ETV Bharat / briefs

ಗ್ರಾಹಕರೇ ಎಚ್ಚರ... ಸ್ವಲ್ಪ ಯಾಮಾರಿದ್ರೂ ಲಕ್ಷ-ಲಕ್ಷ ಹಣ ಗುಳುಂ...!

author img

By

Published : Jun 16, 2019, 11:36 PM IST

ಗ್ರಾಹಕರೇ ಎಚ್ಚರ..! ಬ್ಯಾಂಕ್ ಅಧಿಕಾರಿ, ಕೋರಿಯರ್ ಬಾಯ್, ಓಎಲ್ಎಕ್ಸ್​ ಎಂದು ವಿವಿಧ ಸೋಗಿನಲ್ಲಿ ಕರೆ ಮಾಡವ ವಂಚಕರು ಕ್ಷಣ ಮಾತ್ರದಲ್ಲಿ ಗ್ರಾಹಕರನ್ನು ಮರಳು ಮಾಡಿ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕುತ್ತಿದ್ದಾರೆ.

ಗ್ರಾಹಕರೇ ಎಚ್ಚರ..!

ಕಾರವಾರ: ಬ್ಯಾಂಕ್ ಅಧಿಕಾರಿ, ಕೋರಿಯರ್ ಬಾಯ್, ಓಎಲ್ಎಕ್ಸ್​ ಎಂದು ವಿವಿಧ ಸೋಗಿನಲ್ಲಿ ಕರೆ ಮಾಡವ ವಂಚಕರು ಕ್ಷಣ ಮಾತ್ರದಲ್ಲಿ ಗ್ರಾಹಕರನ್ನು ಮರಳು ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣ ವಂಚಿಸುತ್ತಿದ್ದಾರೆ.

ಇಂತಹ ವಂಚಕರ ಬಲೆಗೆ ಉತ್ತರಕನ್ನಡ ಜಿಲ್ಲೆಯ ಜನರು ಹೆಚ್ಚಾಗಿ ಬೀಳುತ್ತಿದ್ದಾರೆ. ಈ ಕುರಿತಾಗಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 45 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1 ಕೋಟಿಗೂ ಹೆಚ್ಚು ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.

ಬ್ಯಾಂಕ್ ಸಿಬ್ಬಂದಿಗೂ ವಂಚನೆ:

ಜಿಲ್ಲೆಯಲ್ಲಿ ವಂಚನೆಗೊಳಗಾಗುವವರ ಪೈಕಿ ಬ್ಯಾಂಕ್ ಸಿಬ್ಬಂದಿ, ಎಂಜಿನಿಯರ್, ಶಿಕ್ಷಕರು, ನಿವೃತ್ತ ನೌಕರರು, ಖಾಸಗಿ ಉದ್ಯೋಗಿಗಗಳಿದ್ದಾರೆ. ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬ್ಯಾಂಕ್​ವೊಂದರ ಸಿಬ್ಬಂದಿಗೆ ಕಳುಹಿಸಿದ್ದ ಕೋರಿಯರ್ ಹೋಗಿಲ್ಲ. ಅದನ್ನು ತಲುಪಿಸಲು ಆನ್​ಲೈನ್ ಆ್ಯಪ್​​ ಮೂಲಕ 10 ರೂ. ಪಾವತಿಸಿ ಎಂದು ಹೇಳಿ, ಬಳಿಕ ಒಟಿಪಿ ಪಡೆದು 50 ಸಾವಿರ ರೂ. ವಂಚಿಸಲಾಗಿದೆ. ಉತ್ತರ ಪ್ರದೇಶ, ದೆಹಲಿ ಸೇರದಂತೆ ಹೊರ ರಾಜ್ಯಗಳಿಂದ ಆನ್​ಲೈನ್ ಕರೆ ಇಲ್ಲವೇ ಸಂದೇಶದ ಮೂಲಕ ಗ್ರಾಹಕರನ್ನು ಮೋಸದ ಸುಳಿಗೆ ಕೆಡವುತ್ತಿದ್ದಾರೆ ಖದೀಮರು.

ಗ್ರಾಹಕರೇ ಎಚ್ಚರ..!

ಹೇಗೆ ಮೋಸ ಮಾಡುತ್ತಾರೆ?

ತಾವು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಟಿಎಂ ನಂಬರ್, ಪಿನ್, ಒಟಿಪಿ ಪಡೆದು ವಂಚಿಸುವುದು. ಕೊರಿಯರ್ ಬಾಯ್ ಇಲ್ಲವೇ ಬಹುಮಾನದ ನೆಪದಲ್ಲಿ ಆನ್​ಲೈನ್​ ಪೇಮೆಂಟ್​ ಮೂಲಕ 10 ರೂ. ಪಡೆಯುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮುಂಚೆ ಹಿಂದಿ ಇಲ್ಲವೇ ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದ ವಂಚಕರು, ಇದೀಗ ಕನ್ನಡದಲ್ಲಿಯೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಈ ವಂಚಕರ ಜಾಲ ಹಬ್ಬಿದ್ದು, ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.

ಇನ್ನು ಜಿಲ್ಲೆಯಲ್ಲಿ ಆನ್​ಲೈನ್ ವಂಚನೆ ಹೆಚ್ಚುತ್ತಿರುವುದನ್ನು ಮನಗಂಡ ಪೊಲೀಸ್ ಇಲಾಖೆ ಇದೀಗ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಫೇಸ್​ಬುಕ್, ಟ್ವಿಟ್ಟರ್, ವಾಟ್ಸ್ಯಾಪ್​ಗಳಲ್ಲಿ ಎಚ್ಚರಿಕೆ ಮಾಹಿತಿವುಳ್ಳ ಬರಹಗಳ ಪೋಸ್ಟರ್ ಹಾಗೂ ಬ್ಯಾಂಕ್ ಖಾತೆ ವಿವರ, ಒಟಿಪಿ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿ ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಪೊಲೀಸರು ಅರಿವು ಮೂಡುಸುತ್ತಿದ್ದಾರೆ.

ಕಾರವಾರ: ಬ್ಯಾಂಕ್ ಅಧಿಕಾರಿ, ಕೋರಿಯರ್ ಬಾಯ್, ಓಎಲ್ಎಕ್ಸ್​ ಎಂದು ವಿವಿಧ ಸೋಗಿನಲ್ಲಿ ಕರೆ ಮಾಡವ ವಂಚಕರು ಕ್ಷಣ ಮಾತ್ರದಲ್ಲಿ ಗ್ರಾಹಕರನ್ನು ಮರಳು ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣ ವಂಚಿಸುತ್ತಿದ್ದಾರೆ.

ಇಂತಹ ವಂಚಕರ ಬಲೆಗೆ ಉತ್ತರಕನ್ನಡ ಜಿಲ್ಲೆಯ ಜನರು ಹೆಚ್ಚಾಗಿ ಬೀಳುತ್ತಿದ್ದಾರೆ. ಈ ಕುರಿತಾಗಿ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಟ್ಟು 45 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. 1 ಕೋಟಿಗೂ ಹೆಚ್ಚು ಹಣ ವಂಚಿಸಿರುವುದು ಬೆಳಕಿಗೆ ಬಂದಿದೆ.

ಬ್ಯಾಂಕ್ ಸಿಬ್ಬಂದಿಗೂ ವಂಚನೆ:

ಜಿಲ್ಲೆಯಲ್ಲಿ ವಂಚನೆಗೊಳಗಾಗುವವರ ಪೈಕಿ ಬ್ಯಾಂಕ್ ಸಿಬ್ಬಂದಿ, ಎಂಜಿನಿಯರ್, ಶಿಕ್ಷಕರು, ನಿವೃತ್ತ ನೌಕರರು, ಖಾಸಗಿ ಉದ್ಯೋಗಿಗಗಳಿದ್ದಾರೆ. ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಬ್ಯಾಂಕ್​ವೊಂದರ ಸಿಬ್ಬಂದಿಗೆ ಕಳುಹಿಸಿದ್ದ ಕೋರಿಯರ್ ಹೋಗಿಲ್ಲ. ಅದನ್ನು ತಲುಪಿಸಲು ಆನ್​ಲೈನ್ ಆ್ಯಪ್​​ ಮೂಲಕ 10 ರೂ. ಪಾವತಿಸಿ ಎಂದು ಹೇಳಿ, ಬಳಿಕ ಒಟಿಪಿ ಪಡೆದು 50 ಸಾವಿರ ರೂ. ವಂಚಿಸಲಾಗಿದೆ. ಉತ್ತರ ಪ್ರದೇಶ, ದೆಹಲಿ ಸೇರದಂತೆ ಹೊರ ರಾಜ್ಯಗಳಿಂದ ಆನ್​ಲೈನ್ ಕರೆ ಇಲ್ಲವೇ ಸಂದೇಶದ ಮೂಲಕ ಗ್ರಾಹಕರನ್ನು ಮೋಸದ ಸುಳಿಗೆ ಕೆಡವುತ್ತಿದ್ದಾರೆ ಖದೀಮರು.

ಗ್ರಾಹಕರೇ ಎಚ್ಚರ..!

ಹೇಗೆ ಮೋಸ ಮಾಡುತ್ತಾರೆ?

ತಾವು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಟಿಎಂ ನಂಬರ್, ಪಿನ್, ಒಟಿಪಿ ಪಡೆದು ವಂಚಿಸುವುದು. ಕೊರಿಯರ್ ಬಾಯ್ ಇಲ್ಲವೇ ಬಹುಮಾನದ ನೆಪದಲ್ಲಿ ಆನ್​ಲೈನ್​ ಪೇಮೆಂಟ್​ ಮೂಲಕ 10 ರೂ. ಪಡೆಯುವುದಾಗಿ ಹೇಳಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಮುಂಚೆ ಹಿಂದಿ ಇಲ್ಲವೇ ಇಂಗ್ಲಿಷ್​ನಲ್ಲಿ ಮಾತನಾಡುತ್ತಿದ್ದ ವಂಚಕರು, ಇದೀಗ ಕನ್ನಡದಲ್ಲಿಯೂ ಕರೆ ಮಾಡಿ ಮಾತನಾಡುತ್ತಿದ್ದಾರೆ. ಕರ್ನಾಟಕದಲ್ಲಿಯೂ ಈ ವಂಚಕರ ಜಾಲ ಹಬ್ಬಿದ್ದು, ಎಚ್ಚರ ವಹಿಸುವಂತೆ ಪೊಲೀಸ್ ಇಲಾಖೆ ಜಾಗೃತಿ ಮೂಡಿಸುತ್ತಿದೆ.

ಇನ್ನು ಜಿಲ್ಲೆಯಲ್ಲಿ ಆನ್​ಲೈನ್ ವಂಚನೆ ಹೆಚ್ಚುತ್ತಿರುವುದನ್ನು ಮನಗಂಡ ಪೊಲೀಸ್ ಇಲಾಖೆ ಇದೀಗ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಫೇಸ್​ಬುಕ್, ಟ್ವಿಟ್ಟರ್, ವಾಟ್ಸ್ಯಾಪ್​ಗಳಲ್ಲಿ ಎಚ್ಚರಿಕೆ ಮಾಹಿತಿವುಳ್ಳ ಬರಹಗಳ ಪೋಸ್ಟರ್ ಹಾಗೂ ಬ್ಯಾಂಕ್ ಖಾತೆ ವಿವರ, ಒಟಿಪಿ ಸೇರಿದಂತೆ ಇನ್ನಿತರ ಗೌಪ್ಯ ಮಾಹಿತಿ ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಪೊಲೀಸರು ಅರಿವು ಮೂಡುಸುತ್ತಿದ್ದಾರೆ.

Intro:ಆನ್ಲೈನ್ ಗ್ರಾಹಕರೇ ಎಚ್ಚರ...!
ಕಾರವಾರ: ಉತ್ತರಕನ್ನಡ ಜಿಲ್ಲೆಯಲ್ಲಿ ದಿನೆ ದಿನೆ ಆನ್ಲೈನ್ ವಂಚನೆ ಪ್ರಕರಣಗಳು ಹೆಚ್ಚುತ್ತಿದೆ. ಸ್ಮಾರ್ಟ್ ವಂಚಕರ ಬಲೆಗೆ ಜಿಲ್ಲೆಯ ಅದೆಷ್ಟೋ ಸುಶಿಕ್ಷಿತರೇ ಬಲಿಯಾಗುತ್ತಿದ್ದು, ಬಣ್ಣದ ಮಾತನ್ನು ನಂಬಿ ಕ್ಷಣಮಾತ್ರದಲ್ಲಿ ಲಕ್ಷಾಂತರ ರೂ ಕಳೆದುಕೊಂಡು ಇದೀಗ ಕಣ್ಣೀರು ಹಾಕುವಂತಾಗಿದೆ.

ಹೌದು, ಬ್ಯಾಂಕ್ ಅಧಿಕಾರಿ, ಕೋರಿಯರ್ ಬಾಯ್,ಓಎಲ್ಎಕ್ಸ್ ನಿಂದ ಎಂದು ವಿವಿಧ ಸೊಗಿನಲ್ಲಿ ಕರೆ ಮಾಡುವ ವಂಚಕರು ಕ್ಷಣಮಾತ್ರದಲ್ಲಿ ಗ್ರಾಹಕರನ್ನು ಮರಳು ಮಾಡಿ ಅವರ ಬ್ಯಾಂಕ್ ಖಾತೆಯಿಂದ ಹಣ ವಂಚಿಸುತ್ತಿದ್ದಾರೆ. ಇಂತಹ ವಂಚಕರ ಬಲೆಗೆ ಉತ್ತರಕನ್ನಡ ಜಿಲ್ಲೆಯ ಜನರು ಹೆಚ್ಚಾಗಿ ಬಿಳ್ಳುತ್ತಿರುವುದು ಬೆಳಕಿಗೆ ಬಂದಿದ್ದು, ಕಳೆದ 2 ತಿಂಗಳಲ್ಲಿ 24 ಗಂಭೀರ ಪ್ರಕರಣಗಳು ದಾಖಲಾಗಿವೆ. ಇದಲ್ಲದೆ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ದಾಖಲಾದ ಪ್ರಕರಣ ಸೇರಿ ಒಟ್ಟು 45ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದೆ. 1 ಕೋಟಿಗೂ ಹೆಚ್ಚು ಹಣ ವಂಚನೆಗೊಳಗಾಗಿರುವುದು ಬೆಳಕಿಗೆ ಬಂದಿದೆ.

ಬ್ಯಾಂಕ್ ಸಿಬ್ಬಂದಿಗೂ ವಂಚನೆ:

ಜಿಲ್ಲೆಯಲ್ಲಿ ವಂಚನೆಗೊಳಗಾಗುವವರ ಪೈಕಿ ಬ್ಯಾಂಕ್ ಸಿಬ್ಬಂದಿ, ಇಂಜಿನಿಯರ್, ಶಿಕ್ಷಕರು, ನಿವೃತ್ತ ನೌಕರರು, ಖಾಸಗಿ ಉದ್ಯೋಗಿಗಗಳಿದ್ದಾರೆ. ಜಿಲ್ಲೆಯ ಮುಂಡಗೋಡ ತಾಲ್ಲೂಕಿನಲ್ಲಿ ಬ್ಯಾಂಕ್ ಒಂದರ ಸಿಬ್ಬಂದಿಗೆ ಕಳುಹಿಸಿದ ಕೋರಿಯರ್ ಹೋಗಿಲ್ಲ. ಅದನ್ನು ತಲುಪಿಸಲು ಪೋನ್ ಪೇ ಆಪ್ ಮೂಲಕ 10 ರೂ ಪಾವತಿಸಿ ಎಂದು ಬಳಿಕ ಒಟಿಪಿ ಪಡೆದು 50 ಸಾವಿರ ವಂಚಿಸಲಾಗಿದೆ. ಉತ್ತರ ಪ್ರದೇಶ, ದೇಹಲಿ ಸೇರದಂತೆ ಹೊರ ರಾಜ್ಯದಿಂದ ಆನ್ಲೈನ್ ಕರೆ ಇಲ್ಲವೇ ಮೆಸೆಜ್ ಮಾಡಿ ಗ್ರಾಹಕರನ್ನು ಮೋಸದ ಸುಳಿಗೆ ಕೆಡಗುತ್ತಿದ್ದಾರೆ.

ಹೇಗೆ ಮೋಸ ಮಾಡುತ್ತಾರೆ..?

ತಾವು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ಎಟಿಎಂ ನಂಬರ್, ಪಿನ್, ಓಟಿಪಿ ಪಡೆದು ವಂಚಿಸುವುದು ಒಂದೆಡೆಯಾದರೇ, ಇನ್ನೊಂದೆಡೆ ಕೊರೆಯರ್ ಬಾಯ್ ಇಲ್ಲವೇ ಬಹುಮಾನದ ನೆಪದಲ್ಲಿ ಪೋನ್ ಪೇಯಂತಹ ಹಣ ವರ್ಗಾವಣೆ ಮಾಡಬಹುದಾದ ಆಪ್ ಗಳ ಮೂಲಕ 10 ರೂ ಪಡೆಯುವುದಾಗಿ ಹೇಳಿ ಲಕ್ಷಾಂತರ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. ಹೀಗೆ ಹಿಂದಿ ಇಲ್ಲವೇ ಇಂಗ್ಲೀಷ್ ನಲ್ಲಿ ಮಾತನಾಡುತ್ತಿದ್ದ ವಂಚಕರು ಇದೀಗ ಕನ್ನಡದಲ್ಲಿಯೂ ಕರೆ ಮಾಡಿ ಮಾತನಾಡುತ್ತಿದ್ದು, ಕರ್ನಾಟಕದಲ್ಲಿಯೂ ಇದರ ಜಾಲ ಹಬ್ಬಿದೆ.

ಎಚ್ಚರವಹಿಸುವಂತೆ ಪೊಲೀಸ್ ಇಲಾಖೆ ಜಾಗೃತಿ:

ಇನ್ನು ಜಿಲ್ಲೆಯಲ್ಲಿ ಆನ್ಲೈನ್ ವಂಚನೆ ಹೆಚ್ಚುತ್ತಿರುವುದನ್ನು ಮನಗಂಡ ಪೊಲೀಸ್ ಇಲಾಖೆ ಇದೀಗ ಕರಪತ್ರಗಳ ಮೂಲಕ ಜಾಗೃತಿ ಮೂಡಿಸುತ್ತಿದೆ. ಅಲ್ಲದೆ ಫೆಸ್ಬುಕ್ ಟ್ವಿಟ್ಟರ್, ವಾಟ್ಸಪ್ ಗಳಲ್ಲಿ ಎಚ್ಚರಿಕೆ ಮಾಹಿತಯುಳ್ಳ ಬರಹಗಳ ಪೋಸ್ಟರ್ ಹಾಗೂ ಬ್ಯಾಂಕ್ ಖಾತೆ ವಿವರ, ಟಿಪಿ ಸೇರಿದಂತೆ ಇನ್ನಿತರಗೌಪ್ಯ ಮಾಹಿತಿ ಹಂಚಿಕೊಳ್ಳದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದೆ.

ಇನ್ನು ಈ ಬಗ್ಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿನಾಯಕ ಪಾಟೀಲ್, ಉತ್ತರಕನ್ನಡ ಜಿಲ್ಲೆಯಲ್ಲಿ ಸೈಬರ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ 18 ಪ್ರಕರಣಗಳು ದಾಖಲಾಗಿತ್ತು. ಆದರೆ ಈ ಬಾರಿ 23 ಪ್ರಕರಣಗಳು ದಾಖಲಾಗಿದೆ. ಬಹುತೇಕ ಓಟಿಪಿ ಪಡೆದು ವಂಚಿಸಲಾಗತ್ತಿದ್ದೆ. ಇದಕ್ಕಾಗಿ ಜನಜಾಗೃತಿ ಅಭಿಯಾನ ನಡೆಸಲಾಗುತ್ತಿದೆ. ಜನರು ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕು. ಆರೋಪಿಗಳು ಉತ್ತರಪ್ರದೇಶ ಸೇರಿದಂತೆ ಹೊರ ರಾಜ್ಯದವರಾಗಿದ್ದರಿಂದ ಕಂಡು ಹಿಡಿಯಲು ಕಷ್ಟವಾಗುತ್ತಿದೆ. ಆದರೆ ಸಿಎನ್ ಪೊಲೀಸ್ ಠಾಣೆಯ ಟೀಮ್ ಈಗಾಗಲೇ ಅಲ್ಲಿಗೆ ತೆರಳಿ ಪತ್ತೆಗೆ ಪ್ರಯತ್ನ ನಡೆಸಿದೆ ಎಂದು ಹೇಳಿದರು.

ಪ್ರಸ್ತುತ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಹೆಚ್ಚಿನ ಕೆಲಸಗಳು ಆನ್ಲೈನ್ ಮೂಲಕವೇ ನಡೆಯುತ್ತದೆ. ಅದರಲ್ಲೂ ಇದೀಗ ಬ್ಯಾಂಕ್ ಸೇರಿದಂತೆ ಬಹುತೇಕ ವ್ಯವಹಾರಕ್ಕೆ ಸರ್ಕಾರಕೂಡ ಪ್ರೋತ್ಸಾಹಿಸುತ್ತಿದ್ದು, ಬಳಕೆದಾರರು ಕೂಡ ಹೆಚ್ಚಾಗಿದ್ದಾರೆ. ಆದರೆ ಇದನ್ನೆ ಬಂಡವಾಳವಾಗಿಸಿಕೊಂಡ ವಂಚಿಕರು ಅಮಾಯಕರನ್ನು ವಂಚಿಸಿ ಹಗಲು ದರೋಡೆ ಮಾಡುತ್ತಿದ್ದಾರೆ.

ಬೈಟ್ ೧ ಕೃಷ್ಣ ಹಿರೇಹಳ್ಳಿ, ಸ್ಥಳೀಯರು
ಬೈಟ್ ೨ ವಿನಾಯಕ ಪಾಟೀಲ್, ಎಸ್ಪಿ
Body:ಕConclusion:ಕ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.