ETV Bharat / bharat

'ಅಪ್ಪಾಜೀ ನಿಮಗೋಸ್ಕರ ಸ್ವಲ್ಪ ಹಣ ಉಳಿಸಿದ್ದೇನೆ, ಔಷಧಿ ಖರೀದಿಸಿ' ಎಂದು ಬರೆದಿಟ್ಟು ಯುವತಿ ಆತ್ಮಹತ್ಯೆ

author img

By

Published : Jun 29, 2022, 8:26 PM IST

ತೀವ್ರ ಆರ್ಥಿಕ ಸಂಕಷ್ಟದಿಂದ ಮನನೊಂದಿರುವ 19 ವರ್ಷದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಉನಾದಲ್ಲಿ ನಡೆದಿದೆ.

19 year old girl committed suicide
19 year old girl committed suicide

ಉನಾ(ಹಿಮಾಚಲ ಪ್ರದೇಶ): ಮನೆಯಲ್ಲಿ ಹಣಕಾಸಿನ ತೊಂದರೆಯಿಂದಾಗಿ 19 ವರ್ಷದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಉನಾದಲ್ಲಿ ನಡೆದಿದೆ. ಬಿಸಿಎ ವ್ಯಾಸಂಗ ಮಾಡ್ತಿದ್ದ ಸುಮನ್​​ ಮೃತಪಟ್ಟ ಯುವತಿ.

ಪ್ರಕರಣದ ವಿವರ: ಜಗದೀಶ್​ ಸಿಂಗ್ ಹಾಗೂ ಪತ್ನಿ ಪೂನಂಗೆ ಮೂವರು ಹೆಣ್ಣು ಮಕ್ಕಳು. ಸುಮನ್​ ದೊಡ್ಡವಳು. ಅಧ್ಯಯನದಲ್ಲಿ ಚುರುಕಾಗಿದ್ದ ಈಕೆ ಬಿಸಿಎ ವ್ಯಾಸಂಗ ಮಾಡ್ತಿದ್ದಳು. ದಿನಗೂಲಿ ಕೆಲಸ ಮಾಡ್ತಿದ್ದ ಜಗದೀಶ್​ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ದುಡಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಹೀಗಾಗಿ, ಮನೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ತಂದೆಯ ಕಾಯಿಲೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಔಷಧಿಗೋಸ್ಕರ ಖರ್ಚು ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ. ಸಂಬಂಧಿಕರು ಸಹಾಯಕ್ಕೆ ಬರಲಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ಹಿರಿಮಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾಳೆ.

ಇದನ್ನೂ ಓದಿ: ಮಹಾರಾಷ್ಟ್ರದ 2 ನಗರಗಳಿಗೆ ಮರುನಾಮಕರಣ: ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಠಾಕ್ರೆ

ಡೆತ್‌ ನೋಟ್​​: ಸಾವಿನ ಮನೆ ಕದ ತಟ್ಟುವುದಕ್ಕೂ ಮುಂಚಿತವಾಗಿ ಸುಮನ್​ ಸೊಸೈಡ್ ನೋಟ್​ ಬರೆದಿಟ್ಟು ಮನದಾಳ ತಿಳಿಸಿದ್ದಾಳೆ. "ಅಪ್ಪಾ, ನಿಮ್ಮ ಖಾಯಿಲೆಗೆ ಔಷಧಿ ತೆಗೆದುಕೊಳ್ಳಲು ಸ್ವಲ್ಪ ಹಣ ತೆಗೆದಿಟ್ಟಿದ್ದೇನೆ. ಇಂತಹ ಸಂದರ್ಭದಲ್ಲಿ ನಾನು ಓದುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಉಳಿಸಿಟ್ಟಿರುವ ಹಣದಲ್ಲಿ ಔಷಧಿ ಖರೀದಿಸಿ, ಜೊತೆಗೆ ಸಹೋದರರಿಗೆ ಬಟ್ಟೆ ಕೊಡಿಸಿ" ಎಂದು ಬರೆದಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಉನಾ(ಹಿಮಾಚಲ ಪ್ರದೇಶ): ಮನೆಯಲ್ಲಿ ಹಣಕಾಸಿನ ತೊಂದರೆಯಿಂದಾಗಿ 19 ವರ್ಷದ ಯುವತಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಿಮಾಚಲ ಪ್ರದೇಶದ ಉನಾದಲ್ಲಿ ನಡೆದಿದೆ. ಬಿಸಿಎ ವ್ಯಾಸಂಗ ಮಾಡ್ತಿದ್ದ ಸುಮನ್​​ ಮೃತಪಟ್ಟ ಯುವತಿ.

ಪ್ರಕರಣದ ವಿವರ: ಜಗದೀಶ್​ ಸಿಂಗ್ ಹಾಗೂ ಪತ್ನಿ ಪೂನಂಗೆ ಮೂವರು ಹೆಣ್ಣು ಮಕ್ಕಳು. ಸುಮನ್​ ದೊಡ್ಡವಳು. ಅಧ್ಯಯನದಲ್ಲಿ ಚುರುಕಾಗಿದ್ದ ಈಕೆ ಬಿಸಿಎ ವ್ಯಾಸಂಗ ಮಾಡ್ತಿದ್ದಳು. ದಿನಗೂಲಿ ಕೆಲಸ ಮಾಡ್ತಿದ್ದ ಜಗದೀಶ್​ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿದ್ದು, ದುಡಿಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣಗೊಳ್ಳುತ್ತದೆ. ಹೀಗಾಗಿ, ಮನೆಯ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ.

ತಂದೆಯ ಕಾಯಿಲೆಗೆ ಪ್ರತಿ ತಿಂಗಳು ಸಾವಿರಾರು ರೂಪಾಯಿ ಔಷಧಿಗೋಸ್ಕರ ಖರ್ಚು ಮಾಡಬೇಕಾದ ಪರಿಸ್ಥಿತಿ ತಲೆದೋರಿದೆ. ಸಂಬಂಧಿಕರು ಸಹಾಯಕ್ಕೆ ಬರಲಿಲ್ಲ. ಹೀಗಾಗಿ, ಬೇರೆ ದಾರಿ ಕಾಣದೆ ಹಿರಿಮಗಳು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಳ್ಳುತ್ತಾಳೆ.

ಇದನ್ನೂ ಓದಿ: ಮಹಾರಾಷ್ಟ್ರದ 2 ನಗರಗಳಿಗೆ ಮರುನಾಮಕರಣ: ತಂದೆಗೆ ಕೊಟ್ಟ ಮಾತು ಉಳಿಸಿಕೊಂಡ ಸಿಎಂ ಠಾಕ್ರೆ

ಡೆತ್‌ ನೋಟ್​​: ಸಾವಿನ ಮನೆ ಕದ ತಟ್ಟುವುದಕ್ಕೂ ಮುಂಚಿತವಾಗಿ ಸುಮನ್​ ಸೊಸೈಡ್ ನೋಟ್​ ಬರೆದಿಟ್ಟು ಮನದಾಳ ತಿಳಿಸಿದ್ದಾಳೆ. "ಅಪ್ಪಾ, ನಿಮ್ಮ ಖಾಯಿಲೆಗೆ ಔಷಧಿ ತೆಗೆದುಕೊಳ್ಳಲು ಸ್ವಲ್ಪ ಹಣ ತೆಗೆದಿಟ್ಟಿದ್ದೇನೆ. ಇಂತಹ ಸಂದರ್ಭದಲ್ಲಿ ನಾನು ಓದುವುದರಲ್ಲಿ ಯಾವುದೇ ಅರ್ಥವಿಲ್ಲ. ನಾನು ಉಳಿಸಿಟ್ಟಿರುವ ಹಣದಲ್ಲಿ ಔಷಧಿ ಖರೀದಿಸಿ, ಜೊತೆಗೆ ಸಹೋದರರಿಗೆ ಬಟ್ಟೆ ಕೊಡಿಸಿ" ಎಂದು ಬರೆದಿದ್ದಾಳೆ.

ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.