ETV Bharat / briefs

ಆಯತಪ್ಪಿದ ಎತ್ತಿನ ಬಂಡಿ: ನಾಲ್ವರ ಸಾವು, ಸಂಬಂಧಿಕರ ಗೋಳಾಟ

ಉದ್ದೂರು ಹೊಸಹಳ್ಳಿ ಗ್ರಾಮದ ರೈತ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಜೋಳ ಬಿತ್ತನೆಗೆ ಹೊಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

author img

By

Published : Jun 1, 2019, 8:51 PM IST

ಸಾವನಪ್ಪಿದ ರೈತ ಕುಟುಂಬ

ಹಾಸನ: ಮುಂಗಾರು ಮಳೆ ಪ್ರಾರಂಭವಾಗಿದ್ದರಿಂದ ಸಾಮಾಗ್ರಿಗಳೊಂದಿಗೆ ಹೊಲಕ್ಕೆ ಜೋಳ ಬಿತ್ತನೆಗೆ ತೆರಳುತ್ತಿದ್ದಾಗ ಆಯತಪ್ಪಿದ ಎತ್ತಿನ ಬಂಡಿ ಕೆರೆಗೆ ಉರುಳಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನದ ಉದ್ದೂರು ಗ್ರಾಮದ ಕೆರೆಗೆ ಬಿದ್ದು ರೈತ ಕುಟುಂಬದ ನಾಲ್ವರು ಸಾವು

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿಯ ಉದ್ದೂರು ಹೊಸಹಳ್ಳಿ ಗ್ರಾಮದಲ್ಲಿಈ ದುರ್ಘಟನೆ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ರಾಜೇಗೌಡ (50), ಶಾರದ (45) ರುಚಿತ (6) ಮತ್ತು ಧೃತಿ(5) ಸಾವಿಗೀಡಾಗಿದ್ದಾರೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ಬಿತ್ತನೆ ಸಾಮಗ್ರಿಗಳನ್ನೆಲ್ಲಾ ಎತ್ತಿನ ಗಾಡಿಗೆ ತುಂಬಿಕೊಂಡು ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮೈಸೂರಿನಿಂದ ತಾತನ ಮನೆಯಲ್ಲಿ ರಜೆ ಕಳೆಯಲು ಬಂದ ರುಚಿತಾ, ಧೃತಿ ಹಠ ಹಿಡಿದು ಹೊಲಕ್ಕೆ ಹೊರಟವರು ಬಾರದ ಲೋಕಕ್ಕೆ ತೆರಳಿದ್ದಾರೆ. ರಾಜೇಗೌಡರ ಜಮೀನಿಗೆ ಹೋಗಲು ಪ್ರತ್ಯೇಕ ದಾರಿ ಇದ್ದರೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೆರೆಯ ಮೈದಾನದ ಮಧ್ಯೆಯೇ ಎತ್ತಿನಗಾಡಿ ತೆಗೆದುಕೊಂಡು ಹೊರಟಿದ್ದಾರೆ.

ಬೇಸಿಗೆಯಲ್ಲಿ ಕೆರೆ ನೀರು ಖಾಲಿಯಾದಾಗ ಗೋಡು ತೆಗೆದಿದ್ದರಿಂದ ಆಳವಾದ ಗುಂಡಿಗಳು ಬಿದ್ದಿದ್ದವು. ಮಳೆ ಬಂದು ದೊಡ್ಡ ಗುಂಡಿಗಳು ತುಂಬಿಕೊಂಡಿದ್ದು, ರಾಜೇಗೌಡ ಗುಂಡಿಯ ಪಕ್ಕದಲ್ಲೇ ಎತ್ತಿನ ಗಾಡಿ ಚಲಾಯಿಸಿದ್ದಾರೆ. ಗಾಡಿ ಕೆರೆಗೆ ಬಿದ್ದು ಸಂಪೂರ್ಣ ಮುಳುಗಿ ನಾಲ್ವರೂ ಗಾಡಿ ಕೆಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಎತ್ತುಗಳು ತಮಗೆ ಹೂಡಿದ್ದ ಕುಣಿಕೆಯನ್ನು ಬಿಚ್ಚಿಕೊಂಡು ಹೊರ ಜಿಗಿದಿವೆ.

ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಚೇತನ್ ಸಿಂಗ್ ರಾಥೋರ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಾಸನ: ಮುಂಗಾರು ಮಳೆ ಪ್ರಾರಂಭವಾಗಿದ್ದರಿಂದ ಸಾಮಾಗ್ರಿಗಳೊಂದಿಗೆ ಹೊಲಕ್ಕೆ ಜೋಳ ಬಿತ್ತನೆಗೆ ತೆರಳುತ್ತಿದ್ದಾಗ ಆಯತಪ್ಪಿದ ಎತ್ತಿನ ಬಂಡಿ ಕೆರೆಗೆ ಉರುಳಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನದ ಉದ್ದೂರು ಗ್ರಾಮದ ಕೆರೆಗೆ ಬಿದ್ದು ರೈತ ಕುಟುಂಬದ ನಾಲ್ವರು ಸಾವು

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿಯ ಉದ್ದೂರು ಹೊಸಹಳ್ಳಿ ಗ್ರಾಮದಲ್ಲಿಈ ದುರ್ಘಟನೆ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ರಾಜೇಗೌಡ (50), ಶಾರದ (45) ರುಚಿತ (6) ಮತ್ತು ಧೃತಿ(5) ಸಾವಿಗೀಡಾಗಿದ್ದಾರೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ಬಿತ್ತನೆ ಸಾಮಗ್ರಿಗಳನ್ನೆಲ್ಲಾ ಎತ್ತಿನ ಗಾಡಿಗೆ ತುಂಬಿಕೊಂಡು ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮೈಸೂರಿನಿಂದ ತಾತನ ಮನೆಯಲ್ಲಿ ರಜೆ ಕಳೆಯಲು ಬಂದ ರುಚಿತಾ, ಧೃತಿ ಹಠ ಹಿಡಿದು ಹೊಲಕ್ಕೆ ಹೊರಟವರು ಬಾರದ ಲೋಕಕ್ಕೆ ತೆರಳಿದ್ದಾರೆ. ರಾಜೇಗೌಡರ ಜಮೀನಿಗೆ ಹೋಗಲು ಪ್ರತ್ಯೇಕ ದಾರಿ ಇದ್ದರೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೆರೆಯ ಮೈದಾನದ ಮಧ್ಯೆಯೇ ಎತ್ತಿನಗಾಡಿ ತೆಗೆದುಕೊಂಡು ಹೊರಟಿದ್ದಾರೆ.

ಬೇಸಿಗೆಯಲ್ಲಿ ಕೆರೆ ನೀರು ಖಾಲಿಯಾದಾಗ ಗೋಡು ತೆಗೆದಿದ್ದರಿಂದ ಆಳವಾದ ಗುಂಡಿಗಳು ಬಿದ್ದಿದ್ದವು. ಮಳೆ ಬಂದು ದೊಡ್ಡ ಗುಂಡಿಗಳು ತುಂಬಿಕೊಂಡಿದ್ದು, ರಾಜೇಗೌಡ ಗುಂಡಿಯ ಪಕ್ಕದಲ್ಲೇ ಎತ್ತಿನ ಗಾಡಿ ಚಲಾಯಿಸಿದ್ದಾರೆ. ಗಾಡಿ ಕೆರೆಗೆ ಬಿದ್ದು ಸಂಪೂರ್ಣ ಮುಳುಗಿ ನಾಲ್ವರೂ ಗಾಡಿ ಕೆಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಎತ್ತುಗಳು ತಮಗೆ ಹೂಡಿದ್ದ ಕುಣಿಕೆಯನ್ನು ಬಿಚ್ಚಿಕೊಂಡು ಹೊರ ಜಿಗಿದಿವೆ.

ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಚೇತನ್ ಸಿಂಗ್ ರಾಥೋರ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಹಾಸನ: ಕಳೆದ ವಾರದಿಂದ ಹಾಸನ ಜಿಲ್ಲೆಯ ಕೆಲ ತಾಲ್ಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ. ಮುಂಗಾರು ಶುರುವಾಗಿದ್ದರಿಂದ ರೈತರು ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ. ಇಂದು ಬೆಳಿಗ್ಗೆ ಹೊಲಕ್ಕೆ ಜೋಳ ಬಿತ್ತನೆ ಮಾಡಲು ಎತ್ತಿನ ಗಾಡಿಯಲ್ಲಿ ಹೋಗುತ್ತಿದ್ದ ರೈತ ಕುಟುಂಬವೊಂದು ಆಯ ತಪ್ಪಿ ಕೆರೆಗೆ ಬಿದ್ದು ಗಾಡಿಯಲ್ಲಿದ್ದ ನಾಲ್ವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಬೆಳ್ಳಂಬೆಳಗ್ಗೆ ಜವರಾಯ ತನ್ನ ಅಟ್ಟಹಾಸ ಮೆರೆದಿದ್ದಾನೆ. ಹಾಗಾದ್ರೆ ಆ ಘಟನೆ ನೆಡೆದಿದ್ದೆಲ್ಲಿ..? ಹೇಗಾಯ್ತು ಆ ಘಟನೆ ಅನ್ನೋದನ್ನ ಹೇಳ್ತೀವಿ ಈ ಸ್ಟೋರಿ ನೋಡಿ...

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿಯ ಉದ್ದೂರು ಹೊಸಹಳ್ಳಿ ಗ್ರಾಮದ ರೈತ ರಾಜೇಗೌಡ(50) ಮತ್ತು ಶಾರದ(45) ರುಚಿತ (6) ಮತ್ತು ದೃತಿ(5) ಸಾವಿಗೀಡಾದ ನತದೃಷ್ಟರು. ಹೊಲಕ್ಕೆ ಜೋಳ ಬಿತ್ತಲು ಬೆಳಿಗ್ಗೆ ಸುಮಾರು ಒಂಬತ್ತು ಗಂಟೆ ಸಮಯಕ್ಕೆ ಬೇಕಾಗಿರುವ ಬಿತ್ತನೆ ಸಾಮಗ್ರಿಗಳನ್ನೆಲ್ಲಾ ಎತ್ತಿನ ಗಾಡಿಗೆ ತುಂಬಿಕೊಂಡು ಹೊರಟಿದ್ದಾರೆ. ಇವರ ಮನೆಯ ಪಕ್ಕದಲ್ಲೇ ಇರುವ ಸಾಕಮ್ಮ ಮತ್ತು ವೆಂಕಟೇಶ್ ದಂಪತಿಯ ಮೊಮ್ಮಕ್ಕಳಾದ ಮೈಸೂರಿನಿಂದ ತಾತನ ಮನೆಗೆ ಶಾಲಾ ರಜೆ ಕಳೆಯಲು ಬಂದು ಜವರಾಯನ ಪಾದ ಸೇರಿದ್ದಾರೆ. ರಾಜೇಗೌಡರ ಸಂಬಂಧಿಕರೇ ಆಗಿರುವ ಈ ಮಕ್ಕಳು ಇವರೊಂದಿಗೆ ಅನ್ಯೂನ್ಯವಾಗಿಯೇ ಇದ್ದಿದ್ದರಿಂದ ನಾವು ಕೂಡ ನಿಮ್ಮ ಜೊತೆ ಹೊಲಕ್ಕೆ ಬರುವುದಾಗಿ ಹಠ ಹಿಡಿದಿವೆ. ಮಕ್ಕಳ ಹಠಕ್ಕೆ ತಾತ ವೆಂಕಟೇಶ್ ರ ಅನುಮತಿಯೊಂದಿಗೆ ಎತ್ತಿನ ಗಾಡಿಯಲ್ಲಿ ಕೂರಿಸಿಕೊಂಡು ರಾಜೇಗೌಡ ದಂಪತಿ ಹೊಲಕ್ಕೆ ಹೊರಟಿದ್ದಾರೆ.

ರಾಜೇಗೌಡರ ಜಮೀನಿಗೆ ಹೋಗಲು ಪ್ರತ್ಯೇಕ ದಾರಿ ಇದ್ದರೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೆರೆಯ ಮೈದಾನದ ಮದ್ಯೆಯೇ ಎತ್ತಿನಗಾಡಿ ತೆಗೆದುಕೊಂಡು ದಾರಿಯಲ್ಲಿಯೇ ಹೊರಟಿದ್ದಾರೆ. ಬೇಸಿಗೆಯಲ್ಲಿ ಕೆರೆ ಖಾಲಿ ಇದ್ದುದ್ರಿಂದ ಗೋಡು ತೆಗೆದಿದ್ದ ಕೆರೆಯಲ್ಲಿ ಆಳವಾದ ಗುಂಡಿಗಳು ಬಿದ್ದಿದ್ದವು. ಆದ್ರೆ ಈಗ ಮಳೆ ಬಂದಿದ್ದರಿಂದ ದೊಡ್ಡ ಗುಂಡಿಗಳು ತುಂಬಿಕೊಂಡಿದ್ದು ರಾಜೇಗೌಡ ಅರಿಯದೆ ಗುಂಡಿಯ ಪಕ್ಕದಲ್ಲೇ ಗಾಡಿ ಚಲಾಯಿಸಿದ್ದಾರೆ.

ಗಾಡಿ ಗುಂಡಿಗೆ ಎಳೆದು ಸಂಪೂರ್ಣ ಮುಳುಗಿ ಈ ನಾಲ್ವರೂ ಗಾಡಿ ಕೆಳಗೆ ಸಿಲುಕಿದ್ದು, ಹೊರ ಬರಲಾಗದೇ ಪ್ರಾಣ ಬಿಟ್ಟಿದ್ದಾರೆ. ಎತ್ತುಗಳು ತಮಗೆ ಹೂಡಿದ್ದ ಕುಣಿಕೆಯನ್ನು ಬಿಚ್ಚಿಕೊಂಡು ಅದೃಷ್ಟವಶಾತ್ ಹೊರಬಂದಿವೆ.

ಬೈಟ್- ಚೇತನ್ ಸಿಂಗ್ ರಾಥೋರ್ ಎಸ್ಪಿ ಹಾಸನ.

ಈ ನಾಲ್ವರು ಹೋಗುವ ದಾರಿಯಲ್ಲೇ ಕಾದು ಕುಳಿತಿದ್ದ ಜವರಾಯನ ಅಟ್ಟಹಾಸಕ್ಕೆ ರೈತರಾದ ರಾಜೇಗೌಡ, ಶಾರದ ಮೃತಪಟ್ಟರೆ ಏನು ಅರಿಯದೇ ತಾತನ ಮನೆಗೆ ರಜೆಯ ಮಜಾ ಅನುಭವಿಸಲು ಬಂದು ಹೊಲಕ್ಕೆ ಹೋಗುವ ಆಸೆ ಪಟ್ಟು ಎತ್ತಿನ ಗಾಡಿ ಏರಿದ ಮಕ್ಕಳು ಇಹಲೋಕವನ್ನೇ ತ್ಯಜಿಸಿದಂತಾಗಿದೆ. ಇನ್ನು ಘಟನೆ ತಿಳಿದು ಆಗಮಿಸಿದ್ದ ಇವರ ಸಂಬಂಧಿಕರುಗಳ, ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಸ್ಥಳಕ್ಕೆ ಹಾಸನ ಎಸ್ಪಿ ಚೇತನ್ ಸಿಂಗ್ ರಾಥೋರ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನBody:0Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.