ETV Bharat / bharat

ಕನ್ನಡತಿಯರು ಸೇರಿ 50 ವರ್ಷ ದಾಟಿರುವ 11 ಮಹಿಳೆಯರು: 4,977 ಕಿ.ಮೀ ಕ್ರಮಿಸಿ ಹಿಮಾಲಯ ಪರ್ವತ ಶ್ರೇಣಿ ಏರಿ ಸಾಧನೆ

author img

By

Published : Jul 1, 2022, 7:08 PM IST

Updated : Jul 2, 2022, 10:53 AM IST

ಪರ್ವತಾರೋಹಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಬಚೇಂದ್ರ ಪಾಲ್ ಅವರ ನೇತೃತ್ವದಲ್ಲಿ 11 ಮಹಿಳೆಯರ ತಂಡ ಹಿಮಾಲಯ ಪರ್ವತ ಶ್ರೇಣಿ ಏರುವ ಮೂಲಕ ಹೊಸ ಸಾಧನೆ ಮಾಡಿದೆ. ಈ ತಂಡದಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರಿದ್ದಾರೆ.

Women Trans Himalayan expedition
Women Trans Himalayan expedition

ಉತ್ತರಕಾಶಿ(ಉತ್ತರಾಖಂಡ): ವಯಸ್ಸು 50 ದಾಟುತ್ತಿದ್ದಂತೆ ಬಹುತೇಕ ಮಹಿಳೆಯರು ವಿಶ್ರಾಂತಿ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ, ಇಲ್ಲೊಂದು 11 ಮಹಿಳೆಯರ ಗುಂಪು 4,977 ಕಿಲೋ ಮೀಟರ್ ಕ್ರಮಿಸಿ, ಹಿಮಾಲಯ ಪರ್ವತ ಶ್ರೇಣಿ ಏರಿ ಸಾಧನೆ ಮಾಡಿದೆ.

ಪರ್ವತಾರೋಹಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಬಚೇಂದ್ರ ಪಾಲ್​​ ಅವರು ಈ ತಂಡ ಮುನ್ನಡೆಸುತ್ತಿದ್ದು, ಅವರಿಗೆ 67 ವರ್ಷ ವಯಸ್ಸಾಗಿದೆ. ಕಳೆದ ಐದು ತಿಂಗಳಿಂದ ಈ ಚಾರಣ ಆರಂಭಿಸಿರುವ ಇವರು ಈಗಾಗಲೇ 37 ಪರ್ವತದ ಹಾದಿ ದಾಟಿದ್ದಾರೆ. 11 ಮಹಿಳೆಯರ ತಂಡ ಕಳೆದ ಮಾರ್ಚ್​​ 8ರಿಂದ ನವದೆಹಲಿಯಿಂದ ಪ್ರಯಾಣ ಆರಂಭಿಸಿದ್ದರು.

4,977 ಕಿ.ಮೀ ಕ್ರಮಿಸಿ ಹಿಮಾಲಯ ಪರ್ವತ ಶ್ರೇಣಿ ಏರಿ ಸಾಧನೆ

ಇಂಡೋ-ಮ್ಯಾನ್ಮಾರ್​ ಗಡಿ ಬಳಿಯ ಅರುಣಾಚಲ ಪ್ರದೇಶದ 3,727 ಅಡಿ ಎತ್ತರದಲ್ಲಿರುವ ಪಾಂಗ್​​ ಸೌ ಪಾಸ್​​ನಿಂದ ಇವರ ದಂಡಯಾತ್ರೆ ಆರಂಭಗೊಂಡಿದ್ದು ಅಸ್ಸೋಂ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ನೇಪಾಳದ ಪ್ರಮುಖ ಪರ್ವತ ದಾಟಿ ಬಂದಿದ್ದಾರೆ. ಜೂನ್​ 30ರಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಗೆ ಆಗಮಿಸಿದ್ದು, ಅಲ್ಲಿನ ಜನರು ಭವ್ಯ ಸ್ವಾಗತ ನೀಡಿದ್ದಾರೆ.

ಇದನ್ನೂ ಓದಿ: 'ಥ್ಯಾಂಕ್ ಯೂ ಡಾಕ್ಟರ್' ವೈದ್ಯರ ದಿನಾಚರಣೆಯಂದು ಜೀವರಕ್ಷಕರಿಗೊಂದು ಸೆಲ್ಯೂಟ್

ಈ ಮಹಿಳೆಯರ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ಯಾತ್ರೆ ಆರಂಭಗೊಂಡಾಗ ಪೂರ್ಣಗೊಳಿಸುವ ನಂಬಿಕೆ ಸ್ವತ: ಬಚೇಂದ್ರಿ ಪಾಲ್​​ ಅವರಿಗೂ ಇರಲಿಲ್ವಂತೆ. ಆದರೆ, ಜನರಿಂದ ಸಿಕ್ಕ ಅಗಾಧ ಪ್ರತಿಕ್ರಿಯೆ, ಸ್ಫೂರ್ತಿಯಿಂದಾಗಿ ಈ ಕೆಲಸ ಸಾಧ್ಯವಾಯಿತು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಚಾರಣ ಆರಂಭಿಸಲಾಗಿದ್ದು, ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ತಂಡದಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರೂ ಇದ್ದಾರೆ.

11 ಮಹಿಳೆಯರ ತಂಡ ಇಂತಿದೆ:

  • ಬಚೇಂದ್ರಿ ಪಾಲ್​(67 ವರ್ಷ)
  • ಚೇತನಾ ಸಾಹು(ಪ. ಬಂಗಾಳ, 54 ವರ್ಷ)
  • ಸವಿತಾ ಧಪ್ವಾಲ್ (ಛತ್ತೀಸ್‌ಗಢ,53 ವರ್ಷ)
  • ಎಲ್ ಅನ್ನಪೂರ್ಣ (ಜಾರ್ಖಂಡ್,52 ವರ್ಷ)
  • ಗಂಗೋತ್ರಿ ಸೋನೆಜಿ (ಗುಜರಾತ್,63 ವರ್ಷ)
  • ಪಯೋ ಮುರ್ಮು (ಜಾರ್ಖಂಡ್,57 ವರ್ಷ)
  • ಸುಷ್ಮಾ ಬಿಸ್ಸಾ (ರಾಜಸ್ಥಾನ,55 ವರ್ಷ)
  • ಕೃಷ್ಣ ದುಬೆ (ಉತ್ತರ ಪ್ರದೇಶ, 59 ವರ್ಷ)
  • ಬಿಮಲಾ ದೇವಸ್ಕರ್ (ಮಹಾರಾಷ್ಟ್ರ, 54 ವರ್ಷ)
  • ವಸುಮತಿ ಶ್ರೀನಿವಾಸನ್ (ಕರ್ನಾಟಕ, 68 ವರ್ಷ)
  • ಶಾಮಲಾ ಪದ್ಮನಾಭನ್ (ಕರ್ನಾಟಕ, 64 ವರ್ಷ)

ಜೂನ್​ 1ರಿಂದ ಮತ್ತೆ ಅಭಿಯಾನ ಆರಂಭಿಸಿರುವ ಈ ತಂಡ ಇದೀಗ ಹಿಮಾಚಲ ಪ್ರದೇಶ ತಲುಪಿದ ಬಳಿಕ ಲೇಹ್​-ಲಡಾಖ್​ ದಾಟಿ, ಕಾರ್ಗಿಲ್​​ನಲ್ಲಿ ಅಭಿಯಾನ ಅಂತ್ಯಗೊಳಿಸುವ ಗುರಿ ಇಟ್ಟುಕೊಂಡಿದೆ.

ಉತ್ತರಕಾಶಿ(ಉತ್ತರಾಖಂಡ): ವಯಸ್ಸು 50 ದಾಟುತ್ತಿದ್ದಂತೆ ಬಹುತೇಕ ಮಹಿಳೆಯರು ವಿಶ್ರಾಂತಿ ಪಡೆದುಕೊಳ್ಳಲು ಮುಂದಾಗುತ್ತಾರೆ. ಆದರೆ, ಇಲ್ಲೊಂದು 11 ಮಹಿಳೆಯರ ಗುಂಪು 4,977 ಕಿಲೋ ಮೀಟರ್ ಕ್ರಮಿಸಿ, ಹಿಮಾಲಯ ಪರ್ವತ ಶ್ರೇಣಿ ಏರಿ ಸಾಧನೆ ಮಾಡಿದೆ.

ಪರ್ವತಾರೋಹಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ಬಚೇಂದ್ರ ಪಾಲ್​​ ಅವರು ಈ ತಂಡ ಮುನ್ನಡೆಸುತ್ತಿದ್ದು, ಅವರಿಗೆ 67 ವರ್ಷ ವಯಸ್ಸಾಗಿದೆ. ಕಳೆದ ಐದು ತಿಂಗಳಿಂದ ಈ ಚಾರಣ ಆರಂಭಿಸಿರುವ ಇವರು ಈಗಾಗಲೇ 37 ಪರ್ವತದ ಹಾದಿ ದಾಟಿದ್ದಾರೆ. 11 ಮಹಿಳೆಯರ ತಂಡ ಕಳೆದ ಮಾರ್ಚ್​​ 8ರಿಂದ ನವದೆಹಲಿಯಿಂದ ಪ್ರಯಾಣ ಆರಂಭಿಸಿದ್ದರು.

4,977 ಕಿ.ಮೀ ಕ್ರಮಿಸಿ ಹಿಮಾಲಯ ಪರ್ವತ ಶ್ರೇಣಿ ಏರಿ ಸಾಧನೆ

ಇಂಡೋ-ಮ್ಯಾನ್ಮಾರ್​ ಗಡಿ ಬಳಿಯ ಅರುಣಾಚಲ ಪ್ರದೇಶದ 3,727 ಅಡಿ ಎತ್ತರದಲ್ಲಿರುವ ಪಾಂಗ್​​ ಸೌ ಪಾಸ್​​ನಿಂದ ಇವರ ದಂಡಯಾತ್ರೆ ಆರಂಭಗೊಂಡಿದ್ದು ಅಸ್ಸೋಂ, ಪಶ್ಚಿಮ ಬಂಗಾಳ, ಸಿಕ್ಕಿಂ ಮತ್ತು ನೇಪಾಳದ ಪ್ರಮುಖ ಪರ್ವತ ದಾಟಿ ಬಂದಿದ್ದಾರೆ. ಜೂನ್​ 30ರಂದು ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಗೆ ಆಗಮಿಸಿದ್ದು, ಅಲ್ಲಿನ ಜನರು ಭವ್ಯ ಸ್ವಾಗತ ನೀಡಿದ್ದಾರೆ.

ಇದನ್ನೂ ಓದಿ: 'ಥ್ಯಾಂಕ್ ಯೂ ಡಾಕ್ಟರ್' ವೈದ್ಯರ ದಿನಾಚರಣೆಯಂದು ಜೀವರಕ್ಷಕರಿಗೊಂದು ಸೆಲ್ಯೂಟ್

ಈ ಮಹಿಳೆಯರ ಧೈರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ಈ ಯಾತ್ರೆ ಆರಂಭಗೊಂಡಾಗ ಪೂರ್ಣಗೊಳಿಸುವ ನಂಬಿಕೆ ಸ್ವತ: ಬಚೇಂದ್ರಿ ಪಾಲ್​​ ಅವರಿಗೂ ಇರಲಿಲ್ವಂತೆ. ಆದರೆ, ಜನರಿಂದ ಸಿಕ್ಕ ಅಗಾಧ ಪ್ರತಿಕ್ರಿಯೆ, ಸ್ಫೂರ್ತಿಯಿಂದಾಗಿ ಈ ಕೆಲಸ ಸಾಧ್ಯವಾಯಿತು ಎಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರ ಫಿಟ್ ಇಂಡಿಯಾ ಅಭಿಯಾನದ ಅಡಿಯಲ್ಲಿ ಈ ಚಾರಣ ಆರಂಭಿಸಲಾಗಿದ್ದು, ಮಹಿಳಾ ಸಬಲೀಕರಣದ ಬಗ್ಗೆ ಜಾಗೃತಿ ಮೂಡಿಸುವುದು ಅಭಿಯಾನದ ಮುಖ್ಯ ಉದ್ದೇಶವಾಗಿದೆ. ಈ ತಂಡದಲ್ಲಿ ಕರ್ನಾಟಕದ ಇಬ್ಬರು ಮಹಿಳೆಯರೂ ಇದ್ದಾರೆ.

11 ಮಹಿಳೆಯರ ತಂಡ ಇಂತಿದೆ:

  • ಬಚೇಂದ್ರಿ ಪಾಲ್​(67 ವರ್ಷ)
  • ಚೇತನಾ ಸಾಹು(ಪ. ಬಂಗಾಳ, 54 ವರ್ಷ)
  • ಸವಿತಾ ಧಪ್ವಾಲ್ (ಛತ್ತೀಸ್‌ಗಢ,53 ವರ್ಷ)
  • ಎಲ್ ಅನ್ನಪೂರ್ಣ (ಜಾರ್ಖಂಡ್,52 ವರ್ಷ)
  • ಗಂಗೋತ್ರಿ ಸೋನೆಜಿ (ಗುಜರಾತ್,63 ವರ್ಷ)
  • ಪಯೋ ಮುರ್ಮು (ಜಾರ್ಖಂಡ್,57 ವರ್ಷ)
  • ಸುಷ್ಮಾ ಬಿಸ್ಸಾ (ರಾಜಸ್ಥಾನ,55 ವರ್ಷ)
  • ಕೃಷ್ಣ ದುಬೆ (ಉತ್ತರ ಪ್ರದೇಶ, 59 ವರ್ಷ)
  • ಬಿಮಲಾ ದೇವಸ್ಕರ್ (ಮಹಾರಾಷ್ಟ್ರ, 54 ವರ್ಷ)
  • ವಸುಮತಿ ಶ್ರೀನಿವಾಸನ್ (ಕರ್ನಾಟಕ, 68 ವರ್ಷ)
  • ಶಾಮಲಾ ಪದ್ಮನಾಭನ್ (ಕರ್ನಾಟಕ, 64 ವರ್ಷ)

ಜೂನ್​ 1ರಿಂದ ಮತ್ತೆ ಅಭಿಯಾನ ಆರಂಭಿಸಿರುವ ಈ ತಂಡ ಇದೀಗ ಹಿಮಾಚಲ ಪ್ರದೇಶ ತಲುಪಿದ ಬಳಿಕ ಲೇಹ್​-ಲಡಾಖ್​ ದಾಟಿ, ಕಾರ್ಗಿಲ್​​ನಲ್ಲಿ ಅಭಿಯಾನ ಅಂತ್ಯಗೊಳಿಸುವ ಗುರಿ ಇಟ್ಟುಕೊಂಡಿದೆ.

Last Updated : Jul 2, 2022, 10:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.