ETV Bharat / bharat

ಆಂಧ್ರ ಸಿಎಂ ಜಗನ್​ ತಾಯಿ ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಬಳಿ ಅಪಘಾತ

ಆಂಧ್ರಪ್ರದೇಶ ಮುಖ್ಯಮಂತ್ರಿ ವೈ ಎಸ್​​ ಆರ್ ಜಗನ್ ಮೋಹನ್ ರೆಡ್ಡಿ ಅವರ ತಾಯಿ ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಬಳಿ ಅಪಘಾತಕ್ಕೀಡಾಗಿದೆ.

author img

By

Published : Aug 11, 2022, 5:45 PM IST

YS Vijayamma escapes a major accident
YS Vijayamma escapes a major accident

ಕರ್ನೂಲ್​(ಆಂಧ್ರಪ್ರದೇಶ): ಮುಖ್ಯಮಂತ್ರಿ ವೈ ಎಸ್​ ಜಗನ್​ಮೋಹನ್​ ರೆಡ್ಡಿ ಅವರ ತಾಯಿ ವಿಜಯಮ್ಮ ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಬಳಿ ಅಪಘಾತಕ್ಕೀಡಾಗಿದ್ದು,​ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಎರಡು ಟೈರ್‌ಗಳು ಏಕಕಾಲದಲ್ಲಿ​​ ಸ್ಫೋಟಗೊಂಡು ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರು ನಿಯಂತ್ರಿಸುವಲ್ಲಿ ಚಾಲಕ​ ಯಶಸ್ವಿಯಾಗಿದ್ದು, ಅನಾಹುತ ಸಂಭವಿಸಿಲ್ಲ.

ಮಾಜಿ ಶಾಸಕಿ ವಿಜಯಮ್ಮ ತಮ್ಮ ಪತಿ ದಿವಂಗತ ವೈ.ಎಸ್​​ ರಾಜಶೇಖರರೆಡ್ಡಿ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲು ಕರ್ನೂಲ್​​ಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಗುತ್ತಿ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಆ ಬಳಿಕ ಅವರು ಮತ್ತೊಂದು ಕಾರಿನ ಮೂಲಕ ಹೈದರಾಬಾದ್​ಗೆ ತೆರಳಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಬಿಂದಾಸ್​ ಸಿಗರೇಟ್ ಸೇದಿದ ಪ್ರಯಾಣಿಕ: ​ತನಿಖೆಗೆ ಆದೇಶಿಸಿದ ಸಚಿವ ಸಿಂಧಿಯಾ

ಕಳೆದ ತಿಂಗಳು ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ ರಾಜೀನಾಮೆ ನೀಡಿದ್ದಾರೆ. 2009ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಪತಿ ರಾಜಶೇಖರ್ ರೆಡ್ಡಿ ದುರ್ಮರಣಕ್ಕೀಡಾಗಿದ್ದಾರೆ. ಆ ಬಳಿಕ ವಿಜಯಮ್ಮ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಕಡಪಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. 2014ರಲ್ಲಿ ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ಇತ್ತೀಚೆಗೆ ಟಿಡಿಪಿ ಮುಖಂಡ ವಿಷ್ಣುವರ್ಧನ್ ರೆಡ್ಡಿ ಅವರ ಪುತ್ರ ಆಲಂಪುರ ಚೌರಸ್ತಾದಲ್ಲಿ ಕಾರಿನ ಎರಡು ಟೈರ್‌ ಸ್ಫೋಟಗೊಂಡು ಮೃತಪಟ್ಟಿದ್ದರು.

ಕರ್ನೂಲ್​(ಆಂಧ್ರಪ್ರದೇಶ): ಮುಖ್ಯಮಂತ್ರಿ ವೈ ಎಸ್​ ಜಗನ್​ಮೋಹನ್​ ರೆಡ್ಡಿ ಅವರ ತಾಯಿ ವಿಜಯಮ್ಮ ಪ್ರಯಾಣಿಸುತ್ತಿದ್ದ ಕಾರು ಕರ್ನೂಲ್ ಬಳಿ ಅಪಘಾತಕ್ಕೀಡಾಗಿದ್ದು,​ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನ ಎರಡು ಟೈರ್‌ಗಳು ಏಕಕಾಲದಲ್ಲಿ​​ ಸ್ಫೋಟಗೊಂಡು ಘಟನೆ ನಡೆದಿದೆ. ಈ ಸಂದರ್ಭದಲ್ಲಿ ಕಾರು ನಿಯಂತ್ರಿಸುವಲ್ಲಿ ಚಾಲಕ​ ಯಶಸ್ವಿಯಾಗಿದ್ದು, ಅನಾಹುತ ಸಂಭವಿಸಿಲ್ಲ.

ಮಾಜಿ ಶಾಸಕಿ ವಿಜಯಮ್ಮ ತಮ್ಮ ಪತಿ ದಿವಂಗತ ವೈ.ಎಸ್​​ ರಾಜಶೇಖರರೆಡ್ಡಿ ಸ್ನೇಹಿತನ ಕುಟುಂಬವನ್ನು ಭೇಟಿ ಮಾಡಲು ಕರ್ನೂಲ್​​ಗೆ ತೆರಳಿದ್ದರು. ಅಲ್ಲಿಂದ ವಾಪಸ್ ಬರುತ್ತಿದ್ದಾಗ ಗುತ್ತಿ ಪೆಟ್ರೋಲ್ ಬಂಕ್ ಬಳಿ ಘಟನೆ ನಡೆದಿದೆ. ಆ ಬಳಿಕ ಅವರು ಮತ್ತೊಂದು ಕಾರಿನ ಮೂಲಕ ಹೈದರಾಬಾದ್​ಗೆ ತೆರಳಿದ್ದಾರೆ.

ಇದನ್ನೂ ಓದಿ: ವಿಮಾನದಲ್ಲಿ ಬಿಂದಾಸ್​ ಸಿಗರೇಟ್ ಸೇದಿದ ಪ್ರಯಾಣಿಕ: ​ತನಿಖೆಗೆ ಆದೇಶಿಸಿದ ಸಚಿವ ಸಿಂಧಿಯಾ

ಕಳೆದ ತಿಂಗಳು ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಗೌರವಾಧ್ಯಕ್ಷ ಸ್ಥಾನಕ್ಕೆ ವಿಜಯಮ್ಮ ರಾಜೀನಾಮೆ ನೀಡಿದ್ದಾರೆ. 2009ರಲ್ಲಿ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಪತಿ ರಾಜಶೇಖರ್ ರೆಡ್ಡಿ ದುರ್ಮರಣಕ್ಕೀಡಾಗಿದ್ದಾರೆ. ಆ ಬಳಿಕ ವಿಜಯಮ್ಮ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿ ಕಡಪಾ ಕ್ಷೇತ್ರದಿಂದ ಅವಿರೋಧವಾಗಿ ಆಯ್ಕೆಯಾಗಿದ್ದರು. 2014ರಲ್ಲಿ ವಿಶಾಖಪಟ್ಟಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು.

ಇತ್ತೀಚೆಗೆ ಟಿಡಿಪಿ ಮುಖಂಡ ವಿಷ್ಣುವರ್ಧನ್ ರೆಡ್ಡಿ ಅವರ ಪುತ್ರ ಆಲಂಪುರ ಚೌರಸ್ತಾದಲ್ಲಿ ಕಾರಿನ ಎರಡು ಟೈರ್‌ ಸ್ಫೋಟಗೊಂಡು ಮೃತಪಟ್ಟಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.