ETV Bharat / bharat

ಟೆಕ್ಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದ ಯೋಗ ಶಿಕ್ಷಕನ ಬಂಧನ

author img

By

Published : Dec 17, 2022, 9:13 PM IST

ಗಾಂಜಾ ಮಾರಾಟ ಮಾಡುತ್ತಿದ್ದ ಯೋಗ ಶಿಕ್ಷಕನನ್ನು ಚೆನ್ನೈನ ಪೆರುಂಗಲತ್ತೂರಿನಲ್ಲಿ ಬಂಧಿಸಲಾಗಿದೆ.

yoga-teacher-arrested-for-selling-ganja-in-chennai
ಮಾನಸಿಕ ಖಿನ್ನತೆಗೆ ಔಷಧಿ : ಗಾಂಜಾ ಮಾರಾಟ ಮಾಡುತ್ತಿದ್ದ ಯೋಗ ಶಿಕ್ಷಕ ಬಂಧನ

ಚೆನ್ನೈ (ತಮಿಳುನಾಡು): ಗಾಂಜಾ ಮಾರಾಟ ಮಾಡುತ್ತಿದ್ದ ಯೋಗ ಶಿಕ್ಷಕನನ್ನು ಚೆನ್ನೈನ ಪೆರುಂಗಲತ್ತೂರಿನಲ್ಲಿ ಬಂಧಿಸಲಾಗಿದೆ. ಕೇರಳದ ತಿರುವನಂತಪುರಂ ಮೂಲದ ದಿನೇಶ್​ ಎಂಬುವರನ್ನು ಬಂಧಿಸಿ, 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಪೆರುಂಗಲತ್ತೂರ್ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿದ್ದು, ತಕ್ಷಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯು ಯೋಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಚೆನ್ನೈನ ಪಾಲವಕ್ಕಂನಲ್ಲಿ ವಾಸವಾಗಿದ್ದನು. ಅಲ್ಲದೆ ವೆಲಚೇರಿ, ನೀಲಂಗರೈ ಮತ್ತು ದುರೈಪಾಕಂ ಜಿಮ್‌ಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ದಿನೇಶ್ ಬಳಿಗೆ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್​ವೇರ್ ಇಂಜಿನಿಯರ್​ಗಳು ಬರುತ್ತಿದ್ದರಂತೆ. ಒತ್ತಡ ಮತ್ತು ತೂಕದ ಸಮಸ್ಯೆ ಜೊತೆ ಮಾನಸಿಕ ಖಿನ್ನತೆಯಿಂದ ಹೊರಬರಲು ಗಾಂಜಾ ಸೇದುವ ಸಲಹೆ ನೀಡಿದ್ದಾಗಿ ಪೊಲೀಸರಿಗೆ ದಿನೇಶ್ ತಿಳಿಸಿದ್ದಾನೆ. ಇದಕ್ಕಾಗಿ ದಿನೇಶ್​ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದೆ. ಅಕ್ರಮವಾಗಿ ಮಾದಕ ದ್ರವ್ಯ ಹೊಂದಿದ್ದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ : ಅತ್ತೆಯನ್ನೇ ಕೊಂದು ದೇಹವನ್ನ ತುಂಡುಗಳಾಗಿ ಕತ್ತರಿಸಿದ ಸೋದರಳಿಯ.. ಮತ್ತೊಂದು ಶ್ರದ್ಧಾ ಕೇಸ್​!!

ಚೆನ್ನೈ (ತಮಿಳುನಾಡು): ಗಾಂಜಾ ಮಾರಾಟ ಮಾಡುತ್ತಿದ್ದ ಯೋಗ ಶಿಕ್ಷಕನನ್ನು ಚೆನ್ನೈನ ಪೆರುಂಗಲತ್ತೂರಿನಲ್ಲಿ ಬಂಧಿಸಲಾಗಿದೆ. ಕೇರಳದ ತಿರುವನಂತಪುರಂ ಮೂಲದ ದಿನೇಶ್​ ಎಂಬುವರನ್ನು ಬಂಧಿಸಿ, 10 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಪೆರುಂಗಲತ್ತೂರ್ ಬಸ್ ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ವ್ಯಕ್ತಿಯನ್ನು ವಿಚಾರಣೆ ನಡೆಸಿದಾಗ ಗಾಂಜಾ ಇರುವುದು ಪತ್ತೆಯಾಗಿದ್ದು, ತಕ್ಷಣ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯು ಯೋಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಚೆನ್ನೈನ ಪಾಲವಕ್ಕಂನಲ್ಲಿ ವಾಸವಾಗಿದ್ದನು. ಅಲ್ಲದೆ ವೆಲಚೇರಿ, ನೀಲಂಗರೈ ಮತ್ತು ದುರೈಪಾಕಂ ಜಿಮ್‌ಗಳಲ್ಲಿ ಯೋಗ ತರಬೇತಿ ನೀಡುತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ದಿನೇಶ್ ಬಳಿಗೆ ಐಟಿ ವಲಯದಲ್ಲಿ ಕೆಲಸ ಮಾಡುತ್ತಿರುವ ಸಾಫ್ಟ್​ವೇರ್ ಇಂಜಿನಿಯರ್​ಗಳು ಬರುತ್ತಿದ್ದರಂತೆ. ಒತ್ತಡ ಮತ್ತು ತೂಕದ ಸಮಸ್ಯೆ ಜೊತೆ ಮಾನಸಿಕ ಖಿನ್ನತೆಯಿಂದ ಹೊರಬರಲು ಗಾಂಜಾ ಸೇದುವ ಸಲಹೆ ನೀಡಿದ್ದಾಗಿ ಪೊಲೀಸರಿಗೆ ದಿನೇಶ್ ತಿಳಿಸಿದ್ದಾನೆ. ಇದಕ್ಕಾಗಿ ದಿನೇಶ್​ ಗಾಂಜಾ ಸಾಗಾಟಕ್ಕೆ ಮುಂದಾಗಿದ್ದ ಎಂದು ತಿಳಿದುಬಂದಿದೆ. ಅಕ್ರಮವಾಗಿ ಮಾದಕ ದ್ರವ್ಯ ಹೊಂದಿದ್ದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿದ್ದು, ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ : ಅತ್ತೆಯನ್ನೇ ಕೊಂದು ದೇಹವನ್ನ ತುಂಡುಗಳಾಗಿ ಕತ್ತರಿಸಿದ ಸೋದರಳಿಯ.. ಮತ್ತೊಂದು ಶ್ರದ್ಧಾ ಕೇಸ್​!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.