ಲಖನೌ (ಉತ್ತರ ಪ್ರದೇಶ): ಮಹಾಮಾರಿ ಕೋವಿಡ್ನಿಂದಾಗಿ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಬಿಜೆಪಿ ಶಾಸಕ ಮೃತಪಟ್ಟಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಂದು ವಾರದೊಳಗೆ ಆಡಳಿತಾರೂಢ ಬಿಜೆಪಿ ಪಕ್ಷವು ತನ್ನ ಮೂವರು ಶಾಸಕರನ್ನು ಕಳೆದುಕೊಂಡಿದೆ.
ಈ ಹಿಂದೆ ಪಶ್ಚಿಮ ಲಖನೌ ಬಿಜೆಪಿ ಶಾಸಕ ಸುರೇಶ್ ಶ್ರೀವಾಸ್ತವ ಮತ್ತು ಔರಯ್ಯಾ ಕ್ಷೇತ್ರದ ಶಾಸಕ ರಮೇಶ್ ಚಂದ್ರ ದಿವಾಕರ್ ಅವರು ಸೋಂಕಿಗೆ ಬಲಿಯಾಗಿದ್ದರು. ಇಂದು ನವಾಬ್ಗಂಜ್ ಶಾಸಕ ಕೇಸರ್ ಸಿಂಗ್ ಗಂಗ್ವಾರ್ (64) ವೈರಸ್ನಿಂದಾಗಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಫಲಿತಾಂಶಕ್ಕೆ 4 ದಿನವಿರುವಾಗಲೇ ಕೇರಳ ಕಾಂಗ್ರೆಸ್ ಅಭ್ಯರ್ಥಿ ಸಾವು
ಏಪ್ರಿಲ್ 18 ರಂದು ಸೋಂಕು ದೃಢಪಟ್ಟಿದ್ದ ಕೇಸರ್ ಸಿಂಗ್ರನ್ನು ಬರೇಲಿಯ ರಾಮ್ ಮೂರ್ತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಅವರ ಸ್ಥಿತಿ ಚಿಂತಾಜನಕವಾದ ಕಾರಣ ನೋಯ್ಡಾದ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಕಳೆದ ವರ್ಷ ಉತ್ತರ ಪ್ರದೇಶದ ಇಬ್ಬರು ಸಚಿವರಾದ ಚೇತನ್ ಚೌಹಾಣ್ ಹಾಗೂ ಕಮಲಾ ರಾಣಿ ವರುಣ್ ಕೂಡ ಮಾರಕ ವೈರಸ್ನಿಂದಾಗಿ ಕೊನೆಯುಸಿರೆಳೆದಿದ್ದರು.