ETV Bharat / bharat

ಪತ್ನಿ, ಸ್ನೇಹಿತ ಸೇರಿ ಪತಿಗೆ ಆಹಾರದಲ್ಲಿ ಸ್ವಲ್ಪ ಸ್ವಲ್ಪ ವಿಷ ಬೆರೆಸಿ ಕೊಲೆ: ಆರೋಪಿಗಳ ಬಂಧನ - ದೂರು ದಾಖಲಿಸಿಕೊಂಡು ತನಿಖೆ

ಪತ್ನಿ ಹಾಗೂ ಸ್ನೇಹಿತ ಸೇರಿಕೊಂಡು ಪತಿ ಕೊಂದಿರುವ ಪ್ರಕರಣ ಮುಂಬೈಯಲ್ಲಿ ಬೆಳಕಿಗೆ ಬಂದಿದೆ. ಆರೋಪಿಗಳನ್ನು ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

Doctor treatment
ವೈದ್ಯರ ಚಿಕಿತ್ಸೆ
author img

By

Published : Dec 3, 2022, 8:04 PM IST

ಮುಂಬೈ: ಪತ್ನಿ ಹಾಗೂ ಪ್ರಿಯಕರ ಸೇರಿಕೊಂಡು ಪತಿಯನ್ನೇ ಕೊಂದಿರುವ ಪ್ರಕರಣ ಮುಂಬೈಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಬಟ್ಟೆ ವ್ಯಾಪಾರಿ ಪತಿ ಕಮಲ್ಕಾಂತ ಶಾ ಎಂಬ ಹತ್ಯೆಗೀಡಾದ ದುರ್ದೈವಿ. ಆರೋಪಿಗಳಾದ ಪತ್ನಿ ಕವಿತಾ ಹಾಗೂ ಪ್ರಿಯಕರ ಹಿತೇಶ್ ಜೈನ ನ್ನೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹತ್ಯೆ ಸಂಚು ಹೇಗೆ?: ಪೊಲೀಸ್ ಮಾಹಿತಿ ಪ್ರಕಾರ, ಸಾಂತಾಕ್ರೂಜ್ ಪಶ್ಚಿಮ ನಿವಾಸಿ ಮೃತ ಕಮಲ್ಕಾಂತ್ ಶಾ (45) 2002ರಲ್ಲಿ ಕವಿತಾ (45)ರನ್ನು ವಿವಾಹ ಆಗಿದ್ದರು. ಆರೋಪಿ ಹಿತೇಶ್ ಜೈನ್ ಕಮಲ್​ಕಾಂತ್​ ಸ್ನೇಹಿತನಾಗಿದ್ದನು, ಇಬ್ಬರೂ ಸೇರಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಈ ಮೊದಲೇ ಹಿತೇಶ್‌ನ ಪರಿಚಯವಿದ್ದ ಕವಿತಾ ದಶಕದ ಹಿಂದೆ ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ದಂಪತಿ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿತ್ತು, ಇದಕ್ಕಾಗಿ ಪತಿ - ಪತ್ನಿ ಆಗಾಗ್ಗೆ ಜಗಳ ಮಾಡುತ್ತಿದ್ದರು.

ಜೂನ್ 2022 ರಲ್ಲಿ ಕಮಲ್ಕಾಂತ್ ಅವರ ತಾಯಿ ನಿಧನ ಬಳಿಕ ಹಿತೇಶ್ ಜೈನ್ ಮತ್ತು ಕವಿತಾ ಷಾ ಸೇರಿಕೊಂಡು ಕಮಲ್ಕಾಂತ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಆಸ್ತಿ ಲಪಾಟಿಯಿಸಲು ಯೋಜನೆ ರೂಪಿಸಿದರು. ದಿನಗಳೂ ಕಳೆದಂತೆ ಸಂಶಯ ಬಾರದಂತೆ ಸ್ನೇಹಿತ ಹಾಗೂ ಪತ್ನಿ ಸೇರಿಕೊಂಡು ಕಮಲ್​​​ಕಾಂತ್​​ ಆಹಾರ ಸೇವನೆಯಲ್ಲಿ ಆರ್ಸೆನಿಕ್ ಎಂಬ ಪದಾರ್ಥ ವಿಷ ಬೆರೆಸಲು ಪ್ರಾರಂಭಿಸಿದರು. ಈ ಪದಾರ್ಥದಿಂದ ಸ್ಲೋ ಪಾ ಯಿಷನ್​ ಉಂಟಾಗಿ ಕಾಲಕ್ರಮೇಣ ಕಮಲ್ಕಾಂತರ ಆರೋಗ್ಯ ತೀವ್ರ ಹದಗೆಡಲು ಶುರುವಾಯಿತು. ಕಮಲ್ಕಾಂತರ ಶಾ ಅವರನ್ನೂ ಆರಂಭದಲ್ಲಿ ಆಗಸ್ಟ್ 27 ರಂದು ಅಂಧೇರಿ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು.

ಆರೋಗ್ಯ ಸುಧಾರಿಸದ್ದರಿಂದ ಕಮಲ್​ಕಾಂತ್​ ಅವರನ್ನು ಸೆಪ್ಟೆಂಬರ್ 3 ರಂದು ಬಾಂಬೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ಯಶಸ್ವಿಯಾಗದಿದ್ದರಿಂದ ಕಮಲ್​ಕಾಂತ್​ ಶಾ ಸೆಪ್ಟೆಂಬರ್ 19 ರಂದು ನಿಧನರಾದರು ಎಂದು ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ. ನಂತರ ಪೊಲೀಸರು ಕಮಲ್ಕಾಂತ ಶಾ ಅವರ ಸಹೋದರಿ ಕವಿತಾ ಲಾಲ್ವಾನಿ ಅವರ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ರ ತನಿಖೆಯ ನಂತರ ದೊರೆತ ಸಾಕ್ಷ್ಯದ ಪ್ರಕಾರ ಸಾಂದರ್ಭಿಕ, ತಾಂತ್ರಿಕ ಮತ್ತು ವೈದ್ಯಕೀಯ ಪುರಾವೆಗಳ ಆಧಾರದ ಮೇಲೆ ಪತ್ನಿ ಕವಿತಾ ಹಾಗೂ ಸ್ನೇಹಿತ ಹಿತೇಶ ಜೈನ್ ಅವರನ್ನು ಬಂಧಿಸಿದ್ದಾರೆ. ಕಮಲ್​​ಕಾಂತ್​ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಗಳು(20) ಮಗ (17) ವರ್ಷದವರು ಇದ್ದಾರೆ.

ಇದನ್ನೂ ಓದಿ:ಬೈಕ್​ನಲ್ಲಿ ಅಕ್ರಮ ಜಿಂಕೆ ಚರ್ಮ ಸಾಗಾಟ: ಇಬ್ಬರ ಬಂಧನ

ಮುಂಬೈ: ಪತ್ನಿ ಹಾಗೂ ಪ್ರಿಯಕರ ಸೇರಿಕೊಂಡು ಪತಿಯನ್ನೇ ಕೊಂದಿರುವ ಪ್ರಕರಣ ಮುಂಬೈಯಲ್ಲಿ ಇತ್ತೀಚೆಗೆ ಬೆಳಕಿಗೆ ಬಂದಿದೆ. ಬಟ್ಟೆ ವ್ಯಾಪಾರಿ ಪತಿ ಕಮಲ್ಕಾಂತ ಶಾ ಎಂಬ ಹತ್ಯೆಗೀಡಾದ ದುರ್ದೈವಿ. ಆರೋಪಿಗಳಾದ ಪತ್ನಿ ಕವಿತಾ ಹಾಗೂ ಪ್ರಿಯಕರ ಹಿತೇಶ್ ಜೈನ ನ್ನೂ ಮುಂಬೈ ಕ್ರೈಂ ಬ್ರಾಂಚ್ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಹತ್ಯೆ ಸಂಚು ಹೇಗೆ?: ಪೊಲೀಸ್ ಮಾಹಿತಿ ಪ್ರಕಾರ, ಸಾಂತಾಕ್ರೂಜ್ ಪಶ್ಚಿಮ ನಿವಾಸಿ ಮೃತ ಕಮಲ್ಕಾಂತ್ ಶಾ (45) 2002ರಲ್ಲಿ ಕವಿತಾ (45)ರನ್ನು ವಿವಾಹ ಆಗಿದ್ದರು. ಆರೋಪಿ ಹಿತೇಶ್ ಜೈನ್ ಕಮಲ್​ಕಾಂತ್​ ಸ್ನೇಹಿತನಾಗಿದ್ದನು, ಇಬ್ಬರೂ ಸೇರಿ ಬಟ್ಟೆ ವ್ಯಾಪಾರ ಮಾಡುತ್ತಿದ್ದರು. ಈ ಮೊದಲೇ ಹಿತೇಶ್‌ನ ಪರಿಚಯವಿದ್ದ ಕವಿತಾ ದಶಕದ ಹಿಂದೆ ಆತನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು. ಇದು ದಂಪತಿ ನಡುವೆ ಭಿನ್ನಾಭಿಪ್ರಾಯ ಹುಟ್ಟಿಸಿತ್ತು, ಇದಕ್ಕಾಗಿ ಪತಿ - ಪತ್ನಿ ಆಗಾಗ್ಗೆ ಜಗಳ ಮಾಡುತ್ತಿದ್ದರು.

ಜೂನ್ 2022 ರಲ್ಲಿ ಕಮಲ್ಕಾಂತ್ ಅವರ ತಾಯಿ ನಿಧನ ಬಳಿಕ ಹಿತೇಶ್ ಜೈನ್ ಮತ್ತು ಕವಿತಾ ಷಾ ಸೇರಿಕೊಂಡು ಕಮಲ್ಕಾಂತ ಅವರನ್ನು ಕೊಲ್ಲಲು ಸಂಚು ರೂಪಿಸಿದ್ದರು. ಆಸ್ತಿ ಲಪಾಟಿಯಿಸಲು ಯೋಜನೆ ರೂಪಿಸಿದರು. ದಿನಗಳೂ ಕಳೆದಂತೆ ಸಂಶಯ ಬಾರದಂತೆ ಸ್ನೇಹಿತ ಹಾಗೂ ಪತ್ನಿ ಸೇರಿಕೊಂಡು ಕಮಲ್​​​ಕಾಂತ್​​ ಆಹಾರ ಸೇವನೆಯಲ್ಲಿ ಆರ್ಸೆನಿಕ್ ಎಂಬ ಪದಾರ್ಥ ವಿಷ ಬೆರೆಸಲು ಪ್ರಾರಂಭಿಸಿದರು. ಈ ಪದಾರ್ಥದಿಂದ ಸ್ಲೋ ಪಾ ಯಿಷನ್​ ಉಂಟಾಗಿ ಕಾಲಕ್ರಮೇಣ ಕಮಲ್ಕಾಂತರ ಆರೋಗ್ಯ ತೀವ್ರ ಹದಗೆಡಲು ಶುರುವಾಯಿತು. ಕಮಲ್ಕಾಂತರ ಶಾ ಅವರನ್ನೂ ಆರಂಭದಲ್ಲಿ ಆಗಸ್ಟ್ 27 ರಂದು ಅಂಧೇರಿ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಯಿತು.

ಆರೋಗ್ಯ ಸುಧಾರಿಸದ್ದರಿಂದ ಕಮಲ್​ಕಾಂತ್​ ಅವರನ್ನು ಸೆಪ್ಟೆಂಬರ್ 3 ರಂದು ಬಾಂಬೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆ ಯಶಸ್ವಿಯಾಗದಿದ್ದರಿಂದ ಕಮಲ್​ಕಾಂತ್​ ಶಾ ಸೆಪ್ಟೆಂಬರ್ 19 ರಂದು ನಿಧನರಾದರು ಎಂದು ಪೊಲೀಸ್ ಅಪರಾಧ ವಿಭಾಗ ತಿಳಿಸಿದೆ. ನಂತರ ಪೊಲೀಸರು ಕಮಲ್ಕಾಂತ ಶಾ ಅವರ ಸಹೋದರಿ ಕವಿತಾ ಲಾಲ್ವಾನಿ ಅವರ ಹೇಳಿಕೆ ಆಧರಿಸಿ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಪೊಲೀಸ್ ರ ತನಿಖೆಯ ನಂತರ ದೊರೆತ ಸಾಕ್ಷ್ಯದ ಪ್ರಕಾರ ಸಾಂದರ್ಭಿಕ, ತಾಂತ್ರಿಕ ಮತ್ತು ವೈದ್ಯಕೀಯ ಪುರಾವೆಗಳ ಆಧಾರದ ಮೇಲೆ ಪತ್ನಿ ಕವಿತಾ ಹಾಗೂ ಸ್ನೇಹಿತ ಹಿತೇಶ ಜೈನ್ ಅವರನ್ನು ಬಂಧಿಸಿದ್ದಾರೆ. ಕಮಲ್​​ಕಾಂತ್​ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಮಗಳು(20) ಮಗ (17) ವರ್ಷದವರು ಇದ್ದಾರೆ.

ಇದನ್ನೂ ಓದಿ:ಬೈಕ್​ನಲ್ಲಿ ಅಕ್ರಮ ಜಿಂಕೆ ಚರ್ಮ ಸಾಗಾಟ: ಇಬ್ಬರ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.