ETV Bharat / bharat

Video: ಜಮೀನಿಗೋಸ್ಕರ ಹೊಡೆದಾಡಿಕೊಂಡ ಒಡಹುಟ್ಟಿದ ಸಹೋದರರು!

author img

By

Published : Jun 26, 2021, 8:43 PM IST

ಜಮೀನು ವಿಚಾರಕ್ಕೋಸ್ಕರ ಇಬ್ಬರು ಸಹೋದರರು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಔರಂಗಾಬಾದ್​ನಲ್ಲಿ ನಡೆದಿದೆ.

two brothers
two brothers

ಔರಂಗಾಬಾದ್​(ಮಹಾರಾಷ್ಟ್ರ): ”ಹುಟ್ಟುತ್ತಾ ಹುಟ್ಟುತ್ತಾ ಅಣ್ಣ- ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು..” ಈ ಗಾದೆ ಅನೇಕ ಪ್ರಕರಣಗಳಲ್ಲಿ ಸಾಬೀತುಗೊಂಡಿದೆ. ಸದ್ಯ ಅಂತಹ ಮತ್ತೊಂದು ಘಟನೆ ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ನಡೆದಿದೆ.

ಗದ್ದೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಸಹೋದರರು

ಜಮೀನು ವಿವಾದಕ್ಕೋಸ್ಕರ ಇಬ್ಬರು ಒಡಹುಟ್ಟಿದ ಸಹೋದರರು ಹೊಡೆದಾಡಿಕೊಂಡಿರುವ ವಿಡಿಯೋ ಸದ್ಯ ವೈರಲ್​ ಆಗಿದ್ದು, ಔರಂಗಾಬಾದ್​​ನ ಫುಲಾಂಬ್ರಿ ತಾಲೂಕಿನ ಪಾಲ್​ ಗ್ರಾಮದಲ್ಲಿ ನಡೆದಿದೆ. ಸಹೋದರರಾದ ಜಗದೀಶ್​ ಕುಮಾರ್​ ಹಾಗೂ ಸತೀಶ್​ ಕುಮಾರ್​ ಜಮೀನು ವಿಚಾರವಾಗಿ ಗದ್ದೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: 100 ಮೀಟರ್ ಕಾರು ಎಳೆದೊಯ್ದ ಟೆಂಪೊ!

ಇದಕ್ಕೆ ಸಂಬಂಧಿಸಿದಂತೆ ಫುಲಾಂಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದಿನಿಂದಲೂ ಇಬ್ಬರ ನಡುವೆ ಜಮೀನು ವಿಚಾರವಾಗಿ ಮೇಲಿಂದ ಮೇಲೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ಔರಂಗಾಬಾದ್​(ಮಹಾರಾಷ್ಟ್ರ): ”ಹುಟ್ಟುತ್ತಾ ಹುಟ್ಟುತ್ತಾ ಅಣ್ಣ- ತಮ್ಮಂದಿರು, ಬೆಳೆಯುತ್ತಾ ಬೆಳೆಯುತ್ತಾ ದಾಯಾದಿಗಳು..” ಈ ಗಾದೆ ಅನೇಕ ಪ್ರಕರಣಗಳಲ್ಲಿ ಸಾಬೀತುಗೊಂಡಿದೆ. ಸದ್ಯ ಅಂತಹ ಮತ್ತೊಂದು ಘಟನೆ ಮಹಾರಾಷ್ಟ್ರದ ಔರಂಗಾಬಾದ್​​ನಲ್ಲಿ ನಡೆದಿದೆ.

ಗದ್ದೆಯಲ್ಲೇ ಪರಸ್ಪರ ಹೊಡೆದಾಡಿಕೊಂಡ ಸಹೋದರರು

ಜಮೀನು ವಿವಾದಕ್ಕೋಸ್ಕರ ಇಬ್ಬರು ಒಡಹುಟ್ಟಿದ ಸಹೋದರರು ಹೊಡೆದಾಡಿಕೊಂಡಿರುವ ವಿಡಿಯೋ ಸದ್ಯ ವೈರಲ್​ ಆಗಿದ್ದು, ಔರಂಗಾಬಾದ್​​ನ ಫುಲಾಂಬ್ರಿ ತಾಲೂಕಿನ ಪಾಲ್​ ಗ್ರಾಮದಲ್ಲಿ ನಡೆದಿದೆ. ಸಹೋದರರಾದ ಜಗದೀಶ್​ ಕುಮಾರ್​ ಹಾಗೂ ಸತೀಶ್​ ಕುಮಾರ್​ ಜಮೀನು ವಿಚಾರವಾಗಿ ಗದ್ದೆಯಲ್ಲೇ ಹೊಡೆದಾಡಿಕೊಂಡಿದ್ದಾರೆ.

ಇದನ್ನೂ ಓದಿರಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಭೀಕರ ಅಪಘಾತ: 100 ಮೀಟರ್ ಕಾರು ಎಳೆದೊಯ್ದ ಟೆಂಪೊ!

ಇದಕ್ಕೆ ಸಂಬಂಧಿಸಿದಂತೆ ಫುಲಾಂಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿಂದಿನಿಂದಲೂ ಇಬ್ಬರ ನಡುವೆ ಜಮೀನು ವಿಚಾರವಾಗಿ ಮೇಲಿಂದ ಮೇಲೆ ಗಲಾಟೆ ನಡೆಯುತ್ತಿತ್ತು ಎಂದು ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.