ETV Bharat / bharat

ದೇವಸ್ಥಾನಕ್ಕೆ ನುಗ್ಗಿ ಚೌಡೇಶ್ವರಿ ದೇವಿಯ ಕಿರೀಟ ಸೇರಿ ಇತರೆ ಆಭರಣಗಳ ಕದ್ದ ಖದೀಮ- ವಿಡಿಯೋ

author img

By

Published : Jul 10, 2022, 8:49 PM IST

ಅನಂತಪುರ ಜಿಲ್ಲೆಯಲ್ಲಿ ಚೌಡೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೊಬ್ಬ ದೇವಿಯ ಕಿರೀಟ, ಹಸ್ತ ಹಾಗೂ ಇತರೆ ವಸ್ತುಗಳು ಸೇರಿ 12.5 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.

unknown person has committed theft at chowdeswari temple in anantapur
ದೇವಸ್ಥಾನಕ್ಕೆ ನುಗ್ಗಿ ಚೌಡೇಶ್ವರಿ ದೇವಿಯ ಕಿರೀಟ ಸೇರಿ ಇತರೆ ಆಭರಣಗಳ ಕದ್ದ ಖದೀಮ..ವಿಡಿಯೋ

ಅನಂತಪುರ (ಆಂಧ್ರಪ್ರದೇಶ): ಚೌಡೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೋರ್ವ ದೇವಿಯ ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿನ ಉರವಕೊಂಡ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ದೇಗುಲದ ಹಿಂದಿನ ಗುಡ್ಡದಿಂದ ಒಳಗೆ ನುಗ್ಗಿರುವ ಕಳ್ಳ ಬೀಗ ಒಡೆದು ಕಳವು ಮಾಡಿದ್ದಾನೆ. ನಿರಾತಂಕವಾಗಿ ಒಳ ಹೋಗಿರುವ ಖದೀಮ ಗರ್ಭಗುಡಿಯಲ್ಲಿ ದೇವಿಯ ಅಲಂಕಾರಕ್ಕೆ ಬಳಸಲಾಗಿದ್ದ ಕಿರೀಟ, ಹಸ್ತ ಹಾಗೂ ಇತರೆ ವಸ್ತುಗಳು ಸೇರಿ 12.5 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.

ದೇವಸ್ಥಾನಕ್ಕೆ ನುಗ್ಗಿ ಚೌಡೇಶ್ವರಿ ದೇವಿಯ ಕಿರೀಟ ಸೇರಿ ಇತರೆ ಆಭರಣಗಳ ಕದ್ದ ಖದೀಮ..ವಿಡಿಯೋ

ದೇವಸ್ಥಾನದ ಅರ್ಚಕರು ಬಂದಾಗ ದೇವಿಯ ಆಭರಣಗಳು ಕಳುವಾಗಿರುವ ವಿಷಯ ಗೊತ್ತಾಗಿದೆ. ಅಂತೆಯೇ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ 7.5 ಲಕ್ಷ ರೂಪಾಯಿ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ದೇವರ ವೇಷ ಧರಿಸಿ ನಾಟಕ.. ಬುಲೆಟ್​ನಲ್ಲಿ ಬಂದ 'ಶಿವ-ಪಾರ್ವತಿ', ಶಿವ ಅರೆಸ್ಟ್​

ಅನಂತಪುರ (ಆಂಧ್ರಪ್ರದೇಶ): ಚೌಡೇಶ್ವರಿ ದೇವಸ್ಥಾನಕ್ಕೆ ನುಗ್ಗಿದ ಕಳ್ಳನೋರ್ವ ದೇವಿಯ ಲಕ್ಷಾಂತರ ಮೌಲ್ಯದ ಬೆಳ್ಳಿ ಆಭರಣಗಳನ್ನು ದೋಚಿರುವ ಘಟನೆ ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ. ಕಳ್ಳನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಇಲ್ಲಿನ ಉರವಕೊಂಡ ಗ್ರಾಮದ ಚೌಡೇಶ್ವರಿ ದೇವಸ್ಥಾನದಲ್ಲಿ ಈ ಕಳ್ಳತನ ನಡೆದಿದೆ. ದೇಗುಲದ ಹಿಂದಿನ ಗುಡ್ಡದಿಂದ ಒಳಗೆ ನುಗ್ಗಿರುವ ಕಳ್ಳ ಬೀಗ ಒಡೆದು ಕಳವು ಮಾಡಿದ್ದಾನೆ. ನಿರಾತಂಕವಾಗಿ ಒಳ ಹೋಗಿರುವ ಖದೀಮ ಗರ್ಭಗುಡಿಯಲ್ಲಿ ದೇವಿಯ ಅಲಂಕಾರಕ್ಕೆ ಬಳಸಲಾಗಿದ್ದ ಕಿರೀಟ, ಹಸ್ತ ಹಾಗೂ ಇತರೆ ವಸ್ತುಗಳು ಸೇರಿ 12.5 ಕೆಜಿ ಬೆಳ್ಳಿ ಆಭರಣಗಳನ್ನು ದೋಚಿ ಪರಾರಿಯಾಗಿದ್ದಾನೆ.

ದೇವಸ್ಥಾನಕ್ಕೆ ನುಗ್ಗಿ ಚೌಡೇಶ್ವರಿ ದೇವಿಯ ಕಿರೀಟ ಸೇರಿ ಇತರೆ ಆಭರಣಗಳ ಕದ್ದ ಖದೀಮ..ವಿಡಿಯೋ

ದೇವಸ್ಥಾನದ ಅರ್ಚಕರು ಬಂದಾಗ ದೇವಿಯ ಆಭರಣಗಳು ಕಳುವಾಗಿರುವ ವಿಷಯ ಗೊತ್ತಾಗಿದೆ. ಅಂತೆಯೇ ಅವರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಹಾಗೂ ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚು ತಜ್ಞರೊಂದಿಗೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳ್ಳತನವಾದ ಬೆಳ್ಳಿ ಆಭರಣಗಳ ಒಟ್ಟು ಮೌಲ್ಯ 7.5 ಲಕ್ಷ ರೂಪಾಯಿ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.

ಇದನ್ನೂ ಓದಿ: ಬೆಲೆ ಏರಿಕೆ ಬಗ್ಗೆ ದೇವರ ವೇಷ ಧರಿಸಿ ನಾಟಕ.. ಬುಲೆಟ್​ನಲ್ಲಿ ಬಂದ 'ಶಿವ-ಪಾರ್ವತಿ', ಶಿವ ಅರೆಸ್ಟ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.