ETV Bharat / bharat

ಬ್ಯಾಂಕ್​ ಖಾತೆಗೆ 2.44 ಕೋಟಿ ಜಮೆ : ಬಯಸದೇ ಬಂದ ಭಾಗ್ಯ.. ಮಸ್ತ್​ ಮಜಾ ಮಾಡಿದವರಿಗೆ ಕಾದಿತ್ತು ಶಾಕ್​

ಬ್ಯಾಂಕಿನವರ ಅಚಾತುರ್ಯದಿಂದ ತಮ್ಮ ಬ್ಯಾಂಕ್​​ ಖಾತೆಗೆ ಜಮಾ ಆದ 2.44 ಕೋಟಿ ದುಡ್ಡು ಬಳಕೆ ಮಾಡಿದ ಯುವಕರನ್ನು ಸೈಬರ್​ ಕ್ರೈಂ ಪೊಲೀಸರು ಬಂಧಿಸಿರುವ ಘಟನೆ ಕೇರಳದ ತ್ರಿಶೂರ್​ನಲ್ಲಿ ನಡೆದಿದೆ.

author img

By

Published : Dec 24, 2022, 10:49 PM IST

youths-get-crores-credited-to-their-account-by-mistake-splurge-the-money-on-luxury-and-get-arrested
ಬ್ಯಾಂಕ್​ ಖಾತೆಗೆ 2.44 ಕೋಟಿ ಜಮೆ : ಮಸ್ತ್​ ಮಜಾ ಮಾಡಿದ ಯುವಕರು

ತ್ರಿಶೂರ್ (ಕೇರಳ): ಇತ್ತೀಚೆಗೆ ಬ್ಯಾಂಕ್​ ಖಾತೆಗಳಿಂದ ಹಣ ಕಡಿತ ಆಗುತ್ತಿದೆ ಎಂದು ಗ್ರಾಹಕರು ಅವಲತ್ತುಕೊಳ್ಳುತ್ತಿದ್ದಾರೆ. ಆದರೆ ಕೇರಳದ ತ್ರಿಶೂರ್​ನಲ್ಲಿ ಇದಕ್ಕೆ ತದ್ವಿರುದ್ಧ ಎಂಬಂತೆ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಯುವಕರ ಬ್ಯಾಂಕ್​ ಖಾತೆಗೆ ಬರೋಬ್ಬರಿ 2.44 ಕೋಟಿ ರೂಪಾಯಿ ಜಮೆಯಾಗಿದೆ. ಬಯಸದೇ ಬಂದ ಭಾಗ್ಯ ಎಂಬಂತೆ ಏನು ಕಷ್ಟಪಡದೇ ಲಕ್ಷ್ಮೀ ಖಾತೆಗೆ ಬಂದು ಜಮೆಯಾಗಿದೆ ಎಂದು ಯುವಕರು ಭರ್ಜರಿ ಖುಷಿಯಾಗಿದ್ದರು. ಇದೇ ಸಂತಸದಲ್ಲಿ ಬಂದ ಹಣವನ್ನು ಬಳಸಿ ಮಸ್ತ್​​ ಮಜಾ ಮಾಡಿದ್ದ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.

ಹೌದು, ತ್ರಿಶೂರ್​ನ ಅರಂಬೂರು ನಿವಾಸಿಗಳಾದ ನಿಧಿನ್​ ಮತ್ತು ಮನು ಎಂಬುವವರ ಬ್ಯಾಂಕ್​​ ಖಾತೆಗಳಿಗೆ ಈ ಭಾರಿ ಮೊತ್ತದ ಹಣ ಜಮೆಯಾಗಿತ್ತು ಎಂದು ತಿಳಿದುಬಂದಿದೆ. ಇಷ್ಟೊಂದು ಹಣವನ್ನು ಕಂಡು ಸ್ವತಃ ಯುವಕರೇ ಅಚ್ಚರಿಗೆ ಒಳಗಾಗಿದ್ದರು.

ಬಳಿಕ ಹಣ ಬಂದ ಖುಷಿಯಲ್ಲಿ ಐಫೋನ್‌ನಂತಹ ದುಬಾರಿ ವಸ್ತುಗಳನ್ನು ಸಹ ಖರೀದಿ ಮಾಡಿದ್ದಾರೆ. ಅಲ್ಲದೆ ಯುವಕರು ಈ ಹಣವನ್ನು ಬಳಸಿಕೊಂಡು ತಮ್ಮ ಸಾಲವನ್ನು ಮರು ಪಾವತಿಸಿ ನಿರಾಳರಾಗಿದ್ದಾರೆ. ಜೊತೆಗೆ ಇದೇ ಹಣದಲ್ಲಿ ಯುವಕರು ಷೇರು ವ್ಯಾಪಾರವನ್ನೂ ಕೂಡ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮದೇ ವಿವಿಧ ಬ್ಯಾಂಕ್​ ಖಾತೆಗಳಿಗೆ ದುಡ್ಡು ವರ್ಗಾವಣೆ.. ಉಳಿದ ಹಣವನ್ನು 19 ವಿವಿಧ ಬ್ಯಾಂಕ್‌ಗಳಲ್ಲಿನ 54 ಇತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಒಟ್ಟಾರೆ ಬ್ಯಾಂಕಿನವರ ಅಚಾತುರ್ಯದಿಂದ ದೊರೆತ ಎಲ್ಲಾ 2.44 ಕೋಟಿ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಇತ್ತ, ಬ್ಯಾಂಕ್​​ನಲ್ಲಿನ ಹಣ ಬೇರೆ ಖಾತೆಗೆ ಜಮೆ ಆದ ಬಗ್ಗೆ ಅರಿತ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹಣ ಜಮೆ ಆಗಿದ್ದೇಗೆ ? : ಬ್ಯಾಂಕ್​ನ ಸರ್ವರ್‌ನಲ್ಲಿ ಉಂಟಾದ ದೋಷದಿಂದಾಗಿ ತಪ್ಪಾಗಿ ಯುವಕರ ಖಾತೆಗಳಿಗೆ ಹಣ ಜಮೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು, ಯುವಕರು ಬ್ಯಾಂಕ್‌ನ ಸರ್ವರ್‌ಗಳನ್ನು ದುರ್ಬಳಕೆ ಮಾಡಿಕೊಂಡು ಹಣ ದೋಚಿರುವ ಸಾಧ್ಯತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಈ ಯುವಕರು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ತೂತುಕುಡಿಯಲ್ಲಿ 25 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶಕ್ಕೆ..

ತ್ರಿಶೂರ್ (ಕೇರಳ): ಇತ್ತೀಚೆಗೆ ಬ್ಯಾಂಕ್​ ಖಾತೆಗಳಿಂದ ಹಣ ಕಡಿತ ಆಗುತ್ತಿದೆ ಎಂದು ಗ್ರಾಹಕರು ಅವಲತ್ತುಕೊಳ್ಳುತ್ತಿದ್ದಾರೆ. ಆದರೆ ಕೇರಳದ ತ್ರಿಶೂರ್​ನಲ್ಲಿ ಇದಕ್ಕೆ ತದ್ವಿರುದ್ಧ ಎಂಬಂತೆ ಘಟನೆಯೊಂದು ಬೆಳಕಿಗೆ ಬಂದಿದೆ. ಇಬ್ಬರು ಯುವಕರ ಬ್ಯಾಂಕ್​ ಖಾತೆಗೆ ಬರೋಬ್ಬರಿ 2.44 ಕೋಟಿ ರೂಪಾಯಿ ಜಮೆಯಾಗಿದೆ. ಬಯಸದೇ ಬಂದ ಭಾಗ್ಯ ಎಂಬಂತೆ ಏನು ಕಷ್ಟಪಡದೇ ಲಕ್ಷ್ಮೀ ಖಾತೆಗೆ ಬಂದು ಜಮೆಯಾಗಿದೆ ಎಂದು ಯುವಕರು ಭರ್ಜರಿ ಖುಷಿಯಾಗಿದ್ದರು. ಇದೇ ಸಂತಸದಲ್ಲಿ ಬಂದ ಹಣವನ್ನು ಬಳಸಿ ಮಸ್ತ್​​ ಮಜಾ ಮಾಡಿದ್ದ ಯುವಕರು ಪೊಲೀಸರ ಅತಿಥಿಯಾಗಿದ್ದಾರೆ.

ಹೌದು, ತ್ರಿಶೂರ್​ನ ಅರಂಬೂರು ನಿವಾಸಿಗಳಾದ ನಿಧಿನ್​ ಮತ್ತು ಮನು ಎಂಬುವವರ ಬ್ಯಾಂಕ್​​ ಖಾತೆಗಳಿಗೆ ಈ ಭಾರಿ ಮೊತ್ತದ ಹಣ ಜಮೆಯಾಗಿತ್ತು ಎಂದು ತಿಳಿದುಬಂದಿದೆ. ಇಷ್ಟೊಂದು ಹಣವನ್ನು ಕಂಡು ಸ್ವತಃ ಯುವಕರೇ ಅಚ್ಚರಿಗೆ ಒಳಗಾಗಿದ್ದರು.

ಬಳಿಕ ಹಣ ಬಂದ ಖುಷಿಯಲ್ಲಿ ಐಫೋನ್‌ನಂತಹ ದುಬಾರಿ ವಸ್ತುಗಳನ್ನು ಸಹ ಖರೀದಿ ಮಾಡಿದ್ದಾರೆ. ಅಲ್ಲದೆ ಯುವಕರು ಈ ಹಣವನ್ನು ಬಳಸಿಕೊಂಡು ತಮ್ಮ ಸಾಲವನ್ನು ಮರು ಪಾವತಿಸಿ ನಿರಾಳರಾಗಿದ್ದಾರೆ. ಜೊತೆಗೆ ಇದೇ ಹಣದಲ್ಲಿ ಯುವಕರು ಷೇರು ವ್ಯಾಪಾರವನ್ನೂ ಕೂಡ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮದೇ ವಿವಿಧ ಬ್ಯಾಂಕ್​ ಖಾತೆಗಳಿಗೆ ದುಡ್ಡು ವರ್ಗಾವಣೆ.. ಉಳಿದ ಹಣವನ್ನು 19 ವಿವಿಧ ಬ್ಯಾಂಕ್‌ಗಳಲ್ಲಿನ 54 ಇತರ ಖಾತೆಗಳಿಗೆ ವರ್ಗಾಯಿಸಿದ್ದಾರೆ. ಒಟ್ಟಾರೆ ಬ್ಯಾಂಕಿನವರ ಅಚಾತುರ್ಯದಿಂದ ದೊರೆತ ಎಲ್ಲಾ 2.44 ಕೋಟಿ ಹಣವನ್ನು ಬಳಕೆ ಮಾಡಿಕೊಂಡಿದ್ದಾರೆ ಎಂದು ತನಿಖೆ ವೇಳೆ ಬಯಲಾಗಿದೆ ಎಂದು ಪೊಲೀಸರು ವಿವರಿಸಿದ್ದಾರೆ.

ಇತ್ತ, ಬ್ಯಾಂಕ್​​ನಲ್ಲಿನ ಹಣ ಬೇರೆ ಖಾತೆಗೆ ಜಮೆ ಆದ ಬಗ್ಗೆ ಅರಿತ ಬ್ಯಾಂಕ್ ಅಧಿಕಾರಿಗಳು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಮೇಲೆ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಹಣ ಜಮೆ ಆಗಿದ್ದೇಗೆ ? : ಬ್ಯಾಂಕ್​ನ ಸರ್ವರ್‌ನಲ್ಲಿ ಉಂಟಾದ ದೋಷದಿಂದಾಗಿ ತಪ್ಪಾಗಿ ಯುವಕರ ಖಾತೆಗಳಿಗೆ ಹಣ ಜಮೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಇನ್ನು, ಯುವಕರು ಬ್ಯಾಂಕ್‌ನ ಸರ್ವರ್‌ಗಳನ್ನು ದುರ್ಬಳಕೆ ಮಾಡಿಕೊಂಡು ಹಣ ದೋಚಿರುವ ಸಾಧ್ಯತೆ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದಕ್ಕೂ ಮೊದಲು ಈ ಯುವಕರು ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ತೂತುಕುಡಿಯಲ್ಲಿ 25 ಕೋಟಿ ಮೌಲ್ಯದ ತಿಮಿಂಗಿಲದ ವಾಂತಿ ವಶಕ್ಕೆ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.