ETV Bharat / business

ಗ್ರಾಹಕರೇ ಗಮನಿಸಿ: ಈ ತಿಂಗಳಲ್ಲಿ ಒಂದು ದಿನ ಬ್ಯಾಂಕ್ ಸೇವೆ ಬಂದ್

author img

By

Published : Oct 18, 2019, 5:31 PM IST

ಎಐಬಿಇಎ ಮತ್ತು ಬಿಇಎಫ್‌ಐ ಅಕ್ಟೋಬರ್ 22ರ ಬೆಳಿಗ್ಗೆ 6 ರಿಂದ ಅಕ್ಟೋಬರ್ 23ರವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್​ಗಳ ಸಂಘಕ್ಕೆ ನೋಟಿಸ್ ಮೂಲಕ ತಿಳಿಸಿವೆ. ಬ್ಯಾಂಕ್​ಗಳ ವಿಲೀನದ ವಿರುದ್ಧ ಎರಡು ಬ್ಯಾಂಕ್ ಒಕ್ಕೂಟಗಳು ಮಾತ್ರ ಮುಷ್ಕರ ನಡೆಸುವುದರಿಂದ ಇದರ ಪರಿಣಾಮ ಅಷ್ಟಾಗಿ ಬೀರದು ಎಂದು ಎಸ್‌ಬಿಐ ಅಂದಾಜಿಸಿದೆ. ಮುಷ್ಕರವು ಕಾರ್ಯರೂಪಕ್ಕೆ ಬಂದರೆ ಬ್ಯಾಂಕ್​ ಶಾಖೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.

ಸಾಂದರ್ಭಿಕ ಚಿತ್ರ

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳ ವಿಲೀನ ವಿರೋಧಿಸಿ ಎರಡು ಬ್ಯಾಂಕ್ ನೌಕರರ ಸಂಘಟನೆಗಳು ಒಂದು ದಿನ ರಾಷ್ಟ್ರವ್ಯಾ​ಪಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ) ಅಕ್ಟೋಬರ್ 22ರ ಬೆಳಗ್ಗೆ 6 ರಿಂದ ಅಕ್ಟೋಬರ್ 23ರವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್​ಗಳ ಸಂಘಕ್ಕೆ ನೋಟಿಸ್ ಮೂಲಕ ತಿಳಿಸಿವೆ.

ಬ್ಯಾಂಕ್​ಗಳ ವಿಲೀನದ ವಿರುದ್ಧ ಎರಡು ಬ್ಯಾಂಕ್ ಒಕ್ಕೂಟಗಳು ಮಾತ್ರ ಮುಷ್ಕರ ನಡೆಸುವುದರಿಂದ ಇದರ ಪರಿಣಾಮ ಅಷ್ಟಾಗಿ ಬೀರದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಂದಾಜಿಸಿದೆ. ಮತ್ತೊಂದೆಡೆ, ಬ್ಯಾಂಕ್ ಆಫ್ ಬರೋಡಾ, ಮುಷ್ಕರ ದಿನದಂದು ತನ್ನ ಶಾಖೆಗಳು ಮತ್ತು ಇತರ ಕಚೇರಿಗಳನ್ನು ಸುಗಮವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದೆ. ಮುಷ್ಕರವು ಕಾರ್ಯರೂಪಕ್ಕೆ ಬಂದರೆ ಬ್ಯಾಂಕ್​ ಶಾಖೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.

ಪ್ರತಿಭಟನೆ ಅವಧಿಯಲ್ಲಿ ಬ್ಯಾಂಕ್​ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಲಭಿಸುವುದಿಲ್ಲ. ಅಕ್ಟೋಬರ್​ 22ಕ್ಕೂ ಮೊದಲೇ ಬ್ಯಾಂಕಿಂಗ್​ ಮತ್ತು ಹಣಕಾಸು ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಹಣ ಇರಿಸಿಕೊಳ್ಳುವಿಕೆ, ಹಣ ಪಾವತಿ, ಮನಿ ಟ್ರಾನ್ಸ್​​ಫರ್​, ಸಾಲದ ಕಂತು ಪಾವತಿ ಸೇರಿದಂತೆ ಇತರೆ ಕೆಲಸಗಳನ್ನು ಪ್ರತಿಭಟನೆಗೂ ಮುನ್ನ ಮುಗಿಸಿಕೊಳ್ಳುವುದು ಉತ್ತಮ.

ನವದೆಹಲಿ: ಸಾರ್ವಜನಿಕ ವಲಯದ ಬ್ಯಾಂಕ್​ಗಳ ವಿಲೀನ ವಿರೋಧಿಸಿ ಎರಡು ಬ್ಯಾಂಕ್ ನೌಕರರ ಸಂಘಟನೆಗಳು ಒಂದು ದಿನ ರಾಷ್ಟ್ರವ್ಯಾ​ಪಿ ಮುಷ್ಕರಕ್ಕೆ ಕರೆ ನೀಡಿದ್ದು, ಈ ದಿನ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯ ಉಂಟಾಗಲಿದೆ.

ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ (ಎಐಬಿಇಎ) ಮತ್ತು ಬ್ಯಾಂಕ್ ಎಂಪ್ಲಾಯೀಸ್ ಫೆಡರೇಷನ್ ಆಫ್ ಇಂಡಿಯಾ (ಬಿಇಎಫ್‌ಐ) ಅಕ್ಟೋಬರ್ 22ರ ಬೆಳಗ್ಗೆ 6 ರಿಂದ ಅಕ್ಟೋಬರ್ 23ರವರೆಗೆ ಬ್ಯಾಂಕ್ ಮುಷ್ಕರ ನಡೆಸುವುದಾಗಿ ಭಾರತೀಯ ಬ್ಯಾಂಕ್​ಗಳ ಸಂಘಕ್ಕೆ ನೋಟಿಸ್ ಮೂಲಕ ತಿಳಿಸಿವೆ.

ಬ್ಯಾಂಕ್​ಗಳ ವಿಲೀನದ ವಿರುದ್ಧ ಎರಡು ಬ್ಯಾಂಕ್ ಒಕ್ಕೂಟಗಳು ಮಾತ್ರ ಮುಷ್ಕರ ನಡೆಸುವುದರಿಂದ ಇದರ ಪರಿಣಾಮ ಅಷ್ಟಾಗಿ ಬೀರದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಂದಾಜಿಸಿದೆ. ಮತ್ತೊಂದೆಡೆ, ಬ್ಯಾಂಕ್ ಆಫ್ ಬರೋಡಾ, ಮುಷ್ಕರ ದಿನದಂದು ತನ್ನ ಶಾಖೆಗಳು ಮತ್ತು ಇತರ ಕಚೇರಿಗಳನ್ನು ಸುಗಮವಾಗಿ ನಿರ್ವಹಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದೆ. ಮುಷ್ಕರವು ಕಾರ್ಯರೂಪಕ್ಕೆ ಬಂದರೆ ಬ್ಯಾಂಕ್​ ಶಾಖೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಬಹುದು.

ಪ್ರತಿಭಟನೆ ಅವಧಿಯಲ್ಲಿ ಬ್ಯಾಂಕ್​ಗಳ ಯಾವುದೇ ಸೇವೆಗಳು ಸಾರ್ವಜನಿಕರಿಗೆ ಲಭಿಸುವುದಿಲ್ಲ. ಅಕ್ಟೋಬರ್​ 22ಕ್ಕೂ ಮೊದಲೇ ಬ್ಯಾಂಕಿಂಗ್​ ಮತ್ತು ಹಣಕಾಸು ಕೆಲಸಗಳನ್ನು ಮುಗಿಸಿಕೊಳ್ಳುವುದು ಉತ್ತಮ. ಅಗತ್ಯವಾದ ಹಣ ಇರಿಸಿಕೊಳ್ಳುವಿಕೆ, ಹಣ ಪಾವತಿ, ಮನಿ ಟ್ರಾನ್ಸ್​​ಫರ್​, ಸಾಲದ ಕಂತು ಪಾವತಿ ಸೇರಿದಂತೆ ಇತರೆ ಕೆಲಸಗಳನ್ನು ಪ್ರತಿಭಟನೆಗೂ ಮುನ್ನ ಮುಗಿಸಿಕೊಳ್ಳುವುದು ಉತ್ತಮ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.