ETV Bharat / bharat

ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣ: ಸಂಜಯ್ ರಾವತ್​ ವಾಜೆ ರಕ್ಷಿಸುತ್ತಿರೋದು ಏಕೆ? : ಬಿಜೆಪಿ ಪ್ರಶ್ನೆ

author img

By

Published : Mar 16, 2021, 8:06 AM IST

ಶಿವಸೇನೆ ಅನುಕೂಲಕರ ರಾಜಕೀಯವನ್ನು ಮಾಡಿದೆ. ಸಂಸದ ಸಂಜಯ್ ರಾವತ್ ಮುಂಬೈ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವನ್ನು ಅದರ ಸಾಮರ್ಥ್ಯಕ್ಕಾಗಿ ಹೊಗಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

Why Sanjay Raut is shielding Vaze? BJP targets Shiv Sena
ಬಿಜೆಪಿ

ಮುಂಬೈ (ಮಹಾರಾಷ್ಟ್ರ): ಬಿಜೆಪಿ ಮತ್ತು ಆಡಳಿತಾರೂಢ ಶಿವಸೇನೆಯ ನಡುವಿನ ದ್ವೇಷ ಹೊಸ ಹಂತವನ್ನೇ ತಲುಪಿದೆ. ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಸ್ಫೋಟಕ ತುಂಬಿದ ಕಾರನ್ನು ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿರುವ ಸಚಿನ್ ವಾಜೆ ಅವರ ವಿಚಾರದಲ್ಲಿ ಆಡಳಿತಾರೂಢ ಶಿವಸೇನೆ ಅವರನ್ನು ಬಿಜೆಪಿ ಗುರಿಯಾಗಿಸಿದೆ. ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಾಜೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದೆ.

"ಸ್ವತಃ ಬಂಧಿಸಲ್ಪಟ್ಟಿರುವ ಪ್ರಕರಣದ ತನಿಖೆಗೆ ಉಸ್ತುವಾರಿಯಾಗಿ ಸಚಿನ್ ವಾಜೆ ಅವರನ್ನು ಏಕೆ ನೇಮಿಸಲಾಯಿತು? ಶಿವಸೇನಾ ನಾಯಕ ಮತ್ತು ಸಂಸದ ಸಂಜಯ್ ರಾವತ್ ಅವರು ಏಕೆ ವಾಜೆ ಅವರನ್ನು ರಕ್ಷಿಸುತ್ತಿದ್ದಾರೆ? ಎನ್ಐಎ ತನಿಖೆಯ ಸಮಯದಲ್ಲಿ ಯಾವ ಶಿವಸೇನಾ ನಾಯಕರ ಹೆಸರನ್ನು ವಾಜೆ ತೆಗೆದುಕೊಂಡಿದ್ದಾರೆ?"ಎಂದು ಬಿಜೆಪಿ ಟ್ವಿಟರ್ ನಲ್ಲಿ ಬರೆದಿದೆ.

ಬಿಜೆಪಿ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಶಿವಸೇನೆ ಅನುಕೂಲಕರ ರಾಜಕೀಯವನ್ನು ಮಾಡಿದೆ ಎಂದು ಆರೋಪಿಸಿದೆ. ಸಂಸದ ಸಂಜಯ್ ರಾವತ್ ಮುಂಬೈ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವನ್ನು ಅದರ ಸಾಮರ್ಥ್ಯಕ್ಕಾಗಿ ಹೊಗಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ:ಫೋನ್ ಟ್ಯಾಪಿಂಗ್ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ, ಮನ್ಸುಖ್ ಹಿರೆನ್ ಅವರ ಮರಣದ ನಂತರ ಸಚಿನ್ ವಾಜೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತೀವ್ರವಾಗಿ ಒತ್ತಾಯಿಸಿದ್ದರು. ಮತ್ತೊಂದೆಡೆ, ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವಾಗಿಯೇ ಕೋಲಾಹಲ ಸೃಷ್ಟಿಯಾಗಿತ್ತು.

ಮುಂಬೈ (ಮಹಾರಾಷ್ಟ್ರ): ಬಿಜೆಪಿ ಮತ್ತು ಆಡಳಿತಾರೂಢ ಶಿವಸೇನೆಯ ನಡುವಿನ ದ್ವೇಷ ಹೊಸ ಹಂತವನ್ನೇ ತಲುಪಿದೆ. ಮುಂಬೈನ ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿ ಅವರ ಮನೆಯ ಬಳಿ ಸ್ಫೋಟಕ ತುಂಬಿದ ಕಾರನ್ನು ನಿಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿರುವ ಸಚಿನ್ ವಾಜೆ ಅವರ ವಿಚಾರದಲ್ಲಿ ಆಡಳಿತಾರೂಢ ಶಿವಸೇನೆ ಅವರನ್ನು ಬಿಜೆಪಿ ಗುರಿಯಾಗಿಸಿದೆ. ಬಿಜೆಪಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಾಜೆ ಬಗ್ಗೆ ಕೆಲವು ಪ್ರಶ್ನೆಗಳನ್ನು ಎತ್ತಿದೆ.

"ಸ್ವತಃ ಬಂಧಿಸಲ್ಪಟ್ಟಿರುವ ಪ್ರಕರಣದ ತನಿಖೆಗೆ ಉಸ್ತುವಾರಿಯಾಗಿ ಸಚಿನ್ ವಾಜೆ ಅವರನ್ನು ಏಕೆ ನೇಮಿಸಲಾಯಿತು? ಶಿವಸೇನಾ ನಾಯಕ ಮತ್ತು ಸಂಸದ ಸಂಜಯ್ ರಾವತ್ ಅವರು ಏಕೆ ವಾಜೆ ಅವರನ್ನು ರಕ್ಷಿಸುತ್ತಿದ್ದಾರೆ? ಎನ್ಐಎ ತನಿಖೆಯ ಸಮಯದಲ್ಲಿ ಯಾವ ಶಿವಸೇನಾ ನಾಯಕರ ಹೆಸರನ್ನು ವಾಜೆ ತೆಗೆದುಕೊಂಡಿದ್ದಾರೆ?"ಎಂದು ಬಿಜೆಪಿ ಟ್ವಿಟರ್ ನಲ್ಲಿ ಬರೆದಿದೆ.

ಬಿಜೆಪಿ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಶಿವಸೇನೆ ಅನುಕೂಲಕರ ರಾಜಕೀಯವನ್ನು ಮಾಡಿದೆ ಎಂದು ಆರೋಪಿಸಿದೆ. ಸಂಸದ ಸಂಜಯ್ ರಾವತ್ ಮುಂಬೈ ಪೊಲೀಸರು ಮತ್ತು ಭಯೋತ್ಪಾದನಾ ನಿಗ್ರಹ ದಳವನ್ನು ಅದರ ಸಾಮರ್ಥ್ಯಕ್ಕಾಗಿ ಹೊಗಳಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಇದನ್ನೂ ಓದಿ:ಫೋನ್ ಟ್ಯಾಪಿಂಗ್ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ಪ್ರತಿಪಕ್ಷದ ನಾಯಕ ದೇವೇಂದ್ರ ಫಡ್ನವೀಸ್ ಅವರು ವಿಧಾನಸಭೆಯಲ್ಲಿ ಮಾತನಾಡುತ್ತಾ, ಮನ್ಸುಖ್ ಹಿರೆನ್ ಅವರ ಮರಣದ ನಂತರ ಸಚಿನ್ ವಾಜೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ತೀವ್ರವಾಗಿ ಒತ್ತಾಯಿಸಿದ್ದರು. ಮತ್ತೊಂದೆಡೆ, ರಾಜ್ಯ ವಿಧಾನಸಭೆಯಲ್ಲಿ ಈ ವಿಚಾರವಾಗಿಯೇ ಕೋಲಾಹಲ ಸೃಷ್ಟಿಯಾಗಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.