ETV Bharat / bharat

ಯುವತಿ ಮೇಲೆ ಹಲ್ಲೆ ಮಾಡಿ ಬಲವಂತವಾಗಿ ಕಾರಿನೊಳಗೆ ತಳ್ಳಿದ ಯುವಕ: ವಿಡಿಯೋ

author img

By

Published : Mar 19, 2023, 1:19 PM IST

ದೆಹಲಿಯಲ್ಲಿ ಯುವಕನೊಬ್ಬ ಯುವತಿ ಮೇಲೆ ಹಲ್ಲೆ ಮಾಡಿ, ಕಾರಿನೊಳಗೆ ಎಳೆದೊಯ್ದ ಘಟನೆ ನಡೆದಿದೆ. ಪೊಲೀಸರು ಕೇಸ್​ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಯುವತಿಯ ಕಾರಿನೊಳಗೆ ತಳ್ಳಿದ ಯುವಕ
ಯುವತಿಯ ಕಾರಿನೊಳಗೆ ತಳ್ಳಿದ ಯುವಕ

ನವದೆಹಲಿ: ಯುವಕನೊಬ್ಬ ಯುವತಿಯನ್ನು ಹಿಡಿದೆಳೆದು, ಹಲ್ಲೆ ಮಾಡಿ ಬಲವಂತವಾಗಿ ಕಾರಿನಲ್ಲಿ ಕೂರುವಂತೆ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ. ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆಯ ಬಳಿ ಈ ಘಟನೆ ನಡೆದಿದ್ದು, ​ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

"ವಿಡಿಯೋ ವೀಕ್ಷಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಕಾರನ್ನು ಗುರುಗ್ರಾಮದ ರತನ್ ವಿಹಾರ್‌ನ ನೋಂದಣಿ ಹೊಂದಿದ್ದು, ಅಲ್ಲಿಗೆ ಪೊಲೀಸ್​ ತಂಡವನ್ನು ಕಳುಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾರಿನ ಬಾನೆಟ್​ ಮೇಲೆ ನಿಂತು ಪುಂಡಾಟ: ಇದಕ್ಕೂ ಮುನ್ನ, ಮಾರ್ಚ್ 17 ರಂದು ಕೆಲವು ಜನರು ಕಾರುಗಳ ಮೇಲೆ ನಿಂತು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಸಾರ್ವಜನಿಕವಾಗಿ ಪುಂಡಾಟಿಕೆ ನಡೆಸುತ್ತಿರುವ ವಿಡಿಯೋದ ಅಸಲಿಯತ್ತು ಜಾಲಾಡಿದಾಗ ಯೂಟ್ಯೂಬರ್​ ಒಬ್ಬನ ಜನ್ಮದಿನದ ಸಂಭ್ರಮಾಚರಣೆಯ ವೇಳೆ ಈ ರೀತಿ ಮಾಡಿರುವುದು ತಿಳಿದು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯೂಟ್ಯೂಬರ್​ನನ್ನು ಬಂಧಿಸಿದ್ದಾರೆ. ಬಂಧಿತನ್ನು ಪ್ರಿನ್ಸ್ ದೀಕ್ಷಿತ್ ಎಂದು ಗುರುತಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಕೆಲ ಯುವಕರು ಪಾಂಡವ್ ನಗರದ ಬಳಿಯ ಎನ್‌ಹೆಚ್ -24 ರಲ್ಲಿ ರಸ್ತೆ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕಾರುಗಳ ಮೇಲೆ ನಿಂತು ಪುಂಡಾಟಿಕೆ ನಡೆಸುತ್ತಿದ್ದಾರೆ. ಇದು ಸ್ಪಷ್ಟವಾದ ರಸ್ತೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಯೂಟ್ಯೂಬರ್​ ಬಂಧಿಸಿ ವಿಚಾರಣೆ ನಡೆಸಿದ ವೇಳೆ, ವಿಡಿಯೋ ನವೆಂಬರ್ 16, 2022 ರಂದು ತನ್ನ ಜನ್ಮದಿನದಂದು ಕೆಲವು ಸ್ನೇಹಿತರೊಂದಿಗೆ ಶಕರ್‌ಪುರಕ್ಕೆ ಹೋಗುತ್ತಿದ್ದಾಗ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾನೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್​ ಮೇಲೆ ನಿಂತಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ರೀತಿಯ ಸಾಹಸಗಳನ್ನು ಪ್ರಯತ್ನಿಸದಂತೆ ಅವರು YouTube ನಲ್ಲಿ ತಮ್ಮ ಅನುಯಾಯಿಗಳಿಗೆ ತಿಳಿಸಲು ಈ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾನೆ. ಯೂಟ್ಯೂಬರ್​ ಅಲ್ಲದೇ, ಆತನ ಸ್ನೇಹಿತರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರ ಮೇಲೆ ದಾಳಿ ಸುಳ್ಳು ಸುದ್ದಿ: ಇನ್ನೊಬ್ಬ ಯೂಟ್ಯೂಬರ್​, ಬಿಹಾರ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿ ಮಾಡಲಾಗುತ್ತಿದೆ ಎಂಬ ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆತಂಕ ಸೃಷ್ಟಿಸಿದ್ದ. ಈ ವೈರಲ್​ ವಿಡಿಯೋವನ್ನು ಗಮನಿಸಿ ಹೆದರಿದ್ದ ಸಾವಿರಾರು ಕಾರ್ಮಿಕರು ಏಕಾಏಕಿ ಬಿಹಾರದತ್ತ ಮುಖ ಮಾಡಿದ್ದರು.

ಸುಳ್ಳು ವಿಡಿಯೋವನ್ನು ಹರಿಬಿಟ್ಟು ಕಣ್ತಪ್ಪಿಸಿಕೊಂಡಿದ್ದ ಯೂಟ್ಯೂಬರ್​ನನ್ನು ಬಿಹಾರ ಪೊಲೀಸರು ಇದೀಗ ಬಂಧಿಸಿದ್ದಾರೆ. ಈತನ ಮನೆ ಜಪ್ತಿ ಮಾಡಲು ಪೊಲೀಸರು ಮುಂದಾದ ವೇಳೆ ಆತನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಕಾರ್ಮಿಕರ ಬಗ್ಗೆ ಆತಂಕ ಸೃಷ್ಟಿಸಿದ್ದ ಯೂಟ್ಯೂಬರ್​ನನ್ನು ಮನೀಶ್​ ಕಶ್ಯಪ್​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ಗೆ ತೀವ್ರ ಶೋಧ: ಸಲಹೆಗಾರನ ಬಂಧನ, ಬಸ್​, ಇಂಟರ್ನೆಟ್‌ ಬಂದ್​

ನವದೆಹಲಿ: ಯುವಕನೊಬ್ಬ ಯುವತಿಯನ್ನು ಹಿಡಿದೆಳೆದು, ಹಲ್ಲೆ ಮಾಡಿ ಬಲವಂತವಾಗಿ ಕಾರಿನಲ್ಲಿ ಕೂರುವಂತೆ ತಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಪೊಲೀಸರಿಗೆ ಮನವಿ ಮಾಡುತ್ತಿದ್ದಾರೆ. ದೆಹಲಿಯ ಮಂಗೋಲ್‌ಪುರಿ ಮೇಲ್ಸೇತುವೆಯ ಬಳಿ ಈ ಘಟನೆ ನಡೆದಿದ್ದು, ​ವ್ಯಕ್ತಿಯೊಬ್ಬರು ಇದನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದಾರೆ.

"ವಿಡಿಯೋ ವೀಕ್ಷಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಕಾರನ್ನು ಗುರುಗ್ರಾಮದ ರತನ್ ವಿಹಾರ್‌ನ ನೋಂದಣಿ ಹೊಂದಿದ್ದು, ಅಲ್ಲಿಗೆ ಪೊಲೀಸ್​ ತಂಡವನ್ನು ಕಳುಹಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಘಟನೆಯ ಬಗ್ಗೆ ಮಾಹಿತಿ ಸಂಗ್ರಹಿಸಲು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಕಾರಿನ ಬಾನೆಟ್​ ಮೇಲೆ ನಿಂತು ಪುಂಡಾಟ: ಇದಕ್ಕೂ ಮುನ್ನ, ಮಾರ್ಚ್ 17 ರಂದು ಕೆಲವು ಜನರು ಕಾರುಗಳ ಮೇಲೆ ನಿಂತು ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತಿರುವ ವಿಡಿಯೋ ವೈರಲ್​ ಆಗಿತ್ತು. ಸಾರ್ವಜನಿಕವಾಗಿ ಪುಂಡಾಟಿಕೆ ನಡೆಸುತ್ತಿರುವ ವಿಡಿಯೋದ ಅಸಲಿಯತ್ತು ಜಾಲಾಡಿದಾಗ ಯೂಟ್ಯೂಬರ್​ ಒಬ್ಬನ ಜನ್ಮದಿನದ ಸಂಭ್ರಮಾಚರಣೆಯ ವೇಳೆ ಈ ರೀತಿ ಮಾಡಿರುವುದು ತಿಳಿದು ಬಂದಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಯೂಟ್ಯೂಬರ್​ನನ್ನು ಬಂಧಿಸಿದ್ದಾರೆ. ಬಂಧಿತನ್ನು ಪ್ರಿನ್ಸ್ ದೀಕ್ಷಿತ್ ಎಂದು ಗುರುತಿಸಲಾಗಿದೆ.

ವೈರಲ್ ವಿಡಿಯೋದಲ್ಲಿ ಕೆಲ ಯುವಕರು ಪಾಂಡವ್ ನಗರದ ಬಳಿಯ ಎನ್‌ಹೆಚ್ -24 ರಲ್ಲಿ ರಸ್ತೆ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಕಾರುಗಳ ಮೇಲೆ ನಿಂತು ಪುಂಡಾಟಿಕೆ ನಡೆಸುತ್ತಿದ್ದಾರೆ. ಇದು ಸ್ಪಷ್ಟವಾದ ರಸ್ತೆ ನಿಯಮ ಉಲ್ಲಂಘನೆ ಎಂದು ಪರಿಗಣಿಸಿದ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು.

ಯೂಟ್ಯೂಬರ್​ ಬಂಧಿಸಿ ವಿಚಾರಣೆ ನಡೆಸಿದ ವೇಳೆ, ವಿಡಿಯೋ ನವೆಂಬರ್ 16, 2022 ರಂದು ತನ್ನ ಜನ್ಮದಿನದಂದು ಕೆಲವು ಸ್ನೇಹಿತರೊಂದಿಗೆ ಶಕರ್‌ಪುರಕ್ಕೆ ಹೋಗುತ್ತಿದ್ದಾಗ ಚಿತ್ರೀಕರಿಸಲಾಗಿದೆ ಎಂದು ಹೇಳಿದ್ದಾನೆ. ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸಿ ಕಾರಿನ ಬಾನೆಟ್​ ಮೇಲೆ ನಿಂತಿರುವುದನ್ನು ಒಪ್ಪಿಕೊಂಡಿದ್ದಾನೆ. ಈ ರೀತಿಯ ಸಾಹಸಗಳನ್ನು ಪ್ರಯತ್ನಿಸದಂತೆ ಅವರು YouTube ನಲ್ಲಿ ತಮ್ಮ ಅನುಯಾಯಿಗಳಿಗೆ ತಿಳಿಸಲು ಈ ವಿಡಿಯೋ ಮಾಡಿದ್ದಾರೆ ಎಂದು ಹೇಳಿದ್ದಾನೆ. ಯೂಟ್ಯೂಬರ್​ ಅಲ್ಲದೇ, ಆತನ ಸ್ನೇಹಿತರ ಬಂಧನಕ್ಕೂ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರ್ಮಿಕರ ಮೇಲೆ ದಾಳಿ ಸುಳ್ಳು ಸುದ್ದಿ: ಇನ್ನೊಬ್ಬ ಯೂಟ್ಯೂಬರ್​, ಬಿಹಾರ ಕಾರ್ಮಿಕರ ಮೇಲೆ ತಮಿಳುನಾಡಿನಲ್ಲಿ ದಾಳಿ ಮಾಡಲಾಗುತ್ತಿದೆ ಎಂಬ ಸುಳ್ಳು ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಆತಂಕ ಸೃಷ್ಟಿಸಿದ್ದ. ಈ ವೈರಲ್​ ವಿಡಿಯೋವನ್ನು ಗಮನಿಸಿ ಹೆದರಿದ್ದ ಸಾವಿರಾರು ಕಾರ್ಮಿಕರು ಏಕಾಏಕಿ ಬಿಹಾರದತ್ತ ಮುಖ ಮಾಡಿದ್ದರು.

ಸುಳ್ಳು ವಿಡಿಯೋವನ್ನು ಹರಿಬಿಟ್ಟು ಕಣ್ತಪ್ಪಿಸಿಕೊಂಡಿದ್ದ ಯೂಟ್ಯೂಬರ್​ನನ್ನು ಬಿಹಾರ ಪೊಲೀಸರು ಇದೀಗ ಬಂಧಿಸಿದ್ದಾರೆ. ಈತನ ಮನೆ ಜಪ್ತಿ ಮಾಡಲು ಪೊಲೀಸರು ಮುಂದಾದ ವೇಳೆ ಆತನೇ ಪೊಲೀಸರ ಮುಂದೆ ಶರಣಾಗಿದ್ದಾನೆ. ಕಾರ್ಮಿಕರ ಬಗ್ಗೆ ಆತಂಕ ಸೃಷ್ಟಿಸಿದ್ದ ಯೂಟ್ಯೂಬರ್​ನನ್ನು ಮನೀಶ್​ ಕಶ್ಯಪ್​ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್‌ಪಾಲ್‌ಗೆ ತೀವ್ರ ಶೋಧ: ಸಲಹೆಗಾರನ ಬಂಧನ, ಬಸ್​, ಇಂಟರ್ನೆಟ್‌ ಬಂದ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.