ETV Bharat / bharat

ಗೂಗಲ್​ ಮ್ಯಾಪ್​ ನಂಬಿ ಹೋದ ಮೂವರು ಯುವಕರು.. ನದಿಯ ಸೆಳವಿಗೆ ಸಿಲುಕಿ ಇಬ್ಬರು ನೀರುಪಾಲು, ಒಬ್ಬ ಪಾರು! - ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಮೂವರು ಯುವಕರು

ಗೂಗಲ್ ಮ್ಯಾಪ್‌ ಸಹಾಯದಿಂದ ಮೂವರು ಯುವಕರು ಬೈಕ್​ನಲ್ಲಿ ತಮ್ಮ ಮನೆಗಳಿಗೆ ತೆರಳುತ್ತಿದ್ದರು. ಗೂಗಲ್ ಮ್ಯಾಪ್ ಅವರನ್ನು ನಿರ್ಮಾಣ ಹಂತದಲ್ಲಿರುವ ಸೇತುವೆಯತ್ತ ಕರೆದೊಯ್ದಿತು. ಈ ವೇಳೆ ನದಿ ದಾಟಲು ಪ್ರಯತ್ನಿಸುತ್ತಿದ್ದಾಗ ಇಬ್ಬರು ಯುವಕರು ಪ್ರವಾಹಕ್ಕೆ ಕೊಚ್ಚಿಹೋದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ.

using-google-map-troubled-3-jharkhand-youths
ಗೂಗಲ್​ ಮ್ಯಾಪ್​ ನಂಬಿ ಹೋದ ಮೂವರು ಯುವಕರು.. ನದಿಯ ಸೆಳವಿಗೆ ಸಿಲುಕಿ ಇಬ್ಬರು ನೀರುಪಾಲು, ಒಬ್ಬ ಪಾರು!
author img

By

Published : Jul 3, 2023, 10:00 PM IST

ರಾಂಚಿ: ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಮೂವರು ಯುವಕರು ಗೂಗಲ್​ ಮ್ಯಾಪ್​​ನಲ್ಲಿ ಮಾರ್ಗ ಹುಡುಕಿ, ಅಪಾಯಕ್ಕೆ ಸಿಲುಕಿದ್ದಾರೆ. ಗೂಗಲ್​ ಮ್ಯಾಪ್​ ಸಹಾಯದಿಂದ ಹೋದ ಮೂವರಲ್ಲಿ ಇಬ್ಬರು ಕೊಚ್ಚಿಹೋದ ಘಟನೆ ನಡೆದಿದೆ.

ಈ ಮೂವರು ಯುವಕರು, ತಾವು ಅಂದುಕೊಂಡು ಸ್ಥಳಕ್ಕೆ ಹೋಗಲು ಗೂಗಲ್​ ಮ್ಯಾಪ್​ ಸಹಾಯ ಪಡೆದುಕೊಂಡಿದ್ದಾರೆ. ಆ ಮ್ಯಾಪ್​ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿಗೆ ಕರೆದೊಯ್ಯಿದಿದೆ. ಇನ್ನೇನು ದಾರಿ ತಪ್ಪಿ ಬಂದಿದ್ದೇವೆ ಎಂದು ಧುಮ್ಮಿಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲು ಯುವಕರು ಪ್ರಯತ್ನಿಸುತ್ತಿದ್ದಾಗ ಇಬ್ಬರು ಯುವಕರು ನದಿಯ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಒಬ್ಬ ಯುವಕ ಹೇಗೋ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ಏನಿದು ಘಟನೆ?: ಭಾನುವಾರ ರಾತ್ರಿ ಹಜಾರಿಬಾಗ್‌ನ ಮೂವರು ಯುವಕರು, ಆನಂದ್ ಚೌರಾಸಿಯಾ, ಮನೀಶ್ ಮೆಹ್ತಾ ಮತ್ತು ಶಂಕರ್ ಮೆಹ್ತಾ ಎಂಬ ಸ್ನೇಹಿತರು ಬೆಂಗಾಬಾದ್‌ನಿಂದ ಗಿರಿಡಿಹ್‌ನಲ್ಲಿರುವ ತಮ್ಮ ಮನೆಗೆ ವಾಪಸ್​ ಆಗುತ್ತಿದ್ದರು. ಮೂವರೂ ಯುವಕರು ತಮ್ಮ ಮನೆಗಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದು, ಗೂಗಲ್ ಮ್ಯಾಪ್‌ನ ಸಹಾಯ ಪಡೆದುಕೊಂಡಿದ್ದರು. ಗಿರಿಡಿಹ್​​ ಕಾಲೇಜು ನಂತರ, ಗೂಗಲ್​ ಮ್ಯಾಪ್​ ಎರಡು ಮಾರ್ಗಗಳನ್ನು ತೋರಿಸಿದೆ. ಮ್ಯಾಪ್​​​ನ ಎರಡು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ಮೂವರು, ಹಳೆಯ ಸೇತುವೆ ಇರುವ ಮಾರ್ಗಕ್ಕೆ ಬಂದಿದ್ದಾರೆ.

ಆದರೆ ಆ ಸೇತುವೆ ಕಾಮಗಾರಿ ನಡೆಯುತ್ತಿದೆ ಎಂಬುದು ಗೊತ್ತಾಗಿದೆ. ಇಲ್ಲಿಗೆ ಬರುವಾಗ ಮೂವರಿಗೂ ದಾರಿ ಅರ್ಥವಾಗಿಲ್ಲ. ಶಂಕರ್ ಎಂಬ ಯುವಕ ಬೈಕ್‌ನಿಂದ ಕೆಳಗಿಳಿದು, ನೀರಿನಲ್ಲಿ ಆ ಕಡೆಯ ದಡವನ್ನು ಮುಟ್ಟಲು ಯತ್ನಿಸಿ ನೀರಿಗೆ ಇಳಿದಿದ್ದಾನೆ. ಭಾರಿ ಮಳೆಯ ಹಿನ್ನೆಲೆ ಪ್ರವಾಹ ಬಂದಿದೆ ಎಂಬ ಅರಿವಿಲ್ಲದೇ ಅದರಲ್ಲಿ ಕೊಚ್ಚಿ ಹೋಗಿದ್ದಾನೆ. ಶಂಕರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಇನ್ನಿಬ್ಬರು ಯುವಕರಾದ ಆನಂದ್ ಮತ್ತು ಮನೀಶ್, ಶಂಕರ್​ ಕಾಪಾಡಲು ನದಿಗೆ ಇಳಿದಿದ್ದಾರೆ. ಆದರೆ ನದಿಯಲ್ಲಿ ಭಾರಿ ಪ್ರವಾಹ ಇರುವುದರಿಂದ ಈ ಇಬ್ಬರು ಸಹ ಕೊಚ್ಚಿಕೊಂಡು ಹೋಗಿದ್ದಾರೆ.

ಆದರೆ ಅಚ್ಚರಿ ಎಂದರೆ ಮೊದಲೇ ನೀರಿಗೆ ಇಳಿದ ಶಂಕರ್​​ ಪ್ರವಾಹದಲ್ಲಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಶಂಕರ್​ ಬಳಿಕ ನೀರಿಗಿಳಿದ ಆನಂದ್ ಮತ್ತು ಮನೀಶ್ ಭಾರಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.

ಪ್ರವಾಹದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದ ಶಂಕರ್​ ನೀಡಿದ ಮಾಹಿತಿಯಂತೆ, ಸೋಮವಾರ ಮುಳುಗುಗಾರರ ತಂಡವು ಆನಂದ್ ಮತ್ತು ಮನೀಶ್ ಮೆಹ್ತಾ ಅವರ ಮೃತದೇಹಗಳನ್ನು ಹೊರತೆಗೆದಿದೆ.

ಈ ಬಗ್ಗೆ ಮಾತನಾಡಿರುವ ಸದರ್​ ಉಪವಿಭಾಗಾಧಿಕಾರಿ ವಿಶಾಲ್​ದೀಪ್​, ಕೆಲ ದಿನಗಳ ಹಿಂದೆ ಈ ಸೇತುವೆ ಮೇಲೆ ಅಪಘಾತವೊಂದು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಉಸ್ರಿ ನದಿಗೆ ಕಟ್ಟಲಾಗಿದ್ದ ಹಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ತಿಳಿಯದ ಯುವಕರು, ಅಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ:Horrible Road Accident: ಪಲ್ಟಿಯಾಗಿ ಹೊತ್ತಿ ಉರಿದ ಬಸ್​.. 25 ಜನ ಸಜೀವ ದಹನ, ಸಿಎಂ ಪರಿಹಾರ ಘೋಷಣೆ!

ರಾಂಚಿ: ಜಾರ್ಖಂಡ್‌ನ ಗಿರಿಡಿಹ್‌ನಲ್ಲಿ ಮೂವರು ಯುವಕರು ಗೂಗಲ್​ ಮ್ಯಾಪ್​​ನಲ್ಲಿ ಮಾರ್ಗ ಹುಡುಕಿ, ಅಪಾಯಕ್ಕೆ ಸಿಲುಕಿದ್ದಾರೆ. ಗೂಗಲ್​ ಮ್ಯಾಪ್​ ಸಹಾಯದಿಂದ ಹೋದ ಮೂವರಲ್ಲಿ ಇಬ್ಬರು ಕೊಚ್ಚಿಹೋದ ಘಟನೆ ನಡೆದಿದೆ.

ಈ ಮೂವರು ಯುವಕರು, ತಾವು ಅಂದುಕೊಂಡು ಸ್ಥಳಕ್ಕೆ ಹೋಗಲು ಗೂಗಲ್​ ಮ್ಯಾಪ್​ ಸಹಾಯ ಪಡೆದುಕೊಂಡಿದ್ದಾರೆ. ಆ ಮ್ಯಾಪ್​ ನಿರ್ಮಾಣ ಹಂತದಲ್ಲಿರುವ ಸೇತುವೆಯ ಬಳಿಗೆ ಕರೆದೊಯ್ಯಿದಿದೆ. ಇನ್ನೇನು ದಾರಿ ತಪ್ಪಿ ಬಂದಿದ್ದೇವೆ ಎಂದು ಧುಮ್ಮಿಕ್ಕಿ ಹರಿಯುತ್ತಿದ್ದ ನದಿಯನ್ನು ದಾಟಲು ಯುವಕರು ಪ್ರಯತ್ನಿಸುತ್ತಿದ್ದಾಗ ಇಬ್ಬರು ಯುವಕರು ನದಿಯ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ. ಒಬ್ಬ ಯುವಕ ಹೇಗೋ ತನ್ನ ಪ್ರಾಣ ಉಳಿಸಿಕೊಂಡಿದ್ದಾನೆ.

ಏನಿದು ಘಟನೆ?: ಭಾನುವಾರ ರಾತ್ರಿ ಹಜಾರಿಬಾಗ್‌ನ ಮೂವರು ಯುವಕರು, ಆನಂದ್ ಚೌರಾಸಿಯಾ, ಮನೀಶ್ ಮೆಹ್ತಾ ಮತ್ತು ಶಂಕರ್ ಮೆಹ್ತಾ ಎಂಬ ಸ್ನೇಹಿತರು ಬೆಂಗಾಬಾದ್‌ನಿಂದ ಗಿರಿಡಿಹ್‌ನಲ್ಲಿರುವ ತಮ್ಮ ಮನೆಗೆ ವಾಪಸ್​ ಆಗುತ್ತಿದ್ದರು. ಮೂವರೂ ಯುವಕರು ತಮ್ಮ ಮನೆಗಳಿಗೆ ಬೈಕ್‌ನಲ್ಲಿ ಹೋಗುತ್ತಿದ್ದು, ಗೂಗಲ್ ಮ್ಯಾಪ್‌ನ ಸಹಾಯ ಪಡೆದುಕೊಂಡಿದ್ದರು. ಗಿರಿಡಿಹ್​​ ಕಾಲೇಜು ನಂತರ, ಗೂಗಲ್​ ಮ್ಯಾಪ್​ ಎರಡು ಮಾರ್ಗಗಳನ್ನು ತೋರಿಸಿದೆ. ಮ್ಯಾಪ್​​​ನ ಎರಡು ಮಾರ್ಗಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಂಡ ಮೂವರು, ಹಳೆಯ ಸೇತುವೆ ಇರುವ ಮಾರ್ಗಕ್ಕೆ ಬಂದಿದ್ದಾರೆ.

ಆದರೆ ಆ ಸೇತುವೆ ಕಾಮಗಾರಿ ನಡೆಯುತ್ತಿದೆ ಎಂಬುದು ಗೊತ್ತಾಗಿದೆ. ಇಲ್ಲಿಗೆ ಬರುವಾಗ ಮೂವರಿಗೂ ದಾರಿ ಅರ್ಥವಾಗಿಲ್ಲ. ಶಂಕರ್ ಎಂಬ ಯುವಕ ಬೈಕ್‌ನಿಂದ ಕೆಳಗಿಳಿದು, ನೀರಿನಲ್ಲಿ ಆ ಕಡೆಯ ದಡವನ್ನು ಮುಟ್ಟಲು ಯತ್ನಿಸಿ ನೀರಿಗೆ ಇಳಿದಿದ್ದಾನೆ. ಭಾರಿ ಮಳೆಯ ಹಿನ್ನೆಲೆ ಪ್ರವಾಹ ಬಂದಿದೆ ಎಂಬ ಅರಿವಿಲ್ಲದೇ ಅದರಲ್ಲಿ ಕೊಚ್ಚಿ ಹೋಗಿದ್ದಾನೆ. ಶಂಕರ್ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಕಂಡ ಇನ್ನಿಬ್ಬರು ಯುವಕರಾದ ಆನಂದ್ ಮತ್ತು ಮನೀಶ್, ಶಂಕರ್​ ಕಾಪಾಡಲು ನದಿಗೆ ಇಳಿದಿದ್ದಾರೆ. ಆದರೆ ನದಿಯಲ್ಲಿ ಭಾರಿ ಪ್ರವಾಹ ಇರುವುದರಿಂದ ಈ ಇಬ್ಬರು ಸಹ ಕೊಚ್ಚಿಕೊಂಡು ಹೋಗಿದ್ದಾರೆ.

ಆದರೆ ಅಚ್ಚರಿ ಎಂದರೆ ಮೊದಲೇ ನೀರಿಗೆ ಇಳಿದ ಶಂಕರ್​​ ಪ್ರವಾಹದಲ್ಲಿ ಈಜಿ ದಡ ಸೇರುವಲ್ಲಿ ಯಶಸ್ವಿಯಾಗಿದ್ದಾನೆ. ಆದರೆ ಶಂಕರ್​ ಬಳಿಕ ನೀರಿಗಿಳಿದ ಆನಂದ್ ಮತ್ತು ಮನೀಶ್ ಭಾರಿ ಪ್ರವಾಹಕ್ಕೆ ಕೊಚ್ಚಿಹೋಗಿದ್ದಾರೆ.

ಪ್ರವಾಹದಲ್ಲಿ ಪವಾಡ ಸದೃಶ್ಯ ರೀತಿಯಲ್ಲಿ ಬದುಕಿ ಬಂದ ಶಂಕರ್​ ನೀಡಿದ ಮಾಹಿತಿಯಂತೆ, ಸೋಮವಾರ ಮುಳುಗುಗಾರರ ತಂಡವು ಆನಂದ್ ಮತ್ತು ಮನೀಶ್ ಮೆಹ್ತಾ ಅವರ ಮೃತದೇಹಗಳನ್ನು ಹೊರತೆಗೆದಿದೆ.

ಈ ಬಗ್ಗೆ ಮಾತನಾಡಿರುವ ಸದರ್​ ಉಪವಿಭಾಗಾಧಿಕಾರಿ ವಿಶಾಲ್​ದೀಪ್​, ಕೆಲ ದಿನಗಳ ಹಿಂದೆ ಈ ಸೇತುವೆ ಮೇಲೆ ಅಪಘಾತವೊಂದು ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಉಸ್ರಿ ನದಿಗೆ ಕಟ್ಟಲಾಗಿದ್ದ ಹಳೆ ಸೇತುವೆಯನ್ನು ಕೆಡವಿ ಹೊಸ ಸೇತುವೆ ನಿರ್ಮಾಣ ಮಾಡಲಾಗುತ್ತಿತ್ತು. ಇದನ್ನು ತಿಳಿಯದ ಯುವಕರು, ಅಪಾಯಕ್ಕೆ ಸಿಲುಕಿದ್ದಾರೆ ಎಂದು ಹೇಳಿದ್ದಾರೆ.

ಇದನ್ನು ಓದಿ:Horrible Road Accident: ಪಲ್ಟಿಯಾಗಿ ಹೊತ್ತಿ ಉರಿದ ಬಸ್​.. 25 ಜನ ಸಜೀವ ದಹನ, ಸಿಎಂ ಪರಿಹಾರ ಘೋಷಣೆ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.