ETV Bharat / briefs

ಮದುವೆ ಫೋಟೊ ಹರಿಬಿಟ್ಟ ಯುವತಿ... ಅಂದರ್​ ಆದ ನಾಲ್ವರು ಪತ್ನಿಯರ ಪೋಲಿ ಗಂಡ

author img

By

Published : May 29, 2019, 9:26 PM IST

ತಮಿಳುನಾಡು ಮೂಲದ ಶಿಕ್ಷಕ ಅಮಾನುಲ್ಲಾ ಬಾಷಾ ಎಂಬಾತ ಯುವತಿಯರಿಗೆ ವಂಚಿಸಿ ಮದುವೆಯಾಗಿದ್ದಕ್ಕೆ ಕೊನೆಗೂ ಅಂದರ್​ ಆಗಿದ್ದಾನೆ. ನಾಲ್ಕನೇ ಮದುವೆಯಾದ ಭೂಪ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಪೋಲಿ ಶಿಕ್ಷಕನ ಬಂಧಿಸಿದ ಪೊಲೀಸರು

ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾದ ಶಿಕ್ಷಕ ಈಗ ಮುದ್ದೆ ಮುರಿಯುತ್ತಿದ್ದಾನೆ. ಪತ್ನಿಯರ ಜತೆ ಕೆಲ ವರ್ಷ ಕಳೆದು ದೂರ ಮಾಡುತ್ತಿದ್ದ. ನಾಲ್ಕನೇ ಮದುವೆಯಾದ ಮೂರನೇ ದಿನಕ್ಕೆ ಈತನ ಬಣ್ಣ ಬಯಲಾಗಿದೆ.

ಯುವತಿಯರನ್ನು ವಂಚಿಸಿದ ಆರೋಪದಡಿ ಆರೋಪಿ ಅಮಾನುಲ್ಲಾ ಬಾಷಾ (29) ಎಂಬಾತನನ್ನು ಪೊಲೀಸು ಕಂಬಿ ಹಿಂದೆ ತಳ್ಳಿದ್ದಾರೆ.

ಡಿಸಿಪಿ ರಾಹುಲ್

ಹೌದು, ಮೂಲತಃ ತಮಿಳುನಾಡಿನ ಮಧುರೈ ನಿವಾಸಿಯಾಗಿರುವ ಅಮಾನುಲ್ಲಾ, ವೃತ್ತಿಯಲ್ಲಿ ದುಬೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಶಿಕ್ಷಕನಾಗಿದ್ದಾನೆ. ಅಲ್ಲಿಯೇ ವಾಸವಾಗಿದ್ದ ಈತ ಆಗಾಗ ಬೆಂಗಳೂರಿಗೆ ಬಂದು ವರದಕ್ಷಿಣೆ ಆಸೆಗೆ ಮದುವೆಯಾಗಿ ದುಬೈಗೆ ಹಾರುತ್ತಿದ್ದ.‌ ಕೆ.ಜಿ ಹಳ್ಳಿಯ ನಿವಾಸಿವೋರ್ವರ ಮಗಳನ್ನ ಮೇ ತಿಂಗಳು 23ರಂದು ಅದ್ಧೂರಿಯಾಗಿ ನಾಲ್ಕನೇ ಮದುವೆ ಮಾಡಿಕೊಂಡಿದ್ದ. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಡಲಾಗಿತ್ತು. ನಂತರ ಅಮಾನುಲ್ಲಾ ಬಾಷಾ ಹೆಂಡತಿಯ ಜೊತೆ ತಮಿಳುನಾಡಿನ ಮಧುರೈಗೆ ತೆರಳಿದ್ದ.

ಯುವತಿ ಮದುವೆ ಫೋಟೊಗಳನ್ನ ತನ್ನ ಫೇಸ್​ಬುಕ್​​, ವಾಟ್ಸ್ಯಾಪ್​​ನಲ್ಲಿ ಶೇರ್​ ಮಾಡಿದ್ದಳು. ಫೋಟೊ ನೋಡಿದ ಸಂಬಂಧಿಕರು ಯುವತಿಯ ಪೋಷಕರಿಗೆ ಕರೆ ಮಾಡಿ, ಈ ಹುಡುಗನಿಗೆ ಮೊದಲೇ ಮದುವೆ ಆಗಿದೆ ಎಂದು ತಿಳಿಸಿದ್ದರು. ಆಗ ಗಾಬರಿಗೊಂಡ ಯುವತಿಯ ಪೋಷಕರು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿ ಅಮಾನುಲ್ಲಾ ಬಾಷಾನ ನಿಜ ಬಣ್ಣ ಬಯಲಿಗೆ ಬಂದಿದೆ.

ನಾಲ್ಕನೇ ಯುವತಿಯ ಪೋಷಕರು ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿ,‌ ಆರೋಪಿಯನ್ನ ನಗರಕ್ಕೆ ಕರೆಸಿದ್ದಾರೆ. ಕೆ.ಜಿ ಹಳ್ಳಿ ಠಾಣೆಯಲ್ಲಿ ಆರೋಪಿಯನ್ನ ಪೊಲೀಸರಿ​ಗೆ ಒಪ್ಪಿಸಿದ್ದಾರೆ. ಪೊಲೀಸರು ಪೋಲಿ ಶಿಕ್ಷಕನ ಕೈಗೆ ಈಗ ಕೋಳ ತೊಡಿಸಿ ತನಿಖೆ ಆರಂಭಿಸಿದ್ದಾರೆ.

ಬೆಂಗಳೂರು: ಒಂದಲ್ಲ, ಎರಡಲ್ಲ ಬರೋಬ್ಬರಿ ನಾಲ್ಕು ಮದುವೆಯಾದ ಶಿಕ್ಷಕ ಈಗ ಮುದ್ದೆ ಮುರಿಯುತ್ತಿದ್ದಾನೆ. ಪತ್ನಿಯರ ಜತೆ ಕೆಲ ವರ್ಷ ಕಳೆದು ದೂರ ಮಾಡುತ್ತಿದ್ದ. ನಾಲ್ಕನೇ ಮದುವೆಯಾದ ಮೂರನೇ ದಿನಕ್ಕೆ ಈತನ ಬಣ್ಣ ಬಯಲಾಗಿದೆ.

ಯುವತಿಯರನ್ನು ವಂಚಿಸಿದ ಆರೋಪದಡಿ ಆರೋಪಿ ಅಮಾನುಲ್ಲಾ ಬಾಷಾ (29) ಎಂಬಾತನನ್ನು ಪೊಲೀಸು ಕಂಬಿ ಹಿಂದೆ ತಳ್ಳಿದ್ದಾರೆ.

ಡಿಸಿಪಿ ರಾಹುಲ್

ಹೌದು, ಮೂಲತಃ ತಮಿಳುನಾಡಿನ ಮಧುರೈ ನಿವಾಸಿಯಾಗಿರುವ ಅಮಾನುಲ್ಲಾ, ವೃತ್ತಿಯಲ್ಲಿ ದುಬೈನ ಪ್ರತಿಷ್ಠಿತ ಕಾಲೇಜೊಂದರಲ್ಲಿ ಶಿಕ್ಷಕನಾಗಿದ್ದಾನೆ. ಅಲ್ಲಿಯೇ ವಾಸವಾಗಿದ್ದ ಈತ ಆಗಾಗ ಬೆಂಗಳೂರಿಗೆ ಬಂದು ವರದಕ್ಷಿಣೆ ಆಸೆಗೆ ಮದುವೆಯಾಗಿ ದುಬೈಗೆ ಹಾರುತ್ತಿದ್ದ.‌ ಕೆ.ಜಿ ಹಳ್ಳಿಯ ನಿವಾಸಿವೋರ್ವರ ಮಗಳನ್ನ ಮೇ ತಿಂಗಳು 23ರಂದು ಅದ್ಧೂರಿಯಾಗಿ ನಾಲ್ಕನೇ ಮದುವೆ ಮಾಡಿಕೊಂಡಿದ್ದ. ಜೊತೆಗೆ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಮದುವೆ ಮಾಡಿಕೊಡಲಾಗಿತ್ತು. ನಂತರ ಅಮಾನುಲ್ಲಾ ಬಾಷಾ ಹೆಂಡತಿಯ ಜೊತೆ ತಮಿಳುನಾಡಿನ ಮಧುರೈಗೆ ತೆರಳಿದ್ದ.

ಯುವತಿ ಮದುವೆ ಫೋಟೊಗಳನ್ನ ತನ್ನ ಫೇಸ್​ಬುಕ್​​, ವಾಟ್ಸ್ಯಾಪ್​​ನಲ್ಲಿ ಶೇರ್​ ಮಾಡಿದ್ದಳು. ಫೋಟೊ ನೋಡಿದ ಸಂಬಂಧಿಕರು ಯುವತಿಯ ಪೋಷಕರಿಗೆ ಕರೆ ಮಾಡಿ, ಈ ಹುಡುಗನಿಗೆ ಮೊದಲೇ ಮದುವೆ ಆಗಿದೆ ಎಂದು ತಿಳಿಸಿದ್ದರು. ಆಗ ಗಾಬರಿಗೊಂಡ ಯುವತಿಯ ಪೋಷಕರು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿ ಅಮಾನುಲ್ಲಾ ಬಾಷಾನ ನಿಜ ಬಣ್ಣ ಬಯಲಿಗೆ ಬಂದಿದೆ.

ನಾಲ್ಕನೇ ಯುವತಿಯ ಪೋಷಕರು ಪೋಷಕರು ಪೊಲೀಸ್​ ಠಾಣೆಗೆ ದೂರು ನೀಡಿ,‌ ಆರೋಪಿಯನ್ನ ನಗರಕ್ಕೆ ಕರೆಸಿದ್ದಾರೆ. ಕೆ.ಜಿ ಹಳ್ಳಿ ಠಾಣೆಯಲ್ಲಿ ಆರೋಪಿಯನ್ನ ಪೊಲೀಸರಿ​ಗೆ ಒಪ್ಪಿಸಿದ್ದಾರೆ. ಪೊಲೀಸರು ಪೋಲಿ ಶಿಕ್ಷಕನ ಕೈಗೆ ಈಗ ಕೋಳ ತೊಡಿಸಿ ತನಿಖೆ ಆರಂಭಿಸಿದ್ದಾರೆ.

Intro:KN_BNG_05_29_MARRIEDDOKA_7204498-BHAVYA


ಒಂದಲ್ಲ ಎರಡಲ್ಲ ನಾಲ್ಕು ಮದುವೆಯಾದ ಭೂಪ.
5ನೇ ಮದುವೆಗು ರೆಡಿ, ಜಸ್ಟ್ ಮಿಸ್ಸಾಗಿ ಜೈಲೂಟಕ್ಕೆ ತಟ್ಟೆ ರೆಡಿ.

ರಾಹುಲ್, ಡಿಸಿಪಿ, ಈಸ್ಟ್ ವಿಭಾಗ ಮೋಜೊ ಬೈಟ್ ಇದೆ

ಭವ್ಯ

ಆತ ಹೇಳ್ಕೊಳೋಕೆ ವೃತ್ತಿಯಲ್ಲಿ ಶಿಕ್ಷಕ. ನೂರಾರು ವಿಧ್ಯಾರ್ಥಿಗಳಿಗೆ ಪಾಠ ‌ಹೇಳಿಕೊಡುವ ಗುರು.. ಆದ್ರೆ ಆತ 4 ಜನರ ಯುವತಿಯರ ಬಾಳನ್ನ ಸರ್ವನಾಶ ಮಾಡಿದ್ದಾನೆ. ಅಷ್ಟು ಸಾಲದೆ 5 ನೇ ಯುವತಿಯ ಸಹವಾಸಕ್ಕೆ ರೆಡಿಯಾದವ‌ ಇದೀಗ ಜೈಲೂಟಕ್ಕೆ ತಟ್ಟೆ ಹಿಡಿದಿದ್ದಾನೆ. ಹೆಸರು ಅಮಾನುಲ್ಲಾ ಬಾಷಾ ಮೂಲತಹ ತಮಿಳುನಾಡಿನ ಮದುರೈ ನಿವಾಸಿ. ವೃತ್ತಿಯಲ್ಲಿ ಶಿಕ್ಷಕನಾಗಿದ್ದ ಈತ ದುಬೈನಲ್ಲಿ ನೆಲೆಸಿದ್ದ ಒಂದು ಮದುವೆಯಾಗಿ ಅಚ್ಚುಕಟ್ಟಾಗಿ ಸಂಸಾರ ಮಾಡಿಕೊಂಡಿದ್ರೆ ಇವತ್ತು ಜೈಲಿನಲ್ಲಿ ಮುದ್ದೆ ಮುರಿಯೊ ಗತಿ ಬರ್ತಿರಲಿಲ್ಲ..

ದುಬೈನಲ್ಲೆ ವಾಸವಾಗಿದ್ದ ಈತ ಆಗಾಗ ಬೆಂಗಳೂರಿಗೆ ಬಂದು ವರದಕ್ಷಿಣೆ ಆಸೆಗೆ ಮದುವೆಯಾಗಿ ಮತ್ತೆ ದುಬೈ ಹೋಗ್ತಿದ್ದ.‌ ಆದ್ರೆ ಇತ್ತೀಚೆಗೆ ಬೆಂಗಳೂರಿಗೆ ಬಂದವ ಹಣದ ಆಸೆಗೆ ಕೆ.ಜಿ ಹಳ್ಳಿಯ ನಿವಾಸಿಯೊಬ್ಬರ ಮಗಳನ್ನ ಇದೇ ತಿಂಗಳು 23 ರಂದು ಅದ್ದೂರಿಯಾಗಿ ನಾಲ್ಕನೇ ಮದುವೆಯಾಗಿದ್ದ. ಲಕ್ಷಗಟ್ಟಲೆ ಖರ್ಚು ಮಾಡಿ ಯುವತಿಯ ಪೋಷಕರು ಮದುವೆ ಮಾಡಿಸಿಕೊಟ್ಟಿದ್ರು. ಮದುವೆ ನಂತರ ಅಮಾನುಲ್ಲಾ ಬಾಷಾ ಹೆಂಡತಿಯ ಜೊತೆ ತಮಿಳುನಾಡು ಮದುರೈನ ಸ್ವಂತ ಊರಿಗೆ ಹೋಗಿದ್ದ. ಆದ್ರೆ ಯುವತಿ ಮದುವೆ ಫೋಟೋಗಳನ್ನ ತನ್ನ ಫೇಸ್ ಬುಕ್ ನಲ್ಲಿ ಹಂಚಿಕೊಂಡಿದ್ಲು. ಮದುವೆ ಫೋಟೋ ನೋಡಿದ ಅನೇಕರು ಯುವತಿಯ ಪೋಷಕರಿಗೆ ಕರೆ ಮಾಡಿ ಈ ಹುಡುಗನಿಗೆ ಮೊದಲೆ ಮದುವೆ ಆಗಿದೆ ಅಂತ ತಿಳಿಸಿದ್ದಾರೆ. ಗಾಬರಿಗೊಂಡ ಯುವತಿಯ ಪೋಷಕರು ಸಂಬಂಧಿಕರ ಮೂಲಕ ವಿಚಾರಿಸಿದಾಗ ಆರೋಪಿ ಅಮಾನುಲ್ಲಾ ಬಾಷಾ ನ ನಿಜ ಬಣ್ಣ ಬಯಲಿಗೆ ಬಂದಿದೆ. ನಂತರ ಹುಡುಗಿ ಪೋಷಕರು ಫ್ಲಾನ್ ಮಾಡಿ‌ ಆರೋಪಿಯನ್ನ ನಗರಕ್ಕೆ ಕರೆಸಿ ಸೀದಾಕೆ.ಜಿ ಹಳ್ಳಿ ಠಾಣೆಗೆ ಕರೆದೊಯ್ಯುದು ಆರೋಪಿಯನ್ನ ಪೊಲೀಸ್ರಿಗೆ ಒಪ್ಪಿಸಿದ್ದಾರೆ. ಇನ್ನು ಪೊಲೀಸ್ ತನಿಖೆಯಲ್ಲಿ ಈಕೆಯನ್ನ ಬಿಟ್ಟು 5ನೇ ಮದುವೆಯಾಗೋದಕ್ಕೆ ಈತ ರೆಡಿಯಾಗಿದ್ದಖತರ್ನಾಕ್ ಚೋರ ಅನ್ನೋದು ತಿಳಿದು ಬಂದಿದೆ‌. ಆದ್ರೆ 5ನೇ ಮದುವೆ ಕನಸು ಕಂಡಿದ್ದ ಆರೋಪಿಗೆ ಕಂಕಣ ಕಟ್ಟುವ ಮೊದಲೇ ಪೊಲೀಸ್ರು ಕೋಳ ತೊಡಿಸಿ ತನಿಖೆ ಮುಂದುವರೆಸಿದ್ದಾರೆBody:KN_BNG_05_29_MARRIEDDOKA_7204498-BHAVYAConclusion:KN_BNG_05_29_MARRIEDDOKA_7204498-BHAVYA
ETV Bharat Logo

Copyright © 2024 Ushodaya Enterprises Pvt. Ltd., All Rights Reserved.