ETV Bharat / bharat

ಪೊಲೀಸ್​ ಬಿಗಿ ಭದ್ರತೆ ನಡುವೆ ಕನ್ಹಯ್ಯ ಲಾಲ್​ ಅಂತ್ಯಕ್ರಿಯೆ.. ಅಪಾರ ಸಂಖ್ಯೆಯ ಜನರು ಭಾಗಿ

author img

By

Published : Jun 29, 2022, 3:30 PM IST

ಕನ್ಹಯ್ಯ ಲಾಲ್ ಅಂತಿಮ ಯಾತ್ರೆಯಲ್ಲಿ ಬೈಕ್​, ಕಾರುಗಳ ಮೂಲಕವೂ ಜನರು ಪಾಲ್ಗೊಂಡಿದ್ದರು. ಇದೇ ವೇಳೆ ಕನ್ಹಯ್ಯ ಲಾಲ್​​ ಅಮರ್​ ರಹೇ ಹಾಗೂ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಘೋಷಣೆಗಳನ್ನು ಕೂಗಲಾಯಿತು.

Udaipur tailor cremated, funeral procession amid tight security
ಪೊಲೀಸ್​ ಬಿಗಿ ಭದ್ರತೆ ನಡುವೆ ಕನ್ಹಯ್ಯ ಲಾಲ್​ ಅಂತ್ಯಕ್ರಿಯೆ: ಅಪಾರ ಸಂಖ್ಯೆಯ ಜನರು ಭಾಗಿ

ಉದಯಪುರ (ರಾಜಸ್ಥಾನ): ಮೊಹಮ್ಮದ್​​ ಪೈಗಂಬರ್​ ಬಗೆಗಿನ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್​​ ಹಂಚಿಕೊಂಡ ಕಾರಣಕ್ಕೆ ಇಬ್ಬರು ಮತಾಂಧರಿಂದ ಕೊಲೆಗೀಡಾದ ರಾಜಸ್ಥಾನದ ಕನ್ಹಯ್ಯ ಲಾಲ್​​ ಅಂತ್ಯಕ್ರಿಯೆ ಬಿಗಿ ಪೊಲೀಸ್​ ಭದ್ರತೆಯಲ್ಲಿ ಇಂದು ನೆರವೇರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

ಉದಯಪುರದಲ್ಲಿ ಮಂಗಳವಾರ ಇಬ್ಬರು ಮತಾಂಧರು ಟೈಲರ್​​ ಆಗಿದ್ದ ಕನ್ಹಯ್ಯ ಲಾಲ್​ ಅವರ ಶಿರಚ್ಛೇದ ಮಾಡಿದ ವಿಡಿಯೋವನ್ನು ವೈರಲ್​ ಮಾಡಿದ್ದರು. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ನಂತರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಅಶೋಕ ನಗರ ರುದ್ರಭೂಮಿಯವರೆಗೆ ಅಂತಿಮಯಾತ್ರೆ ನಡೆಸಲಾಯಿತು. ಅಂತ್ಯಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಪೊಲೀಸ್​ ಬಿಗಿ ಭದ್ರತೆ ನಡುವೆ ಕನ್ಹಯ್ಯ ಲಾಲ್​ ಅಂತ್ಯಕ್ರಿಯೆ: ಅಪಾರ ಸಂಖ್ಯೆಯ ಜನರು ಭಾಗಿ

ಅಲ್ಲದೇ, ಅಂತಿಮ ಯಾತ್ರೆಯಲ್ಲಿ ಬೈಕ್​, ಕಾರುಗಳ ಮೂಲಕವೂ ಜನರು ಪಾಲ್ಗೊಂಡಿದ್ದರು. ಇದೇ ವೇಳೆ ಕನ್ಹಯ್ಯ ಲಾಲ್​​ ಅಮರ್​ ರಹೇ ಹಾಗೂ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಘೋಷಣೆಗಳನ್ನು ಕೂಗಿದರು. ಒಟ್ಟಾರೆ ಶಾಂತಿಯುತವಾಗಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ಜರುಗಿತು.

ಮಂಗಳವಾರ ಕನ್ಹಯ್ಯ ಲಾಲ್​ ಹತ್ಯೆ ನಂತರ ಇಡೀ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದಯಪುರ ಸೇರಿ ಎಲ್ಲ 33 ಜಿಲ್ಲೆಗಳಲ್ಲಿ 24 ಗಂಟೆಗಳ ಕಾಲ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಏಳು ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಒಂದು ತಿಂಗಳ ಕಾಲ 144ರಡಿ ನಿಷೇಧಾಜ್ಞೆ ಕೂಡ ಹೇರಲಾಗಿದೆ.

ಇದನ್ನೂ ಓದಿ: ಉದಯಪುರ್ ಕೊಲೆ ಪ್ರಕರಣ; ರಾಜಸ್ಥಾನದಲ್ಲಿ ಪೊಲೀಸ್ ಕಟ್ಟೆಚ್ಚರ

ಉದಯಪುರ (ರಾಜಸ್ಥಾನ): ಮೊಹಮ್ಮದ್​​ ಪೈಗಂಬರ್​ ಬಗೆಗಿನ ವಿವಾದಿತ ಹೇಳಿಕೆ ನೀಡಿದ್ದ ಬಿಜೆಪಿ ಮಾಜಿ ವಕ್ತಾರೆ ನೂಪುರ್​ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್​​ ಹಂಚಿಕೊಂಡ ಕಾರಣಕ್ಕೆ ಇಬ್ಬರು ಮತಾಂಧರಿಂದ ಕೊಲೆಗೀಡಾದ ರಾಜಸ್ಥಾನದ ಕನ್ಹಯ್ಯ ಲಾಲ್​​ ಅಂತ್ಯಕ್ರಿಯೆ ಬಿಗಿ ಪೊಲೀಸ್​ ಭದ್ರತೆಯಲ್ಲಿ ಇಂದು ನೆರವೇರಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಅಂತ್ಯಸಂಸ್ಕಾರದ ವೇಳೆ ಹೆಚ್ಚಿನ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.

ಉದಯಪುರದಲ್ಲಿ ಮಂಗಳವಾರ ಇಬ್ಬರು ಮತಾಂಧರು ಟೈಲರ್​​ ಆಗಿದ್ದ ಕನ್ಹಯ್ಯ ಲಾಲ್​ ಅವರ ಶಿರಚ್ಛೇದ ಮಾಡಿದ ವಿಡಿಯೋವನ್ನು ವೈರಲ್​ ಮಾಡಿದ್ದರು. ಇಂದು ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು. ನಂತರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಹೋಗಿ ಅಲ್ಲಿಂದ ಅಶೋಕ ನಗರ ರುದ್ರಭೂಮಿಯವರೆಗೆ ಅಂತಿಮಯಾತ್ರೆ ನಡೆಸಲಾಯಿತು. ಅಂತ್ಯಸಂಸ್ಕಾರದಲ್ಲಿ ಅಪಾರ ಸಂಖ್ಯೆಯಲ್ಲಿ ಜನರು ಭಾಗವಹಿಸಿದ್ದರು.

ಪೊಲೀಸ್​ ಬಿಗಿ ಭದ್ರತೆ ನಡುವೆ ಕನ್ಹಯ್ಯ ಲಾಲ್​ ಅಂತ್ಯಕ್ರಿಯೆ: ಅಪಾರ ಸಂಖ್ಯೆಯ ಜನರು ಭಾಗಿ

ಅಲ್ಲದೇ, ಅಂತಿಮ ಯಾತ್ರೆಯಲ್ಲಿ ಬೈಕ್​, ಕಾರುಗಳ ಮೂಲಕವೂ ಜನರು ಪಾಲ್ಗೊಂಡಿದ್ದರು. ಇದೇ ವೇಳೆ ಕನ್ಹಯ್ಯ ಲಾಲ್​​ ಅಮರ್​ ರಹೇ ಹಾಗೂ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂಬ ಘೋಷಣೆಗಳನ್ನು ಕೂಗಿದರು. ಒಟ್ಟಾರೆ ಶಾಂತಿಯುತವಾಗಿ ಕನ್ಹಯ್ಯ ಲಾಲ್ ಅಂತ್ಯಕ್ರಿಯೆ ಜರುಗಿತು.

ಮಂಗಳವಾರ ಕನ್ಹಯ್ಯ ಲಾಲ್​ ಹತ್ಯೆ ನಂತರ ಇಡೀ ರಾಜಸ್ಥಾನದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಉದಯಪುರ ಸೇರಿ ಎಲ್ಲ 33 ಜಿಲ್ಲೆಗಳಲ್ಲಿ 24 ಗಂಟೆಗಳ ಕಾಲ ಇಂಟರ್​ನೆಟ್​ ಸೇವೆ ಸ್ಥಗಿತಗೊಳಿಸಲಾಗಿದೆ. ಈ ಘಟನೆ ನಡೆದ ಪ್ರದೇಶದ ಸುತ್ತಮುತ್ತಲಿನ ಏಳು ಪೊಲೀಸ್​ ಠಾಣಾ ವ್ಯಾಪ್ತಿಗಳಲ್ಲಿ ಕರ್ಫ್ಯೂ ಜಾರಿ ಮಾಡಲಾಗಿದೆ. ಜೊತೆಗೆ ಒಂದು ತಿಂಗಳ ಕಾಲ 144ರಡಿ ನಿಷೇಧಾಜ್ಞೆ ಕೂಡ ಹೇರಲಾಗಿದೆ.

ಇದನ್ನೂ ಓದಿ: ಉದಯಪುರ್ ಕೊಲೆ ಪ್ರಕರಣ; ರಾಜಸ್ಥಾನದಲ್ಲಿ ಪೊಲೀಸ್ ಕಟ್ಟೆಚ್ಚರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.