ತೆಲಂಗಾಣದ ಯಾದಾದ್ರಿ ಜಿಲ್ಲೆಯ ಬ್ರಾಹ್ಮಣಪಲ್ಲಿ ಗ್ರಾಮದ ನಿವಾಸಿ ತೇಜಾಡಿ ನರೇಶ್ (25), ಹೈದರಾಬಾದ್ ಗಾಂಧಿ ಆಸ್ಪತ್ರೆಗೆ ಸೇರಿದ 108 ವಾಹನದ ಡ್ರೈವರ್. ಆತನಿಗೆ ಕೇಸಾರಂ ಗ್ರಾಮದ ಬಲಿಜ ದಿವ್ಯಾ ಜೊತೆ 20 ದಿನಗಳ ಹಿಂದೆ ಮದುವೆಯಾಗಿತ್ತು. ದಿವ್ಯಾ ಪಿಯುಸಿ ವ್ಯಾಸಂಗ ಮಾಡುತ್ತಿದ್ದು, ವಾರ್ಷಿಕ ಪರೀಕ್ಷೆ ಹಿನ್ನೆಲೆಯಲ್ಲಿ ತವರು ಮನೆಯಲ್ಲಿ ತಂಗಿದ್ದಳು.
ಭಾನುವಾರ ಹರಕೆ ತೀರಿಸಲು ನರೇಶ್ ಹೆಂಡ್ತಿ ದಿವ್ಯಾ ಜೊತೆ ಸೇರಿ ಆತ್ಮಕೂರು (ಎಂ) ತಾಲೂಕಿನ ಪಾರುಪಲ್ಲಿ ಗ್ರಾಮದ ಹತ್ತಿರ ವಿರುವ ದೇವಸ್ಥಾನಕ್ಕೆ ತೆರಳಿದ್ದಾರೆ. ರಾತ್ರಿ ಅಲ್ಲೇ ಮಲಗಿ ಸೋಮವಾರ ಬೆಳಗ್ಗೆ ಬೈಕ್ನಲ್ಲಿ ದಂಪತಿ ಕೇಸಾರಂ ಗ್ರಾಮಕ್ಕೆ ವಾಪಾಸ್ಸಾಗುತ್ತಿದ್ದರು. ಮಾರ್ಗಮಧ್ಯೆದಲ್ಲಿ ರಸ್ತೆ ಮೇಲೆ ನಿಂತ ಲಾರಿಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.