ETV Bharat / bharat

ನಮಗೆ ಅಖಂಡ ಕಾಶ್ಮೀರ ಬೇಕು.. ಪಿಒಕೆಯಲ್ಲಿ ವಾಸಿಸುವ ಜನರು ಭಾರತಕ್ಕೆ ಸೇರಲು ಬಯಸುತ್ತಾರೆ: ರಾಮದಾಸ್ ಅಠಾವಳೆ

author img

By

Published : Oct 7, 2022, 8:36 PM IST

ಮುಂದೊಂದು ದಿನ ಪಾಕ್ ಆಕ್ರಮಿತ ಕಾಶ್ಮೀರವು ಭಾರತಕ್ಕೆ ಸೇರಲಿದೆ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಸಚಿವ ರಾಮದಾಸ್ ಅಠಾವಳೆ
ಕೇಂದ್ರ ಸಚಿವ ರಾಮದಾಸ್ ಅಠಾವಳೆ

ಶ್ರೀನಗರ: ಮುಂದೊಂದು ದಿನ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಲಿದೆ. ಕಾಶ್ಮೀರಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಗುರುವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಶಾಂತಿ ಅತ್ಯಗತ್ಯ ಎಂದಿರುವ ಅವರು, ಉಗ್ರಗಾಮಿಗಳು ಹಿಂಸಾಚಾರದ ಹಾದಿಯನ್ನು ಕೈಬಿಟ್ಟು ಕಾಶ್ಮೀರದ ಅಭಿವೃದ್ಧಿಯ ಭಾಗವಾಗುವಂತೆ ಮನವಿ ಮಾಡಿದರು.

ಕಾಶ್ಮೀರದಲ್ಲಿ ಜನರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಪಾಕಿಸ್ತಾನ ಪಿಒಕೆಯನ್ನು ಆಕ್ರಮಿಸಿಕೊಂಡಿದೆ. ಮುಂದೊಂದು ದಿನ ಅದು ಭಾರತದ ಭಾಗವಾಗಲಿದೆ. ಪಾಕಿಸ್ತಾನದಿಂದ ಬೇಸತ್ತಿರುವ ಅಲ್ಲಿನ ಜನರು ಇದನ್ನೇ ಬಯಸುತ್ತಾರೆ. ನಮಗೆ ಅಖಂಡ ಕಾಶ್ಮೀರ ಮತ್ತು ಅದರ ಅಭಿವೃದ್ಧಿ ಆಗಬೇಕೆಂದು ಅವರು ಹೇಳಿದರು.

ಪ್ರವಾಸೋದ್ಯಮ ಹೆಚ್ಚಿಸುವ ಪ್ರಯತ್ನ: ಕಾಶ್ಮೀರವನ್ನು ಸುಂದರವಾದ ಸ್ಥಳವೆಂದು ಗಮನಿಸಿದ ಕೇಂದ್ರವು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡುವುದು, ಉಗ್ರರಿಗೆ ತರಬೇತಿ ನೀಡುವುದು ಹಾಗೂ ಯುವಕರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಪಾಕಿಸ್ತಾನ ಅಭಿವೃದ್ಧಿ ಹೊಂದಬೇಕಾದರೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಓದಿ: ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಇಂದಿರಾ - ಕವಿತಾ ಲೋಕೇಶ್​

ಶ್ರೀನಗರ: ಮುಂದೊಂದು ದಿನ ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತಕ್ಕೆ ಸೇರಲಿದೆ. ಕಾಶ್ಮೀರಕ್ಕೂ ಪಾಕಿಸ್ತಾನಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಗುರುವಾರ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ ಶಾಂತಿ ಅತ್ಯಗತ್ಯ ಎಂದಿರುವ ಅವರು, ಉಗ್ರಗಾಮಿಗಳು ಹಿಂಸಾಚಾರದ ಹಾದಿಯನ್ನು ಕೈಬಿಟ್ಟು ಕಾಶ್ಮೀರದ ಅಭಿವೃದ್ಧಿಯ ಭಾಗವಾಗುವಂತೆ ಮನವಿ ಮಾಡಿದರು.

ಕಾಶ್ಮೀರದಲ್ಲಿ ಜನರು ತ್ರಿವರ್ಣ ಧ್ವಜವನ್ನು ಹಾರಿಸಿದ್ದಾರೆ. ಪಾಕಿಸ್ತಾನ ಪಿಒಕೆಯನ್ನು ಆಕ್ರಮಿಸಿಕೊಂಡಿದೆ. ಮುಂದೊಂದು ದಿನ ಅದು ಭಾರತದ ಭಾಗವಾಗಲಿದೆ. ಪಾಕಿಸ್ತಾನದಿಂದ ಬೇಸತ್ತಿರುವ ಅಲ್ಲಿನ ಜನರು ಇದನ್ನೇ ಬಯಸುತ್ತಾರೆ. ನಮಗೆ ಅಖಂಡ ಕಾಶ್ಮೀರ ಮತ್ತು ಅದರ ಅಭಿವೃದ್ಧಿ ಆಗಬೇಕೆಂದು ಅವರು ಹೇಳಿದರು.

ಪ್ರವಾಸೋದ್ಯಮ ಹೆಚ್ಚಿಸುವ ಪ್ರಯತ್ನ: ಕಾಶ್ಮೀರವನ್ನು ಸುಂದರವಾದ ಸ್ಥಳವೆಂದು ಗಮನಿಸಿದ ಕೇಂದ್ರವು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರವಾಸೋದ್ಯಮವನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದೆ ಎಂದು ತಿಳಿಸಿದರು.

ಪಾಕಿಸ್ತಾನ ನಮ್ಮ ಮೇಲೆ ದಾಳಿ ಮಾಡುವುದು, ಉಗ್ರರಿಗೆ ತರಬೇತಿ ನೀಡುವುದು ಹಾಗೂ ಯುವಕರನ್ನು ದಾರಿ ತಪ್ಪಿಸುವುದನ್ನು ನಿಲ್ಲಿಸಬೇಕು. ಪಾಕಿಸ್ತಾನ ಅಭಿವೃದ್ಧಿ ಹೊಂದಬೇಕಾದರೆ ಭಾರತದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಓದಿ: ಭಾರತ್ ಜೋಡೋ ಯಾತ್ರೆ.. ರಾಹುಲ್ ಗಾಂಧಿ ಜತೆ ಹೆಜ್ಜೆ ಹಾಕಿದ ಇಂದಿರಾ - ಕವಿತಾ ಲೋಕೇಶ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.