ETV Bharat / briefs

ಭವಿಷ್ಯದ ಭಾರತ ತಂಡಕ್ಕೆ ಹಾರ್ದಿಕ್​ ಪಾಂಡ್ಯರಿಂದ ಉತ್ತಮ ಕೊಡುಗೆ ಸಿಗಲಿದೆ: ಪೊಲಾರ್ಡ್​ ಭವಿಷ್ಯ

author img

By

Published : May 2, 2019, 8:53 PM IST

ಹಾರ್ದಿಕ್​ ಪಾಂಡ್ಯ ಮುಂಬೈ ತಂಡಕ್ಕೆ ನೀಡುತ್ತಿರುವ ಕೊಡುಗೆಯನ್ನು ಖಂಡಿತ ಭಾರತ ತಂಡಕ್ಕೂ ನೀಡಲಿದ್ದಾರೆ. ತಂಡದ ಪರಿಸ್ಥಿತಿ ತಕ್ಕಂತೆ ಬ್ಯಾಟಿಂಗ್​ ನಡೆಸುವ ಪಾಂಡ್ಯ ಕರಗತ ಮಾಡಿಕೊಂಡಿದ್ದಾರೆ. ಅವರಿಂದ ಮುಂದಿನ ದಿನಗಳಲ್ಲಿ ಇನ್ನೂ ಉತ್ತಮ ಪ್ರದರ್ಶನ ಕಂಡುಬರಲಿದೆ ಎಂದು ಪೊಲಾರ್ಡ್​ ಭವಿಷ್ಯ ನುಡಿದಿದ್ದಾರೆ.

mi

ಮುಂಬೈ: ಮುಂಬೈ ತಂಡದ ಪರ ಮಿಂಚುತ್ತಿರುವ ಯುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಖಂಡಿತ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದು ವಿಂಡೀಸ್​ ದಿಗ್ಗಜ ಕೀರನ್​ ಪೊಲಾರ್ಡ್​ ಅಭಿಪ್ರಾಯ ಪಟ್ಟಿದ್ದಾರೆ.

ಹಾರ್ದಿಕ್​ ಪಾಂಡ್ಯ ಸಪೂರವಾಗಿದ್ದರು ದೊಡ್ಡ ಸಿಕ್ಸರ್​ ಬಾರಿಸುವಲ್ಲಿ ನೈಪುಣ್ಯತೆ ಪಡೆದುಕೊಂಡಿದ್ದಾರೆ. ಅವರೂ ಕೂಡ ಎಲ್ಲರಂತೆ ಅಭ್ಯಾಸ ಮಾಡಿದರೂ ತನ್ನ ಮೇಲೆ ಹೆಚ್ಚಿನ ಆತ್ಮ ವಿಶ್ವಾಸ ಹೊಂದಿರುವುದರಿಂದ ತಮ್ಮ ಕೌಶಲ್ಯಗಳನ್ನು ಮೈದಾನದಲ್ಲಿ ಕಾರ್ಯರೂಪಕ್ಕೆ ತರುತ್ತಾರೆ. ಇದು ಮುಂಬೈ ಇಂಡಿಯನ್ಸ್​ಗೆ ಮಾತ್ರವಲ್ಲ, ಭಾರತ ತಂಡದಲ್ಲೂ ಮುಂದುವರಿಸಲಿದ್ದಾರೆ ಎಂದು ಪೊಲಾರ್ಡ್,​ ಪಾಂಡ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂಡದ ಪರಿಸ್ಥಿತಿಗೆ ತಕ್ಕಂತ ಆಟ ಆಡುವುದನ್ನು ಪಂದ್ಯ ರೂಡಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಪಾಂಡ್ಯ ಬ್ಯಾಟಿಂಗ್​ ನೋಡಿದರೆ ತಿಳಿಯುತ್ತದೆ. ತಂಡ ಸಂಕಷ್ಟದಲ್ಲಿ ಹಾರ್ದಿಕ್​ ಪಾಂಡ್ಯ ಯಾವ ರೀತಿ ತಮ್ಮ ಜವಾಬ್ದಾರಿ ನಿರ್ಧರಿಸುತ್ತಾರೆ ಎಂಬುದನ್ನ ಮೊನ್ನೆ ನಡೆದ ಕೆಕೆಆರ್​ ವಿರುದ್ಧ ಪಂದ್ಯದಲ್ಲಿ ಸಾಭೀತಾಗಿದೆ ಎಂದರು.

233 ರನ್​ಗಳ ಬೃಹತ್​ ಮೊತ್ತ ಬೆನ್ನೆತ್ತಿದ ಮುಂಬೈ ಇಂಡಿಯನ್ಸ್​​ ಆರಂಭಿಕ ಆಟಗಾರರೆಲ್ಲಾ ವಿಕೆಟ್​ ಒಪ್ಪಿಸಿದರೂ ಪಾಂಡ್ಯ ಏಕಾಂಗಿಯಾಗಿ ಹೋರಾಡಿ ಕೇವಲ 34 ಎಸೆತಗಳಲ್ಲಿ 81 ರನ್​ ಸಿಡಿಸಿದ್ದರು. ಇದರಲ್ಲಿ ಬರೋಬ್ಬರಿ 9 ಸಿಕ್ಸರ್​ ಕೂಡ ಸೇರಿತ್ತು. ಈ ಪಂದ್ಯ ಮಾತ್ರವಲ್ಲದೆ ಪಾಂಡ್ಯ ಟೂರ್ನಿಯಲ್ಲಿ 6ನೇ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯುತ್ತಿದ್ದು, 198.32 ರ ಸ್ಟ್ರೈಕ್​ರೇಟ್​ನಲ್ಲಿ 355 ರನ್​ಗಳಿಸಿದ್ದಾರೆ.

ಇನ್ನು ಇಂದು ನಡೆಯಲಿರುವ ಎಸ್​ಆರ್​ಹೆಚ್​ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಪೊಲಾರ್ಡ್​, ವಾರ್ನರ್​ ಅನುಪಸ್ಥಿತಿ ಖಂಡಿತ ನಮಗೆ ಅನುಕೂಲವಾಗಿದೆ. ಟೂರ್ನಿಯುದ್ದಕ್ಕೂ ವಾರ್ನರ್​ ಸನ್​ರೈಸರ್ಸ್​ ತಂಡಕ್ಕೆ ಯಾವರೀತಿ ನೆರವಾಗಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಹೀಗಾಗಿ ಅವರ ಅನುಪಸ್ಥಿತಿ ಎದುರಾಳಿಗಳಿ ತಂಡಕ್ಕೆ ಖಂಡಿತ ಲಾಭವಾಗಲಿದೆ. ಆದರೆ ಇವರ ಜಾಗದಲ್ಲಿ ಆಡಲಿರುವ ಗಪ್ಟಿಲ್​ರನ್ನು ಸಹಾ ಕಡೆಗಣಿಸುವ ಆಗಿಲ್ಲ ಎಂದಿದ್ದಾರೆ.

ಮುಂಬೈ: ಮುಂಬೈ ತಂಡದ ಪರ ಮಿಂಚುತ್ತಿರುವ ಯುವ ಆಲ್​ರೌಂಡರ್​ ಹಾರ್ದಿಕ್​ ಪಾಂಡ್ಯ ಖಂಡಿತ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಎಂದು ವಿಂಡೀಸ್​ ದಿಗ್ಗಜ ಕೀರನ್​ ಪೊಲಾರ್ಡ್​ ಅಭಿಪ್ರಾಯ ಪಟ್ಟಿದ್ದಾರೆ.

ಹಾರ್ದಿಕ್​ ಪಾಂಡ್ಯ ಸಪೂರವಾಗಿದ್ದರು ದೊಡ್ಡ ಸಿಕ್ಸರ್​ ಬಾರಿಸುವಲ್ಲಿ ನೈಪುಣ್ಯತೆ ಪಡೆದುಕೊಂಡಿದ್ದಾರೆ. ಅವರೂ ಕೂಡ ಎಲ್ಲರಂತೆ ಅಭ್ಯಾಸ ಮಾಡಿದರೂ ತನ್ನ ಮೇಲೆ ಹೆಚ್ಚಿನ ಆತ್ಮ ವಿಶ್ವಾಸ ಹೊಂದಿರುವುದರಿಂದ ತಮ್ಮ ಕೌಶಲ್ಯಗಳನ್ನು ಮೈದಾನದಲ್ಲಿ ಕಾರ್ಯರೂಪಕ್ಕೆ ತರುತ್ತಾರೆ. ಇದು ಮುಂಬೈ ಇಂಡಿಯನ್ಸ್​ಗೆ ಮಾತ್ರವಲ್ಲ, ಭಾರತ ತಂಡದಲ್ಲೂ ಮುಂದುವರಿಸಲಿದ್ದಾರೆ ಎಂದು ಪೊಲಾರ್ಡ್,​ ಪಾಂಡ್ಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಂಡದ ಪರಿಸ್ಥಿತಿಗೆ ತಕ್ಕಂತ ಆಟ ಆಡುವುದನ್ನು ಪಂದ್ಯ ರೂಡಿಸಿಕೊಂಡಿದ್ದಾರೆ. ಈ ಬಾರಿಯ ಐಪಿಎಲ್​ನಲ್ಲಿ ಪಾಂಡ್ಯ ಬ್ಯಾಟಿಂಗ್​ ನೋಡಿದರೆ ತಿಳಿಯುತ್ತದೆ. ತಂಡ ಸಂಕಷ್ಟದಲ್ಲಿ ಹಾರ್ದಿಕ್​ ಪಾಂಡ್ಯ ಯಾವ ರೀತಿ ತಮ್ಮ ಜವಾಬ್ದಾರಿ ನಿರ್ಧರಿಸುತ್ತಾರೆ ಎಂಬುದನ್ನ ಮೊನ್ನೆ ನಡೆದ ಕೆಕೆಆರ್​ ವಿರುದ್ಧ ಪಂದ್ಯದಲ್ಲಿ ಸಾಭೀತಾಗಿದೆ ಎಂದರು.

233 ರನ್​ಗಳ ಬೃಹತ್​ ಮೊತ್ತ ಬೆನ್ನೆತ್ತಿದ ಮುಂಬೈ ಇಂಡಿಯನ್ಸ್​​ ಆರಂಭಿಕ ಆಟಗಾರರೆಲ್ಲಾ ವಿಕೆಟ್​ ಒಪ್ಪಿಸಿದರೂ ಪಾಂಡ್ಯ ಏಕಾಂಗಿಯಾಗಿ ಹೋರಾಡಿ ಕೇವಲ 34 ಎಸೆತಗಳಲ್ಲಿ 81 ರನ್​ ಸಿಡಿಸಿದ್ದರು. ಇದರಲ್ಲಿ ಬರೋಬ್ಬರಿ 9 ಸಿಕ್ಸರ್​ ಕೂಡ ಸೇರಿತ್ತು. ಈ ಪಂದ್ಯ ಮಾತ್ರವಲ್ಲದೆ ಪಾಂಡ್ಯ ಟೂರ್ನಿಯಲ್ಲಿ 6ನೇ ಬ್ಯಾಟ್ಸ್​ಮನ್​ ಆಗಿ ಕಣಕ್ಕಿಳಿಯುತ್ತಿದ್ದು, 198.32 ರ ಸ್ಟ್ರೈಕ್​ರೇಟ್​ನಲ್ಲಿ 355 ರನ್​ಗಳಿಸಿದ್ದಾರೆ.

ಇನ್ನು ಇಂದು ನಡೆಯಲಿರುವ ಎಸ್​ಆರ್​ಹೆಚ್​ ವಿರುದ್ಧ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿರುವ ಪೊಲಾರ್ಡ್​, ವಾರ್ನರ್​ ಅನುಪಸ್ಥಿತಿ ಖಂಡಿತ ನಮಗೆ ಅನುಕೂಲವಾಗಿದೆ. ಟೂರ್ನಿಯುದ್ದಕ್ಕೂ ವಾರ್ನರ್​ ಸನ್​ರೈಸರ್ಸ್​ ತಂಡಕ್ಕೆ ಯಾವರೀತಿ ನೆರವಾಗಿದ್ದರು ಎಂಬುದನ್ನು ನಾವು ನೋಡಿದ್ದೇವೆ. ಹೀಗಾಗಿ ಅವರ ಅನುಪಸ್ಥಿತಿ ಎದುರಾಳಿಗಳಿ ತಂಡಕ್ಕೆ ಖಂಡಿತ ಲಾಭವಾಗಲಿದೆ. ಆದರೆ ಇವರ ಜಾಗದಲ್ಲಿ ಆಡಲಿರುವ ಗಪ್ಟಿಲ್​ರನ್ನು ಸಹಾ ಕಡೆಗಣಿಸುವ ಆಗಿಲ್ಲ ಎಂದಿದ್ದಾರೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.