ETV Bharat / bharat

ಪುದುಚೇರಿಯಲ್ಲಿ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಹಲವು ಭರವಸೆಗಳನ್ನು ನೀಡಿದ ಗಡ್ಕರಿ

author img

By

Published : Mar 22, 2021, 9:59 PM IST

Updated : Mar 22, 2021, 10:29 PM IST

ಬಿಜೆಪಿ ಎಲ್ಲಾ ಕಡೆ ತನ್ನ ಅಸ್ತಿತ್ವ ಪಡೆದುಕೊಳ್ಳುವ ಉದ್ದೇಶದಿಂದ ಈ ಬಾರಿಯ ಚುನಾವಣೆಯಲ್ಲಿ ಆಯಾ ರಾಜ್ಯಗಳಿಗೆ ಸಂಬಂಧಿಸಿದಂತೆ ಬಂಪರ್​ ಆಶ್ವಾಸನೆಗಳನ್ನು ನೀಡುತ್ತಿದೆ. ಅಂತೆಯೇ ಪುದುಚೇರಿಯಲ್ಲೂ ಇಂದು ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಮತದಾರರಿಗೆ ಹಲವು ಭರವಸೆಗಳನ್ನು ನೀಡಿದೆ.

Union minister Nitin Gadkari promises development in Puducherry
ಪುದುಚೇರಿಯಲ್ಲಿ ಬಿಜೆಪಿ ಪ್ರಾಣಾಳಿಕೆ ಬಿಡುಗಡೆ

ಪುದುಚೇರಿ: ಕಳೆದ 50 ವರ್ಷಗಳಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇಂದ್ರಾಡಳಿತ ಪ್ರದೇಶದ ಜನರಿಗೆ ಭರವಸೆ ನೀಡಿದ್ದಾರೆ.

ಮತದಾನ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಮುಖಂಡ, ತಮಿಳುನಾಡು-ಪುದುಚೇರಿ ಸಂಪರ್ಕಕ್ಕಾಗಿ 11,000 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ರಸ್ತೆ ಮಾರ್ಗಗಳಿಗಾಗಿ 20,000 ಕೋಟಿ ರೂ.ನಲ್ಲಿ ಪುದುಚೇರಿ - ಕನ್ಯಾಕುಮಾರಿ ಹಾಗೂ ಪುದುಚೇರಿ - ಚೆನ್ನೈ ಸಮುದ್ರ ಮಾರ್ಗ ಯೋಜನೆ ಜಾರಿಗೆ ಬರಲಿದೆ. ಕನ್ಯಾಕುಮಾರಿ - ಪಾಂಡಿಚೆರಿ ಮೂಲಕ ಚೆನ್ನೈಗೆ ಸಮುದ್ರ ಮಾರ್ಗ ಸಾರಿಗೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದರೆ ಮೀನುಗಾರರ ಜೀವನೋಪಾಯವನ್ನು ಸುಧಾರಿಸಲಾಗುವುದು ಎಂದ ಅವರು, ಮಾಜಿ ಸಿಎಂ ನಾರಾಯಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

ಪುದುಚೇರಿ: ಕಳೆದ 50 ವರ್ಷಗಳಲ್ಲಿ ಹಿಂದೆಂದೂ ಕಾಣದ ಅಭಿವೃದ್ಧಿ ಮಾಡಲಾಗುವುದು ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇಂದ್ರಾಡಳಿತ ಪ್ರದೇಶದ ಜನರಿಗೆ ಭರವಸೆ ನೀಡಿದ್ದಾರೆ.

ಮತದಾನ ಪ್ರಣಾಳಿಕೆ ಬಿಡುಗಡೆ ಮಾಡಿದ ಬಿಜೆಪಿ ಮುಖಂಡ, ತಮಿಳುನಾಡು-ಪುದುಚೇರಿ ಸಂಪರ್ಕಕ್ಕಾಗಿ 11,000 ಕೋಟಿ ರೂ.ಬಿಡುಗಡೆ ಮಾಡಲಾಗುವುದು ಎಂದಿದ್ದಾರೆ.

ಕೇಂದ್ರಾಡಳಿತ ಪ್ರದೇಶದಲ್ಲಿ ರಸ್ತೆ ಮಾರ್ಗಗಳಿಗಾಗಿ 20,000 ಕೋಟಿ ರೂ.ನಲ್ಲಿ ಪುದುಚೇರಿ - ಕನ್ಯಾಕುಮಾರಿ ಹಾಗೂ ಪುದುಚೇರಿ - ಚೆನ್ನೈ ಸಮುದ್ರ ಮಾರ್ಗ ಯೋಜನೆ ಜಾರಿಗೆ ಬರಲಿದೆ. ಕನ್ಯಾಕುಮಾರಿ - ಪಾಂಡಿಚೆರಿ ಮೂಲಕ ಚೆನ್ನೈಗೆ ಸಮುದ್ರ ಮಾರ್ಗ ಸಾರಿಗೆ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಅಧಿಕಾರಕ್ಕೆ ಬಂದರೆ ಮೀನುಗಾರರ ಜೀವನೋಪಾಯವನ್ನು ಸುಧಾರಿಸಲಾಗುವುದು ಎಂದ ಅವರು, ಮಾಜಿ ಸಿಎಂ ನಾರಾಯಸ್ವಾಮಿ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.

Last Updated : Mar 22, 2021, 10:29 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.