ETV Bharat / bharat

ಹಳೆಯ ಫೋಟೋ, ಮೀನುಗಳನ್ನು ಹಿಡಿದು ತೇಜಸ್ವಿ ಯಾದವ್ ಅಭಿಮಾನಿಗಳಿಂದ ವಿಶಿಷ್ಟ ಬೆಂಬಲ

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮಹಾಘಟಬಂಧನ್​ ಗೆಲ್ಲುವ ಸೂಚನೆ ದೊರೆತಿದ್ದು, ಹೀಗಾಗಿ ಅಭಿಮಾನಿಗಳು ತೇಜಸ್ವಿ ಯಾದವ್​ ಮನೆ ಮುಂದೆ ಅವರ ಹಳೆಯ ಫೋಟೋಗಳು ಮತ್ತು ಮೀನುಗಳನ್ನು ಹಿಡಿದು ತಮ್ಮ ನಾಯಕನಿಗೆ ವಿಶಿಷ್ಟವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

author img

By

Published : Nov 10, 2020, 9:36 AM IST

Unique support from Tejaswi Yadav fans
ತೇಜಸ್ವಿ ಯಾದವ್​ ಅಭಿಮಾನಗಳಿಂದ ವಿಶಿಷ್ಟ ಬೆಂಬಲ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮಹಾಘಟಬಂಧನ್​ನ ಸಿಎಂ ಅಭ್ಯರ್ಥಿ ಯುವ ನಾಯಕ ತೇಜಸ್ವಿ ಯಾದವ್​ ಅಭಿಮಾನಿಗಳು ಈಗಾಗಲೇ ವಿಜಯದ ಹುಮ್ಮಸ್ಸಿನಲ್ಲಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮಹಾಘಟಬಂಧನ್​ ಗೆಲ್ಲುವ ಸೂಚನೆ ದೊರೆತಿದ್ದು, ಅಭಿಮಾನಿಗಳು ತೇಜಸ್ವಿ ಯಾದವ್​ ಮನೆ ಮುಂದೆ ಅವರ ಹಳೆಯ ಫೋಟೋಗಳು ಮತ್ತು ಮೀನುಗಳನ್ನು ಹಿಡಿದು ತಮ್ಮ ನಾಯಕನಿಗೆ ವಿಶಿಷ್ಟವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಹಾರದ ಮಾಜಿ ಸಿಎಂ ಮತ್ತು ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್ ಅವರ ಮಗನಾಗಿರುವ ತೇಜಸ್ವಿ ಯಾದವ್,​ ಯುವ ರಾಜಕೀಯ ನಾಯಕನಾಗಿದ್ದಾರೆ. 2015- 17 ರ ಮಧ್ಯೆ ಬಿಹಾರದ ಉಪಮುಖ್ಯಮಂತ್ರಿಯಾಗಿ, ದೇಶದಲ್ಲಿ ಅತೀ ಸಣ್ಣ ವಯಸ್ಸಿಗೆ ಡಿಸಿಎಂ ಆದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮೊದಲು ತೇಜಸ್ವಿ ಕ್ರಿಕೆಟ್ ಆಟಗಾರರಾಗಿದ್ದರು, ಡೆಲ್ಲಿ ಡೇರ್​ ಡೆವಿಲ್ಸ್ ಮತ್ತು ಜಾರ್ಖಂಡ್​ ಕ್ರಿಕೆಟ್​ ತಂಡಗಳ ಪರವಾಗಿ ಅವರು ಆಟವಾಡಿದ್ದಾರೆ.

ಸದ್ಯ, ಮತ ಎಣಿಕೆಯ ಆರಂಭದ ಸುತ್ತುಗಳಲ್ಲಿ ಎನ್​ಡಿಎ ಒಕ್ಕೂಟ ಬಿಜೆಪಿ ಹಾಗೂ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತ ಎಣಿಕೆ ಮುಗಿದ ಬಳಿಕವಷ್ಟೇ ಯಾರು ಬಿಹಾರದ ಗದ್ದುಗೆ ಏರಲಿದ್ದಾರೆ ಎಂಬುವುದು ತಿಳಿದು ಬರಲಿದೆ.

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ಮಹಾಘಟಬಂಧನ್​ನ ಸಿಎಂ ಅಭ್ಯರ್ಥಿ ಯುವ ನಾಯಕ ತೇಜಸ್ವಿ ಯಾದವ್​ ಅಭಿಮಾನಿಗಳು ಈಗಾಗಲೇ ವಿಜಯದ ಹುಮ್ಮಸ್ಸಿನಲ್ಲಿದ್ದಾರೆ.

ಚುನಾವಣೋತ್ತರ ಸಮೀಕ್ಷೆಗಳಲ್ಲಿ ಮಹಾಘಟಬಂಧನ್​ ಗೆಲ್ಲುವ ಸೂಚನೆ ದೊರೆತಿದ್ದು, ಅಭಿಮಾನಿಗಳು ತೇಜಸ್ವಿ ಯಾದವ್​ ಮನೆ ಮುಂದೆ ಅವರ ಹಳೆಯ ಫೋಟೋಗಳು ಮತ್ತು ಮೀನುಗಳನ್ನು ಹಿಡಿದು ತಮ್ಮ ನಾಯಕನಿಗೆ ವಿಶಿಷ್ಟವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.

ಬಿಹಾರದ ಮಾಜಿ ಸಿಎಂ ಮತ್ತು ರಾಷ್ಟ್ರೀಯ ಜನತಾದಳ (ಆರ್​ಜೆಡಿ) ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್​ ಯಾದವ್ ಅವರ ಮಗನಾಗಿರುವ ತೇಜಸ್ವಿ ಯಾದವ್,​ ಯುವ ರಾಜಕೀಯ ನಾಯಕನಾಗಿದ್ದಾರೆ. 2015- 17 ರ ಮಧ್ಯೆ ಬಿಹಾರದ ಉಪಮುಖ್ಯಮಂತ್ರಿಯಾಗಿ, ದೇಶದಲ್ಲಿ ಅತೀ ಸಣ್ಣ ವಯಸ್ಸಿಗೆ ಡಿಸಿಎಂ ಆದವರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮೊದಲು ತೇಜಸ್ವಿ ಕ್ರಿಕೆಟ್ ಆಟಗಾರರಾಗಿದ್ದರು, ಡೆಲ್ಲಿ ಡೇರ್​ ಡೆವಿಲ್ಸ್ ಮತ್ತು ಜಾರ್ಖಂಡ್​ ಕ್ರಿಕೆಟ್​ ತಂಡಗಳ ಪರವಾಗಿ ಅವರು ಆಟವಾಡಿದ್ದಾರೆ.

ಸದ್ಯ, ಮತ ಎಣಿಕೆಯ ಆರಂಭದ ಸುತ್ತುಗಳಲ್ಲಿ ಎನ್​ಡಿಎ ಒಕ್ಕೂಟ ಬಿಜೆಪಿ ಹಾಗೂ ಮಹಾಘಟಬಂಧನ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಮತ ಎಣಿಕೆ ಮುಗಿದ ಬಳಿಕವಷ್ಟೇ ಯಾರು ಬಿಹಾರದ ಗದ್ದುಗೆ ಏರಲಿದ್ದಾರೆ ಎಂಬುವುದು ತಿಳಿದು ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.