ETV Bharat / business

ಕೊರೊನಾ ಎಫೆಕ್ಟ್​​​ನಿಂದ ಉದ್ಯೋಗ ಕಳೆದುಕೊಂಡವರಲ್ಲಿ ಯುವಕರ ಪಾಲೇ ಹೆಚ್ಚು: ಸಿಎಂಐಇ

author img

By

Published : Aug 28, 2020, 11:58 AM IST

ಸಿಎಂಐಇ ದತ್ತಾಂಶವು ಭಾರತದಲ್ಲಿ 20ವರ್ಷ ಮತ್ತು 29 ವರ್ಷ ವಯಸ್ಸಿನ ದುಡಿಯುವ ಜನರು, ಜುಲೈ 2020ರವರೆಗೆ ದೇಶದ ಒಟ್ಟು ಉದ್ಯೋಗ ನಷ್ಟದಲ್ಲಿ ಶೇ. 81ರಷ್ಟು ಯುವಕರು ಉದ್ಯೋಗ ಕಳೆದುಕೊಂಡಿದ್ದಾರೆ. ಏಕೆಂದರೆ ಆರ್ಥಿಕತೆಯು ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸಾಗುತ್ತಿರುವ ಕಾರಣ ಉದ್ಯೋಗ ಕಡಿತ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಸಂಸ್ಥೆಯೊಂದು ಹೇಳಿದೆ.

ನಿರುದ್ಯೋಗದಲ್ಲಿ ಯುವಕರ ಪಾಲು ಹೆಚ್ಚು
ನಿರುದ್ಯೋಗದಲ್ಲಿ ಯುವಕರ ಪಾಲು ಹೆಚ್ಚು

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿ ಭಾರತದ ಯುವ ದುಡಿಯುವ ಜನಸಂಖ್ಯೆ, ಅದರಲ್ಲೂ 20ರ ಹರೆಯದವರು ಆರ್ಥಿಕತೆಯಲ್ಲಿ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಇದು ಅತಿದೊಡ್ಡ ಆಘಾತವಾಗಿದೆ ಎಂದು ಇಂಡಿಪೆಂಡೆಂಟ್​ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ. ಲಿಮಿಟೆಡ್ ಹೇಳಿದೆ.

ಸಿಎಂಐಇ ದತ್ತಾಂಶವು ಭಾರತದಲ್ಲಿ 20 ವರ್ಷ ಮತ್ತು 29 ವರ್ಷ ವಯಸ್ಸಿನ ದುಡಿಯುವ ಜನರು, ಜುಲೈ 2020ರವರೆಗೆ ದೇಶದ ಒಟ್ಟು ಉದ್ಯೋಗ ನಷ್ಟದಲ್ಲಿ ಶೇ. 81ರಷ್ಟಿದ್ದಾರೆ ಎಂದು ಹೇಳುತ್ತದೆ. ಏಕೆಂದರೆ ಆರ್ಥಿಕತೆಯು ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ.

ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್, ಲಾಕ್‌ಡೌನ್ ಅವಧಿಯ ನಂತರ ಕಾರ್ಮಿಕರ ಭಾಗವಹಿಸುವಿಕೆಯ ದರದಲ್ಲಿ ತೀವ್ರ ಏರಿಕೆಯಾದರೂ ಸಹ ದೇಶದಲ್ಲಿ ನಿರುದ್ಯೋಗ ದರವು ಮುಂದುವರೆದಿದೆ ಎಂದಿದ್ದಾರೆ.

ಮೇ ತಿಂಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಸಣ್ಣ ಮಟ್ಟದಲ್ಲಿ ಸುಧಾರಣೆಯಾಗಿದೆ. ಆದರೆ ಇದು ಗಮನಾರ್ಹ ಸುಧಾರಣೆ ಎಂದರು. ಜೂನ್​ನಲ್ಲಿ ಶೇ. 11ರಷ್ಟು ನಿರುದ್ಯೋಗ ದರವು ಲಾಕ್​ಡೌನ್​ ಮುಂಚಿನ ಶೇ. 8ಕ್ಕಿಂತ ಕಡಿಮೆ ದರಕ್ಕೆ ಹೋಲಿಸಿದರೆ ಸಾಕಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಯುವಜನರು ಉದ್ಯೋಗ ಕಳೆದುಕೊಳ್ಳುವ ಹಿಂದಿನ ಕಾರಣಗಳು

ನಿಧಾನಗತಿಯ ಆರ್ಥಿಕತೆ ಕಾರ್ಮಿಕರಿಗೆ ಕಡಿಮೆ ಬೇಡಿಕೆಯನ್ನು ಉಂಟುಮಾಡುತ್ತದೆ. ಉದ್ಯಮಗಳು ಮೊದಲಿಗಿಂತ ಕಡಿಮೆ ವಿಸ್ತರಿಸುತ್ತಿರುವುದರಿಂದ ಅವು ಹೆಚ್ಚುವರಿ ಕಾರ್ಮಿಕರಿಗೆ ಬೇಡಿಕೆಯನ್ನು ಕಡಿಮೆ ಮಅಡಿವೆ ಎಂದು ಸಿಎಂಐಇ ಗಮನಿಸಿದೆ.

"ಕಾರ್ಮಿಕರ ಹೆಚ್ಚುವರಿ ಬೇಡಿಕೆಯನ್ನು ಸಾಮಾನ್ಯವಾಗಿ ಕಾರ್ಮಿಕ ಬಲಕ್ಕೆ ಸೇರುವ ಯುವಕರು ಪೂರೈಸುತ್ತಾರೆ. ಆದರೆ ನಿಧಾನಗತಿಯೊಂದಿಗೆ ಈ ಯುವ ಹೊಸ ಕಾರ್ಮಿಕ ಬಲದ ಬೇಡಿಕೆ ಕುಗ್ಗಿದೆ” ಎಂದು ವ್ಯಾಸ್ ಹೇಳಿದರು.

ಅಲ್ಲದೆ, ಉದ್ಯಮದಲ್ಲಿ ಕಿರಿಯ ಉದ್ಯೋಗಿಗಳು ಕಡಿಮೆ ಅನುಭವ ಹೊಂದಿರುತ್ತಾರೆ. ಆದ್ದರಿಂದ ನಿರುದ್ಯೋಗಸ್ಥರಾಗುತ್ತಾರೆ ಎಂದು ವ್ಯಾಸ್ ವಿವರಿಸಿದರು.

ಲಾಕ್‌ಡೌನ್ ಸಮಯದಲ್ಲಿ ಉದ್ಯಮಗಳಿಗೆ ಹೊಸ ನೇಮಕಾತಿಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಆದರೆ ತರಬೇತಿ ನೀಡಲು ಕಷ್ಟ ಎಂದರು.

ಇತ್ತೀಚಿನ ದಿನಗಳಲ್ಲಿ ಆರ್ಥಿಕ ಬಿಕ್ಕಟ್ಟಿನಲ್ಲಿ ಭಾರತದ ಯುವ ದುಡಿಯುವ ಜನಸಂಖ್ಯೆ, ಅದರಲ್ಲೂ 20ರ ಹರೆಯದವರು ಆರ್ಥಿಕತೆಯಲ್ಲಿ ಉದ್ಯೋಗ ನಷ್ಟ ಅನುಭವಿಸಿದ್ದಾರೆ. ಇದು ಅತಿದೊಡ್ಡ ಆಘಾತವಾಗಿದೆ ಎಂದು ಇಂಡಿಪೆಂಡೆಂಟ್​ ಥಿಂಕ್ ಟ್ಯಾಂಕ್ ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ ಪ್ರೈ. ಲಿಮಿಟೆಡ್ ಹೇಳಿದೆ.

ಸಿಎಂಐಇ ದತ್ತಾಂಶವು ಭಾರತದಲ್ಲಿ 20 ವರ್ಷ ಮತ್ತು 29 ವರ್ಷ ವಯಸ್ಸಿನ ದುಡಿಯುವ ಜನರು, ಜುಲೈ 2020ರವರೆಗೆ ದೇಶದ ಒಟ್ಟು ಉದ್ಯೋಗ ನಷ್ಟದಲ್ಲಿ ಶೇ. 81ರಷ್ಟಿದ್ದಾರೆ ಎಂದು ಹೇಳುತ್ತದೆ. ಏಕೆಂದರೆ ಆರ್ಥಿಕತೆಯು ಕೊರೊನಾ ವೈರಸ್​ ಹಿನ್ನೆಲೆಯಲ್ಲಿ ಮಂದಗತಿಯಲ್ಲಿ ಸಾಗಿದೆ.

ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ವ್ಯಾಸ್, ಲಾಕ್‌ಡೌನ್ ಅವಧಿಯ ನಂತರ ಕಾರ್ಮಿಕರ ಭಾಗವಹಿಸುವಿಕೆಯ ದರದಲ್ಲಿ ತೀವ್ರ ಏರಿಕೆಯಾದರೂ ಸಹ ದೇಶದಲ್ಲಿ ನಿರುದ್ಯೋಗ ದರವು ಮುಂದುವರೆದಿದೆ ಎಂದಿದ್ದಾರೆ.

ಮೇ ತಿಂಗಳಲ್ಲಿ ಉದ್ಯೋಗ ಮಾರುಕಟ್ಟೆಯಲ್ಲಿ ಸಣ್ಣ ಮಟ್ಟದಲ್ಲಿ ಸುಧಾರಣೆಯಾಗಿದೆ. ಆದರೆ ಇದು ಗಮನಾರ್ಹ ಸುಧಾರಣೆ ಎಂದರು. ಜೂನ್​ನಲ್ಲಿ ಶೇ. 11ರಷ್ಟು ನಿರುದ್ಯೋಗ ದರವು ಲಾಕ್​ಡೌನ್​ ಮುಂಚಿನ ಶೇ. 8ಕ್ಕಿಂತ ಕಡಿಮೆ ದರಕ್ಕೆ ಹೋಲಿಸಿದರೆ ಸಾಕಷ್ಟು ಹೆಚ್ಚಾಗಿದೆ ಎಂದಿದ್ದಾರೆ.

ಯುವಜನರು ಉದ್ಯೋಗ ಕಳೆದುಕೊಳ್ಳುವ ಹಿಂದಿನ ಕಾರಣಗಳು

ನಿಧಾನಗತಿಯ ಆರ್ಥಿಕತೆ ಕಾರ್ಮಿಕರಿಗೆ ಕಡಿಮೆ ಬೇಡಿಕೆಯನ್ನು ಉಂಟುಮಾಡುತ್ತದೆ. ಉದ್ಯಮಗಳು ಮೊದಲಿಗಿಂತ ಕಡಿಮೆ ವಿಸ್ತರಿಸುತ್ತಿರುವುದರಿಂದ ಅವು ಹೆಚ್ಚುವರಿ ಕಾರ್ಮಿಕರಿಗೆ ಬೇಡಿಕೆಯನ್ನು ಕಡಿಮೆ ಮಅಡಿವೆ ಎಂದು ಸಿಎಂಐಇ ಗಮನಿಸಿದೆ.

"ಕಾರ್ಮಿಕರ ಹೆಚ್ಚುವರಿ ಬೇಡಿಕೆಯನ್ನು ಸಾಮಾನ್ಯವಾಗಿ ಕಾರ್ಮಿಕ ಬಲಕ್ಕೆ ಸೇರುವ ಯುವಕರು ಪೂರೈಸುತ್ತಾರೆ. ಆದರೆ ನಿಧಾನಗತಿಯೊಂದಿಗೆ ಈ ಯುವ ಹೊಸ ಕಾರ್ಮಿಕ ಬಲದ ಬೇಡಿಕೆ ಕುಗ್ಗಿದೆ” ಎಂದು ವ್ಯಾಸ್ ಹೇಳಿದರು.

ಅಲ್ಲದೆ, ಉದ್ಯಮದಲ್ಲಿ ಕಿರಿಯ ಉದ್ಯೋಗಿಗಳು ಕಡಿಮೆ ಅನುಭವ ಹೊಂದಿರುತ್ತಾರೆ. ಆದ್ದರಿಂದ ನಿರುದ್ಯೋಗಸ್ಥರಾಗುತ್ತಾರೆ ಎಂದು ವ್ಯಾಸ್ ವಿವರಿಸಿದರು.

ಲಾಕ್‌ಡೌನ್ ಸಮಯದಲ್ಲಿ ಉದ್ಯಮಗಳಿಗೆ ಹೊಸ ನೇಮಕಾತಿಗಳನ್ನು ಸುಲಭವಾಗಿ ಮಾಡಿಕೊಳ್ಳಬಹುದು. ಆದರೆ ತರಬೇತಿ ನೀಡಲು ಕಷ್ಟ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.