್ವದ ಬದಲಾವಣೆ

author img

By

Published : Apr 3, 2021, 7:13 PM IST

ಏಪ್ರಿಲ್ 12 ರಿಂದ 14ರವರೆಗೆ ಕುಂಭಮೇಳದಲ್ಲಿ ಶಾಹಿ ಸ್ನಾನ್ ಕಾರಣ ಹರಿದ್ವಾರದ ರೈಲ್ವೆ ನಿಲ್ದಾಣಕ್ಕೆ ರೈಲುಗಳು ಬರುವುದಿಲ್ಲ. ಹತ್ತಿರದ ಜ್ವಾಲಾಪುರ, ರೂರ್ಕಿ ಮತ್ತು ಲಕ್ಸಾರ್ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಅಲ್ಲಿಂದ ಶಟಲ್ ಬಸ್​ಗಳ ಮೂಲಕ ಸಾಗಬೇಕು. ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಕುಂಭವನ್ನು 30 ದಿನಗಳಿಗೆ ಮಿತಿಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

Kumbh Mela
Kumbh Mela

ಹರಿದ್ವಾರ: ಕೋವಿಡ್ -19 ಉಲ್ಬಣದ ಮಧ್ಯೆ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಏಪ್ರಿಲ್ 11ರಿಂದ 14ರ ನಡುವೆ ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಯಾವುದೇ ರೈಲುಗಳನ್ನು ನಿಲ್ಲಿಸದಿರಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಎರಡನೇ ಮತ್ತು ಮೂರನೇ ಶಾಹಿ ಸ್ನಾನ್ ಕ್ರಮವಾಗಿ ಏಪ್ರಿಲ್ 12 ಮತ್ತು ಏಪ್ರಿಲ್ 14ರಂದು ನಡೆಯಲಿದೆ. ಏಪ್ರಿಲ್ 12 ರಿಂದ 14ರವರೆಗೆ ಕುಂಭಮೇಳದಲ್ಲಿ ಶಾಹಿ ಸ್ನಾನ್ ಕಾರಣ ಹರಿದ್ವಾರದ ರೈಲ್ವೆ ನಿಲ್ದಾಣಕ್ಕೆ ರೈಲುಗಳು ಬರುವುದಿಲ್ಲ. ಹತ್ತಿರದ ಜ್ವಾಲಾಪುರ, ರೂರ್ಕಿ ಮತ್ತು ಲಕ್ಸಾರ್ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಅಲ್ಲಿಂದ ಶಟಲ್ ಬಸ್​ಗಳ ಮೂಲಕ ಸಾಗಬೇಕು ಎಸ್ಪಿ ಜಿಆರ್​ಪಿ ಟಿಸಿ ಮಂಜುನಾಥ್ ಹೇಳಿದರು.

ಯಾತ್ರಾರ್ಥಿಗಳಿಗೆ ಮತ್ತಷ್ಟು ಪ್ರಯಾಣ ಸುಲಭಗೊಳಿಸುವ ಉದ್ದೇಶದಿಂದ ಹರಿದ್ವಾರಕ್ಕೆ ಈಗಿರುವ ಸೇವೆಗಳಿಗೆ ಹೆಚ್ಚುವರಿಯಾಗಿ ಇನ್ನೂ 12 ಜೋಡಿ ಕುಂಭಮೇಳ ವಿಶೇಷಗಳನ್ನು ನಿರ್ವಹಿಸಲಾಗುತ್ತಿದೆ ಎಂದು ರೈಲ್ವೆ ಘೋಷಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಇದನ್ನೂ ಓದಿ: ದುಬಾರಿ ಗಿಫ್ಟ್​ ಕೊಟ್ಟರೆ ತೆರಿಗೆ ಕಟ್ಟಬೇಕಾ? ಅದು ಭರಿಸುವುದಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್​

ಹರಿದ್ವಾರಕ್ಕೆ ತೆರಳುವ 15 ಜೋಡಿ ರೈಲುಗಳನ್ನು ಸಹ ಯಾತ್ರಾರ್ಥಿಗಳಿಗೆ ಹೆಚ್ಚುವರಿ ವಸತಿ ಸೌಕರ್ಯಗಳನ್ನು ಹೆಚ್ಚಿಸಲು ಹೆಚ್ಚಿಸಲಾಯಿತು. ಹರಿದ್ವಾರ್ ನಿಲ್ದಾಣದಿಂದ ಪ್ರಯಾಣಿಕರಿಗೆ ವಿವಿಧ ಸ್ಥಳಗಳಿಗೆ ಟಿಕೆಟ್ ಕಾಯ್ದಿರಿಸಲು ರೈಲ್ವೆ ನಾಲ್ಕು ವಿಭಿನ್ನ ಬಣ್ಣದ ಕೋಡೆ ನಿರ್ಮಿಸಿತ್ತು. ನಿಲ್ದಾಣದಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಲು ರೈಲ್ವೆ ನಿರ್ಧರಿಸಿದೆ.

ಕುಂಭಮೇಳ 2021ಕ್ಕಿಂತ ಮುಂಚಿತವಾಗಿ ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಹತ್ತಿರದ ಎಲ್ಲಾ ರೈಲ್ವೆ ನಿಲ್ದಾಣಗಳನ್ನು ಸಿಸಿಟಿವಿ ಮೂಲಕ ಸಂಪರ್ಕಿಸಲಾಗಿದೆ. ಅವುಗಳ ಫೀಡ್ ನಿಯಂತ್ರಣ ಕೊಠಡಿಯಲ್ಲಿ ಸ್ಟ್ರೀಮ್ ಮಾಡಲಾಗಿದೆ. ಕೇಂದ್ರದಲ್ಲಿ ದೂರವಾಣಿ ಮಾರ್ಗ ಸಹ ಸ್ಥಾಪಿಸಲಾಗಿದೆ ಎಂದು ಕುಂಭಮೇಳ ಆಡಳಿತವು ಈ ಹಿಂದೆ ತಿಳಿಸಿತ್ತು.

ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಕುಂಭವನ್ನು 30 ದಿನಗಳಿಗೆ ಮಿತಿಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

ಹರಿದ್ವಾರ: ಕೋವಿಡ್ -19 ಉಲ್ಬಣದ ಮಧ್ಯೆ ಪ್ರಯಾಣಿಕರ ದಟ್ಟಣೆ ನಿರ್ವಹಣೆಗೆ ಏಪ್ರಿಲ್ 11ರಿಂದ 14ರ ನಡುವೆ ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಯಾವುದೇ ರೈಲುಗಳನ್ನು ನಿಲ್ಲಿಸದಿರಲು ಭಾರತೀಯ ರೈಲ್ವೆ ನಿರ್ಧರಿಸಿದೆ.

ಎರಡನೇ ಮತ್ತು ಮೂರನೇ ಶಾಹಿ ಸ್ನಾನ್ ಕ್ರಮವಾಗಿ ಏಪ್ರಿಲ್ 12 ಮತ್ತು ಏಪ್ರಿಲ್ 14ರಂದು ನಡೆಯಲಿದೆ. ಏಪ್ರಿಲ್ 12 ರಿಂದ 14ರವರೆಗೆ ಕುಂಭಮೇಳದಲ್ಲಿ ಶಾಹಿ ಸ್ನಾನ್ ಕಾರಣ ಹರಿದ್ವಾರದ ರೈಲ್ವೆ ನಿಲ್ದಾಣಕ್ಕೆ ರೈಲುಗಳು ಬರುವುದಿಲ್ಲ. ಹತ್ತಿರದ ಜ್ವಾಲಾಪುರ, ರೂರ್ಕಿ ಮತ್ತು ಲಕ್ಸಾರ್ ನಿಲ್ದಾಣಗಳಲ್ಲಿ ರೈಲುಗಳು ನಿಲ್ಲುತ್ತವೆ. ಅಲ್ಲಿಂದ ಶಟಲ್ ಬಸ್​ಗಳ ಮೂಲಕ ಸಾಗಬೇಕು ಎಸ್ಪಿ ಜಿಆರ್​ಪಿ ಟಿಸಿ ಮಂಜುನಾಥ್ ಹೇಳಿದರು.

ಯಾತ್ರಾರ್ಥಿಗಳಿಗೆ ಮತ್ತಷ್ಟು ಪ್ರಯಾಣ ಸುಲಭಗೊಳಿಸುವ ಉದ್ದೇಶದಿಂದ ಹರಿದ್ವಾರಕ್ಕೆ ಈಗಿರುವ ಸೇವೆಗಳಿಗೆ ಹೆಚ್ಚುವರಿಯಾಗಿ ಇನ್ನೂ 12 ಜೋಡಿ ಕುಂಭಮೇಳ ವಿಶೇಷಗಳನ್ನು ನಿರ್ವಹಿಸಲಾಗುತ್ತಿದೆ ಎಂದು ರೈಲ್ವೆ ಘೋಷಿಸಿದ ಒಂದು ತಿಂಗಳ ನಂತರ ಈ ಬೆಳವಣಿಗೆ ಸಂಭವಿಸಿದೆ.

ಇದನ್ನೂ ಓದಿ: ದುಬಾರಿ ಗಿಫ್ಟ್​ ಕೊಟ್ಟರೆ ತೆರಿಗೆ ಕಟ್ಟಬೇಕಾ? ಅದು ಭರಿಸುವುದಾರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್​

ಹರಿದ್ವಾರಕ್ಕೆ ತೆರಳುವ 15 ಜೋಡಿ ರೈಲುಗಳನ್ನು ಸಹ ಯಾತ್ರಾರ್ಥಿಗಳಿಗೆ ಹೆಚ್ಚುವರಿ ವಸತಿ ಸೌಕರ್ಯಗಳನ್ನು ಹೆಚ್ಚಿಸಲು ಹೆಚ್ಚಿಸಲಾಯಿತು. ಹರಿದ್ವಾರ್ ನಿಲ್ದಾಣದಿಂದ ಪ್ರಯಾಣಿಕರಿಗೆ ವಿವಿಧ ಸ್ಥಳಗಳಿಗೆ ಟಿಕೆಟ್ ಕಾಯ್ದಿರಿಸಲು ರೈಲ್ವೆ ನಾಲ್ಕು ವಿಭಿನ್ನ ಬಣ್ಣದ ಕೋಡೆ ನಿರ್ಮಿಸಿತ್ತು. ನಿಲ್ದಾಣದಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಲು ರೈಲ್ವೆ ನಿರ್ಧರಿಸಿದೆ.

ಕುಂಭಮೇಳ 2021ಕ್ಕಿಂತ ಮುಂಚಿತವಾಗಿ ಹರಿದ್ವಾರ ರೈಲ್ವೆ ನಿಲ್ದಾಣದಲ್ಲಿ ಕೇಂದ್ರೀಕೃತ ನಿಯಂತ್ರಣ ಕೊಠಡಿ ಸ್ಥಾಪಿಸಲಾಗಿದೆ. ಹತ್ತಿರದ ಎಲ್ಲಾ ರೈಲ್ವೆ ನಿಲ್ದಾಣಗಳನ್ನು ಸಿಸಿಟಿವಿ ಮೂಲಕ ಸಂಪರ್ಕಿಸಲಾಗಿದೆ. ಅವುಗಳ ಫೀಡ್ ನಿಯಂತ್ರಣ ಕೊಠಡಿಯಲ್ಲಿ ಸ್ಟ್ರೀಮ್ ಮಾಡಲಾಗಿದೆ. ಕೇಂದ್ರದಲ್ಲಿ ದೂರವಾಣಿ ಮಾರ್ಗ ಸಹ ಸ್ಥಾಪಿಸಲಾಗಿದೆ ಎಂದು ಕುಂಭಮೇಳ ಆಡಳಿತವು ಈ ಹಿಂದೆ ತಿಳಿಸಿತ್ತು.

ಸಾಂಕ್ರಾಮಿಕ ರೋಗದಿಂದಾಗಿ ಈ ವರ್ಷದ ಕುಂಭವನ್ನು 30 ದಿನಗಳಿಗೆ ಮಿತಿಗೊಳಿಸಲು ಉತ್ತರಾಖಂಡ ಸರ್ಕಾರ ನಿರ್ಧರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.