ETV Bharat / briefs

ಹುಟ್ಟುಹಬ್ಬಕ್ಕೆ ಮೀಸಲಿಟ್ಟ ಹಣವನ್ನು ಕೆರೆ ಹೂಳೆತ್ತುವ ಕೆಲಸಕ್ಕೆ ಕೊಟ್ಟ ಬಾಲಕ

author img

By

Published : Feb 22, 2019, 10:07 AM IST

ಯಲಬುರ್ಗಾ ತಾಲೂಕಿನ ಬಾಲಕನೊಬ್ಬ ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಹಣವನ್ನು ಕಲಭಾವಿ ಕೆರೆ ಹೂಳೆತ್ತುವ ಕೆಲಸಕ್ಕೆ ನೀಡುವ ಮೂಲಕ‌ ಎಲ್ಲರ ಗಮನ ಸೆಳೆದಿದ್ದಾನೆ.

ಕೆರೆ ಹೂಳೆತ್ತಲು ದೇಣಿಗೆ ನೀಡಿದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ

ಕೊಪ್ಪಳ : ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಹಣವನ್ನು ಕೆರೆ ಹೂಳೆತ್ತುವ ಕೆಲಸಕ್ಕೆ ನೀಡುವ ಮೂಲಕ‌ ಇಲ್ಲೊಬ್ಬ ಬಾಲಕ ಇತರರಿಗೂ ಮಾದರಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾನೆ.

ಜಿಲ್ಲೆಯಲ್ಲಿ ಈಗ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ ಕೆರೆ ಹೂಳೆತ್ತುವ ಕೆಲಸಕ್ಕೆ ಸಾರ್ವಜನಿಕರೂ ಕೂಡ ತಮ್ಮ ಕೈಲಾದ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ನಿನ್ನೆ ಆರಂಭವಾಗಿರುವ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲಭಾವಿ ಕೆರೆ ಹೂಳೆತ್ತುವ ಕೆಲಸಕ್ಕೆ ಬಾಲಕನೊಬ್ಬ 11 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ತನ್ನ ಸೇವೆ ಸಲ್ಲಿಸಿದ್ದಾನೆ.

ಕೆರೆ ಹೂಳೆತ್ತಲು ದೇಣಿಗೆ ನೀಡಿದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ

ತಾಲೂಕಿನ ಕಲಭಾವಿ ಗ್ರಾಮದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ 11 ಸಾವಿರ ರೂ. ದೇಣಿಗೆ ನೀಡಿರುವವನು. ಶಿವಪ್ರಸಾದ ತನ್ನ 8ನೇ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾನೆ. ಜನ್ಮ ದಿನಾಚರಣೆಗಾಗಿ ಖರ್ಚು ಮಾಡುವ ಹಣವನ್ನು ಈ ಕೆರೆ ಹೂಳೆತ್ತುವ ಕೆಲಸಕ್ಕೆ ಬಂದು ನೀಡಿದ್ದಾನೆ. ಬಾಲಕನ ಈ ಮನಸ್ಥಿತಿಗೆ ಅಲ್ಲಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊಪ್ಪಳ : ಜನ್ಮ ದಿನಾಚರಣೆ ಆಚರಿಸಿಕೊಳ್ಳುವ ಹಣವನ್ನು ಕೆರೆ ಹೂಳೆತ್ತುವ ಕೆಲಸಕ್ಕೆ ನೀಡುವ ಮೂಲಕ‌ ಇಲ್ಲೊಬ್ಬ ಬಾಲಕ ಇತರರಿಗೂ ಮಾದರಿಯಾಗಿದ್ದು, ಎಲ್ಲರ ಗಮನ ಸೆಳೆದಿದ್ದಾನೆ.

ಜಿಲ್ಲೆಯಲ್ಲಿ ಈಗ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ ಕೆರೆ ಹೂಳೆತ್ತುವ ಕೆಲಸಕ್ಕೆ ಸಾರ್ವಜನಿಕರೂ ಕೂಡ ತಮ್ಮ ಕೈಲಾದ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ನಿನ್ನೆ ಆರಂಭವಾಗಿರುವ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲಭಾವಿ ಕೆರೆ ಹೂಳೆತ್ತುವ ಕೆಲಸಕ್ಕೆ ಬಾಲಕನೊಬ್ಬ 11 ಸಾವಿರ ರೂಪಾಯಿ ದೇಣಿಗೆ ನೀಡುವ ಮೂಲಕ ತನ್ನ ಸೇವೆ ಸಲ್ಲಿಸಿದ್ದಾನೆ.

ಕೆರೆ ಹೂಳೆತ್ತಲು ದೇಣಿಗೆ ನೀಡಿದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ

ತಾಲೂಕಿನ ಕಲಭಾವಿ ಗ್ರಾಮದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ 11 ಸಾವಿರ ರೂ. ದೇಣಿಗೆ ನೀಡಿರುವವನು. ಶಿವಪ್ರಸಾದ ತನ್ನ 8ನೇ ಜನ್ಮ ದಿನಾಚರಣೆ ಆಚರಿಸಿಕೊಂಡಿದ್ದಾನೆ. ಜನ್ಮ ದಿನಾಚರಣೆಗಾಗಿ ಖರ್ಚು ಮಾಡುವ ಹಣವನ್ನು ಈ ಕೆರೆ ಹೂಳೆತ್ತುವ ಕೆಲಸಕ್ಕೆ ಬಂದು ನೀಡಿದ್ದಾನೆ. ಬಾಲಕನ ಈ ಮನಸ್ಥಿತಿಗೆ ಅಲ್ಲಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Intro:


Body:ಮೌನೇಶ್ ಎಸ್. ಬಡಿಗೇರ್.

ಕೊಪ್ಪಳ:- ಜನ್ಮ‌ದಿನಾಚರಣೆ ಆಚರಿಸಿಕೊಳ್ಳುವ ಹಣವನ್ನು ಕೆರೆ ಹೂಳೆತ್ತುವ ಕೆಲಸಕ್ಕೆ ನೀಡುವ ಮೂಲಕ‌ ಇಲ್ಲೊಬ್ಬ ಬಾಲಕ ಗಮನ ಸೆಳೆದಿದ್ದಾನೆ. ಜಿಲ್ಲೆಯಲ್ಲಿ ಈಗ ಸಾರ್ವಜನಿಕರ ಸಹಭಾಗಿತ್ವದಲ್ಲಿ ಕೈಗೊಳ್ಳಲಾಗಿರುವ ಕೆರೆ ಹೂಳೆತ್ತುವ ಕೆಲಸಕ್ಕೆ ಸಾರ್ವಜನಿಕರು ತಮ್ಮ ಶಕ್ತಾನುಸಾರ ದೇಣಿಗೆ ನೀಡುತ್ತಿದ್ದಾರೆ. ಅದರಂತೆ ಇಂದು ಆರಂಭವಾಗಿರುವ ಜಿಲ್ಲೆಯ ಯಲಬುರ್ಗಾ ತಾಲೂಕಿನ ಕಲಭಾವಿ ಕೆರೆ ಹೂಳೆತ್ತುವ ಕೆಲಸಕ್ಕೆ ಬಾಲಕನೊಬ್ಬ ೧೧ ಸಾವಿರ ರುಪಾಯಿ ದೇಣಿಗೆ ನೀಡುವ ಮೂಲಕ ತನ್ನ ಸೇವೆಯನ್ನೂ ಸಹ ಸಲ್ಲಿಸಿದ್ದಾನೆ. ಯಲಬುರ್ಗಾ ತಾಲೂಕಿನ ವನಜಭಾವಿ ಗ್ರಾಮದ ಶಿವಪ್ರಸಾದ ರುದ್ರಪ್ಪ ಎಂಬ ಬಾಲಕ ೧೧ ಸಾವಿರ ರುಪಾಯಿ ದೇಣಿಗೆ ನೀಡಿದನು. ಶಿವಪ್ರಸಾದ ಇಂದು ೮ ನೇ ಜನ್ಮ ದಿನಾಚರಣೆ ಆಚರಿಸಿಕೊಳ್ಳುತ್ತಿದ್ದಾನೆ. ಜನ್ಮ ದಿನಾಚರಣೆಗಾಗಿ ಖರ್ಚು ಮಾಡುವ ಹಣವನ್ನು ಈ ಕೆರೆ ಹೂಳೆತ್ತುವ ಕೆಲಸಕ್ಕೆ ಬಂದು ನೀಡಿದ್ದಾನೆ. ಬಾಲಕನ ಈ ಮನಸ್ಥಿತಿಗೆ ಅಲ್ಲಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.


Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.