ETV Bharat / bharat

ಅರೆಸೇನಾ ಪಡೆ ಕಳುಹಿಸುತ್ತೇವೆ.. ವಕೀಲರ ಪ್ರತಿಭಟನೆ ತಡೆಯದ ಒಡಿಶಾ ಪೊಲೀಸ್​ ವಿರುದ್ಧ ಸುಪ್ರೀಂ ಗರಂ

author img

By

Published : Dec 15, 2022, 9:48 AM IST

ಒಡಿಶಾದ ಸಂಭಲ್​ಪುರ ನ್ಯಾಯಾಲಯದಲ್ಲಿ ದಾಂಧಲೆ ಪ್ರಕರಣವನ್ನು ಸುಪ್ರೀಂಕೋರ್ಟ್ ಕಟುವಾಗಿ ಟೀಕಿಸಿದೆ. ಪರಿಸ್ಥಿತಿ ನಿಭಾಯಿಸದ ಪೊಲೀಸ್​, ಸರ್ಕಾರದ ವಿರುದ್ಧ ಕಿಡಿಕಾರಿದೆ.

sc-warning-on-odisha-lawyers-stir
ಒಡಿಶಾ ಪೊಲೀಸ್​ ವಿರುದ್ಧ ಸುಪ್ರೀಂ ಕೆಂಡ

ನವದೆಹಲಿ: ಒಡಿಶಾದಲ್ಲಿ ವಕೀಲರ ಧರಣಿ ಹಿಂಸಾಚಾರಕ್ಕೆ ತಿರುಗಿ ಕೆಲವು ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಧ್ವಂಸ ಮತ್ತು ಅದರ ಕಲಾಪಗಳಿಗೆ ಅಡ್ಡಿಪಡಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಸರ್ಕಾರ ಮತ್ತು ಪೊಲೀಸ್​ ಇಲಾಖೆಯ ವಿರುದ್ಧ ಗರಂ ಆಗಿದೆ. ನಿಮ್ಮಿಂದ ಇದನ್ನು ತಡೆಯಲಾಗದಿದ್ದರೆ, ನಾವೇ ಅಲ್ಲಿಗೆ ಅರೆಸೇನಾ ಪಡೆಗಳನ್ನು ಕಳುಹಿಸುತ್ತೇವೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ, ಒಡಿಶಾದ ಪೊಲೀಸ್ ಮಹಾನಿರ್ದೇಶಕರಿಗೆ ಪಾಠ ಮಾಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದು ಪೊಲೀಸರ ಆದ್ಯ ಕರ್ತವ್ಯ. ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಆ ಜಾಗಕ್ಕೆ ನ್ಯಾಯಾಲಯವು ಅರೆಸೇನಾ ಪಡೆಗಳನ್ನು ನಿಯೋಜಿಸುತ್ತದೆ ಎಂದು ಖಡಕ್​ ವಾರ್ನಿಂಗ್​ ನೀಡಿತು.

ಸಂಬಲ್‌ಪುರ ಜಿಲ್ಲಾ ವಕೀಲರ ಸಂಘದ 43 ಸದಸ್ಯರು ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ದಾರೆ. ಧರಣಿಗೆ ಸ್ಪಂದಿಸದ ಕಾರಣ ವಿಧ್ವಂಸಕ ಕೃತ್ಯದಲ್ಲಿ ತೊಡಗಿಸಿಕೊಂಡು, ವಿವಿಧ ಜಿಲ್ಲೆಗಳಲ್ಲಿ ಕೋರ್ಟ್​ಗೆ ನುಗ್ಗಿ ವಿಚಾರಣೆಗಳಿಗೆ ಅಡ್ಡಿ ಉಂಟು ಮಾಡಿದ್ದಲ್ಲದೇ, ಅಲ್ಲಿನ ವಸ್ತುಗಳನ್ನು ಧ್ವಂಸ ಮಾಡಿ ದಾಂಧಲೆ ಎಬ್ಬಿಸಿದ್ದರು. ಇದರ ವಿರುದ್ಧ ಸುಪ್ರೀಂ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿಚಾರಣೆಗೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.

ಇದಕ್ಕೆ ಸ್ಪಷ್ಟನೆ ನೀಡಿದ ಭಾರತೀಯ ಬಾರ್​ ಕೌನ್ಸಿಲ್ ದಾಂಧಲೆ ನಡೆಸಿದ 43 ವಕೀಲರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿತು. ಈ ವೇಳೆ ಕೋರ್ಟ್​, ಅಷ್ಟೇ ಸಾಲದು. ಅಂಧವರ ವಿರುದ್ಧ ಕೇಸ್​ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಎಂದು ತಾಕೀತು ಮಾಡಿತು. ನಾವೇನಾದರೂ ಶಿಕ್ಷೆ ನೀಡಿದರೆ ಅದು ತುಂಬಾ ಕಠಿಣಾತಿಕಠಿಣವಾಗಿರುತ್ತದೆ ಎಂದು ಹೇಳಿತು.

ವಿವಿಧ ಬೇಡಿಕೆಗಳಿಗಾಗಿ ಸಂಭಲ್​ಪುರದ ಜಿಲ್ಲಾ ನ್ಯಾಯಾಲಯದ ಮುಂದೆ 43 ವಕೀಲರು ಪ್ರತಿಭಟನೆ ನಡೆಸಿದರು. ಈ ವೇಳೆ ನಡೆದ ದಾಂಧಲೆಯಲ್ಲಿ ಕೋರ್ಟ್​ಗೆ ನುಗ್ಗಿದ ಪ್ರತಿಭಟನಾಕಾರರು, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿ, ಕೋರ್ಟ್​ ವಿಚಾರಣೆಗಳಿಗೆ ಅಡ್ಡಿಪಡಿಸಿತ್ತು.

ಓದಿ: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಜನದಟ್ಟಣೆ: ಬಸ್​ ರೈಲು ಬಿಟ್ಟು ವಿಮಾನಯಾನದತ್ತ ಪ್ರಯಾಣಿಕರ ಒಲವು

ನವದೆಹಲಿ: ಒಡಿಶಾದಲ್ಲಿ ವಕೀಲರ ಧರಣಿ ಹಿಂಸಾಚಾರಕ್ಕೆ ತಿರುಗಿ ಕೆಲವು ಜಿಲ್ಲೆಗಳಲ್ಲಿ ನ್ಯಾಯಾಲಯಗಳ ಧ್ವಂಸ ಮತ್ತು ಅದರ ಕಲಾಪಗಳಿಗೆ ಅಡ್ಡಿಪಡಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್​ ಸರ್ಕಾರ ಮತ್ತು ಪೊಲೀಸ್​ ಇಲಾಖೆಯ ವಿರುದ್ಧ ಗರಂ ಆಗಿದೆ. ನಿಮ್ಮಿಂದ ಇದನ್ನು ತಡೆಯಲಾಗದಿದ್ದರೆ, ನಾವೇ ಅಲ್ಲಿಗೆ ಅರೆಸೇನಾ ಪಡೆಗಳನ್ನು ಕಳುಹಿಸುತ್ತೇವೆ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ.

ಕಾನೂನು ಸುವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಅಭಯ್ ಎಸ್ ಓಕಾ ಅವರಿದ್ದ ಪೀಠ, ಒಡಿಶಾದ ಪೊಲೀಸ್ ಮಹಾನಿರ್ದೇಶಕರಿಗೆ ಪಾಠ ಮಾಡಿದೆ. ಪರಿಸ್ಥಿತಿಯನ್ನು ನಿಯಂತ್ರಿಸುವುದು ಪೊಲೀಸರ ಆದ್ಯ ಕರ್ತವ್ಯ. ಅದನ್ನು ಮಾಡಲು ಸಾಧ್ಯವಾಗದಿದ್ದಲ್ಲಿ ಆ ಜಾಗಕ್ಕೆ ನ್ಯಾಯಾಲಯವು ಅರೆಸೇನಾ ಪಡೆಗಳನ್ನು ನಿಯೋಜಿಸುತ್ತದೆ ಎಂದು ಖಡಕ್​ ವಾರ್ನಿಂಗ್​ ನೀಡಿತು.

ಸಂಬಲ್‌ಪುರ ಜಿಲ್ಲಾ ವಕೀಲರ ಸಂಘದ 43 ಸದಸ್ಯರು ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿದ್ದಾರೆ. ಧರಣಿಗೆ ಸ್ಪಂದಿಸದ ಕಾರಣ ವಿಧ್ವಂಸಕ ಕೃತ್ಯದಲ್ಲಿ ತೊಡಗಿಸಿಕೊಂಡು, ವಿವಿಧ ಜಿಲ್ಲೆಗಳಲ್ಲಿ ಕೋರ್ಟ್​ಗೆ ನುಗ್ಗಿ ವಿಚಾರಣೆಗಳಿಗೆ ಅಡ್ಡಿ ಉಂಟು ಮಾಡಿದ್ದಲ್ಲದೇ, ಅಲ್ಲಿನ ವಸ್ತುಗಳನ್ನು ಧ್ವಂಸ ಮಾಡಿ ದಾಂಧಲೆ ಎಬ್ಬಿಸಿದ್ದರು. ಇದರ ವಿರುದ್ಧ ಸುಪ್ರೀಂ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಿಚಾರಣೆಗೆ ಅಡ್ಡಿಪಡಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದೆ.

ಇದಕ್ಕೆ ಸ್ಪಷ್ಟನೆ ನೀಡಿದ ಭಾರತೀಯ ಬಾರ್​ ಕೌನ್ಸಿಲ್ ದಾಂಧಲೆ ನಡೆಸಿದ 43 ವಕೀಲರನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿತು. ಈ ವೇಳೆ ಕೋರ್ಟ್​, ಅಷ್ಟೇ ಸಾಲದು. ಅಂಧವರ ವಿರುದ್ಧ ಕೇಸ್​ ದಾಖಲಿಸಿ ಕಾನೂನು ಕ್ರಮ ಜರುಗಿಸಿ ಎಂದು ತಾಕೀತು ಮಾಡಿತು. ನಾವೇನಾದರೂ ಶಿಕ್ಷೆ ನೀಡಿದರೆ ಅದು ತುಂಬಾ ಕಠಿಣಾತಿಕಠಿಣವಾಗಿರುತ್ತದೆ ಎಂದು ಹೇಳಿತು.

ವಿವಿಧ ಬೇಡಿಕೆಗಳಿಗಾಗಿ ಸಂಭಲ್​ಪುರದ ಜಿಲ್ಲಾ ನ್ಯಾಯಾಲಯದ ಮುಂದೆ 43 ವಕೀಲರು ಪ್ರತಿಭಟನೆ ನಡೆಸಿದರು. ಈ ವೇಳೆ ನಡೆದ ದಾಂಧಲೆಯಲ್ಲಿ ಕೋರ್ಟ್​ಗೆ ನುಗ್ಗಿದ ಪ್ರತಿಭಟನಾಕಾರರು, ಅಲ್ಲಿನ ಪೀಠೋಪಕರಣಗಳನ್ನು ಧ್ವಂಸ ಮಾಡಿ, ಕೋರ್ಟ್​ ವಿಚಾರಣೆಗಳಿಗೆ ಅಡ್ಡಿಪಡಿಸಿತ್ತು.

ಓದಿ: ಕೆಂಪೇಗೌಡ ಏರ್​ಪೋರ್ಟ್​ನಲ್ಲಿ ಜನದಟ್ಟಣೆ: ಬಸ್​ ರೈಲು ಬಿಟ್ಟು ವಿಮಾನಯಾನದತ್ತ ಪ್ರಯಾಣಿಕರ ಒಲವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.