ETV Bharat / bharat

ಲಾರಿ ಚಾಲಕನಿಗೆ ಬೂಟು ಕಾಲಿಂದ ಒದ್ದ ಟ್ರಾಫಿಕ್​ ಹೆಡ್​ ಕಾನ್ಸ್​ಟೇಬಲ್​ ​: ವಿಡಿಯೋ ವೈರಲ್​

author img

By

Published : Jun 13, 2022, 12:29 PM IST

ಅನ್ನಮಯ್ಯ ವೃತ್ತದಲ್ಲಿ ಟ್ರಾಫಿಕ್​ ಪೊಲೀಸ್​ ಹೆಡ್​ ಕಾನ್ಸ್​​ಟೇಬಲ್​​ ​ ಟಿ.ಜಗದೀಶ್​ ಕೀಶೋರ್​ ಹಾಗೂ ಲಾರಿ ಚಾಲಕನ ನಡುವೆ ವಾಗ್ವಾದ ನಡೆದು, ಲಾರಿ ಚಾಲಕನಿಗೆ ಕಾನ್ಸ್​ಟೇಬಲ್​​ ​ ತನ್ನ ಬೂಟು ಕಾಲಿನಿಂದ ಹಿಗ್ಗಾಮುಗ್ಗ ಒದ್ದಿರುವ ದೃಶ್ಯ ವೈರಲ್​ ಆಗಿದ್ದು, ಪೊಲೀಸ್​ ಅನ್ನು ಅಮಾನತುಗೊಳಿಸಲಾಗಿದೆ.

Viral video: Traffic cop suspended for kicking a drunk man in AP
ಲಾರಿ ಚಾಲಕನಿಗೆ ಬೂಟು ಕಾಲಿನಿಂದ ಒದ್ದ ಟ್ರಾಫಿಕ್​ ಹೆಡ್​ ಕಾನ್​ಸ್ಟೆಬಲ್​

ತಿರುಪತಿ(ಆಂಧ್ರಪ್ರದೇಶ): ತಿರುಪತಿ ಜಿಲ್ಲೆಯ ಅನ್ನಮಯ್ಯ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್​ಟೇಬಲ್, ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ನಂತರ ಆ ಕಾನ್ಸ್​ಟೇಬಲ್​ನನ್ನು ಅಮಾನತುಗೊಳಿಸಲಾಗಿದೆ.

ಲಾರಿ ಚಾಲಕನಿಗೆ ಬೂಟು ಕಾಲಿನಿಂದ ಒದ್ದ ಟ್ರಾಫಿಕ್​ ಹೆಡ್​ ಕಾನ್​ಸ್ಟೆಬಲ್​: ವೀಡಿಯೋ ವೈರಲ್​

ಅನ್ನಮಯ್ಯ ವೃತ್ತದಲ್ಲಿ ನಿಯೋಜನೆಗೊಂಡಿದ್ದ ಹೆಡ್ ಕಾನ್ಸ್​ಟೇಬಲ್ ಟಿ. ಜಗದೀಶ್ ಕಿಶೋರ್ ರಸ್ತೆಬದಿಯಲ್ಲಿ ಕಿಶೋರ್ ಬಾಬು ಎಂಬ ವ್ಯಕ್ತಿಯನ್ನು ಬೂಟು ಕಾಲಿನಿಂದ ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಹೆಡ್​ ಕಾನ್​ಸ್ಟೆಬಲ್ ಜಗದೀಶ್ ಕಿಶೋರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಡ್ಡರಸ್ತೆಯಲ್ಲಿ ಲಾರಿಯೊಂದು ಬಂದು ನಿಂತಿತ್ತು. ಹೆಡ್ ಕಾನ್ಸ್​ಟೇಬಲ್ ಟ್ರಕ್ ಅನ್ನು ಬೇರೆ ಕಡೆ ತೆಗೆದುಕೊಂಡು ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಚಾಲಕ ಲಾರಿ ಚಲಾಯಿಸಲು ಯತ್ನಿಸುತ್ತಿದ್ದಾಗ ಮುಖ್ಯ ಪೇದೆ​ ಚಾಲಕನನ್ನು ಅಡ್ಡಗಟ್ಟಿ ಪಕ್ಕಕ್ಕೆ ಹೋಗುವಂತೆ ಆದೇಶಿಸಿದರು. ಇಬ್ಬರ ನಡುವೆ ವಾಗ್ವಾದ ನಡೆದು, ತಾಳ್ಮೆ ಕಳೆದುಕೊಂಡ ಪೊಲೀಸ್​ ಬೂಟುಕಾಲಿನಿಂದ ಮೂರು ಬಾರಿ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಆಕ್ಷೇಪಾರ್ಹ ಪೋಸ್ಟ್​​ ಹಂಚಿಕೊಂಡ ಮೂವರ ವಿರುದ್ಧ ದೂರು ದಾಖಲು: ಮುಖ- ಮೂತಿ ನೋಡದೇ ಕ್ರಮ ಎಂದ ಪೊಲೀಸ್​

ತಿರುಪತಿ(ಆಂಧ್ರಪ್ರದೇಶ): ತಿರುಪತಿ ಜಿಲ್ಲೆಯ ಅನ್ನಮಯ್ಯ ವೃತ್ತದಲ್ಲಿ ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್​ಟೇಬಲ್, ಒಬ್ಬ ವ್ಯಕ್ತಿಯನ್ನು ಹಿಗ್ಗಾಮುಗ್ಗ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ನಂತರ ಆ ಕಾನ್ಸ್​ಟೇಬಲ್​ನನ್ನು ಅಮಾನತುಗೊಳಿಸಲಾಗಿದೆ.

ಲಾರಿ ಚಾಲಕನಿಗೆ ಬೂಟು ಕಾಲಿನಿಂದ ಒದ್ದ ಟ್ರಾಫಿಕ್​ ಹೆಡ್​ ಕಾನ್​ಸ್ಟೆಬಲ್​: ವೀಡಿಯೋ ವೈರಲ್​

ಅನ್ನಮಯ್ಯ ವೃತ್ತದಲ್ಲಿ ನಿಯೋಜನೆಗೊಂಡಿದ್ದ ಹೆಡ್ ಕಾನ್ಸ್​ಟೇಬಲ್ ಟಿ. ಜಗದೀಶ್ ಕಿಶೋರ್ ರಸ್ತೆಬದಿಯಲ್ಲಿ ಕಿಶೋರ್ ಬಾಬು ಎಂಬ ವ್ಯಕ್ತಿಯನ್ನು ಬೂಟು ಕಾಲಿನಿಂದ ಒದೆಯುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ಹೆಡ್​ ಕಾನ್​ಸ್ಟೆಬಲ್ ಜಗದೀಶ್ ಕಿಶೋರ್ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ಅಡ್ಡರಸ್ತೆಯಲ್ಲಿ ಲಾರಿಯೊಂದು ಬಂದು ನಿಂತಿತ್ತು. ಹೆಡ್ ಕಾನ್ಸ್​ಟೇಬಲ್ ಟ್ರಕ್ ಅನ್ನು ಬೇರೆ ಕಡೆ ತೆಗೆದುಕೊಂಡು ಹೋಗುವಂತೆ ಚಾಲಕನಿಗೆ ಸೂಚಿಸಿದ್ದಾರೆ. ಚಾಲಕ ಲಾರಿ ಚಲಾಯಿಸಲು ಯತ್ನಿಸುತ್ತಿದ್ದಾಗ ಮುಖ್ಯ ಪೇದೆ​ ಚಾಲಕನನ್ನು ಅಡ್ಡಗಟ್ಟಿ ಪಕ್ಕಕ್ಕೆ ಹೋಗುವಂತೆ ಆದೇಶಿಸಿದರು. ಇಬ್ಬರ ನಡುವೆ ವಾಗ್ವಾದ ನಡೆದು, ತಾಳ್ಮೆ ಕಳೆದುಕೊಂಡ ಪೊಲೀಸ್​ ಬೂಟುಕಾಲಿನಿಂದ ಮೂರು ಬಾರಿ ಒದ್ದಿದ್ದಾರೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಆಕ್ಷೇಪಾರ್ಹ ಪೋಸ್ಟ್​​ ಹಂಚಿಕೊಂಡ ಮೂವರ ವಿರುದ್ಧ ದೂರು ದಾಖಲು: ಮುಖ- ಮೂತಿ ನೋಡದೇ ಕ್ರಮ ಎಂದ ಪೊಲೀಸ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.