ETV Bharat / bharat

ಮಾಸ್ಕ್​ ಹಾಕಿಲ್ಲ ಎಂದು ವ್ಯಕ್ತಿಗೆ ರಸ್ತೆಯಲ್ಲೇ ಥಳಿಸಿದ ಪೊಲೀಸರು.. ವಿಡಿಯೋ ವೈರಲ್​! - ಪೊಲೀಸ್​ರಿಬ್ಬರಿಂದ ವ್ಯಕ್ತಿಗೆ ಥಳಿತ

ಪೊಲೀಸರಿಬ್ಬರೂ ಮಾಸ್ಕ್ ಹಾಕದ ವ್ಯಕ್ತಿಯೊಬ್ಬನಿಗೆ ನಡು ರೋಡ್​ನಲ್ಲಿ ಹಿಗ್ಗಾಮುಗ್ಗಾ ಥಳಿಸಿರುವ ವಿಡಿಯೋವೊಂದು ಇದೀಗ ವೈರಲ್​ ಆಗಿದ್ದು, ಹಲ್ಲೆ ನಡೆಸಿರುವ ಇಬ್ಬರು ಪೊಲೀಸರನ್ನು ಅಮಾನತು ಮಾಡಲಾಗಿದೆ.

auto driver
auto driver
author img

By

Published : Apr 7, 2021, 5:08 PM IST

ಇಂದೋರ್​​(ಮಧ್ಯಪ್ರದೇಶ): ಆಟೋ ರಿಕ್ಷಾ ಡ್ರೈವರ್​ನೋರ್ವ ಮಾಸ್ಕ್​ ಹಾಕಿಲ್ಲ ಎಂದು ನಡು ರೋಡ್​​ನಲ್ಲೇ ಪೊಲೀಸರಿಬ್ಬರು ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವ್ಯಕ್ತಿಗೆ ಥಳಿಸಿದ ಪೊಲೀಸರು

ಮಧ್ಯಪ್ರದೇಶದ ಇಂದೋರ್​​ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಪೊಲೀಸ್​​​ ಅಧಿಕಾರಿಗಳಿಬ್ಬರು ಅಮಾನತುಗೊಂಡಿದ್ದಾರೆ. 35 ವರ್ಷದ ಆಟೋ ರಿಕ್ಷಾ ಡ್ರೈವರ್​​ ಕೃಷ್ಣ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಂದೆಗೆ ಊಟ ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ, ಆತ ಹಾಕಿಕೊಂಡಿದ್ದ ಮಾಸ್ಕ್​ ಕೆಳಗೆ ಬಿದ್ದಿದೆ. ಆತನ ತಡೆ ಹಿಡಿದ ಪೊಲೀಸರು ಠಾಣೆಗೆ ಬಂದು ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಡ್ರೈವರ್ ನಂತರ ಬರುವುದಾಗಿ ಹೇಳಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು.. ಹೊತ್ತಿ ಉರಿದ ಕೂಚ್​ ಬೆಹಾರ್​!

ಈತನ ಮೇಲೆ ಕೆಲವೊಂದು ಪ್ರಕರಣಗಳೂ ಕೂಡಾ ದಾಖಲಾಗಿವೆ. ಆದರೆ, ಈಗಾಗಲೇ ಆತ ಜಾಮೀನು ಮೇಲೆ ರಿಲೀಸ್​ ಆಗಿದ್ದಾನೆ. ಆದರೆ, ಈತನ ಮೇಲೆ ಹಲ್ಲೆ ನಡೆಸಿರುವ ಇಬ್ಬರು ಪೊಲೀಸರನ್ನ ಅಮಾನತುಗೊಳಿಸಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಮಧ್ಯಪ್ರದೇಶದ ಇಂದೋರ್​ನಲ್ಲಿ ನೈಟ್​ ಕರ್ಫ್ಯೂ ವಿಧಿಸಲಾಗಿದ್ದು, ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ಇಂದೋರ್​​(ಮಧ್ಯಪ್ರದೇಶ): ಆಟೋ ರಿಕ್ಷಾ ಡ್ರೈವರ್​ನೋರ್ವ ಮಾಸ್ಕ್​ ಹಾಕಿಲ್ಲ ಎಂದು ನಡು ರೋಡ್​​ನಲ್ಲೇ ಪೊಲೀಸರಿಬ್ಬರು ಥಳಿಸಿರುವ ಘಟನೆ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ವ್ಯಕ್ತಿಗೆ ಥಳಿಸಿದ ಪೊಲೀಸರು

ಮಧ್ಯಪ್ರದೇಶದ ಇಂದೋರ್​​ನಲ್ಲಿ ಈ ಘಟನೆ ನಡೆದಿದ್ದು, ಇದೀಗ ಪೊಲೀಸ್​​​ ಅಧಿಕಾರಿಗಳಿಬ್ಬರು ಅಮಾನತುಗೊಂಡಿದ್ದಾರೆ. 35 ವರ್ಷದ ಆಟೋ ರಿಕ್ಷಾ ಡ್ರೈವರ್​​ ಕೃಷ್ಣ, ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಂದೆಗೆ ಊಟ ತೆಗೆದುಕೊಂಡು ಹೋಗುತ್ತಿದ್ದ. ಈ ವೇಳೆ, ಆತ ಹಾಕಿಕೊಂಡಿದ್ದ ಮಾಸ್ಕ್​ ಕೆಳಗೆ ಬಿದ್ದಿದೆ. ಆತನ ತಡೆ ಹಿಡಿದ ಪೊಲೀಸರು ಠಾಣೆಗೆ ಬಂದು ದಂಡ ಕಟ್ಟುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ ಡ್ರೈವರ್ ನಂತರ ಬರುವುದಾಗಿ ಹೇಳಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಪೊಲೀಸರು ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ: ಉದ್ಯಮಿ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು.. ಹೊತ್ತಿ ಉರಿದ ಕೂಚ್​ ಬೆಹಾರ್​!

ಈತನ ಮೇಲೆ ಕೆಲವೊಂದು ಪ್ರಕರಣಗಳೂ ಕೂಡಾ ದಾಖಲಾಗಿವೆ. ಆದರೆ, ಈಗಾಗಲೇ ಆತ ಜಾಮೀನು ಮೇಲೆ ರಿಲೀಸ್​ ಆಗಿದ್ದಾನೆ. ಆದರೆ, ಈತನ ಮೇಲೆ ಹಲ್ಲೆ ನಡೆಸಿರುವ ಇಬ್ಬರು ಪೊಲೀಸರನ್ನ ಅಮಾನತುಗೊಳಿಸಲಾಗಿದೆ. ಮಹಾಮಾರಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಈಗಾಗಲೇ ಮಧ್ಯಪ್ರದೇಶದ ಇಂದೋರ್​ನಲ್ಲಿ ನೈಟ್​ ಕರ್ಫ್ಯೂ ವಿಧಿಸಲಾಗಿದ್ದು, ಮಾಸ್ಕ್​ ಧರಿಸುವುದು ಕಡ್ಡಾಯಗೊಳಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.